Ranganayaka Movie Review; ಗುರುವಿನ ಆದಿ ಪುರಾಣ


Team Udayavani, Mar 9, 2024, 12:16 PM IST

ranganayaka movie review

ಸಿನಿಮಾ ಎಂದ ಮೇಲೆ ಅಲ್ಲೊಂದಿಷ್ಟು ಲಾಜಿಕ್‌ ಇರಬೇಕು, ಕಥೆಯ ಒಂದು ಸಣ್ಣ ಎಳೆಯಾದರೂ ಇರಬೇಕು, ನಾಯಕನಿಗಾಗಿಯೇ ಪ್ರಮುಖ ದೃಶ್ಯವಿರಬೇಕು, ನಾಯಕಿ ಸೇರಿದಂತೆ ಇತರ ಪ್ರಮುಖ ಪಾತ್ರಗಳಿಗೆ ಒಂದಷ್ಟು ಪ್ರಾಮುಖ್ಯತೆ ಇರಲೇಬೇಕು… ಹೀಗೆಂದುಕೊಂಡು ಸಿನಿಮಾ ಮಾಡುವ ಅದೆಷ್ಟೋ ನಿರ್ದೇಶಕರ ಮಧ್ಯೆ ನಿರ್ದೇಶಕ ಗುರುಪ್ರಸಾದ್‌ ಮಾತ್ರ “ರಂಗನಾಯಕ’ ಚಿತ್ರದಲ್ಲಿ ಅವೆಲ್ಲವನ್ನು ಪಕ್ಕಕ್ಕೇ ಸರಿಸಿ “ಭಿನ್ನ’ವಾಗಿ ಯೋಚಿಸಿದ್ದಾರೆ.

“ನಾನೊಬ್ಬ ಇದ್ದರೆ ಸಾಕು, ಎಲ್ಲವೂ, ಎಲ್ಲರೂ ಇದ್ದಂತೆ’ ಎಂಬ ಭಾವದೊಂದಿಗೆ ಸಿನಿಮಾ ಪೂರ್ತಿ ಆವರಿಸಿಕೊಂಡು ಬಿಟ್ಟಿದ್ದಾರೆ ಗುರು. ಹಾಗಾದರೆ, ಜಗ್ಗೇಶ್‌ ಏನು? ಎಂಬ ಪ್ರಶ್ನೆ ಬರಬಹುದು. ಜಗ್ಗೇಶ್‌ ಅವರಿಲ್ಲಿ ಗೆಸ್ಟ್‌ ಅಪಿಯರೆನ್ಸ್‌ಗೆ ಸೀಮಿತ! ಸಿನಿಮಾ ನೋಡಿ ಹೊರಬರುವ ಪ್ರೇಕ್ಷಕರಲ್ಲಿ ಹೀಗೊಂದು ಭಾವ ಮೂಡದೇ ಇರದು.

ಜನ “ಸಂಭಾಷಣೆಗಷ್ಟೇ’ ಖುಷಿಪಡುತ್ತಾರೆ ಎಂಬ ನಿರ್ದೇಶಕ ಗುರುಪ್ರಸಾದ್‌ ಅವರ ನಂಬಿಕೆಯ “ಫ‌ಲ’ವೋ ಏನೋ, ಅವರಿಲ್ಲಿ ಕಥೆ, ಚಿತ್ರಕಥೆಗಿಂತ ಮಾತಿಗಷ್ಟೇ ಮಹತ್ವ ನೀಡಿದ್ದಾರೆ. ಆ ಸಂಭಾಷಣೆಯಲ್ಲಿ ಪ್ರೇಕ್ಷಕನಿಗಿಂತ ಹೆಚ್ಚು ಅವರೇ ಖುಷಿಕಂಡಿದ್ದಾರೆ ಕೂಡಾ. ಅದು ತೆರೆಮೇಲೆ “ಎದ್ದು-ಬಿದ್ದು’ ಕಾಣುತ್ತದೆ. ಸಿನಿಮಾ ಪ್ರಮೋಶನ್‌ ವೇಳೆ “ರಂಗನಾಯಕ’ ಚಿತ್ರದ ಬಗ್ಗೆ ಮಾತನಾಡುತ್ತಾ ಕೆಟ್ಟ ಸಿನಿಮಾಗಳನ್ನು ನೋಡಿ ಹತಾಶನಾದ ಪ್ರೇಕ್ಷಕನ ಮನದ ಮಾತಿದು ಎಂದಿದ್ದರು. ಆದರೆ, ಅಂತಹ ಪ್ರೇಕ್ಷಕ ಮತ್ತೆ ಹತಾಶನಾಗಲು ಬಯಸುವುದಿಲ್ಲ ಎಂಬ ಯೋಚನೆ ಗುರುಪ್ರಸಾದ್‌ ಅವರಿಗೆ ಬಂದಂತಿಲ್ಲ. ಅದೇ ಕಾರಣದಿಂದ “ರಂಗನಾಯಕ’ ಒಂದು ನಿರ್ದಿಷ್ಟ “ಫ್ರೇಮ್‌’ಗೆ ಸಿಗುವುದೇ ಇಲ್ಲ. ಇಲ್ಲಿ ಗುರು ಮಾತೇ “ಪ್ರಸಾದ’. ಪ್ರೇಕ್ಷಕ ಅದನ್ನು ಕಣ್ಣಿಗೊತ್ತಿಗೊಂಡು “ಎದೆ’ಗೆ ಹಾಕಿಕೊಂಡರೆ ಸಿನಿಮಾ ಖುಷಿಕೊಡಬಹುದು. ಖ್ಯಾತ ನಿರ್ದೇಶಕನೊಬ್ಬ ಪೂರ್ವಜನ್ಮದ ಕಾರ್ಯಕ್ರಮಕ್ಕೆ ಬಂದು ತಾನು ಮೊಟ್ಟ ಮೊದಲ ಕನ್ನಡ ಸಿನಿಮಾ ಮಾಡಲು ಹೊರಟಾಗ ಏನಾಯಿತು ಎಂದು ಹೇಳುವುದೇ ಚಿತ್ರದ ಒನ್‌ಲೈನ್‌. ಸಿನಿಮಾ ಆರಂಭವಾಗಿ ಇಂಟರ್‌ವಲ್‌ ಬರುವವರೆಗೆ ಗುರುಪ್ರಸಾದ್‌ ಅವರದ್ದೇ “ಆಟ’.

