Temple Festival: ನಮ್ಮೂರ ಜಾತ್ರೆಯ ಒಂದು ನೋಟ


Team Udayavani, Mar 17, 2024, 3:12 PM IST

8-sirsi

ಜಾತ್ರೆ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ನಮ್ಮ ಊರ ಜಾತ್ರೆ ಎಂದರೆ ಅದರ ಸಂಭ್ರಮವೇ ಬೇರೆ. ಏನೋ ಒಂದು ರೀತಿಯ ಭಾವುಕತೆ. ಬಾಲ್ಯದಿಂದಲೂ ಇರುವ ಈ ನಂಟನ್ನು ಅಷ್ಟು ಸುಲಭವಾಗಿ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಆದರೂ ನಮ್ಮೂರ ಜಾತ್ರೆ ಎಂದಾಗ ಅದೆಷ್ಟೋ ನೆನಪುಗಳು ಒಮ್ಮೆ ಮನದಲ್ಲಿ ಹಾದು ಹೋಗುತ್ತವೆ.

ಹಾಗೆ ನನಗೂ ನಮ್ಮೂರು ಶಿರಸಿ ಜಾತ್ರೆ ಸದ್ಯದಲ್ಲೇ ಎಂದು ಕೇಳಿದಾಗಲೆಲ್ಲಾ ನನ್ನಲ್ಲುಂಟಾಗುವ ಸಡಗರ ಹೇಳ ತೀರದು. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಶ್ರೀ ಮಾರಿಕಾಂಬ ದೇವಿಯ ಜಾತ್ರೆ ದಕ್ಷಿಣ ಭಾರತದಲ್ಲೇ ಹೆಸರುವಾಸಿಯಾಗಿದೆ. ರಾಜ್ಯದ ಪ್ರಸಿದ್ಧ ಬೃಹತ್‌ ಜಾತ್ರೆಗಳ ಪೈಕಿ ಇದೂ ಒಂದಾಗಿದೆ.

ಈ ಜಾತ್ರೆಯಲ್ಲಿ ಪಾಲ್ಗೊಳ್ಳಲು ರಾಜ್ಯ, ಹೊರ ರಾಜ್ಯ, ದೇಶದ ವಿವಿಧೆಡೆಗಳಿಂದಲೂ ಭಕ್ತಾದಿಗಳು ಆಗಮಿಸುತ್ತಾರೆ. ಒಂಬತ್ತು ದಿನಗಳ ಕಾಲ ನಡೆಯುವ ಈ ಸಂಭ್ರಮವು ಶಿರಸಿಯ ಪ್ರತೀ ಮನೆ ಮನೆಯಲ್ಲೂ ಹಬ್ಬದ ವಾತಾವರಣ ಮನೆ ಮಾಡಿರುತ್ತದೆ.

ಎರಡು ವರ್ಷಕ್ಕೊಮ್ಮೆ ಬರುವ ಜಾತ್ರೆ ಎಂದು ಇಷ್ಟು ಸಡಗರವೊ, ಅಲ್ಲ ದೇವಿಗೆ ನಡೆಯುವ ವಿಶೇಷ ಸೇವೆ ನೋಡುವ ಆನಂದವೋ, ಅಲ್ಲ 9 ದಿನಗಳ ಕಾಲ ನಗರ ಮಧುವಣಗಿತ್ತಿಯಂತೆ ಶೃಂಗಾರಗೊಂಡಿರುತ್ತದೆ ಎಂಬ ಖುಷಿಯೋ, ಇಲ್ಲವೇ ಕುಟುಂಬದವರೆಲ್ಲ ಒಂದೆಡೆ ಸೇರುವ ಶುಭಗಳಿಗೆ ಎಂದು ಜಾತ್ರೆ ಇಷ್ಟು ವಿಶೇಷವಾಗಿರುವುದೋ ಗೊತ್ತಿಲ್ಲ. ಒಟ್ಟಾರೆ ಈ ಎಲ್ಲ ಸಂಗತಿಗಳು ಜಾತ್ರೆಯ ಹರುಷವನ್ನು ದುಪ್ಪಟ್ಟು ಮಾಡುವುದರಲ್ಲಿ ಪ್ರಮುಖ ಪಾತ್ರವನ್ನಂತೂ ವಹಿಸುತ್ತವೆ.

