Dharamshala; 4-1 ಮುನ್ನಡೆಯ ಹಾದಿ ವಿಶಾಲ : ಅಶ್ವಿ‌ನ್‌,ಬೇರ್‌ಸ್ಟೊ 100ನೇ ಟೆಸ್ಟ್‌ ಸಂಭ್ರಮ


Team Udayavani, Mar 7, 2024, 6:41 AM IST

1eqqwewewqe

ಧರ್ಮಶಾಲಾ: ಪ್ರಕೃತಿ ಯನ್ನೇ ಹೊದ್ದಂತಿರುವ ರಮಣೀಯ ತಾಣ, ಹಿಮಾಚಲದ ಗಿರಿಶಿಖರ ಧರ್ಮಶಾಲಾ 7 ವರ್ಷಗಳ ಬಳಿಕ ಟೆಸ್ಟ್‌ ಪಂದ್ಯದ ಆತಿಥ್ಯಕ್ಕೆ ಸಜ್ಜಾಗಿದೆ. ಗುರುವಾರ ಮೊದಲ್ಗೊಳ್ಳಲಿರುವ 5ನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಭಾರತ-ಇಂಗ್ಲೆಂಡ್‌ ಇಲ್ಲಿ ಮುಖಾಮುಖೀ ಆಗಲಿವೆ. ಈಗಾಗಲೇ ರಾಂಚಿಯಲ್ಲಿ ಸರಣಿ ಗೆಲುವಿನ ಸಂಭ್ರಮ ಆಚರಿಸಿರುವ ರೋಹಿತ್‌ ಪಡೆ, ಈ ಮುನ್ನಡೆಯನ್ನು 4-1ಕ್ಕೆ ಏರಿಸುವ ಯೋಜನೆಯಲ್ಲಿದೆ. ಇದರಿಂದ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಅಗ್ರಸ್ಥಾನ ಇನ್ನಷ್ಟು ಗಟ್ಟಿಯಾಗಲಿದೆ.

ಹಿಂದಿನ ನಾಲ್ಕೂ ತಾಣಗಳಿಗೆ ಹೋಲಿಸಿದರೆ ಧರ್ಮ ಶಾಲಾದ “ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿ ಯೇಶನ್‌ ಸ್ಟೇಡಿಯಂ’ ಭಿನ್ನ. ಇಲ್ಲಿನ ವಾತಾವರಣ ಮಂಜು ಹಾಗೂ ತೀವ್ರ ಥಂಡಿ ಹವೆಯಿಂದ ಕೂಡಿದೆ. ಗರಿಷ್ಠ ತಾಪ ಮಾನವೇ 10 ಡಿಗ್ರಿ ಸೆಲಿÏಯಸ್‌ನಷ್ಟು ಇರ ಲಿದೆ. ಒಂದು ರೀತಿಯಲ್ಲಿ ಇಂಗ್ಲೆಂಡಿಗ ರಿಗೆ ಇದು ಮನೆಯ ವಾತಾ ವರಣದಂತಿದೆ. ಆದರೆ ಈಗಾ ಗಲೇ ಸೋತು ಸುಣ್ಣವಾಗಿರುವ ಆಂಗ್ಲರು ಇದರ ಲಾಭ ವೆತ್ತುವ ಸ್ಥಿತಿಯಲ್ಲಿಲ್ಲ ಎಂದೇ ಹೇಳಬಹುದು.

