Silence: ಮೌನವೇ ಎಲ್ಲವ ಕೆರಳಿಸುವುದು…..


Team Udayavani, Mar 6, 2024, 1:12 PM IST

7-uv-fusion

ಅಂತಹದ್ದೇನಿರಬಹುದು ಆತನ ಶಬ್ದಗಳಲ್ಲಿ? ಇದಕ್ಕೆ ಉತ್ತರ ಬಲ್ಲವಳು ನಾನಲ್ಲ. ಉತ್ತರ – ವಿವರಣೆ – ವಿಶ್ಲೇಷಣೆ ಎಲ್ಲವೂ ಆತನೇ.  ಆತನೊಬ್ಬ ಮಳೆಗಾಲದ ಸೂರ್ಯ. ಮಾತು ಕಮ್ಮಿ, ಮೌನದ ಸಂವಾದವೇ ಹೆಚ್ಚು. ಪುಟ್ಟ ಪುಟ್ಟ ಮುತ್ತುಗಳಂತೆ ಪೋಣಿಸಿರುವ ತುಂಡರಿಸಿದ ಸಂದೇಶಗಳು! ಕೆಲವೊಮ್ಮೆ ಎಲ್ಲ ಪ್ರಶ್ನೆಗಳಿಗೂ ಎರಡೇ ಬಗೆಯ ಉತ್ತರಗಳು ಲಭ್ಯ. ಒಂದೋ ಸ್ತಬ್ಧ ನಗು, ಇಲ್ಲವಾದಲ್ಲಿ ಕಡುರಾತ್ರಿಯ ಭೀಕರ ಮೌನ! ಆದರೆ ಕಾಣೆಯಾದ ತಾಳ್ಮೆಯ ತರಬೇತಿಯಂತೂ ಚೆನ್ನಾಗೇ ನಡೆಯುತ್ತಿದೆ. ದಿನವಿಡೀ ಮನದಲ್ಲಿ ಚಿತ್ರೀಕರಿಸಿದ ಕಂತುಗಳನ್ನು ಸಿಗುವ ಬೊಗಸೆಯಷ್ಟು ಐದು ನಿಮಿಷದ ಅವಧಿಯಲ್ಲಿ ಭಟ್ಟಿ ಇಳಿಸುವ ಕಾರ್ಯವಿನ್ನು ನಿಂತ ಕಾಮಗಾರಿಯಾಗಿದೆ.

ಮೌನ ತಬ್ಬಿತು ನೆಲವ; ಜುಮ್ಮನೆ ಪುಳಕಗೊಂಡಿತು ಧಾರಿಣಿ ಗೋಪಾಲಕೃಷ್ಣ ಅಡಿಗರವರು ರಚಿಸಿದ ಈ ಸಾಹಿತ್ಯದಲ್ಲಿನ ಅಗಾಧವಾದ ಭಾವ ಪರಿಣತಿಯು, ವ್ಯಕ್ತವಾಗುವ ರೂಪಕದ ಪರಿಯೂ, ಒಳಸಿಂಚನದಲ್ಲಿ ಅಹ್ಲಾದಕರವಾಗಿ ಒಡಮೂಡಿದೆ. ಮೌನಕ್ಕೇನಾದರೂ ರೂಪ ವಿದ್ದರೆ ಅದು ಬಹುಶಃ ಆತನ ಸಂದೇಶಗಳಲ್ಲಿ ಕಾಣುತಿತ್ತು. ಆದರೂ ಆಡುವ ನಾಲಕ್ಕು ಮಾತುಗಳು ತೂಕಭರಿತ- ಅರ್ಥಗರ್ಭಿತ. ಒಮ್ಮೊಮ್ಮೆ ಈ ಮೌನದ ಕೋಟೆಯ ಗೋಡೆಗಳ ಒಡೆದು ಹಾಕುವ ಹೆಬ್ಬಯಕೆ. ಆದರೇನೋ ಅಳುಕು.

