Fraud: ಉದ್ಯೋಗ ಕೊಡಿಸುವುದಾಗಿ 70 ಲಕ್ಷ ರೂ. ವಂಚನೆ


Team Udayavani, Mar 7, 2024, 7:30 PM IST

6

ಗಂಗೊಳ್ಳಿ: ಕೋಟೇಶ್ವರ ಗ್ರಾಮದ ದೀಪಕ್‌ ಅವರಿಗೆ ದಯಾನಂದ ಎಂಬಾತ ನ್ಯಾಯಾಲಯದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ 70 ಲಕ್ಷ ರೂ. ವಂಚಿಸಿದ ಕುರಿತು ದೂರು ದಾಖಲಾಗಿದೆ.

ಉಡುಪಿ ನ್ಯಾಯಾಲಯಗಳಲ್ಲಿ “ಡಿ’ ದರ್ಜೆಯ ಹುದ್ದೆಗಳಿಗೆ ನೇಮಕಾತಿ ಕರೆದಿದ್ದು, ಉದ್ಯೋಗ ಕೊಡಿಸುವುದಾಗಿ ನಂಬಿಸಿ 6.5 ಲಕ್ಷ ರೂ. ನಗದಾಗಿ ಪಡೆದಿದ್ದು, ಮತ್ತೆ 3 ಲಕ್ಷ ರೂ.ಗಳನ್ನು ದಯಾನಂದ ನೀಡಿದ ಬ್ಯಾಂಕ್‌ ಖಾತೆಗೆ ವರ್ಗಾಯಿಸಿದ್ದರು. ಇದೇ ಮಾದರಿಯಲ್ಲಿ ಸುಶೀಲಾ 5.5 ಲಕ್ಷ ರೂ., ರತ್ನಾಕರ 14 ಲಕ್ಷ ರೂ., ದಿನೇಶ 16 ಲಕ್ಷ ರೂ., ಪದ್ಮನಾಭ 7.25 ಲಕ್ಷ ರೂ., ವಿಘ್ನೇಶ 2 ಲಕ್ಷ ರೂ., ಸುದೀಪ 7 ಲಕ್ಷ ರೂ., ಮಂಜುನಾಥ 3 ಲಕ್ಷ ರೂ., ಅಭಿಷೇಕ 2 ಲಕ್ಷ ರೂ., ಸೌರಭ್‌ ಹಾಗೂ ಸ್ವಸ್ತಿಕ್‌ ತಲಾ 2 ಲಕ್ಷ ರೂ. ಹಣ ಕೊಟ್ಟಿದ್ದರು.

ಹಣ ಪಡೆದ ಬಳಿಕ ಆರೋಪಿ ಕೆಲಸಕ್ಕೆ ನೇಮಕಾತಿ ನೋಟಿಫಿಕೇಶನ್‌ ಹಾಗೂ ಲಿಸ್ಟ್‌ ಆಫ್‌ ಕ್ಯಾಂಡಿಡೇಟ್‌ ಸೆಲೆಕ್ಟೆಡ್‌ ಎಂಬ ಜೆರಾಕ್ಸ್‌ ಪ್ರತಿಗಳನ್ನು ನೀಡಿದ್ದ. ಆನ್‌ಲೈನ್‌ನಲ್ಲಿ ಬಂದ ನೇಮಕಾತಿಯ ನಿಜವಾದ ಪಟ್ಟಿ ನೋಡಿದಾಗ ಹೆಸರು ಇರಲಿಲ್ಲ. ವಿಚಾರಿಸಿದಾಗ ಹೈಕೋರ್ಟ್‌ನಿಂದ ಬೇರೆಯೇ ಲಿಸ್ಟ್‌ ಬರುವುದಾಗಿ ನಂಬಿಸಿ, ಅಪಾಯಿಂಟ್‌ಮೆಂಟ್‌ ಕ್ಯಾಂಡಿಡೇಟ್‌ ಪ್ಲೇಸ್‌ಮೆಂಟ್‌ ಲಿಸ್ಟ್‌ ಎಂಬ ಜೆರಾಕ್ಸ್‌ ಪ್ರತಿ ನೀಡಿದ್ದ. ನೇರವಾಗಿ ಹೈಕೋರ್ಟ್‌ನಿಂದ ಪಡೆದಿದ್ದು ಎಂದು ನಂಬಿಸಿ, ನಿರ್ದಿಷ್ಟ ದಿನಾಂಕದಂದು ಉಡುಪಿ ಕೋರ್ಟ್‌ಗೆ ಹೋಗಿ ದಾಖಲೆಗಳನ್ನು ಹಾಜರುಪಡಿಸಬೇಕಾಗಿ ತಿಳಿಸಿದ್ದ. ಆರೋಪಿ ವಂಚಿಸುತ್ತಿದ್ದಾನೆ ಎಂಬ ಸಂಶಯದಿಂದ ಹಣ ಮರಳಿ ಕೇಳಿದಾಗ ಆರೋಪಿ ತನ್ನ ಮಡದಿ ಭವಾನಿ ಅವರ ಹೆಸರಿನ ತ್ರಾಸಿ ಗ್ರಾಮದ ಜಾಗದ ಜಿಪಿಎ ಪತ್ರವನ್ನು ದೀಪಕ್‌ ಹಾಗೂ ರತ್ನಾಕರ ಅವರಿಗೆ ಜಿಪಿಎ ಮಾಡಿ ನೀಡಿದ್ದ. ದೀಪಕ್‌ಗೆ 6.5 ಲಕ್ಷ ರೂ. ಚೆಕ್‌ ನೀಡಿದ್ದ. ಜಿಪಿಎ ಮಾಡಿಕೊಟ್ಟ ಜಾಗವನ್ನು ವರ್ಗಾಯಿಸದೆ ಉದ್ಯೋಗ ಕೊಡಿಸವ ನೆಪದಲ್ಲಿ ಒಟ್ಟು 70.25 ಲಕ್ಷ ರೂ. ಹಣ ವಂಚನೆ ಮಾಡಿರುವುದಾಗಿ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್

water

Mudubidire: 77 ಕೋ.ರೂ. ವೆಚ್ಚದ ಅಮೃತ್‌ 2.0 ನೀರಿನ ಯೋಜನೆಗೆ ಚಾಲನೆ

Belli

Movie Release: ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್‌ ಬೆಳ್ಳಿ’ ತೆರೆಗೆ

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

cOurt

Udupi: ಪಾತಕಿ ಬನ್ನಂಜೆ ರಾಜ ಸಹಚರನಿಗೆ ಜಾಮೀನು

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

1-ccrr-2

Team India ಮೂರನೇ ಸುತ್ತಿನ ಅಭ್ಯಾಸ

water

Mudubidire: 77 ಕೋ.ರೂ. ವೆಚ್ಚದ ಅಮೃತ್‌ 2.0 ನೀರಿನ ಯೋಜನೆಗೆ ಚಾಲನೆ

Belli

Movie Release: ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್‌ ಬೆಳ್ಳಿ’ ತೆರೆಗೆ

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.