Somu Sound Engineer: ಸೆಂಟಿಮೆಂಟ್‌ ಹಾದಿಯಲ್ಲಿ ಸೋಮು ಹೆಜ್ಜೆಗುರುತು


Team Udayavani, Mar 16, 2024, 10:59 AM IST

Somu Sound Engineer: ಸೆಂಟಿಮೆಂಟ್‌ ಹಾದಿಯಲ್ಲಿ ಸೋಮು ಹೆಜ್ಜೆಗುರುತು

ಆತ ಸೋಮು. ಸಖತ್‌ ಖಡಕ್‌ ಹುಡುಗ. ಜಗಳ ಎಂದರೆ ಎಲ್ಲರಿಗಿಂತ ಮುಂದು.. ಆದರೆ ಕೆಟ್ಟವ ಅಲ್ಲ… ಈತನಿಗೊಂದು ಒಳ್ಳೆಯ ಫ್ಯಾಮಿಲಿ ಇದೆ. ಊರೇ ಕೊಂಡಾಡುವ ದೇವರಂಥ ಅಪ್ಪ, ಮಗನ ಬಗ್ಗೆ ಕಾಳಜಿ ವಹಿಸುವ ತಾಯಿ, ಅಕ್ಕ… ಇಂತಹ ಹುಡುಗ ಎದೆಯಲ್ಲೊಂದು ಪ್ರೀತಿಯರಸಿಯೂ ಇದ್ದಾಳೆ… ಹೀಗೆ ಎಲ್ಲವೂ ಸರಿಯಾದ ದಾರಿಯಲ್ಲಿ ನಡೆಯುತ್ತಿದೆ ಎನ್ನುವಷ್ಟರಲ್ಲಿ “ದಾರಿ’ಗೊಂದು “ಲಾರಿ’ ಅಡ್ಡಬರುತ್ತದೆ. ಅಲ್ಲಿಂದ ಬದುಕು ಬದಲಾಗುತ್ತದೆ.. ಅಷ್ಟಕ್ಕೂ ಆ ದಾರಿ-ಲಾರಿ ಕಥೆ ಏನು ಎಂಬುದನ್ನು ನೀವು ತೆರೆಮೇಲೆಯೇ ನೋಡಬೇಕು.

ಈ ವಾರ ತೆರೆಕಂಡಿರುವ “ಸೋಮು ಸೌಂಡ್‌ ಇಂಜಿನಿಯರ್‌’ ಚಿತ್ರ ಒಬ್ಬ ಯುವಕನ ಸುತ್ತ ನಡೆಯುವ ಕಥೆಯನ್ನು ಹೊಂದಿದೆ. ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಕಥೆಯಲ್ಲಿ ಸೋಮು ಎಂಬ ಯುವಕ ಹಾಗೂ ಆತನ ಸುತ್ತಲೂ ನಡೆಯುವ ಘಟನಾವಳಿಗಳನ್ನಿಟ್ಟು ಕೊಂಡು ನಿರ್ದೇಶಕ ಅಭಿ ಈ ಸಿನಿಮಾ ಮಾಡಿದ್ದಾರೆ. ಅಭಿ ಇಡೀ ಸಿನಿಮಾವನ್ನು ನೈಜವಾಗಿ ಹಾಗೂ ಒಂದು ಭಾಗದ ಕಥೆಯಾಗಿ ನಿರೂಪಿಸುವಲ್ಲಿ ಯಶಸ್ವಿಯಾಗಿ ದ್ದಾರೆ. ಸಿನಿಮಾ ಉತ್ತರ ಕರ್ನಾಟಕದ ಹಳ್ಳಿಗಳ ಸುತ್ತವೇ ನಡೆದಿದ್ದು, ಸಿಟಿ ಸಹವಾಸದಿಂದ ಮುಕ್ತ ಮುಕ್ತ… ಇಲ್ಲಿ ಕಥೆಗಿಂತ ಹೆಚ್ಚಾಗಿ ಒಂದಷ್ಟು ಸನ್ನಿವೇಶಗಳನ್ನಿಟ್ಟುಕೊಂಡು ಸಿನಿಮಾ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ.

