Tour Circle: ಓ ಮಲೆನಾಡಿನ ಮೈ ಸಿರಿಯೇ…


Team Udayavani, Mar 18, 2024, 8:10 AM IST

7-uv-fusion

ಸುತ್ತಣ ಹಸುರು, ಎತ್ತ ನೋಡಿದರಲ್ಲಿ ವಿಸ್ತಾರವಾಗಿ ಬೆಳೆದು ನಿಂತಿರುವ ಕಾನನ. ಆಕಾಶವೇ ಭುವಿಗೆ ಬಂದು ಮುತ್ತಿಡುವಂತೆ ಭಾವನೆ. ಇಬ್ಬನಿಗಳ ಹಿಂಡು, ಮಂಜಿನ ಜತೆ ಸಂಯುಕ್ತವಾಗಿ ತಣ್ಣನೆಯ ಇಂಪಾದ ಅನುಭವ ನೀಡುವ ಗಾಳಿ. ಇಂತಹ ನೆಮ್ಮದಿಯ ನಿರ್ಮಲ ವಾತಾವರಣ ನೀಡುವ ಭೂಲೋಕದ ಸ್ವರ್ಗವೇ ನಮ್ಮ ಮಲೆನಾಡು.

ನಮ್ಮ ಈ ಮೊದಲ ಮಲೆನಾಡ ಪಯಣ ಶುರುವಾಗುವುದೇ ಮಲೆನಾಡಿಗೂ ಕರಾವಳಿಗೂ ಸಂಪರ್ಕದ ಸೇತುವೆಯಾಗಿರುವ ದಕ್ಷಿಣ ಭಾರತದ ಚಿರಾಪುಂಜಿ ಎಂದೇ ಪ್ರಸಿದ್ಧಿಯಾಗಿರುವ ಆಗುಂಬೆಯಿಂದ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಸೋಮೇಶ್ವರದಿಂದ ಶುರುವಾಗುವ ಆಗುಂಬೆ ಘಾಟಿಯು ಮುಂದಿನ 14 ತಿರುವುಗಳಲ್ಲಿ ಪ್ರತಿಯೊಂದು ತಿರುವಿನಲ್ಲೂ ತನ್ನ ರೋಚಕತೆ, ಪ್ರಾಚೀನತೆ ಮತ್ತು ಅಸ್ಮಿತೆಯನ್ನು ತೋರಿಸುತ್ತಾ ಸಾಗುತ್ತದೆ. ಹೆಮ್ಮರಗಳು, ಕೆಂಪುಮುಖದ ಕೋತಿಗಳು ಮತ್ತು ಉದ್ದ ಬಾಲದ ಕಪ್ಪು ಮುಖದ ಮುಷಿಯಾಗಳು ನಿಮಗೆ ಪ್ರತೀ ತಿರುವಿನಲ್ಲೂ ಮಲೆನಾಡಿಗೆ ಸ್ವಾಗತವನ್ನು ಕೋರುತ್ತವೆ.

ಸುಮಾರು 9 ಕಿಲೋಮೀಟರ್‌ ಕ್ರಮಿಸಿದ ಅನಂತರ ಸೂರ್ಯಸ್ತಮಾನ ಆಗುವ ಸ್ಥಳದಲ್ಲಿ ನಿಂತು ಪ್ರಕೃತಿಯ ವೈಭವಾತೀತ ವೈಭೋಗವನ್ನು ನಮ್ಮ ಕಂಗಳಲ್ಲಿ ಸೆರೆ ಹಿಡಿದು ಮನಸಿನ ನೆನಪಿನ ಹಾಳೆಯಲ್ಲಿ ಮುದ್ರಿಸುವುದೇ ಒಂದು ಖುಷಿಯ ಸಂಗತಿ.

