Ranji ಸೆಮಿಫೈನಲ್‌ಗೆ ವೇದಿಕೆ ಸಜ್ಜು : ಮುಂಬಯಿ-ತಮಿಳುನಾಡು ಹೋರಾಟ


Team Udayavani, Mar 2, 2024, 6:00 AM IST

1-weewqeqw

ಮುಂಬಯಿ: ಪ್ರತಿಷ್ಠಿತ ದೇಶೀಯ ಕ್ರಿಕೆಟ್‌ ಪಂದ್ಯಾವಳಿ “ರಣಜಿ ಟ್ರೋಫಿ’ ಉಪಾಂತ್ಯಕ್ಕೆ ಬಂದು ತಲುಪಿದೆ. ಶನಿವಾರ ಮುಂಬಯಿಯಲ್ಲಿ “ರಣಜಿ ಕಿಂಗ್‌’ ಖ್ಯಾತಿಯ ಮುಂಬಯಿ ಮತ್ತು ತಮಿಳು ನಾಡು, ನಾಗ್ಪುರದಲ್ಲಿ ವಿದರ್ಭ ಮತ್ತು ಮಧ್ಯ ಪ್ರದೇಶ ಮುಖಾಮುಖಿ ಆಗಲಿವೆ.

ಇವುಗಳಲ್ಲಿ ಮುಂಬಯಿ-ತಮಿಳುನಾಡು ನಡುವಿನ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿರಬಹುದೆಂಬುದು ಕ್ರಿಕೆಟ್‌ ಅಭಿಮಾ ನಿಗಳ ನಿರೀಕ್ಷೆ. ತವರಿನ ಪಂದ್ಯವಾದ ಕಾರಣ ಮುಂಬಯಿಗೆ ಹೆಚ್ಚಿನ ಲಾಭವಾ ದೀತೆಂಬುದು ಮತ್ತೂಂದು ಲೆಕ್ಕಾಚಾರ. ಮುಂಬಯಿ ಕೊನೆಯ ತನಕವೂ ಬ್ಯಾಟಿಂಗ್‌ ಸರದಿಯನ್ನು ಹೊಂದಿರುವ ತಂಡ ಎಂಬುದಕ್ಕೆ ಕ್ವಾರ್ಟರ್‌ ಫೈನಲ್‌ನಲ್ಲಿ ಉತ್ತಮ ನಿದರ್ಶನ ಸಿಕ್ಕಿದೆ. ತನುಷ್‌ ಕೋಟ್ಯಾನ್‌ ಮತ್ತು ತುಷಾರ್‌ ದೇಶಪಾಂಡೆ 10ನೇ, 11ನೇ ಕ್ರಮಾಂಕದಲ್ಲಿ ಶತಕ ಬಾರಿಸಿ ದಾಖಲೆ ಬರೆದಿದ್ದರು. ಹಾಗೆಯೇ ಒನ್‌ಡೌನ್‌ ಬ್ಯಾಟರ್‌ ಮುಶೀರ್‌ ಖಾನ್‌ ಅಜೇಯ ದ್ವಿಶತಕ ದಾಖಲಿಸಿದ್ದರು. ಇದು ತಮಿಳುನಾಡು ಪಾಲಿಗೊಂದು ಎಚ್ಚರಿಕೆಯ ಗಂಟೆ.

ತಮಿಳುನಾಡಿನ ಸ್ಪಿನ್‌ ಬಲ
ತಮಿಳುನಾಡಿನ ಕ್ವಾಲಿಟಿ ಸ್ಪಿನ್‌ ಆಕ್ರಮಣ ವನ್ನು ಹೇಗೆ ನಿಭಾಯಿಸೀತು ಎಂಬುದರ ಮೇಲೆ ಮುಂಬಯಿಯ ಭವಿಷ್ಯ ಅಡಗಿದೆ. ಸಾಯಿ ಕಿಶೋರ್‌ (47 ವಿಕೆಟ್‌) ಮತ್ತು ಎಡಗೈ ಸ್ಪಿನ್ನರ್‌ ಎಸ್‌. ಅಜಿತ್‌ ರಾಮ್‌ (41 ವಿಕೆಟ್‌) ತಮಿಳುನಾಡಿನ ಎರಡು ಪ್ರಬಲ ಬೌಲಿಂಗ್‌ ಅಸ್ತ್ರಗಳು. ಈ ಸೀಸನ್‌ನ ಅಗ್ರ ಬೌಲಿಂಗ್‌ ಸಾಧಕರು. ಮುಂಬಯಿಯ ಯಾವುದೇ ಬೌಲರ್‌ ಟಾಪ್‌-10 ಯಾದಿಯಲ್ಲಿಲ್ಲ. 32 ವಿಕೆಟ್‌ ಉರುಳಿಸಿರುವ ಮೋಹಿತ್‌ ಅವಸ್ಥಿ 13ನೇ ಸ್ಥಾನಿಯಾಗಿದ್ದಾರೆ.

