![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Mar 1, 2024, 6:30 AM IST
ಉಡುಪಿ: ಲೇಹ್ ಲಡಾಕ್ನ ಹೆಪ್ಪುಗಟ್ಟಿದ ಪಾಂಗೊಂಗ್ ಸರೋವರದ ಮೇಲೆ ಮ್ಯಾರಥಾನ್ ಪೂರ್ಣ ಓಡುವ ಮೂಲಕ ಮಂದಾರ್ತಿ ಸಮೀಪದ ಶೀರೂರು ಮುದ್ದುಮನೆಯ ನಿವಾಸಿ ಗಿರೀಶ್ ಭಟ್ ಅವರು ವಿಶಿಷ್ಟ ಸಾಧನೆ ಮಾಡಿದ್ದಾರೆ.
ಲಡಾಕ್ನ ಅಡ್ವೇಂಚರ್ ನ್ಪೋರ್ಟ್ಸ್ ಫೌಂಡೇಶನ್ ಹಾಗೂ ಲೇಹ್ ಲಡಾಕ್ ಕೇಂದ್ರಾಡಳಿತ ಪ್ರದೇಶ ಮತ್ತು 14 ಕಾಪ್ಸ್ì ಆಫ್ ಇಂಡಿಯನ್ ಆರ್ಮಿ ಸಹಯೋಗದಲ್ಲಿ ಫೆ. 20ರಂದು ನಡೆದ ಪಾಂಗೊಂಗ್ ಹೆಪ್ಪುಗಟ್ಟಿನ ಸರೋವರದ ಮೇಲಿನ ಮ್ಯಾರಥಾನ್ನಲ್ಲಿ ಜಗತ್ತಿನ ವಿವಿಧ ದೇಶಗಳಿಂದ 120 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಅದರಲ್ಲಿ ಉಡುಪಿ ಜಿಲ್ಲೆಯ ಗಿರೀಶ್ ಭಟ್ ಒಬ್ಬರು.
ಈ ಓಟವು ಅತ್ಯಂತ ಕಠಿನವಾದ ಸನ್ನಿವೇಶದಲ್ಲಿ ನಡೆದಿದೆ. ಈ ಸರೋವರವು ಸಮುದ್ರಮಟ್ಟದಿಂದ 14,272 ಅಡಿ ಎತ್ತರದಲ್ಲಿದ್ದು, ಬೇರೆ ಕಡೆಯಲ್ಲಿ ಲಭ್ಯವಾಗುವ ಆಮ್ಲಜನಕದ ಶೇ.50ರಷ್ಟು ಮಾತ್ರ ಇಲ್ಲಿ ಸಿಗುವುದರಿಂದ ಓಡುವುದೇ ಒಂದು ಸವಾಲಾಗಿತ್ತು. ಮ್ಯಾರಥಾನ್ ದಿನ ಅಲ್ಲಿನ ತಾಪಮಾನ -20 ಡಿಗ್ರಿ ಸೆಲ್ಸಿಯಸ್ ಇದ್ದು, ಭಾರೀ ಹಿಮಪಾತದೊಂದಿಗೆ ರಭಸವಾದ ಗಾಳಿ ಬೀಸುತ್ತಿತ್ತು. ಅದಕ್ಕೆ ಪೂರಕ ವಾದ ದಿರಿಸಿನೊಂದಿಗೆ ಓಟ ಪೂರೈಸಬೇಕಿತ್ತು. ಎಲ್ಲ ಸವಾಲಿನ ನಡುವೆಯೂ ಪೂರ್ಣ ಮ್ಯಾರಥಾನ್ ಕೆಲವೇ ಗಂಟೆಯಲ್ಲಿ ಪೂರೈಸಲು ಸಾಧ್ಯವಾಗಿದೆ ಎಂದು ಗಿರೀಶ್ ಭಟ್ ಅನುಭವ ಹಂಚಿಕೊಂಡರು.
ಈ ಮ್ಯಾರಥಾನ್ನಲ್ಲಿ ಭಾಗವಹಿಸಿ ರುವ 120 ಮಂದಿಯಲ್ಲಿ ಸುಮಾರು 100 ಮಂದಿ ಸ್ಥಳೀಯ ರಾಗಿದ್ದರು. ಉಳಿದ 20 ಮಂದಿ ಹೊರಗಿನವ ರಾಗಿದ್ದಾರೆ. 2010ರಲ್ಲಿಯೇ ಪೂರ್ಣ ಮ್ಯಾರಥಾನ್ ಓಡಿದ್ದೇನೆ. ದೇಶ, ವಿದೇಶದಲ್ಲೂ ವಿವಿಧ ಮ್ಯಾರಥಾನ್ನಲ್ಲಿ ಭಾಗವಹಿಸಿದ್ದೇನೆ. ಹಿಮಾಲಯ ಹಾಗೂ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಟ್ರಕ್ ಪೂರೈಸಿದ್ದೇನೆ. ಹೆಪ್ಪುಗಟ್ಟಿರುವ ಪಾಂಗೊಂಗ್ ಸರೋ ವರದ ಮೇಲಿನ ಓಟ ವಿಶೇಷ ಅನುಭವ ನೀಡಿದೆ ಎಂದು ಅವರು ಹೇಳಿದರು.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.