ಚುಮುಗುಟ್ಟುವ ಚಳಿಯ ನಡುವೆ ಸ್ವಾದಭರಿತವಾದ ಕಾಫಿಯನ್ನು ಹೀರಿ ಮುಂದೆ ಪಯಣ ಸಾಗಿದ್ದು ಜೈನರ ಪವಿತ್ರ ಕ್ಷೇತ್ರ ಹಾಗೂ ಚಾರಣಪ್ರಿಯರು ಇಷ್ಟ ಪಡುವ ಕುಂದಾದ್ರಿ ಬೆಟ್ಟಕ್ಕೆ. ಆಗುಂಬೆಯಿಂದ ತೀರ್ಥಹಳ್ಳಿ ಮಾರ್ಗವಾಗಿ ಸುಮಾರು 10 ಕಿ.ಮೀ. ಕ್ರಮಿಸಿದರೆ ಸಿಗುವ ಗುಡ್ಡೇಕೇರಿಯಲ್ಲಿ ಬಲಕ್ಕೆ ತಿರುಗಿ 5 ಕಿ.ಮೀ. ಪ್ರಯಾಣಿಸಿದ ಅನಂತರ ನಮಗೆ ಕುಂದಾದ್ರಿ ಚಾರಣದ ಬೇಸ್‌ ಸಿಗುತ್ತದೆ. ಇಲ್ಲಿಂದ ಶುರುವಾಗುವುದೇ ರೋಮಾಂಚನಕರವಾದ ಕುಂದಾದ್ರಿಯ ಚಾರಣ. ಬೆಟ್ಟದ ತುದಿಯ ತನಕ ಗಾಡಿಯಲ್ಲಿ ಹೋಗುವ ವ್ಯವಸ್ಥೆ ಇದ್ದರೂ ನಾವು ಆಯ್ದುಕೊಂಡಿದ್ದು ನಟರಾಜ ಸರ್ವೀಸ್‌ ಅನ್ನು.

ಎಡ ಬಲ ಎರಡು ಕಡೆಗಳಲ್ಲೂ ದಟ್ಟವಾದ ಅರಣ್ಯ ಮಧ್ಯದಲ್ಲಿ ಅಡವಿ ದೇವಿಗೆ ಬೈತಲೆ ಇಟ್ಟಂತೆ ಭಾಸವಾಗುವ ಚಿಕ್ಕ ರಸ್ತೆಯಲ್ಲಿ ನಡೆದು ಹೋಗುವಾಗ ಪ್ರಕೃತಿಯೇ ಸಂಗೀತ ಮಾಧುರ್ಯದಿಂದ ತನ್ನೆಡೆಗೆ ಕರೆಯುತ್ತಿದೆ ಅಂತೆನಿಸುವ ಚೀರುಂಡೆ ಮತ್ತು ಪಕ್ಷಿಗಳ ಸ್ವರ ಸಿಂಚನ. ಹೀಗೆ ಇದೆ ಖುಷಿಯಲ್ಲಿ ಅಹ್ಲಾದಕರವಾದ ವಾತಾವರಣದಲ್ಲಿ ಸುಮಾರು 5-6 ಕಿಲೋ ಮೀಟರ್‌ ನೆಡೆದುಕೊಂಡು ಹೋದರೆ ಅಂತಿಮವಾಗಿ ಸಿಗುವುದೇ ಕುಂದಾದ್ರಿ ಬೆಟ್ಟ. ಬೆಟ್ಟದ ತುದಿಯಿಂದ ಒಂದು ಕ್ಷಣ ಸುತ್ತಲೂ ಕಣ್ಣು ಹಾಯಿಸಿದಾಗ ಮಲೆನಾಡ ಸೊಬಗು, ಪಶ್ಚಿಮ ಘಟ್ಟದ ಸೌಂದರ್ಯವೂ ಮನಸ್ಸಿಗೆ ಮುದ ನೀಡುವುದರಲ್ಲಿ ಅನುಮಾನವಿಲ್ಲ. ಮುಂಜಾನೆ ಬೇಗ ಹೋದರೆ ಮೋಡಗಳು ನಿಮ್ಮ ಕೈಗಳಿಗೆ ಮುತ್ತು ನೀಡಿ ಸಾಗುತ್ತವೆ. ಅಲ್ಲೇ ಇರುವ ಜೈನ ಬಸದಿಗೆ ಕೈ ಮುಗಿದು ಸ್ವಲ್ಪ ಸಮಯ ನೆಮ್ಮದಿಯ ಶುದ್ಧ ಗಾಳಿಯನ್ನು ಸವಿದು ಕುಂದಾದ್ರಿಗೆ ವಿದಾಯ ಹೇಳುವಾಗ ಮನಸಿನಲ್ಲಿ ಒಂದು ನೆಮ್ಮದಿ, ಖುಷಿ ಮನೆಮಾಡಿತ್ತು. ಹೀಗೆ ಮಲೆನಾಡಿನ ಒಂದು ನಿರ್ಮಲ ಪಯಣವು ಮುಕ್ತಾಯಗೊಂಡಿತು.

-ಪ್ರಸಾದ್‌ ಆಚಾರ್ಯ

ಕುಂದಾಪುರ

ಟಾಪ್ ನ್ಯೂಸ್

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

13

Uv Fusion: ಅಪ್ಪ ಅಂದರೆ ಅನಂತ ಪ್ರೀತಿ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.