ದೇವಿಯನ್ನು ನೋಡಲು ಬರುವ ಭಕ್ತಾದಿಗಳು, ಜನರಿಗೆ ಜಾತ್ರೆ ಒಂದು ರೀತಿಯ ಆನಂದವನ್ನು ನೀಡಿದರೆ, ಇನ್ನು ಈ ಬೃಹತ್‌ ಜಾತ್ರೆಯಲ್ಲಿ ನೂರಾರು ಸಂಖ್ಯೆಯಲ್ಲಿ ಭಾಗಿಯಾದ ಅಂಗಡಿ, ಮುಂಗಟ್ಟುಗಳ ಮಾರಾಟಗಾರರ  ನೋಟವೇ ವಿಭಿನ್ನ.ಇದು ಕೇವಲ ಅವರಿಗೆ ಸಂಭ್ರಮ ಮಾತ್ರವಲ್ಲ ಬದುಕು ಸಾಗಿಸುವ ಒಂದು ಆಧಾರ.

ಹೀಗಾಗಿಯೇ ಹಲವು ತಿಂಗಳುಗಳ ಮುಂಚೆಯೇ ರಾಜ್ಯ, ಹೊರ ರಾಜ್ಯದ ಮಾರಾಟಗಾರರು ಜಾತ್ರೆಯಲ್ಲಿ ತಮ್ಮ ಉತ್ಪನ್ನ ಮಾರಲು ಲಕ್ಷಾಂತರ ಹಣವನ್ನು ನೀಡಿ ಜಾಗವನ್ನು ನಿಗದಿಪಡಿಸಿಕೊಳ್ಳುತ್ತಾರೆ. ಪ್ರತೀ ವರ್ಷವೂ ಇದೊಂದು  ಪ್ರಕ್ರಿಯೆ ಸಹಜ. ಇಲ್ಲಿಯವರೆಗೂ ಎಂದಿಗೂ ದೇವಿ ಬಂದ ಈ ಜನರ, ಭಕ್ತರ ಆಶಯವನ್ನು ನಿರಾಸೆಗೊಳಿಸಿಲ್ಲ. ಮುಂದೆಯೂ  ಕೈಬಿಡುವುದಿಲ್ಲ.

ಎರಡು ವರ್ಷಗಳಿಗೊಮ್ಮೆ ಬರುವ ಶಿರಸಿಯ ಶ್ರೀ ಮಾರಿಕಾಂಬ ದೇವಿಯ ಜಾತ್ರೆ ಹೀಗೆ ವಿವಿಧ ದೃಷ್ಟಿಕೋನಗಳಲ್ಲಿ ನೋಡಿದಾಗ ಒಂದೊಂದು ಕಥೆಯನ್ನು ಹೇಳುತ್ತದೆ. ಪ್ರತಿ ಊರಿನ ಜಾತ್ರೆಯಲ್ಲೂ ಬೇರೆ ಬೇರೆ ಕಥೆಗಳು ಖಂಡಿತ ಇರುತ್ತವೆ.  ನೋಡುವ ನೋಟ ಮತ್ತು ಸಹನೆ ನಮ್ಮಲ್ಲಿರಬೇಕು. ಆದರೂ ನಮ್ಮ ಊರು ಎಂದಾಗ ನಮ್ಮ ಗಮನ ಅಧಿಕವಾಗಿರುವುದರಿಂದ ಹೆಚ್ಚು ಚರಿತ್ರೆಗಳು ಗೋಚರಿಸಬಹುದು ಅಷ್ಟೇ.

ಪ್ರತೀ ಜಾತ್ರೆಯನ್ನೂ ಒಳ ಕಣ್ಣು ತೆರೆದು ನೋಡಿದಾಗ  ಅದೆಷ್ಟೋ  ಸಜೀವ ಕಥೆಗಳು ಖಂಡಿತ ಕಾಣಬಹುದು.

ಪೂಜಾ ಹಂದ್ರಾಳ

ಶಿರಸಿ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.