ಈ ಹಾದಿಯಲ್ಲಿ ಪ್ರೀತಿ, ದ್ವೇಷ, ಅಹಂಕಾರ, ಉಡಾಫೆ ಎಲ್ಲವೂ ಬಂದು ಹೋಗುತ್ತದೆ. ಆದರೆ, ಅಂತಿಮವಾಗಿ ಪ್ರೇಕ್ಷಕರನ್ನು ಕಾಡುವುದು ಸಿನಿಮಾದಲ್ಲಿ ಸೆಂಟಿಮೆಂಟ್‌ ಅಂಶಗಳು. ಇಲ್ಲಿ ಅಪ್ಪ-ಮಗ, ತಾಯಿ-ಮಗ, ಅಕ್ಕ-ತಮ್ಮ, ಪ್ರೀತಿಸಿದ ಹುಡುಗ-ಹುಡುಗಿ… ಹೀಗೆ ಹಲವು ಸಂಬಂಧಗಳು ಪ್ರೇಕ್ಷಕರ ಕಣ್ಣಂಚಲ್ಲಿ ನೀರು ಬರುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಚಿತ್ರದ ಮೊದಲರ್ಧಕ್ಕೆ ಹೋಲಿಸಿದರೆ ದ್ವಿತೀಯಾರ್ಧ ಹೆಚ್ಚು ಗಂಭೀರವಾಗಿದ್ದು, ಕಾಡುವ ಅಂಶಗಳೊಂದಿಗೆ ಸಾಗುತ್ತದೆ. ಬೇರೆ ಭಾಷೆಯ “ನೈಜತೆ’ಯನ್ನು ಬಾಯ್ತುಂಬ ಹೊಗಳುವ ಮಂದಿಗೆ “ಸೋಮ’ನಲ್ಲಿನ ನೈಜತೆ ಇಷ್ಟವಾಗಬಹುದು. ಇಲ್ಲಿನ ಸಂಭಾಷಣೆ ಕೂಡಾ ನೈಜ ಹಾಗೂ ತೂಕವಾಗಿದ್ದು, ಸಂಭಾಷಣೆಕಾರ ಮಾಸ್ತಿ ಬರವಣಿಗೆ ಎದ್ದು ಕಾಣುತ್ತದೆ..

ಚಿತ್ರದಲ್ಲಿ ನಾಯಕರಾಗಿ ನಟಿಸಿರುವ ಶ್ರೇಷ್ಠ ನೈಜವಾಗಿ ನಟಿಸಲು ಪ್ರಯತ್ನಿಸಿದ್ದಾರೆ. ಸೆಂಟಿಮೆಂಟ್‌ ದೃಶ್ಯಗಳಿಗಿಂತ ಇತರ ರಗಡ್‌ ದೃಶ್ಯಗಳಲ್ಲಿ ಅವರು ಗಮನ ಸೆಳೆಯುತ್ತಾರೆ. ನಾಯಕಿ ನಿವಿಷ್ಕಾಗೆ ಇಲ್ಲಿ ಹೆಚ್ಚೇನು ಕೆಲಸವಿಲ್ಲ. ಉಳಿದಂತೆ ಜಹಾಂಗೀರ್‌, ಅಪೂರ್ವ,

ಯಶ್‌ ಶೆಟ್ಟಿ ಸೇರಿದಂತೆ ಇತರರು ನಟಿಸಿದ್ದಾರೆ. ಚರಣ್‌ ರಾಜ್‌ ಸಂಗೀತದ ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ.

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ranaksha

Ranaksha: ಫ್ಯಾಮಿಲಿ ಡ್ರಾಮಾದಲ್ಲಿ ಸೀರುಂಡೆ ರಘು

Sarvasva Kannada video song

Sarvasva: ಹಾಡಲ್ಲಿ ʼಸರ್ವಸ್ವʼ ಕನಸು; ನವತಂಡದ ಪ್ರಯತ್ನ

Kiccha Sudeep: ʼಸೈಮಾʼ ಕಾರ್ಯಕ್ರಮದಲ್ಲಿ ನಿರೂಪಕನಿಗೆ ʼಕನ್ನಡʼ ಪಾಠ ಮಾಡಿದ ಕಿಚ್ಚ

Kiccha Sudeep: ʼಸೈಮಾʼ ಕಾರ್ಯಕ್ರಮದಲ್ಲಿ ನಿರೂಪಕನಿಗೆ ʼಕನ್ನಡʼ ಪಾಠ ಮಾಡಿದ ಕಿಚ್ಚ

Sandalwood: ದೆವ್ವ ಹುಡುಕಿ ಹೊರಟ ʼಮಾಂತ್ರಿಕʼ

Sandalwood: ದೆವ್ವ ಹುಡುಕಿ ಹೊರಟ ʼಮಾಂತ್ರಿಕʼ

Reeshma Nanaiah: ರೀಷ್ಮಾ ಕಣ್ಣಲ್ಲಿ ಎರಡು ಕನಸು: ಯುಐ,ಕೆಡಿ ಅಡ್ಡದಲ್ಲಿ ಗ್ಲ್ಯಾಮರಸ್ ಬೆಡಗಿ

Reeshma Nanaiah: ರೀಷ್ಮಾ ಕಣ್ಣಲ್ಲಿ ಎರಡು ಕನಸು: ಯುಐ,ಕೆಡಿ ಅಡ್ಡದಲ್ಲಿ ಗ್ಲ್ಯಾಮರಸ್ ಬೆಡಗಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

cOurt

Udupi: ಪಾತಕಿ ಬನ್ನಂಜೆ ರಾಜ ಸಹಚರನಿಗೆ ಜಾಮೀನು

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.