Udupi ಜಿಲ್ಲೆಯಲ್ಲಿ ಮಾತ್ರ: ಭಯಮುಕ್ತ ಪರೀಕ್ಷೆಗಾಗಿ ಎಸೆಸೆಲ್ಸಿ ಅಣಕು ಪರೀಕ್ಷೆ

ವಿದ್ಯಾರ್ಥಿಗಳಿಂದಲೇ ಮೌಲ್ಯಮಾಪನ

Team Udayavani, Mar 15, 2024, 12:42 AM IST

Exam

ಕುಂದಾಪುರ: ಮಾರ್ಚ್‌ 25ರಿಂದ ಆರಂಭವಾಗುವ ಎಸೆಸೆಲ್ಸಿ ಪರೀಕ್ಷೆಯನ್ನು ಮಕ್ಕಳು ಗೊಂದಲ ಹಾಗೂ ಭಯರಹಿತವಾಗಿ ಬರೆಯಬೇಕೆನ್ನುವ ಆಶಯದಿಂದ ಉಡುಪಿ ಜಿಲ್ಲೆಯ ವಿವಿಧ ಕೇಂದ್ರ ಗಳಲ್ಲಿ ಗುರುವಾರ ಅಣಕು ಪರೀಕ್ಷೆ ನಡೆಸಲಾಯಿತು. ಬೇರೆ ಯಾವ ಜಿಲ್ಲೆಯಲ್ಲೂ ಈ ಪರೀಕ್ಷೆ ನಡೆಸಿಲ್ಲ.

ಪಬ್ಲಿಕ್‌ ಪರೀಕ್ಷೆ ಮಾದರಿ ಯಲ್ಲೇ ವಿದ್ಯಾರ್ಥಿಗಳು ನಿಯೋಜಿಸಿ ದಂತೆಯೇ ಬೇರೆ ಶಾಲೆಯ ಪರೀಕ್ಷಾ ಕೇಂದ್ರಗಳಿಗೆ ತೆರಳಿ ಪರೀಕ್ಷೆ ಬರೆದರು. ಸಮಯ ಪಾಲನೆ, ಶಿಸ್ತು ಇತ್ಯಾದಿ ಎಲ್ಲವೂ ಅದೇ ಮಾದರಿ. ಈ ಉತ್ತರಪತ್ರಿಕೆಯನ್ನು ಇನ್ನೊಬ್ಬ ವಿದ್ಯಾರ್ಥಿ ಮೌಲ್ಯಮಾಪನ ಮಾಡುವುದು. ಫಲಿತಾಂಶವೂ ಅಲ್ಲೇ!

ಯಾಕಾಗಿ?: ಪಬ್ಲಿಕ್‌ ಪರೀಕ್ಷೆಯ ಭಯ ನಿವಾರಣೆ, ಪರೀಕ್ಷಾ ಕೇಂದ್ರದ ಕುರಿತು ವಿದ್ಯಾರ್ಥಿಗೆ ಪೂರ್ವದಲ್ಲೇ ಮಾಹಿತಿ, ನೋಟಿಸ್‌ ಬೋರ್ಡ್‌, ನೀರು,ಶೌಚಾಲಯ ಇರುವ ಸ್ಥಳ ಗುರುತಿಸಿ ಇಟ್ಟುಕೊಳ್ಳುವುದು, ವಿವಿಧ ಅಂತಸ್ತು ಕೊಠಡಿಗಳ ಪರೀಕ್ಷಾ ಕೇಂದ್ರದಲ್ಲಿ ತಮಗೆ ನಿಗದಿಪಡಿಸಿದ ಸ್ಥಳ ಹುಡುಕುವುದು ಇತ್ಯಾದಿ ಮಾಹಿತಿ ಇದ್ದರೆ ಪರೀಕ್ಷಾ ದಿನ ಗೊಂದಲ ಉಂಟಾಗುವುದಿಲ್ಲ. ವಿದ್ಯಾರ್ಥಿಗಳೇ ಮೌಲ್ಯಮಾಪನ ಮಾಡುವುದರಿಂದ ಪುನರ್ಮನನ ಮಾಡಿದಂತಾಗುತ್ತದೆ, ಬೇರೆ ವಿದ್ಯಾರ್ಥಿಗಳು ಹೇಗೆ ಉತ್ತರಿಸಿದ್ದಾರೆ, ಉತ್ತರಿಸುವಾಗ ಎಡವಿ ದ್ದೆಲ್ಲಿ ಎಂದು ಗೊತ್ತಾಗುತ್ತದೆ ಎನ್ನುತ್ತಾರೆ ಕುಂದಾಪುರ ಶಿಕ್ಷಣಾಧಿ ಕಾರಿ ಶೋಭಾ ಶೆಟ್ಟಿ.
ಅಣಕು ಪರೀಕ್ಷೆಗಾಗಿ ಜಿಲ್ಲಾ ಶಿಕ್ಷಣ ಇಲಾಖೆ 2 ತಿಂಗಳ ಸಿದ್ಧತೆ ನಡೆಸಿದೆ. ಸರಕಾರದ ಅನುದಾನ ಇಲ್ಲದ ಕಾರಣ ದಾನಿಗಳ ಮೂಲಕ ವೆಚ್ಚಗಳನ್ನು ಸರಿದೂಗಿಸಲಾಗಿದೆ ಎಂದು ಎಸೆಸೆಲ್ಸಿ ಜಿಲ್ಲಾ ನೋಡೆಲ್‌ ಅಧಿಕಾರಿ ಬಾಲಕೃಷ್ಣ ತಿಳಿಸಿದ್ದಾರೆ.

