Rajya Sabha; ಇನ್ನೆರಡು ತಿಂಗಳಲ್ಲೇ ಎನ್ ಡಿಎಗೆ ಬಹುಮತ ಸಾಧ್ಯತೆ
Team Udayavani, Feb 29, 2024, 11:06 AM IST
ನವದೆಹಲಿ: ರಾಜ್ಯಸಭೆಯ ದ್ವೈವಾರ್ಷಿಕ ಚುನಾವಣೆಯ 56 ಸ್ಥಾನಗಳ ಪೈಕಿ 30 ಸ್ಥಾನಗಳನ್ನು ಗೆದ್ದುಕೊಂಡಿರುವ ಬಿಜೆಪಿ ಸಂಸತ್ತಿನ ಮೇಲ್ಮನೆಯ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಜತೆಗೆ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ರಾಜ್ಯಸಭೆಯಲ್ಲಿ ಬಹುಮತದ ಸನಿಹಕ್ಕೆ ಬಂದು ನಿಂತಿದೆ. ರಾಜ್ಯಸಭೆಯ ಹಾಲಿ 240 ಬಲದ ಪೈಕಿ ಬಹುಮತಕ್ಕೆ 121 ಸ್ಥಾನಗಳು ಬೇಕಿದ್ದು ಎನ್ಡಿಎ ಮೈತ್ರಿ ಕೂಟ 117 ಸದಸ್ಯರನ್ನು ಹೊಂದಿದೆ.
ಬಹುಮತಕ್ಕೆ ಕೇವಲ 4 ಸದಸ್ಯರ ಬೆಂಬಲದ ಕೊರತೆ ಇದೆ. 6 ಸ್ಥಾನಗಳಿಗೆ ಏಪ್ರಿಲ್ನಲ್ಲಿ ನೇಮಕ ನಡೆಯಲಿದ್ದು, ಈ ನೇಮಕದ ಬಳಿಕ ಹಾಗೂ ಹೊಸದಾಗಿ ಆಯ್ಕೆಯಾದ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದಾಗ ಎನ್ಡಿಎ ಬಹುಮತ ಪಡೆಯುವ ಸಾಧ್ಯತೆಯಿದೆ.
ಈಗ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಬಲಾಬಲ 29ಕ್ಕೆ ಕುಸಿದಿದ್ದು ಇತ್ತೀಚಿನ ದಶಕಗಳಲ್ಲಿ ಇದು ಅತಿ ಕನಿಷ್ಠವಾಗಿದೆ. ಟಿಎಂಸಿ 13, ಡಿಎಂಕೆ, ಆಪ್ ತಲಾ 10, ಬಿಜೆಡಿ, ವೈಎಸ್ಆರ್ಸಿಪಿ ತಲಾ 9, ಬಿಆರ್ಎಸ್ 7, ಆರ್ಜೆಡಿ 6, ಸಿಪಿಎಂ 5, ಎಐಎಡಿಎಂಕೆ ಮತ್ತು ಜೆಡಿಯು ತಲಾ 4, ಎಸ್ಪಿ, ಸಿಪಿಐ ತಲಾ 2, ಸಣ್ಣ ಪಕ್ಷಗಳು 24, ಪಕ್ಷೇತರರು 3 ಮತ್ತು ನಾಮನಿರ್ದೇಶನದ 6 ಸದಸ್ಯರು ಇದ್ದಾರೆ.
ರಾಜ್ಯಸಭೆಯ ಒಟ್ಟು ಬಲಾಬಲ 245 ಆಗಿದ್ದು ಜಮ್ಮು ಮತ್ತು ಕಾಶ್ಮೀರದ ನಾಲ್ಕು, ನಾಮ ನಿರ್ದೇಶನ ಕೋಟಾದ ಒಂದು ಸ್ಥಾನ ಖಾಲಿ ಇದೆ. ಹಾಗಾಗಿ ಸದ್ಯ ರಾಜ್ಯಸಭೆಯಲ್ಲಿ ಬಹುಮತಕ್ಕೆ 121 ಬಲ ಸಾಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Recommendation: ನ್ಯಾ. ಸಂಜೀವ್ ಖನ್ನಾ ಸುಪ್ರೀಂಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿ
MUST WATCH
ಹೊಸ ಸೇರ್ಪಡೆ
Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ
Puttur: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಅಪಘಾತದಲ್ಲಿ ಮೃತ್ಯು
Simha Roopini: ಭಕ್ತಿ ಭಾವದ ʼಸಿಂಹ ರೂಪಿಣಿʼ: ಕಿನ್ನಾಳ್ ರಾಜ್ ನಿರ್ದೇಶನ
Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!
INDvsNZ: ಪಂತ್ ಬದಲು ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್; ರಿಷಭ್ ಪಂತ್ ಗೆ ಏನಾಗಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.