ತಮ್ಮ ಬರವಣಿಗೆಯ ಪಾಂಡಿತ್ಯ, ವೈಯಕ್ತಿಕ ಸಿಟ್ಟನ್ನು ಪ್ರದರ್ಶಿಸಲು ಗುರುಪ್ರಸಾದ್‌ ಇಡೀ ಸಿನಿಮಾವನ್ನು ದುಡಿಸಿ, “ದಣಿಸಿ’ದ್ದಾರೆ. ಅಲ್ಲಲ್ಲಿ ಬರುವ ಜಗ್ಗೇಶ್‌ ಅವರು ಈ ಸಿನಿಮಾದ “ಜೀವಾಳ’. ಹಾಗಂತ ಇಲ್ಲಿ ಅವರಿಗಾಗಲೀ, ನಾಯಕಿಗಾಗಲೀ ಅಥವಾ ಇತರ ಪಾತ್ರಗಳಿಗಾಗಲೀ ಒಂದೇ ಒಂದು ಗುರುತರವಾದ ದೃಶ್ಯವಿಲ್ಲ. ಅದೇ ಕಾಮಿಡಿ, ಅದೇ “ಹಾವ-ಭಾವ’ ಗಳಿಗಷ್ಟೇ ಜಗ್ಗೇಶ್‌ ಅವರನ್ನು ಸೀಮಿತಗೊಳಿಸಲಾಗಿದೆ. ಸಿನಿಮಾದಲ್ಲಿ ಕನ್ನಡತನವಿದೆ, ಕನ್ನಡದ ಮೇಲಿನ ಪ್ರೀತಿ ಇದೆ, ಕನ್ನಡಕ್ಕೆ ಎಲ್ಲರೂ ಜೈ ಅನ್ನಬೇಕು ಎಂಬ ಕಾಳಜಿ ಇದೆ. ಆದರೆ, ಇದನ್ನು ಕಟ್ಟಿಕೊಟ್ಟ ರೀತಿ ಮಾತ್ರ ಚಿತ್ರದ “ಮೂಲ ಆಶಯ’ವೇ ಕಳೆದು ಹೋಗುವಂತಿದೆ.

ನಾಯಕ ಜಗ್ಗೇಶ್‌ ಆಗಾಗ ಬಂದು ನಗಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, 40 ವರ್ಷಗಳಿಂದ ಕನ್ನಡ ಪ್ರೇಕ್ಷಕರನ್ನು ರಂಜಿಸುತ್ತಾ ಬಂದ ಅಪ್ರತಿಮ ಕಲಾವಿದನಿಂದ ಮತ್ತೆ ಹೊಸದೇನನ್ನೋ ಮಾಡಿಸುವ ಅವಕಾಶ ನಿರ್ದೇಶಕರಿಗಿತ್ತು. ಇನ್ನು, ಸಿನಿಮಾ ತುಂಬಾ “ಆವರಿಸಿಕೊಂಡಿರುವ’ ಗುರುಪ್ರಸಾದ್‌ ಮಾತಲ್ಲೇ “ರಂಜಿಸುತ್ತಾ’ ಕ್ಲೋಸಫ್ ಫ್ರೇಮ್‌ನಲ್ಲೇ ಖುಷಿಕಂಡಿದ್ದಾರೆ. ರಚಿತಾ ಮಹಾಲಕ್ಷ್ಮೀ ಜಗ್ಗೇಶ್‌ ಜೋಡಿಯಾಗಿ ನಟಿಸಿದ್ದಾರೆ. ಚಿತ್ರದ ಹಾಡು, ಹಿನ್ನೆಲೆ ಸಂಗೀತದಲ್ಲಿ ಅನೂಪ್‌ ಸೀಳೀನ್‌ ಗಮನ ಸೆಳೆಯುತ್ತಾರೆ.

ರವಿಪ್ರಕಾಶ್ ರೈ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sidlingu 2 Movie Review

Sidlingu 2 Review ಫ್ಯಾಮಿಲಿ ಡ್ರಾಮಾದಲ್ಲಿ ವಿಜಯ ಪ್ರಸಾದ

Raju James Bond Review

Raju James Bond Review: ಕಾಸಿಗಾಗಿ ಜೇಮ್ಸ್‌ ಜೂಟಾಟ

Bhuvanam Gaganam Review

Bhuvanam Gaganam Review: ಪ್ರೇಮದ ಹಾದಿಯಲ್ಲಿ ಸುಮ ಘಮ

Mr.Rani movie review: ನಾನು ಅವಳಲ್ಲ ಅವನು!

Mr.Rani movie review: ನಾನು ಅವಳಲ್ಲ ಅವನು!

Gajarama Movie Review

Gajarama Movie Review: ಪ್ರೀತಿ ಮಧುರ ತ್ಯಾಗ ಅಮರ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.