ಬುಮ್ರಾ ಆಗಮನ
ಈ ಪಂದ್ಯಕ್ಕಾಗಿ ಭಾರತದ ಆಡುವ ಬಳಗದಲ್ಲಿ ಒಂದು ಬದಲಾವಣೆ ಸಂಭವಿಸಬೇಕಾದುದು ಅನಿವಾರ್ಯ. ರಾಂಚಿಯಲ್ಲಿ ವಿಶ್ರಾಂತಿ ಪಡೆದಿದ್ದ ಯಾರ್ಕರ್‌ ಸ್ಪೆಷಲಿಸ್ಟ್‌ ಜಸ್‌ಪ್ರೀತ್‌ ಬುಮ್ರಾ ಧರ್ಮಶಾಲಾದಲ್ಲಿ ಆಡಲಿಳಿಯಲಿದ್ದಾರೆ. ಮೊಹಮ್ಮದ್‌ ಸಿರಾಜ್‌ ದ್ವಿತೀಯ ಪೇಸ್‌ ಬೌಲರ್‌ ಆಗಿರುವುದಾದರೆ ಆಕಾಶ್‌ ದೀಪ್‌ ಹೊರಗುಳಿಯಬೇಕಾಗುತ್ತದೆ. ಆಕಾಶ್‌ ದೀಪ್‌ ರಾಂಚಿಯಲ್ಲಿ ಟೆಸ್ಟ್‌ ಪದಾರ್ಪಣೆ ಮಾಡಿ ಮೊದಲ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌ ಕೆಡವಿದ್ದರು. ಸ್ಪಿನ್‌ ವಿಭಾಗದಲ್ಲಿ ಎಂದಿನ ತ್ರಿವಳಿಗಳೇ ಇರುತ್ತಾರೆ.

ಪಾಟಿದಾರ್‌/ಪಡಿಕ್ಕಲ್‌?
ಬ್ಯಾಟಿಂಗ್‌ ಸರದಿಯಲ್ಲಿ ರಜತ್‌ ಪಾಟಿದಾರ್‌ ಮತ್ತು ದೇವದತ್ತ ಪಡಿಕ್ಕಲ್‌ ನಡುವೆ ಸ್ಪರ್ಧೆ ಇದೆ. ಪಾಟಿದಾರ್‌ ಈವರೆಗೆ ಅವಕಾಶವನ್ನು ಬಳಸಿಕೊಂಡಿಲ್ಲ. 4ನೇ ಕ್ರಮಾಂಕದಲ್ಲಿ ಆಡ ಲಿಳಿದು 6 ಇನ್ನಿಂಗ್ಸ್‌ಗಳಲ್ಲಿ ಗಳಿಸಿದ್ದು 63 ರನ್‌ ಮಾತ್ರ. ಹೀಗಾಗಿ ಇವರನ್ನು ಇನ್ನೂ ಮುಂದುವರಿಸುವುದರಲ್ಲಿ ಅರ್ಥವಿಲ್ಲ. ಉತ್ತಮ ಫಾರ್ಮ್ನಲ್ಲಿರುವ ಎಡಗೈ ಬ್ಯಾಟರ್‌ ಪಡಿಕ್ಕಲ್‌ಗೆ
ಅವಕಾಶ ಕೊಟ್ಟು ನೋಡಬಹುದು.

ಜೈಸ್ವಾಲ್‌ ಜೈತ್ರಯಾತ್ರೆ
ಪ್ರಸಕ್ತ ಸರಣಿಯಲ್ಲಿ 2 ದ್ವಿಶತಕಗಳೊಂದಿಗೆ ರನ್‌ ಪ್ರವಾಹವನ್ನೇ ಹರಿಸಿರುವ ಯಶಸ್ವಿ ಜೈಸ್ವಾಲ್‌ ಈ ಪಂದ್ಯದ ಕೇಂದ್ರಬಿಂದು ಆಗಿದ್ದಾರೆ. 8 ಇನ್ನಿಂಗ್ಸ್‌ಗಳಿಂದ ಇವರ ರನ್‌ ಗಳಿಕೆ 655ಕ್ಕೆ ಏರಿದೆ. ಸರಣಿಯೊಂದರಲ್ಲಿ 700 ರನ್‌ ಬಾರಿಸಿದ ಭಾರತದ ದ್ವಿತೀಯ ಬ್ಯಾಟ್ಸ್‌ಮನ್‌ ಎಂಬ ದಾಖಲೆ ಸ್ಥಾಪಿಸುವ ಅವಕಾಶವೊಂದು ಜೈಸ್ವಾಲ್‌ ಮುಂದಿದೆ. ಮೊದಲಿಗ ಸುನೀಲ್‌ ಗಾವಸ್ಕರ್‌. 1971ರ ವೆಸ್ಟ್‌ ಇಂಡೀಸ್‌ ವಿರುದ್ಧದ ತಮ್ಮ ಚೊಚ್ಚಲ ಸರಣಿಯಲ್ಲೇ ಗಾವಸ್ಕರ್‌ 774 ರನ್‌ ಪೇರಿಸಿದ್ದರು.

