2-0 cleansweep; ಮಿಂಚಿದ ಕ್ಯಾರಿ: ಆಸೀಸ್ ಜಯಭೇರಿ
Team Udayavani, Mar 12, 2024, 12:36 AM IST
ಕ್ರೈಸ್ಟ್ಚರ್ಚ್: ಕೀಪರ್ ಅಲೆಕ್ಸ್ ಕ್ಯಾರಿ, ಮಿಚೆಲ್ ಮಾರ್ಷ್ ಮತ್ತು ನಾಯಕ ಪ್ಯಾಟ್ ಕಮಿನ್ಸ್ ಅವರ ಅಮೋಘ ಬ್ಯಾಟಿಂಗ್ ಸಾಹಸದಿಂದ ಕ್ರೈಸ್ಟ್ಚರ್ಚ್ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ಗೆ 3 ವಿಕೆಟ್ಗಳ ಸೋಲುಣಿಸಿದ ಆಸ್ಟ್ರೇಲಿಯ, ಸರಣಿಯನ್ನು 2-0 ಕ್ಲೀನ್ಸ್ವೀಪ್ ಆಗಿ ವಶಪಡಿಸಿಕೊಂಡಿದೆ.
ಅಲೆಕ್ಸ್ ಕ್ಯಾರಿ ಅಜೇಯ 98, ಮಿಚೆಲ್ ಮಾರ್ಷ್ 80 ಮತ್ತು ಪ್ಯಾಟ್ ಕಮಿನ್ಸ್ ಅಜೇಯ 32 ರನ್ ಬಾರಿಸಿ ಆಸ್ಟ್ರೇಲಿಯಕ್ಕೆ ಸ್ಮರಣೀಯ ಜಯವೊಂದನ್ನು ತಂದಿತ್ತರು. ಗೆಲುವಿಗೆ 279 ರನ್ನುಗಳ ಕಠಿನ ಗುರಿ ಪಡೆದಿದ್ದ ಆಸ್ಟ್ರೇಲಿಯ 7 ವಿಕೆಟಿಗೆ 281 ರನ್ ಬಾರಿಸಿ ಗೆದ್ದು ಬಂದಿತು. ವೆಲ್ಲಿಂಗ್ಟನ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು 172 ರನ್ನುಗಳಿಂದ ಜಯಿಸಿತ್ತು.
ಬದಲಾಯಿತು ಚಿತ್ರಣ
3ನೇ ದಿನದಾಟದ ಅಂತ್ಯಕ್ಕೆ ಆಸೀಸ್ 77 ರನ್ನಿಗೆ 4 ವಿಕೆಟ್ ಕಳೆದುಕೊಂಡಿತ್ತು. ಪಂದ್ಯ ರೋಚಕ ಘಟ್ಟದಲ್ಲಿತ್ತು. ಈ 4 ವಿಕೆಟ್ 34 ರನ್ನಿಗೇ ಬಿದ್ದಿತ್ತು. ಸೋಮವಾರ ಸ್ಕೋರ್ 80ಕ್ಕೆ ಏರಿದಾಗ ಟ್ರ್ಯಾವಿಸ್ ಹೆಡ್ ಔಟಾದರು. ನ್ಯೂಜಿಲ್ಯಾಂಡ್ನ ಗೆಲುವಿನ ಸಾಧ್ಯತೆ ಹೆಚ್ಚಿತು.
ಆದರೆ 6ನೇ ವಿಕೆಟಿಗೆ ಜತೆಗೂಡಿದ ಮಿಚೆಲ್ ಮಾರ್ಷ್ ಮತ್ತು ಅಲೆಕ್ಸ್ ಕ್ಯಾರಿ ಕ್ರೀಸಿಗೆ ಅಂಟಿಕೊಳ್ಳುವುದರೊಂದಿಗೆ ಪಂದ್ಯದ ಚಿತ್ರಣ ನಿಧಾನವಾಗಿ ಬದಲಾಗತೊಡಗಿತು. ಆಸೀಸ್ ಸ್ಕೋರ್ಬೋರ್ಡ್ನಲ್ಲಿ ಪ್ರಗತಿ ಆಗುತ್ತ ಹೋಯಿತು. ಇವರಿಂದ ಭರ್ತಿ 150 ರನ್ ಒಟ್ಟುಗೂಡಿತು. ಸ್ಕೋರ್ 220ಕ್ಕೆ ಏರಿತು. ಆಗ 102 ಎಸೆತಗಳಿಂದ 80 ರನ್ ಮಾಡಿದ ಮಾರ್ಷ್ ಅವರನ್ನು ಬೆನ್ ಸಿಯರ್ ಪೆವಿಲಿಯನ್ನಿಗೆ ಕಳುಹಿಸಿದರು. ಮುಂದಿನ ಎಸೆತದಲ್ಲೇ ಮಿಚೆಲ್ ಸ್ಟಾರ್ಕ್ (0) ವಿಕೆಟ್ ಹಾರಿಸಿದರು. ಕಿವೀಸ್ ಮತ್ತೆ ಮೇಲುಗೈ ಸಾಧಿಸಿತು. ಆದರೆ ಅದೃಷ್ಟ ಮಾತ್ರ ಆಸೀಸ್ ಪಾಳೆಯದಲ್ಲೇ ಕುಳಿತಿತ್ತು.
8ನೇ ವಿಕೆಟಿಗೆ ಜತೆಗೂಡಿದ ಕ್ಯಾರಿ-ಕಮಿನ್ಸ್ ಮತ್ತೂಂದು ಸುತ್ತಿನ ಹೋರಾಟವನ್ನು ಜಾರಿಯಲ್ಲಿರಿಸಿದರು. 61 ರನ್ ಒಟ್ಟುಗೂಡಿಸಿ ತಂಡವನ್ನು ಯಶಸ್ವಿಯಾಗಿ ದಡ ಮುಟ್ಟಿಸಿದರು. ನ್ಯೂಜಿಲ್ಯಾಂಡ್ ತವರಲ್ಲೇ ವೈಟ್ವಾಶ್ ಸಂಕಟಕ್ಕೆ ಸಿಲುಕಿತು.
ಎರಡನೇ ಸ್ಥಾನಕ್ಕೇರಿದ ಆಸ್ಟ್ರೇಲಿಯ
ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯನ್ನು 2-0 ಅಂತರದಿಂದ ಕ್ಲೀನ್ಸ್ವೀಪ್ ಆಗಿ ವಶಪಡಿಸಿಕೊಂಡ ಆಸ್ಟ್ರೇಲಿಯ ನೂತನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದೆ. ಆಸ್ಟ್ರೇಲಿಯದ ಗೆಲುವಿನ ಪ್ರತಿಶತ ಸಾಧನೆ 59.09ರಿಂದ 62.50ಗೆ ಏರಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Kuloor: ಮೊಯ್ದೀನ್ ಬಾವಾ ಸೋದರ ಮಮ್ತಾಜ್ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ
Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?
Martin: ಇಂದು ಧ್ರುವ ಸರ್ಜಾ ಬರ್ತ್ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್ ಇವೆಂಟ್
New Guideline For Trekkers: ಇಂದಿನಿಂದ ಕುಮಾರ ಪರ್ವತ ಚಾರಣಕ್ಕೆ ಅವಕಾಶ
Tender Open: ತುರ್ತು ಸೇವೆಗೆ ಬರಲಿದೆ ಮೂರು ಸೀ ಆ್ಯಂಬುಲೆನ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.