Mobile ಟವರ್ನ 7.56 ಲಕ್ಷ ರೂ. ಮೌಲ್ಯದ ಸಾಮಗ್ರಿ ಕಳವು
Team Udayavani, Mar 21, 2024, 12:29 AM IST
ಬಂಟ್ವಾಳ: ರಾಯಿಯಲ್ಲಿದ್ದ ಮೊಬೈಲ್ ಟವರ್ಗೆ 4ಜಿ ನೆಟ್ವರ್ಕ್ ಅಳವಡಿಕೆಗೆ ಸಂಬಂಧಿಸಿ ತಂದಿದ್ದ 7.56 ಲಕ್ಷ ರೂ. ಮೌಲ್ಯದ ಸಾಮಗ್ರಿಗಳನ್ನು ಆರೋಪಿಯೋರ್ವ ಪಿಕಪ್ ವಾಹನದಲ್ಲಿ ಕದ್ದು ಸಾಗಿಸಿದ ಘಟನೆ ಮಾ. 15 ರಂದು ನಡೆದಿದೆ.
ಗಿರೀಶ್ ಪ್ರಕರಣ ಆರೋಪಿ. ಘಟನೆಯ ಕುರಿತು ಪೆರಿಗ್ರಿನ್ ಸಂಸ್ಥೆಯ ಸೆಕ್ಯೂರಿಟಿ ಸೂಪರ್ವೈಸರ್ ದಿನೇಶ್ ಕೆ. ಪೊಲೀಸರಿಗೆ ದೂರು ನೀಡಿದ್ದು, ರಾಯಿ ಗ್ರಾಮದ ಅನಿಲ್ ಕುವೆಲ್ಲೊ ಅವರ ಜಾಗದಲ್ಲಿದ್ದ ಟವರ್ಗೆ 4ಜಿ ನೆಟ್ವರ್ಕ್ ಅಳವಡಿಸಲು ಸಾಮಗ್ರಿಗಳನ್ನು ತಂದು ಹಾಕಲಾಗಿತ್ತು. ಸಿಬಂದಿ ನರೇಂದ್ರಪಾಲ್ ಅವರು ಮಾ. 16ರಂದು ಬಂದು ನೋಡಿದಾಗ ಸಾಮಗ್ರಿಗಳು ಅಲ್ಲಿರಲಿಲ್ಲ.
ಈ ಕುರಿತು ಸಿಬಂದಿ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಈ ಕುರಿತು ಟವರ್ನ ಜಾಗದ ಮಾಲಕರಲ್ಲಿ ವಿಚಾರಿಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ಮಾ. 15ರಂದು ಮಧ್ಯಾಹ್ನ ಆರೋಪಿ ಗಿರೀಶ್ ಪಿಕಪ್ ವಾಹನದಲ್ಲಿ ಸಾಮಗ್ರಿಗಳನ್ನು ತಂದು ಇರಿಸಿ ಅದರ ಫೋಟೋ ತೆಗೆದು ಸಂಬಂಧಪಟ್ಟವರಿಗೆ ಕಳುಹಿಸಿದ್ದನು. ಸಂಜೆ ವೇಳೆ ಮತ್ತೆ ಅಲ್ಲಿಗೆ ಬಂದು ತಪ್ಪು ವಿಳಾಸಕ್ಕೆ ಸಾಮಗ್ರಿಗಳನ್ನು ತಂದು ಇರಿಸಿದ್ದೇನೆ ಎಂದು ಅವುಗಳನ್ನು ಸರಿಯಾದ ವಿಳಾಸಕ್ಕೆ ತಲುಪಿಸುವುದಾಗಿ ಹೇಳಿ ತೆಗೆದುಕೊಂಡು ಹೋಗಿದ್ದಾನೆ ಎಂದು ಜಾಗದ ಮಾಲಕರು ವಿವರಿಸಿದ್ದಾರೆ.
7.56 ಲಕ್ಷ ರೂ. ಮೌಲ್ಯ
ಕಳವಾಗಿರುವ ಸಾಮಗ್ರಿಗಳ ಮೌಲ್ಯ 7,56,728 ರೂ. ಎಂದು ಅಂದಾಜಿಸಲಾಗಿದೆ. ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.