700ರತ್ತ ಆ್ಯಂಡರ್ಸನ್‌
ಇಂಗ್ಲೆಂಡ್‌ನ‌ ಹಿರಿಯ ವೇಗಿ ಜೇಮ್ಸ್‌ ಆ್ಯಂಡರ್ಸನ್‌ ಕೂಡ ನೂತನ ಇತಿಹಾಸದ ಹೊಸ್ತಿಲಲ್ಲಿದ್ದಾರೆ. ಇನ್ನಿಬ್ಬರನ್ನು ಔಟ್‌ ಮಾಡಿದರೆ ಅವರ ವಿಕೆಟ್‌ ಸಂಖ್ಯೆ 700ಕ್ಕೆ ಏರಲಿದೆ. ಆಗ ಈ ಸಾಧನೆಗೈದ ವಿಶ್ವದ ಕೇವಲ 3ನೇ ಬೌಲರ್‌ ಹಾಗೂ ಮೊದಲ ವೇಗದ ಬೌಲರ್‌ ಎಂಬ ದಾಖಲೆಗೆ ಪಾತ್ರರಾಗಲಿದ್ದಾರೆ.

ಇಂಗ್ಲೆಂಡ್‌ ತಂಡಕ್ಕೆ ವುಡ್‌
ಅಂತಿಮ ಟೆಸ್ಟ್‌ ಪಂದ್ಯಕ್ಕಾಗಿ ಇಂಗ್ಲೆಂಡ್‌ ತನ್ನ ಆಡುವ ಬಳಗವನ್ನು ಪ್ರಕಟಿ ಸಿದೆ. ಒಂದು ಬದಲಾವಣೆ ಮಾಡಿ ಕೊಂಡಿದ್ದು, ಓಲೀ ರಾಬಿನ್ಸನ್‌ ಬದಲು ಮಾರ್ಕ್‌ ವುಡ್‌ ಅವರನ್ನು ಸೇರಿಸಿಕೊಂಡಿದೆ.
ಇಂಗ್ಲೆಂಡ್‌ ಇಲೆವೆನ್‌: ಜಾಕ್‌ ಕ್ರಾಲಿ, ಬೆನ್‌ ಡಕೆಟ್‌, ಓಲೀ ಪೋಪ್‌, ಜೋ ರೂಟ್‌, ಜಾನಿ ಬೇರ್‌ಸ್ಟೊ, ಬೆನ್‌ ಸ್ಟೋಕ್ಸ್‌ (ನಾಯಕ), ಬೆನ್‌ ಫೋಕ್ಸ್‌, ಟಾಮ್‌ ಹಾರ್ಟ್ಲಿ , ಮಾರ್ಕ್‌ ವುಡ್‌, ಜೇಮ್ಸ್‌ ಆ್ಯಂಡರ್ಸನ್‌, ಶೋಯಿಬ್‌ ಬಶೀರ್‌.