ಐದು ಅಂಶಗಳ ಸೂತ್ರ
ಫಲಿತಾಂಶ ವೃದ್ಧಿಗಾಗಿ ಇಲಾಖೆ ಐದು ಅಂಶಗಳ ಸೂತ್ರ ರೂಪಿಸಿದೆ. ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರ ಸಹಿತ ಶಿಕ್ಷಕರು, ಶಿಕ್ಷಣಾಧಿಕಾರಿ ಮುಂಜಾನೆ, ಸಂಜೆ ಮಕ್ಕಳ ಮನೆ ಭೇಟಿ ನಡೆಸಿ ಪೋಷಕರಿಗೆ ಅವರವರ ಮಕ್ಕಳ ಅಧ್ಯಯನಕ್ಕೆ ಸಲಹೆ, ಪ್ರತೀ ವಿಷಯದ ಅಧ್ಯಾಪಕರಿಗೂ ಪ್ರತೀ ತಾಲೂಕಿನಲ್ಲಿ 2 ಕಾರ್ಯಾಗಾರಗಳ ಆಯೋಜನೆ, ಎಲ್ಲ ಬಗೆಯ ವಿದ್ಯಾರ್ಥಿಗಳಿಗೆ ಅತ್ಯುನ್ನತ ಸಾಧನೆ ಮಾಡಲು ಅಭಿ ಪ್ರೇರಣ ತರಗತಿ ಆಯೋಜನೆ, ತಾಯಂದಿರ ಸಭೆ ನಡೆಸಿ ಸಲಹೆ ನೀಡಲಾಗಿದೆ.

18ನೇ ಸ್ಥಾನ: ಫಲಿತಾಂಶದಲ್ಲಿ ಉಡುಪಿ 2015ರಿಂದ 18ರ ವರೆಗೆ ಅಗ್ರಸ್ಥಾನ ದಲ್ಲಿದ್ದು, 2016ರಲ್ಲಿ 2ನೇ ಸ್ಥಾನಕ್ಕೆ ಇಳಿದಿತ್ತು. ಬಳಿಕ 2019ರಲ್ಲಿ 5ನೇ, 2020ರಿಂದ 2022ರ ವರೆಗೆ 9 ಹಾಗೂ 12 ನೇ ಸ್ಥಾನದಿಂದ 2023ರಲ್ಲಿ 18ನೇ ಸ್ಥಾನ ಪಡೆದಿತ್ತು. ಜಿಲ್ಲಾವಾರು ರ್‍ಯಾಂಕ್‌ ಕುಸಿದರೂ ಶೇ. ಫಲಿತಾಂಶ 88-89ರಲ್ಲಿದೆ.

ಟಾಪ್ ನ್ಯೂಸ್

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

cOurt

Udupi: ಪಾತಕಿ ಬನ್ನಂಜೆ ರಾಜ ಸಹಚರನಿಗೆ ಜಾಮೀನು

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Bramavara: ಫ್ಯಾಕ್ಟರಿಯಿಂದ ಕಳವು; ಪ್ರಕರಣ ದಾಖಲು

Bramavara: ಫ್ಯಾಕ್ಟರಿಯಿಂದ ಕಳವು; ಪ್ರಕರಣ ದಾಖಲು

Gangolli: Disgusted person commits suicide

Gangolli: ಜುಗುಪ್ಸೆಗೊಂಡು ವ್ಯಕ್ತಿ ಆತ್ಮಹತ್ಯೆ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

yogi-3

Pakistan ಕ್ಯಾನ್ಸರ್‌, ಅದರ ಹುಟ್ಟಿಗೆ ಕಾಂಗ್ರೆಸ್‌ ಕಾರಣ: ಯೋಗಿ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

kangana-2

Emergency; ಭಿಂದ್ರನ್‌ವಾಲೆ ಸಾಧುವಲ್ಲ, ಭಯೋತ್ಪಾದಕ: ಸಂಸದೆ ಕಂಗನಾ

Suside-Boy

Health Problem: ಮಲಗಿದ್ದ ವೇಳೆ ಮೃತಪಟ್ಟ ವ್ಯಕ್ತಿ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.