ಆತನು ಬಹುಶಃ ಚಂದ್ರನಂತೆ ಪಕ್ಷ ಪಾಲಕ. ವಾರಾಂತ್ಯದಲ್ಲಿ ಆತನಲ್ಲಿ ಅಡಗಿರುವ ಮೂಕನಿಗೊಂದು ರಜೆ. ವಾರಾಂತ್ಯಕ್ಕೆಂದು ದಿನಗಳು ಬೇಗ ಕಳೆಯಲಿ ಎಂಬ ಕೋರಿಕೆ ಬಂದದ್ದಂತು ಸುಳ್ಳಲ್ಲ. ಪ್ರತಿ ಸಲವೂ ಅದೇ ನಾಲ್ಕು ಸಂದೇಶಗಳನ್ನು ಪುನಃ – ಪುನಃ ಓದಿ ಕಾಣದ ಸತ್ಯವ ಹುಡುಕುವ ಪ್ರಯತ್ನ ನಿರಂತರ. ಆತನು ಚೂರೇ ಚೂರು ಮಾತಿಗೆ ಲಭ್ಯನಾದಾಗ ಅಭ್ಯಾಸ ಮಾಡಿದ ಸಾಲುಗಳನ್ನು ಆತ ಹಾಗೂ ಆತನ ಮೌನ ಮರೆಸುವುದು ಸರ್ವೇ ಸಾಮಾನ್ಯವಾಗಿದೆ. ಮಾತಿನಲ್ಲೇ ಮನೆಕಟ್ಟುವ ಮರುಳೆಗೆ ಮನಸ್ಸಿನಲ್ಲೇ ಮಾತು ಮುಗಿಸುವವ ಸಿಕ್ಕಿದ್ದು ತರವೇ?

ಪರದೆಯ ಹಿಂದಿನ ಆತನ ಮನದ ನಡೆಗಳನ್ನು  ಭಾಷೆಯಿಂದ ಊಹಿಸುವುದು ಸಲ್ಪ ಕಠಿನ. ಆದರೂ ದಿನಕ್ಕೆ ಒಂದು ಬಾರಿ ಹಗಲಿರುಳಂತೆ ಒಂದು ಸಂದೇಶ ಮಿಂಚಿ ಮರೆಯಾಗುತ್ತೆ. ಆ ಸಂದೇಶದ ಮುಂದುವರೆದ ಭಾಗ ಅವನ ಬಳಿಯೇ ಉಳಿಯುವುದು ಖಚಿತ. ಮಾತಿನ ಮಧ್ಯೆ ಆಗಾಗ ನುಸುಳುವ ವೇದಾಂತ – ನಗು ಇನ್ನಷ್ಟು ಮಾತುಗಳಿಗೆ ಪೀಠಿಕೆ ಹಾಕುವುದಂತೂ ಖಚಿತ. ಕಥೆಯನ್ನು ಅಪೂರ್ಣ ಮಾಡುವವನಿಗೆ ಮರುದಿನ ಹೊಸಕಥೆಯ ಹುಡುಕಾಟ. ಅರ್ಧ ಕಥೆಯನ್ನು ಬಹುಶಃ ನಾನೇ ಆರ್ಥೈಸಿಕೊಳ್ಳಬೇಕೆಂಬುದು ಆತನ ಉದ್ದೇಶವೇನೋ!.

ಆದರೂ ಪ್ರತಿ ಬಾರಿ ಅಪೂರ್ಣ ಕಥೆಯ ಲೇಖಕಿ ನಾನು. ನಾನು ನಾನಾಗಿ ಉಳಿದು ನಿಚ್ಚಳ ಬದುಕುವಂತೆ, ಬವಣೆಗಳ ಮೇಲೆ ಸವಾರಿ ಮಾಡದೆ ನನ್ನಿಷ್ಟದ ಹಬ್ಬಸಿಗೆ ಹೂವಿನ ಮಾಲೆಯೊಂದನ್ನು ಸಿಂಗರಿಸಿಕೊಂಡು ಮುಡಿಗೇರಿಸುವ ಕನಸನ್ನು ಎಳೆ-ಎಳೆಯಾಗಿ ಹೆಣೆದು, ಅಲ್ಲೊಂದು ರೂಪವಂತಿಕೆಯ ಚೆಲುವು ಬೇಕೆಂದೆ, ಚಂದ್ರನ ಕಾಂತಿಯಂತಿರುವ ನಿನ್ನ ನಿದರ್ಶನದ ಛಾಯೆಯೊಂದು ಒಡಮೂಡಿದೆ ನೀ ಹೂಂ ಗುಟ್ಟು ಚೆಲುವೆ ಎಂಬ ನಾಜೂಕುತನದ ತುಂಟು ಮಾತಿನಲ್ಲಿಯೇ ಸೆಳೆದು ಇಡುತ್ತಾನೆ ಮೋಡಿಗಾರ.