ಆರ್‌. ಅಶ್ವಿ‌ನ್‌, ಬೇರ್‌ಸ್ಟೊ 100ನೇ ಟೆಸ್ಟ್‌ ಸಂಭ್ರಮ
ಟೀಮ್‌ ಇಂಡಿಯಾದ ಹಿರಿಯ ಸ್ಪಿನ್ನರ್‌ ಆರ್‌. ಅಶ್ವಿ‌ನ್‌ ಧರ್ಮಶಾಲಾದಲ್ಲಿ 100ನೇ ಟೆಸ್ಟ್‌ ಪಂದ್ಯ ಆಡಲಿಳಿಯಲಿದ್ದಾರೆ. ಅವರು “ಟೆಸ್ಟ್‌ ಶತಕ’ದ ದಾಖಲೆ ಬರೆದ ಭಾರತದ 14ನೇ ಕ್ರಿಕೆಟಿಗ ನೆನಿಸಿಕೊಳ್ಳಲಿದ್ದಾರೆ.

ಇದೇ ವೇಳೆ ಇಂಗ್ಲೆಂಡ್‌ನ‌ ಜಾನಿ ಬೇರ್‌ಸ್ಟೊ ಕೂಡ 100ನೇ ಟೆಸ್ಟ್‌ ಆಡಲಿದ್ದಾರೆ. 147 ವರ್ಷಗಳ ಟೆಸ್ಟ್‌ ಚರಿತ್ರೆಯಲ್ಲಿ, ಒಂದೇ ಪಂದ್ಯದಲ್ಲಿ ಇತ್ತಂಡಗಳ ಇಬ್ಬರು ಆಟಗಾರರು 100ನೇ ಟೆಸ್ಟ್‌ ಆಡಲಿಳಿಯುವ ದ್ವಿತೀಯ ನಿದರ್ಶನ ಇದಾಗಿದೆ. 2013ರ ಪರ್ತ್‌ ಟೆಸ್ಟ್‌ನಲ್ಲಿ ಅಲಸ್ಟೇರ್‌ ಕುಕ್‌, ಮೈಕಲ್‌ ಕ್ಲಾರ್ಕ್‌ ಒಟ್ಟಿಗೇ 100ನೇ ಟೆಸ್ಟ್‌ ಆಡಿದ್ದರು.

ಇನ್ನೂ ಮುಂದುವರಿದು ಹೇಳುವು ದಾದರೆ, ಆಸ್ಟ್ರೇಲಿಯ ವಿರುದ್ಧದ ದ್ವಿತೀಯ ಪಂದ್ಯದಲ್ಲಿ ನ್ಯೂಜಿ ಲ್ಯಾಂಡ್‌ನ‌ ಕೇನ್‌ ವಿಲಿಯಮ್ಸನ್‌ ಮತ್ತು ಟಿಮ್‌ ಸೌಥಿ ಕೂಡ ಒಟ್ಟಿಗೇ 100ನೇ ಟೆಸ್ಟ್‌ ಆಡಲಿದ್ದಾರೆ. ಒಂದೇ ತಂಡದ ಇಬ್ಬರು ಆಟಗಾರರು ಒಂದೇ ಪಂದ್ಯದಲ್ಲಿ 100ನೇ ಟೆಸ್ಟ್‌ ಆಡುವ ಮೂರನೇ ಸಂದರ್ಭ ಇದಾಗಲಿದೆ. ಈ ಪಂದ್ಯ ಮಾ. 8ರಂದು ಆರಂಭವಾಗಲಿದೆ.

ಮುರಳಿ ಬಳಿಕ ಅಶ್ವಿ‌ನ್‌
507 ವಿಕೆಟ್‌ಗಳ ಸಾಧನೆ ಯೊಂದಿಗೆ ಅಶ್ವಿ‌ನ್‌ 100ನೇ ಟೆಸ್ಟ್‌ ಆಡ ಲಿಳಿಯುವರು. ಈ ಸಾಧನೆ  ಯಲ್ಲಿ ಅವರಿಗೆ 2ನೇ ಸ್ಥಾನ. ಮುತ್ತಯ್ಯ ಮುರಳೀ ಧರನ್‌ 100ನೇ ಟೆಸ್ಟ್‌ ವೇಳೆ 584 ವಿಕೆಟ್‌ ಉರುಳಿ ಸಿರುವುದು ದಾಖಲೆ.

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.