ಕುಷ್ಟಗಿ: ಹುಣಸೆ ಬೀಜಕ್ಕೆ ಯೋಗ್ಯ ದರವಿದ್ರೂ, ಉತ್ಪನ್ನ ಕಡಿಮೆ!


Team Udayavani, Mar 20, 2024, 5:58 PM IST

ಕುಷ್ಟಗಿ: ಹುಣಸೆ ಬೀಜಕ್ಕೆ ಯೋಗ್ಯ ದರವಿದ್ರೂ, ಉತ್ಪನ್ನ ಕಡಿಮೆ!

ಉದಯವಾಣಿ ಸಮಾಚಾರ
ಕುಷ್ಟಗಿ: ರಾಜ್ಯದ ಹುಣಸೆ ಬೀಜದ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾಗಿರುವ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹುಣಸೆ ಬೀಜಕ್ಕೆ ಯೋಗ್ಯ ಧಾರಣಿ ಇದ್ದಾಗ್ಯೂ ಉತ್ಪನ್ನ ಕಡಿಮೆಯಾಗಿದ್ದು, ಕಳೆದ ವರ್ಷಕ್ಕೆ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅರ್ಧದಷ್ಟು ಉತ್ಪನ್ನ ಮಾರುಕಟ್ಟೆಗೆ ಆಕರಣೆಯಾಗಿದೆ. ರಾಜ್ಯದಲ್ಲಿ ಕುಷ್ಟಗಿ ಸೇರಿದಂತೆ ಪಾವಗಡ ಕೂಡ್ಲಗಿ, ಬಳ್ಳಾರಿ, ಚಿಂತಾಮಣಿ ಹುಣಸೆ ಬೀಜದ ಪ್ರಮುಖ ಮಾರುಕಟ್ಟೆಗಳಾಗಿ ಗುರುತಿಸಿಕೊಂಡಿವೆ.

ಪ್ರತಿ ವರ್ಷವೂ ಕುಷ್ಟಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸಂಗ್ರಹವಾಗುವ ಹುಣಸೆ ಬೀಜ ಮಹಾರಾಷ್ಟ್ರದ ವಿವಿಧ ಉದ್ಯಮಗಳಿಗೆ ಸಾಗಾಣಿಕೆ ಆಗುತ್ತಿದೆ. ಈ ಹುಣಸೆ ಬೀಜದ ಉತ್ಪನ್ನದಿಂದ ಆಯುರ್ವೇದದ ಔಷಧ, ಜವಳಿ ಉದ್ಯಮದಲ್ಲಿ ಅಗತ್ಯವಾಗುವ ಸ್ಟಾರ್ಚ್‌ ಸೇರಿದಂತೆ ಬಣ್ಣ ತಯಾರಿಕೆಗೆ ಈ ಹುಣಸೆ ಬೀಜದ ಉತ್ಪನ್ನ ಬೇಡಿಕೆಯಲ್ಲಿದ್ದರೂ, ಮಾರುಕಟ್ಟೆಯ ಧಾರಣಿ ಆಧರಿಸಿ ಉತ್ಪನ್ನ ಹೆಚ್ಚಿದಷ್ಟು ನಿರೀಕ್ಷಿತ ಆದಾಯ ತರಲಿದೆ. ಈ ಉತ್ಪನ್ನ ಹೆಚ್ಚಲು ಮಳೆಯನ್ನೇ ಅವಲಂಬಿಸಿರುವುದು ಗಮನಾರ್ಹವೆನಿಸಿದೆ.