ಟೀಮ್‌ ಇಂಡಿಯಾದಿಂದ ಬೇರ್ಪಟ್ಟಿರುವ ಶ್ರೇಯಸ್‌ ಅಯ್ಯರ್‌ ಮುಂಬಯಿ ತಂಡಕ್ಕೆ ಮರಳಿದ್ದಾರೆ. ಇವರ ಫಾರ್ಮ್ ನಿರ್ಣಾಯಕ. ಹಾಗೆಯೇ 6 ಪಂದ್ಯಗಳಲ್ಲಿ ಕೇವಲ ಒಂದು ಫಿಫ್ಟಿ ಹೊಡೆದಿರುವ ನಾಯಕ ಅಜಿಂಕ್ಯ ರಹಾನೆ ಕೂಡ ಬ್ಯಾಟಿಂಗ್‌ ಫಾರ್ಮ್ ತೋರಬೇಕಿದೆ. ಓಪನರ್‌ಗಳಾದ ಪೃಥ್ವಿ ಶಾ, ಭೂಪೇನ್‌ ಲಾಲ್ವಾನಿ ಉತ್ತಮ ಅಡಿಪಾಯ ನಿರ್ಮಿಸಬೇಕಾದ ಅಗತ್ಯವಿದೆ.

ತಮಿಳುನಾಡಿನ ಬ್ಯಾಟಿಂಗ್‌ ಸರದಿ ಕೂಡ ಬಲಿಷ್ಠ. ಒಂದು ತ್ರಿಶತಕ (321), ಒಂದು ದ್ವಿಶತಕ (ಅಜೇಯ 245) ಸೇರಿದಂತೆ 821 ರನ್‌ ಪೇರಿಸಿರುವ ಎನ್‌. ಜಗದೀಶನ್‌ ಪ್ರಚಂಡ ಫಾರ್ಮ್ನಲ್ಲಿದ್ದಾರೆ. ಬಾಬಾ ಇಂದ್ರಜಿತ್‌ ಕಳೆದ 3 ಪಂದ್ಯಗಳಲ್ಲಿ 80, 187, 98 ಮತ್ತು 48 ರನ್‌ ಹೊಡೆದ ಬ್ಯಾಟಿಂಗ್‌ ಫಾರ್ಮ್ ತೆರೆದಿರಿಸಿದ್ದಾರೆ.

ಮಧ್ಯ ಪ್ರದೇಶಕ್ಕೆ ವಿದರ್ಭ ಸವಾಲು
ನಾಗ್ಪುರ: ಇನ್ನೊಂದು ರಣಜಿ ಸೆಮಿಫೈನಲ್‌ನಲ್ಲಿ ಎರಡು ಬಾರಿಯ ಚಾಂಪಿಯನ್‌ ವಿದರ್ಭ ತವರಿನಂಗಳದಲ್ಲಿ ಮಧ್ಯ ಪ್ರದೇಶ ವಿರುದ್ಧ ಸೆಣಸಲಿದೆ. ಪ್ರಸಕ್ತ ಋತುವಿನಲ್ಲಿ “ವಿಸಿಎ’ಯಲ್ಲಿ ಆಡಿರುವ 4 ಪಂದ್ಯಗಳಲ್ಲಿ ವಿದರ್ಭ ಮೂರನ್ನು ಗೆದ್ದಿದೆ. ಸೌರಾಷ್ಟ್ರ ವಿರುದ್ಧ ಸೋಲನುಭವಿಸಿದೆ.