ವಾಸ್ತವಿಕವಾಗಿ ಪ್ರೇಮವೆಂಬುದು ಹೃದಯದಲ್ಲಿ ಸದಾ ಜಾಗೃತವಾಗಿರಬೇಕೆಂದಿಲ್ಲ. ಆದರೆ ಯಾರು ಮಾನಸಿಕವಾಗಿ ಜರ್ಜರಿತರಾಗಿರುವರೋ ಅಲ್ಲಿ ಮೂಡುವ ಒಂದು ಸಣ್ಣ ಬಗೆಯ ಮೌನವೂ ಪರ್ವತದಷ್ಟಾಗಿ ಕಾಣಬಹುದು. ಇಲ್ಲಿ ಮುಖ್ಯವಾಗಿರುವ ಒಂದು ವಿಚಾರ “ಶಬ್ದವು ಕಿವಿಗಳಿಗೆ ಅಸಹನೀಯವಾದರೆ, ಮೌನವು ಹೃದಯಕ್ಕೆ” ಮೌನ ಕೊಲ್ಲುತ್ತದೆ.

ಪ್ರತಿ ಹೆಣ್ಣು ಸಹ ಆತನೆಂಬ ಕೌತುಕಗಳಿಗೆ ಬೆರಗಾಗುತ್ತಾ ಆಕರ್ಷಿತಳಾಗುವುದು ಸಾಮಾನ್ಯ ವಿಚಾರವಾದರೂ, ಅದರಲ್ಲೊಂದು ಪ್ರಾಕೃತಿಕ ದತ್ತವಾದ ಸಂಚಲನವಿದೆ. ಸೃಷ್ಟಿ ಸೊಬಗಿನ ವಿಚಾರಗಳೆಲ್ಲ ಮನದಟ್ಟು ಮಾಡಿಕೊಳ್ಳುವಷ್ಟು ಪ್ರಜ್ಞಾಳಿರುವ ಪ್ರತಿ ಹೆಣ್ಣು ಸಹ ಪುರುಷನ ಮೌನವನ್ನು ಅರ್ಥೈಸಿಕೊಳ್ಳುವಳು. ಮತ್ತೂ ಪುರುಷನು ಸಹ ಹೆಣ್ಣಿನ ಪ್ರತಿ ಭಾವನೆಗೂ ಸ್ಪಂದಿಸುತ್ತ, ಪ್ರಕೃತಿ ಮತ್ತು ಪುರುಷ ಇಬ್ಬರೂ ಸೃಷ್ಟಿಯ ಜನನಕ್ಕೆ ಕಾರಣ ಕತೃìಗಳು ಎಂಬುದನ್ನು ಸಾರಲು ಈ ರೀತಿಯ ಮೌನದ ಕೆರಳಿಕೆಯೂ ಮೂಲವಾಗಿದೆ.

ಮೌನದ ಪರಿ ಭಾಷೆಯ ಒಳಾರ್ಥದಲ್ಲಿ ನೋಡುವುದಾದರೆ, ಕಾವ್ಯ ರಸಧಾರೆಯ ಪಾಂಡಿತ್ಯಕ್ಕೆ ಭಕ್ತಿ ಸಿಂಚನವೊಂದು ರೂಪಾಂತರವಾಗುವುದು. ಇಲ್ಲಿ ಎಲ್ಲವೂ ಸ್ಥಿರ ಮತ್ತು ಅಸ್ಥಿರ! ಎರಡೂ ಬಗೆಯ ಪ್ರಶ್ನೋದಕಗಳು ಒಡಮೂಡಿ ಗೊಂದಲಗೊಂಡಾಗ ಚಂಚಲತೆ ಮೂಡಿ ಆಚಾತುರ್ಯವಾಗುವುದು.  ಕ್ಷಣ ಕಾಲ ಮನಸ್ಸು ಮೌನಕ್ಕೆ ಜಾರಿ ವಾಸ್ತವದ ಬಗ್ಗೆ ಗಮನ ಹರಿಸಿದರೆ ನೈಜತೆಯ ಸ್ಪಷ್ಟ ಚಿತ್ರಣವೊಂದು ಗಾಢವಾಗುವುದು. ಇದೂ ಮೌನಕ್ಕಿರುವ ಅಗಾಧ ಶಕ್ತಿ. ಹೀಗೆ ಆತನ ಪ್ರತಿ ಮೌನವೂ ಪ್ರಕೃತಿಯಲ್ಲಿನ ಬದಲಾವಣೆಗೆ ಕಾರಣವಾಗುವುದು.

