![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Feb 26, 2024, 2:53 PM IST
ಕಲಬುರಗಿ: ದೇಶದಲ್ಲಿ ನೈಸರ್ಗಿಕವಾಗಿ ಇರುವುದನ್ನು ಇರುವಂತೆ ನೋಡಬೇಕು. ಆದರೆ, ನವಿಲುಗರಿಯನ್ನು ನೀರುನಾಳದಲ್ಲಿ ಹಾಕುವುದರಿಂದ ಅದೇನು ಬೆಳೆಯುತ್ತದೆಂದು ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವ್ಯಂಗವಾಡಿದರು.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತಿನ ದ್ವಾರಕಾ ಬಳಿಯ ಆಳದ ಅರಬ್ಬಿ ಸಮುದ್ರದಲ್ಲಿ ಕೃಷ್ಣನ ಪೂಜೆ ಮಾಡಿ ನವಿಲುಗರಿ ಅರ್ಪಿಸಿದ್ದನ್ನು ಟೀಕಿಸಿದರು. ಇಂತಹ ಅತಿರೇಕ ಮತ್ತು ಅನೈಸರ್ಗಿಕ ನಡೆಗಳಿಂದ ದೇಶದ ಜನತೆಗೆ ಏನು ಸಂದೇಶ ನೀಡುತ್ತಾರೆ ಎಂದು ಪ್ರಶ್ನಿಸಿದರು. ನಿಸರ್ಗವನ್ನು ಅದು ಇದ್ದಂತೆ ಸ್ವೀಕರಿಸುವ ಬುದ್ಧನ ತತ್ವವೂ ಪ್ರತಿಪಾದಿಸುತ್ತದೆ ಎಂದರು.
ರಾಜ್ಯಸಭೆಯ ಅಡ್ಡ ಮತದಾನ ಕುರಿತು ಪ್ರಸ್ತಾಪಿಸಿ, ನಮಗೆ ಅಂತಹ ಭಯವಿಲ್ಲ, ಅಡ್ಡ, ಉದ್ದ, ಎತ್ತರದ ಮತದಾನ ಆಗುವುದಿಲ್ಲ ಎಂದರು.
ದೇಶದಲ್ಲಿ ಕಾಂಗ್ರಸ್ ಸರ್ವ ನಾಶವಾಗಲಿದೆ ಎನ್ನುವ ಶಿವರಾಜ್ ಸಿಂಗ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿ, ಇಂತಹ ಹೇಳಿಕೆಗಳು ಸರಿಯಲ್ಲ, ಇಗಾಗಲೇ ಒಕ್ಕೂಟದಿಂದ ಅಲಯನ್ಸ್ ಆಗಿದೆ. ಸೀಟು ಹಂಚಿಕೆಯಾಗುತ್ತಿದೆ. ಹಲವು ರಾಜ್ಯಗಳಲ್ಲಿ ಉತ್ತಮ ನಡೆಯಿದೆ. ಇಷ್ಟಿದ್ದರೂ ಸರ್ವನಾಶವಾಗುತ್ತದೆ ಎಂದರೆ, ನಮ್ಮ ಕುರಿತು ಯಾಕೆ ಮಾತನಾಡುತ್ತೀರಿ. ಸುಮ್ಮನಿದ್ದು ಬಿಡಿ ಎಂದು ತಿರುಗೇಟು ನೀಡಿದರು.
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.