ಬ್ಯಾಟರ್‌ಗಳ ಸಾಂಘಿ ಕ ಆಟ ವಿದರ್ಭದ ಹೆಚ್ಚುಗಾರಿಕೆ. ಕರ್ನಾಟಕವನ್ನು ತೊರೆದು ಹೋದ ಕರುಣ್‌ ನಾಯರ್‌ (515), ದಿಲ್ಲಿಯಿಂದ ಬಂದ ಧ್ರುವ ಶೋರಿ (496 ರನ್‌), ಓಪನರ್‌ ಅಥರ್ವ ತೈಡೆ (488 ರನ್‌), ನಾಯಕ ಅಕ್ಷಯ್‌ ವಾಡ್ಕರ್‌ (452 ರನ್‌) ಬೇರೆ ಬೇರೆ ಸಂದರ್ಭಗಳಲ್ಲಿ ಕ್ರೀಸ್‌ ಆಕ್ರಮಿಸಿಕೊಂಡು ತಂಡದ ರಕ್ಷಣೆಗೆ ನಿಂತಿದ್ದಾರೆ.
ನಾಗ್ಪುರ ಪಿಚ್‌ ವಿದರ್ಭದ ಪೇಸರ್‌ ಆದಿತ್ಯ ಠಾಕರೆ, ಎಡಗೈ ಸ್ಪಿನ್ನರ್‌ ಆದಿತ್ಯ ಸರ್ವಟೆ ಅವರಿಗೆ ಭಾರೀ ನೆರವು ನೀಡುವ ಸಾಧ್ಯತೆ ಇದೆ.

ಎಂಪಿ ಅದೃಷ್ಟಶಾಲಿ ತಂಡ
2022ರ ಚಾಂಪಿಯನ್‌ ಮಧ್ಯ ಪ್ರದೇಶ ಇಲ್ಲಿಯ ತನಕ ಬಂದದ್ದೇ ಅದೃಷ್ಟದ ಬಲದಿಂದ. ಆಂಧ್ರ ವಿರುದ್ಧದ ಕ್ವಾರ್ಟರ್‌ ಫೈನಲ್‌ನಲ್ಲಿ ಇನ್ನೇನು ಸೋತೇ ಹೋಯಿತು ಎನ್ನುವಾಗ 4 ರನ್ನುಗಳ ರೋಚಕ ಜಯ ದಾಖಲಿಸುವಲ್ಲಿ ಯಶಸ್ವಿಯಾಗಿತ್ತು.

ವೆಂಕಟೇಶ್‌ ಅಯ್ಯರ್‌ (528 ರನ್‌), ಹಿಮಾಂಶು ಮಂತ್ರಿ (513), ಯಶ್‌ ದುಬೆ (510 ರನ್‌) ಮಧ್ಯ ಪ್ರದೇಶದ ಪ್ರಮುಖ ಬ್ಯಾಟರ್. ಆದರೆ ರಜತ್‌ ಪಾಟಿದಾರ್‌ ಟೆಸ್ಟ್‌ ತಂಡದಲ್ಲಿರುವ ಕಾರಣ ಲಭ್ಯರಿರುವುದಿಲ್ಲ.
ಎಡಗೈ ಸ್ಪಿನ್ನರ್‌ ಕುಮಾರ ಕಾರ್ತಿಕೇಯ (38 ವಿಕೆಟ್‌), ಹಿರಿಯ ಆಫ್ಸ್ಪಿನ್ನರ್‌ ಸಾರಾಂಶ್‌ ಜೈನ್‌ (27 ವಿಕೆಟ್‌), ಎಡಗೈ ಪೇಸ್‌ ಬೌಲರ್‌ ಕುಲ್ವಂತ್‌ ಖೆಜೊÅàಲಿಯ (26 ವಿಕೆಟ್‌) ತಂಡದ ಬೌಲಿಂಗ್‌ ಪ್ರಮುಖರು.

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ

Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ

Harman-Kuar

Womens Cricket: ನ್ಯೂಜಿಲ್ಯಾಂಡ್‌ ಎದುರಿನ ಏಕದಿನ ಸರಣಿಗೆ ನಾಯಕತ್ವ ಉಳಿಸಿಕೊಂಡ ಕೌರ್‌

Pro-kabbaddi

Pro Kabaddi League: ಇಂದಿನಿಂದ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ ಹವಾ

South-Affrica

Womens T20 World Cup: 6 ಬಾರಿ ಚಾಂಪಿಯನ್‌ ಆಸ್ಟ್ರೇಲಿಯಾ ಮಣಿಸಿ ಫೈನಲ್‌ಗೇರಿದ ದ.ಆಫ್ರಿಕಾ

1-wqewqew

Virat Kohli ಸಮಸ್ಯೆಗಳನ್ನು ಜಟಿಲಗೊಳಿಸಿದ್ದಾರೆ!; ಖ್ಯಾತ ಕ್ರಿಕೆಟ್ ವಿಶ್ಲೇಷಕ ಟೀಕೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.