Mangaluru”ಸಮುದ್ರ ಸಿಗಡಿ’ ರಫ್ತು ಪುನರಾರಂಭ ನಿರೀಕ್ಷೆ


Team Udayavani, Mar 3, 2024, 6:45 AM IST

Mangaluru”ಸಮುದ್ರ ಸಿಗಡಿ’ ರಫ್ತು ಪುನರಾರಂಭ ನಿರೀಕ್ಷೆ

ಮಂಗಳೂರು: ಸಮುದ್ರದಲ್ಲಿ ಹೇರಳವಾಗಿ ಸಿಗುವ ಪೌಷ್ಟಿಕ ಆಹಾರ ಮೀನು ವೈವಿಧ್ಯದಲ್ಲಿ ವೈಲ್ಡ್‌ ಕ್ಯಾಚ್‌ ಶ್ರಿಂಪ್‌ (ಸಮುದ್ರ ಸಿಗಡಿ)ಗೆ ಭಾರೀ ಬೇಡಿಕೆ; ಆದರೆ ಅಮೆರಿಕದಲ್ಲಿ ಮಾತ್ರ ಭಾರತದ ಸಮುದ್ರ ಸಿಗಡಿಗೆ 2019ರಿಂದ ನಿಷೇಧವಿದೆ. ಸದ್ಯ ನಿಷೇಧ ತೆರವಿಗೆ ಇದೀಗ ಎಲ್ಲ ಸಿದ್ಧತೆ ನಡೆಸಲಾಗುತ್ತಿದ್ದು, ಮೀನುಗಾರರಲ್ಲಿ ಆಶಾವಾದ ಮೂಡಿಸಿದೆ.

ವೈವಿಧ್ಯಮಯ ಹಾಗೂ ರುಚಿಕರ ಸಮುದ್ರ ಸಿಗಡಿಗೆ ಅಮೆರಿಕದಲ್ಲಿ ಭಾರೀ ಬೇಡಿಕೆ ಇದೆ. 2018ರ ವರೆಗೂ ಭಾರತದ ಸಮುದ್ರದಿಂದ ಸಂಗ್ರಹಿಸಲಾದ ಈ ಸಿಗಡಿ ಅಮೆರಿಕಕ್ಕೆ ರಫ್ತಾಗುತ್ತಿತ್ತು. ಆದರೆ ಭಾರತದ ಯಾಂತ್ರೀಕೃತ ಟ್ರೋಲರ್‌ ಬೋಟ್‌ಗಳಲ್ಲಿ ಬಳಸಲಾಗುವ ಬಲೆಗಳು ಅಳಿವಿನಂಚಿನಲ್ಲಿರುವ “ಆಮೆ’ಗಳ ಸಂರಕ್ಷಣೆಗೆ ಪೂರಕವಾಗಿಲ್ಲ ಎಂಬ ಕಾರಣಕ್ಕೆ ಅಮೆರಿಕವು 2019ರಿಂದ ಭಾರತದ ಸಿಗಡಿ ರಫ್ತಿನ ಮೇಲೆ ನಿಷೇಧ ಹೇರಿದೆ. ಈ ನಿಷೇಧದ ತೆರವಿಗಾಗಿ ಪ್ರಯತ್ನಿಸುತ್ತಿರುವ ಸಾಗರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಂಪೆಡಾ)ವು ಭಾರತದ ತಂತ್ರಜ್ಞರಿಂದ ಅಭಿವೃದ್ಧಿಪಡಿಸಲಾದ ಮೀನುಗಾರಿಕೆ ದೋಣಿಗಳಲ್ಲಿ ಬಳಸಲಾಗುವ “ಟರ್ಟಲ್‌ ಎಕ್ಸ್‌ಕ್ಲೂಸರ್‌ ಡಿವೈಸ್‌’ (ಟಿಇಡಿ) ಬಗ್ಗೆ ಅಮೆರಿಕದ ತಜ್ಞ ತಂಡಕ್ಕೆ ಮನವರಿಕೆ ಮಾಡಿಕೊಟ್ಟಿದ್ದು, ಈ ತಂತ್ರಜ್ಞಾನ ಬಳಕೆಗೆ ಹಸಿರು ನಿಶಾನೆ ದೊರಕಿದೆ.

ಭಾರತದಲ್ಲಿ ಆಳ ಸಮುದ್ರ ಮೀನುಗಾರಿಕೆಯ ಟ್ರಾಲರ್‌ಗಳು ಅಮೆರಿಕದ ನ್ಯಾಶನಲ್‌ ಓಶಿಯಾನಿಕ್‌ ಅಟೊಸ್ಪೆರಿಕ್‌ ಅಡ್ಮಿನಿಸ್ಟ್ರೇಶನ್‌ (ಎನ್‌ಒಎಎ)ಯ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬುದಾಗಿ ಅಮೆರಿಕದ ತಜ್ಞರ ತಗಾದೆ. ಇದರ ಪರಿಣಾಮ 2019ರಿಂದ ಭಾರತದ ಸಮುದ್ರ ಸಿಗಡಿಗೆ ನಿಷೇಧ ಹೇರಲಾಗಿತ್ತು. ಭಾರತದ ಕರಾವಳಿಯ ಟ್ರಾಲರ್‌ಗಳು ಬಳಸುವ ಮೀನು ಹಿಡಿಯುವ ಬಲೆಗಳಲ್ಲಿ ಅತ್ಯಂತ ಸೂಕ್ಷ್ಮ ಹಾಗೂ ಪ್ರಾಕೃತಿಕ ಸಮತೋಲನ ಕಾಯ್ದುಕೊಳ್ಳುವಲ್ಲಿ ಬಹುಮುಖ್ಯ ಎನಿಸಿರುವ ಆಮೆಗಳು ಸಿಲುಕಿ ಪ್ರಾಣಕಳೆದುಕೊಳ್ಳುತ್ತವೆ ಎಂಬ ಆಕ್ಷೇಪ ಅಮೆರಿಕದ ಎನ್‌ಒಎಎಯ ತಜ್ಞರದ್ದಾಗಿತ್ತು. ಇದಕ್ಕಾಗಿ “ಟರ್ಟಲ್‌ ಎಕ್ಸ್‌ಕ್ಲೂಸರ್‌ ಡಿವೈಸ್‌’ (ಟಿಇಡಿ) ತಂತ್ರಜ್ಞಾನ ಬಳಕೆಗೆ ಉದ್ದೇಶಿಸಲಾಗಿದೆ. ಈ ಕುರಿತ ತರಬೇತಿ ವಿವಿಧ ಕಡೆಗಳಲ್ಲಿ ಸದ್ಯ ನಡೆಯುತ್ತಿದೆ.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Dinesh-Gundurao

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.