UV Fusion: ಸೋತಾಗ ಸೋಲದಿರಲಿ ಸ್ನೇಹ


Team Udayavani, Mar 8, 2024, 8:15 AM IST

16-uv-fusion

ಕರುಣೆಯೇ ಬಾರದವರೆದುರು ಕಣ್ಣೀರು ಹಾಕಿದರೆ ಫ‌ಲವೇನು? ಮೌನವೇ ಆಭರಣವಾಗಿ ಧರಿಸುವವರ ಬಳಿ ಮಾತಾಡಿದರೆ ಫ‌ಲವೇನು? ಹೌದು, ನಮ್ಮ ಪರಿಸ್ಥಿತಿ, ಗತಿಯನ್ನು ಕಂಡು ಯಾರು ನಮ್ಮ ಸಹಾಯಕ್ಕೆ ಬರುತ್ತಾರೋ, ಯಾರು ಸಹಾಯ ಹಸ್ತ ಚಾಚಿದಾಗ ಸಹಕಾರ ಮಾಡುವರೋ, ನರಳುವ ಮನಕ್ಕೆ  ನೆರಳಂತೆ ಸಾಂತ್ವನ ನೀಡಿ ಧೈರ್ಯ ತುಂಬಿ ಭಾವನೆಗೆ ಬೆಲೆ ನೀಡುವರೋ ಅಂತವರ ಸ್ನೇಹವನ್ನು ನಾವೆಂದೂ ಮರೆಯ ಬಾರದುಅವರನ್ನು ಎಂದೂ ಕಳೆದುಕೊಳ್ಳಬಾರದು.

ಧೃತಿಗೆಟ್ಟ ಮನದ ರೋಧನೆ- ವೇದನೆಗೆ ವಿಶ್ವಾಸದ ಆಲಾಪನೆ ನೀಡುವ ಗೆಳೆಯ- ಗೆಳತಿಯರು ಸಿಗುವುದು ಕಷ್ಟ. ಇಷ್ಟದ ಸಮಯದಲ್ಲಿ ಜೊತೆಯಲ್ಲಿರುವುದಲ್ಲ, ಸಂಕಷ್ಟದ ಸಮಯದಲ್ಲಿ ನೆರಳಾಗಿ ನಿಲ್ಲುವುದು ಉತ್ತಮ ಆಚಾರ. ನಮ್ಮ ಒಡನಾಟದಲ್ಲಿ ಒಡನಾಡಿಯಾಗಿ ಹಲವಾರು ಗೆಳೆಯರು ಇದ್ದರೂ, ಹಲವರೊಂದಿಗೆ ಗೆಳೆತನದ ಬೆಸುಗೆ ಬೆಸೆದಿದ್ದರೂ, ಅವರು ನೋವಲ್ಲಿ   ಹೆಗಲಾಗುವರೇ? ನೋವಿಗೆ ಔಷಧಿಯಾಗುವರೇ? ಇದೇ ಯಕ್ಷಪ್ರಶ್ನೆ!

ಯಾರು ನಮ್ಮ ನಿಜವಾದ ಸ್ನೇಹಿತರೆಂದು  ತಿಳಿಯಲು ಅಗ್ನಿಪರೀಕ್ಷೆಯ ಅಗತ್ಯವಿಲ್ಲ. ಬದಲಾಗಿ ಕಷ್ಟ, ನೋವೆಂಬ ಕಿರು ಅಧ್ಯಾಯ ನಮ್ಮ ಹತ್ತಿರ ಹೆಜ್ಜೆ ಹಾಕಿದಾಗ ಯಾರು ನನ್ನವರೆಂಬ ಪ್ರಶ್ನೆಗೆ ಸರಳವಾಗಿಯೇ ಉತ್ತರ ದೊರೆಯುತ್ತದೆ. ನೋವಿರಲಿ ನಲಿವಿರಲಿ, ನಗುವಿರಲಿ ಅಳುವಿರಲಿ, ಬಡತನ ಇರಲಿ ಸಿರಿತನ ಇರಲಿ, ಯಾವುದೇ ಸಂದರ್ಭದಲ್ಲೂ ಸ್ನೇಹದ ಪ್ರತಿಬಿಂಬಕ್ಕೆ ಏನೇ ತೊಂದರೆಯಾದರೂ ಮರುಯೋಚಿಸದೆ ನಾನಿದ್ದೇನೆ ಎಂಬ ಧೈರ್ಯದ ಮಾತು, ಇರುಳಲ್ಲಿ ಬೆಳಕು ತೋರಿದಂತೆ, ಬಾಯಾರಿದ ಗಂಟಲಿಗೆ ನೀರು ಸಿಕ್ಕಿದಂತೆ, ಸಾಗರದ ಪಯಣಿಗನಿಗೆ ತೀರ ಕಂಡಂತೆ, ಸಂತಸ, ಆತ್ಮಬಲ ಮೂಡುತ್ತದೆ. ಆತ್ಮಬಲವು ಗೆಲುವಾಗಿ ಅವನ ಬದುಕ ಪುಟಗಳಲ್ಲಿ ನೂತನ ಅಧ್ಯಾಯ ಬರೆಯುತ್ತದೆ.  ನೋವಲ್ಲಿ ಸ್ಪಂದಿಸಿದ ಕಾರಣ ಸಾವಿನ ದವಡೆಯಿಂದ ಹೊರಬಂದ ಉದಾಹರಣೆಗಳು ನಮ್ಮ ಸನಿಹವೇ ವಿಹರಿಸುತ್ತದೆ.

ಹಣ ನೋಡಿ ಸ್ನೇಹ ಬಯಸಬೇಡಿ, ಖರೀದಿಸಬೇಡಿ. ಸದ್ಗುಣ, ಅವರೊಳಗಿನ ಭಾವನೆ, ತಿಳಿದು ಅದನ್ನು ತಿಳಿಯದೆ ತಳ್ಳಿ ಹಾಕದೆ ಅದರ ಅರ್ಥವನ್ನು ತಿಳಿದು  ಸ್ನೇಹ ಸಾಧಿಸಿ. ಹಣ ನೋಡಿ ಹುಟ್ಟುವ ಪ್ರೀತಿಯು ನೀರ ಮೇಲಿನ ಗುಳ್ಳೆಯಾದರೆ, ಗುಣ ನೋಡಿ ಹುಟ್ಟುವ ಪ್ರೀತಿ ಹರಿಯುವ ನದಿಯಂತೆ. ಆ ನದಿಯು ವಿಶ್ವಾಸ, ಸಂಬಂಧ, ಸಹಾಯವೆನ್ನುವ ಮಹಾಸಾಗರವ ಸೇರುತ್ತದೆ. ಗೆದ್ದಾಗ ಬೆನ್ನು ತಟ್ಟುವ, ಚಪ್ಪಾಳೆ ತಟ್ಟುವ ಕೈಗಳು ಸೋತಾಗ ಕೈ ಬಿಡದಿರಲಿ. ಗೆದ್ದಾಗ ನಮ್ಮವರೆಂಬ ಭಾವಾಂತರಂಗ ಅಭಿಮಾನದ ಶಿಖರ, ಸೋತಾಗ ನೆಲಕಚ್ಚದಿರಲಿ, ಹುಸಿಯದಿರಲಿ ಗೆಳೆಯರೇ.

 ಗಿರೀಶ್‌ ಪಿ.ಎಂ.

ವಿ.ವಿ. ಮಂಗಳೂರು

ಟಾಪ್ ನ್ಯೂಸ್

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Kadri-park

Mangaluru: ಕದ್ರಿ ಪಾರ್ಕ್‌ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.