ಹುಣಸೆ ಹಣ್ಣು ಪದಾರ್ಥವಾಗಿರುವ ಕಾರಣದಿಂದ ಇದು ಕುಷ್ಟಗಿಯ ಕೃಷಿ ಉತ್ಪನ್ನ ಮಾರುಕಟ್ಟೆಯ ವ್ಯಾಪ್ತಿಯ ಉತ್ಪನ್ನಗಳ
ಪಟ್ಟಿಯಲ್ಲಿ ಇಲ್ಲ. ಪ್ರತಿ ವರ್ಷ ಖಾಸಗಿ ಮಾರುಕಟ್ಟೆಯಲ್ಲಿ ಸೀಜನ್‌ವಾರು ನಡೆಯುತ್ತಿದೆ. ಆದರೆ ಹುಣಸೆ ಬೀಜದ ವಹಿವಾಟು ಮಾತ್ರ ಈ ಮಾರುಕಟ್ಟೆಯಲ್ಲಿ ನಡೆಯುತ್ತಿದೆ. ಕಳೆದ ವರ್ಷ 6 ಸಾವಿರ ಟನ್‌ ಆವಕವಾಗಿತ್ತು ಆಗಿನ ದರ ಪ್ರತಿ ಕ್ವಿಂಟಲ್‌ ಗೆ
1,400 ರೂ.ದಿಂದ 1,600 ರೂ. ಇತ್ತು. ಪ್ರಸಕ್ತ ವರ್ಷದಲ್ಲಿ ಹುಣಸೆ ಬೀಜದ ದರ ಹೆಚ್ಚಿದ್ದಾಗ್ಯೂ ಉತ್ಪನ್ನ ಕಡಿಮೆಯಾಗಿದೆ. ಈ ಬಾರಿ ಕಳೆದ ಉತ್ಪನ್ನಕ್ಕಿಂತ ಅರ್ಧದಷ್ಟು ಎಂದರೆ 3ಸಾವಿರ ಟನ್‌ ನಿರೀಕ್ಷಿಸಲು ಸಾಧ್ಯವಿದೆ. ಇದರ ಧಾರಣಿ ಮಾತ್ರ ಪ್ರತಿ ಕ್ವಿಂಟಲ್‌ ಗೆ 1,800 ರೂ.ದಿಂದ 2,100 ರೂ. ಇದೆ. ಕಳೆದ ವರ್ಷಕ್ಕಿಂತ ಈ ವರ್ಷದಲ್ಲಿ ಈ ಉತ್ಪನ್ನಕ್ಕೆ 400ರೂ. ದಿಂದ 500
ರೂ. ಹೆಚ್ಚಿಗೆ ಸಿಗುತ್ತಿತ್ತು.

ಹುಣಸೆ ಬೀಜಕ್ಕೆ ಕುಷ್ಟಗಿ ಪ್ರಮುಖ ಮಾರುಕಟ್ಟೆಯಾಗಿದೆ ಆದರೀಗ ಹುಣಸೆ ಮರಗಳನ್ನು ಕಡಿಯುತ್ತಿರುವುದರಿಂದ
ಉತ್ಪನ್ನ ಕಡಿಮೆ ಆಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸಕ್ಕೆ ಹೋಗುವ ಕಾರ್ಮಿಕರು, ಹುಣಸೆ ಗಿಡ ಹತ್ತಿ ಹುಣಸೆ ಹಣ್ಣನ್ನು ಬಿಡಿಸುವ ಕೆಲಸಕ್ಕೆ ಹೆಚ್ಚಿನ ಕೂಲಿ ಕೇಳುತ್ತಿದ್ದು, ಇದರ ಹುಣಸೆ ಹಣ್ಣು, ಬೀಜ ಮಾರಾಟಗಾರರಿಗೆ ಹೆಚ್ಚುವರಿ ಹೊರೆಯಾಗಿದೆ.
ಗೂಳಪ್ಪ ಶಿವಶೆಟ್ಟರ್‌, ಹುಣಸೆ ಬೀಜ ಖರೀದಿದಾರ

ಹುಣಸೆ ಬೀಜ ಉತ್ಪನ್ನ ಕುಷ್ಟಗಿ ಎಪಿಎಂಸಿಗೆ ಆಕರಣೆ ಮೊದಲಿನಂತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಈ ಉತ್ಪನ್ನ ಕೆಲವು ಖರೀ ದಿದಾರರಿಗೆ ಸೀಮಿತವಾಗಿದೆ.
ಟಿ. ನೀಲಪ್ಪ ಶೆಟ್ಟಿ ,
ಕಾರ್ಯದರ್ಶಿ ಎಪಿಎಂಸಿ ಕುಷ್ಟಗಿ

