Bangalore: ರಾಮೇಶ್ವರಂ ಕೆಫೆ ಪುನಾರಂಭ
Team Udayavani, Mar 10, 2024, 11:39 AM IST
ಬೆಂಗಳೂರು: ಬಾಂಬ್ ಸ್ಫೋಟಗೊಂಡು ಇಡೀ ದೇಶದಲ್ಲೇ ಸಂಚಲನ ಮೂಡಿಸಿದ್ದ ವೈಟ್ ಫೀಲ್ಡ್ನ ಕುಂದಲಹಳ್ಳಿಯಲ್ಲಿರುವ “ರಾಮೇಶ್ವರಂ ಕೆಫೆ’ ಶನಿವಾರ ಮತ್ತೆ ಪುನಾರಂಭಗೊಂಡಿತು. ಪೊಲೀಸರ ಭದ್ರತೆ ನಡುವೆ ಗ್ರಾಹಕರು ಆತಂಕ ಬಿಟ್ಟು ನೆಚ್ಚಿನ ತಿನಿಸು ಸವಿದರು.
ಮಾರ್ಚ್ 1ರಂದು ಬಾಂಬ್ ಸ್ಫೋಟಗೊಂಡು ತಲ್ಲಣಗೊಂಡಿದ್ದ ಕೆಫೆ ಕೃತ್ಯ ನಡೆದ 8 ದಿನಗಳ ಬಳಿಕ ಪುನಾರಂಭಗೊಂಡಿದೆ. ಹೂವು, ತಳಿರು ತೋರಣಗಳಿಂದ ಕೆಫೆ ಅಲಂಕೃತಗೊಂಡಿದೆ. ಈ ಹಿಂದೆಗಿಂತ ಹೆಚ್ಚಿನ ಭದ್ರತೆ ಯಲ್ಲಿ ಕೆಫೆ ಆರಂಭಿಸಲಾಗಿದೆ. ಪ್ರವೇಶಿಸುವಲ್ಲಿ ಹೊಸದಾಗಿ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದೆ. ಸಂಶಯಾಸ್ಪದ ಜನರ ಮೇಲೆ ಹೆಚ್ಚಿನ ನಿಗಾ ಇಡಲಾಗುತ್ತಿದೆ. ಸೆಕ್ಯೂರಿಟಿಗೆ ನಿವೃತ್ತ ಸೈನಿಕರನ್ನು ನೇಮಿಸಿಕೊಳ್ಳಲಾಗಿದೆ. ಗ್ರಾಹಕರ ಬ್ಯಾಗ್ ತಪಾಸಣೆ ಮಾಡಲಾಗುತ್ತಿದೆ.
ಕಳೆದ 1 ವಾರದಿಂದ ವಿವಿಧ ತನಿಖಾ ಸಂಸ್ಥೆಗಳ ತನಿಖೆ ಮತ್ತಿತರ ಕಾನೂನು ಪ್ರಕ್ರಿಯೆಗಳಿಗಾಗಿ ರಾಮೇಶ್ವರಂ ಕೆಫೆ ಬಂದ್ ಆಗಿತ್ತು. ಈ ಸಮಯದಲ್ಲೇ ಬಾಂಬ್ ಸ್ಫೋಟ ದಿಂದಾಗಿ ಹಾನಿಯಾಗಿದ್ದ ಪೀಠೊಪಕರಣ, ಚಾವಣಿ ಸೇರಿ ಎಲ್ಲವನ್ನೂ ಮಾಲೀಕರು ಸರಿಪಡಿಸಿದ್ದಾರೆ. ಶುಕ್ರವಾರ ಕೆಫೆಯಲ್ಲಿ ವಿಶೇಷ ಪೂಜೆ ಕೂಡ ನೆರವೇರಿತ್ತು. ರಾಷ್ಟ್ರಗೀತೆ ಯೊಂದಿಗೆ ಕೆಫೆಯನ್ನು ಹೋಟೆಲ್ ಮಾಲೀಕ ರಾಘವೇಂದ್ರ ರಾವ್ ಆರಂಭ ಮಾಡಿದರು.
ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ: ಬಾಂಬ್ ಸ್ಫೋಟ ಗೊಂಡ ಬಳಿಕ ಗ್ರಾಹಕರು ರಾಮೇಶ್ವರಂ ಕೆಫೆಯಪತ್ತ ಸುಳಿ ಯುತ್ತಾರೋ ಎಂಬ ಅನುಮಾನಗಳು, ಚರ್ಚೆಗಳು ಎಲ್ಲೆಡೆ ನಡೆಯುತ್ತಿತ್ತು. ಆದರೆ, ಶನಿವಾರ ಬೆಳಗ್ಗಿನಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಹೋಟೆಲ್ಗೆ ಆಗಮಿಸಿದ್ದು ವಿಶೇಷವಾಗಿತ್ತು. ಕೆಫೆ ಮಾಲೀಕ ಗ್ರಾಹಕರ ಬಳಿ ಬಂದು ಧೈರ್ಯ ತುಂಬಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
IFFI: ನವೆಂಬರ್ 20ರಿಂದ ಗೋವಾದಲ್ಲಿ 55ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ
Women’s T20 World Cup: ಮೊದಲ ಪಂದ್ಯದಲ್ಲೇ ಸೋತ ಭಾರತದ ಸೆಮಿ ಫೈನಲ್ ಹಾದಿ ಹೀಗಿದೆ
Bengaluru: ಕೆಎಸ್ಆರ್ಟಿಸಿಯಿಂದ ದಸರಾಗೆ 2000 ಹೆಚ್ಚುವರಿ ಬಸ್ ಸಂಚಾರ
Women’s T20 World Cup: ಮತ್ತೆ ವಿವಾದಕ್ಕೆ ಸಿಲುಕಿದ ಕಾಮೆಂಟೇಟರ್ ಸಂಜಯ್ ಮಾಂಜ್ರೇಕರ್
Bengaluru: ಆನ್ಲೈನ್ನಲ್ಲೇ ಆಸ್ತಿ ಇ-ಖಾತಾ ಪಡೆಯಿರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.