-ದೀಪಿಕಾ ಬಾಬು

ಮಾರಘಟ್ಟ

ಟಾಪ್ ನ್ಯೂಸ್

adike

Areca nut; ಬಳಲಿರುವ ಅಡಿಕೆಗೆ ಚೀನ ವೈರಸ್‌ ಸಿಡಿಲು!

1-kb

Land; ಬಗರ್‌ ಹುಕುಂ ಅರ್ಜಿ: ಎರಡು ತಿಂಗಳು ಗಡುವು

Kharge (2)

Karnataka Politics; ದಲಿತ ಸಿಎಂ ಚರ್ಚೆಗೆ ಮತ್ತೆ ರೆಕ್ಕೆಪುಕ್ಕ

1-vara

Dowry; ವರದಕ್ಷಿಣೆ ಕಿರುಕುಳ: ಕುಂದಾಪುರ ಮೂಲದ ಮಹಿಳಾ ಟೆಕಿ ಆತ್ಮಹ *ತ್ಯೆ

Burkina Faso: ಬುರ್ಕಿನಫಾಸೋದಲ್ಲಿ ಒಂದೇ ಗಂಟೆಯಲ್ಲಿ 600 ಮಂದಿ ಹತ್ಯೆ

Burkina Faso: ಬುರ್ಕಿನಫಾಸೋದಲ್ಲಿ ಒಂದೇ ಗಂಟೆಯಲ್ಲಿ 600 ಮಂದಿ ಹತ್ಯೆ

naksal (2)

31 Naxal ಎನ್‌ಕೌಂಟರ್‌ಗೆ 1,500 ಮಂದಿ 25 ಕಿ.ಮೀ. ಟ್ರೆಕ್‌!

bjp jds

BJP, JDS ಮೈತ್ರಿ ಕಾಂಗ್ರೆಸ್‌ ಲೋಕಸಭಾ ಸೋಲಿಗೆ ಕಾರಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

UV Fusion: ಮೃಗಗಳ ಜಗತ್ತು

14-uv-fusion

Women: ಕ್ಷಮಯಾ ಧರಿತ್ರಿ

13-constitution

Constitution: ವಿಶ್ವಕ್ಕೆ ಮಾದರಿ ನಮ್ಮ ಸಂವಿಧಾನ

9-uv-fusion

UV Fusion: ಸ್ವಕಲಿಕೆ ಮತ್ತು ಆತ್ಮಸ್ತೈರ್ಯ

8-uv-fusion-1

UV Fusion: ಭೂತ ಭವಿಷ್ಯ ಬಿಟ್ಟು ಈ ಕ್ಷಣ ಜೀವಿಸಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

adike

Areca nut; ಬಳಲಿರುವ ಅಡಿಕೆಗೆ ಚೀನ ವೈರಸ್‌ ಸಿಡಿಲು!

1-kb

Land; ಬಗರ್‌ ಹುಕುಂ ಅರ್ಜಿ: ಎರಡು ತಿಂಗಳು ಗಡುವು

Kharge (2)

Karnataka Politics; ದಲಿತ ಸಿಎಂ ಚರ್ಚೆಗೆ ಮತ್ತೆ ರೆಕ್ಕೆಪುಕ್ಕ

1-vara

Dowry; ವರದಕ್ಷಿಣೆ ಕಿರುಕುಳ: ಕುಂದಾಪುರ ಮೂಲದ ಮಹಿಳಾ ಟೆಕಿ ಆತ್ಮಹ *ತ್ಯೆ

Mangaluru: ಧರ್ಮ ದ್ವೇಷದ ಭಾಷಣ; ಶಿಕ್ಷಕನ ವಿರುದ್ದ ಪ್ರಕರಣ

Mangaluru: ಧರ್ಮ ದ್ವೇಷದ ಭಾಷಣ; ಶಿಕ್ಷಕನ ವಿರುದ್ದ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.