ಹುಣಸೆ ಹಣ್ಣಿಗೆ ಪ್ರತಿ ಕ್ವಿಂಟಲ್‌ ಗೆ 7,200 ರೂ. ದಿಂದ 8ಸಾವಿರ ರೂ. ಧಾರಣಿ ಇದೆ. ಹುಣಸೆ ಬೀಜ ಪ್ರತಿ ಕ್ವಿಂಟಲ್‌ ಗೆ 2,100 ರೂ. ಇದೆ. ಮಳೆಗಾಲ ಕಡಿಮೆಯಾಗಿದ್ದರಿಂದ ಈ ಉತ್ಪನ್ನಕ್ಕೆ ಉತ್ತಮ ಬೆಲೆ ಇದೆ ಆದರೆ ಉತ್ಪನ್ನ ಕಡಿಮೆ ಬಂದಿದೆ.
ಯಮನೂರಪ್ಪ ಭಜಂತ್ರಿ,
ಹುಣಸೆ ಹಣ್ಣು, ಬೀಜ ಮಾರಾಟಗಾರ.

*ಮಂಜುನಾಥ ಮಹಾಲಿಂಗಪುರ

ಟಾಪ್ ನ್ಯೂಸ್

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

20

UV Fusion: ವಿಘ್ನ ವಿನಾಯಕನಿಗೆ ನಮನ

19

Ganesh Chaturthi: ನೆನಪಿನ ಬುತ್ತಿಯಾದ ಗಣೇಶ ಹಬ್ಬ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Koppala: ಲಾರಿ ಡಿಕ್ಕಿ ಹೊಡೆದು ಪಲ್ಟಿಯಾದ ಟ್ರ್ಯಾಕ್ಟರ್… ಗಣೇಶನ ವಿಗ್ರಹಕ್ಕೆ ಹಾನಿ

Koppala: ಲಾರಿ ಡಿಕ್ಕಿ ಹೊಡೆದು ಪಲ್ಟಿಯಾದ ಟ್ರ್ಯಾಕ್ಟರ್… ಗಣೇಶನ ವಿಗ್ರಹಕ್ಕೆ ಹಾನಿ

Kushtagi: ಸಾಕಿದ ಮಾಲೀಕನಿಗೆ ಬೈಕ್ ಗೆದ್ದು ಕೊಟ್ಟ ಟಗರು!

Kushtagi: ಸಾಕಿದ ಮಾಲೀಕನಿಗೆ ಬೈಕ್ ಗೆದ್ದು ಕೊಟ್ಟ ಟಗರು!

2-gangavathi

Gangavathi: ಪ್ಲಾಸ್ಟಿಕ್ ತಿಂದ ಕರುವಿಗೆ ಉಸಿರಾಟ ತೊಂದರೆ; ನೆರವಿಗೆ ಬಂದ ಕ್ರಿಕೆಟ್ ಆಟಗಾರರು

Kushtagi; ಶಿಕ್ಷಕರ ಶ್ರಮ-ಹಳ್ಳಿಯ ಸರ್ಕಾರಿ ಶಾಲೆಗೆ ʼಹೈಟೆಕ್‌ʼ ಸ್ಪರ್ಶ

Kushtagi; ಶಿಕ್ಷಕರ ಶ್ರಮ-ಹಳ್ಳಿಯ ಸರ್ಕಾರಿ ಶಾಲೆಗೆ ʼಹೈಟೆಕ್‌ʼ ಸ್ಪರ್ಶ

5

Gangavathi: ಐತಿಹಾಸಿಕ ಪಂಪಾ ಸರೋವರಕ್ಕೆ ಬೇಕಿದೆ ಮೂಲಸೌಕರ್ಯ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

2-desiswara-1

Teacher: ಗುರಿಯೊಂದಿಗೆ ಗುರುಕೃಪೆಯಿದ್ದರೆ ಯಶ

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

1-teachers-day

Teacher’s Day ವಿಶೇಷ: ವಿಚಾರ ವಿನಿಮಯ ಶಿಕ್ಷಣದ ಸುತ್ತ: ಆಲೋಚನೆಯಲ್ಲಿ ವೈವಿಧ್ಯತೆ ಇರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.