ಶಿರಸಿ ಜಾತ್ರೆ: ಅಮ್ಮನ ದರ್ಶನಕ್ಕೆ ಮೊದಲ ದಿನವೇ ಭಕ್ತರ ದಂಡು

ಕೆಲವರು ತಮ್ಮ ಮಕ್ಕಳನ್ನು ಎತ್ತಿ ಹಿಡಿದು ದೇವಿ ದರ್ಶನ ಮಾಡಿಸಿದರು.

Team Udayavani, Mar 22, 2024, 12:07 PM IST

ಶಿರಸಿ ಜಾತ್ರೆ: ಅಮ್ಮನ ದರ್ಶನಕ್ಕೆ ಮೊದಲ ದಿನವೇ ಭಕ್ತರ ದಂಡು

ಉದಯವಾಣಿ ಸಮಾಚಾರ
ಶಿರಸಿ: ಭಕ್ತರ ಜಯಘೋಷದ ಮಧ್ಯೆ ಬುಧವಾರ ಬಿಡಕಿಬಯಲಿನ ಗದ್ದುಗೆಯಲ್ಲಿ ವಿರಾಜಮಾನಳಾದ ಶ್ರೀ ಮಾರಿಂಕಾಬೆ ದರ್ಶನಕ್ಕೆ ಗುರುವಾರ ಬೆಳಗ್ಗೆಯಿಂದ ಭಕ್ತರ ದಂಡು ಬರುತ್ತಿದೆ. ಭಕ್ತರು ತಂಡೋಪತಂಡವಾಗಿ ಆಗಮಿಸಿ ದೇಶಿ ದರ್ಶನ ಪಡೆದು ಪೂಜೆ, ಹಣ್ಣುಕಾಯಿ, ಉಡಿ ಸೇರಿದಂತೆ ವಿವಿಧ ಸೇವೆ ಸಲ್ಲಿಸಿದರು.

ಮುಂಜಾನೆ 3 ಗಂಟೆಗೇ ಸುತ್ತಲಿನ ಭಕ್ತರು, ಪ್ರಥಮ ದಿನದ ಸೇವೆ ಸಲ್ಲಿಸಿ ಕೃತಾರ್ಥರಾಗಲು ಸರತಿಯಲ್ಲಿ ನಿಂತಿದ್ದರು. ಐದು ಗಂಟೆಗೆ ದೇವಿ ತವರು ಮನೆಯವರು ಎಂದು ಗುರುತಾದ ನಾಡಿಗ ಮನೆತನದ ವಿಜಯ ನಾಡಿಗರು ಆಗಮಿಸಿ ಪ್ರಥಮ ಮಂಗಳಾರತಿ ಬೆಳಗಿದರು. ಬಳಿಕ ಸಾರ್ವಜನಿಕ ಸೇವೆ ಆರಂಭವಾದವು. ಭಟ್ಕಳದ ಮಲ್ಲಿಗೆ ಸೇರಿದಂತೆ ವಿವಿಧ ಬಗೆಯ ಪುಷ್ಪಗಳನ್ನು ಮುಡಿದು ಸರ್ವಾಲಂಕಾರ ಭೂಷಿತಳಾದ ತಾಯಿಯನ್ನು ಭಕ್ತರು ಕಣ್ತುಂಬಿಕೊಂಡರು.

ಹಣ್ಣು ಕಾಯಿ, ಉಡಿ, ಸೀರೆಗಳ ಸೇವೆ ಸಲ್ಲಿಸಿದರು. ಅನೇಕರು ಮರ್ಕಿ ದುರ್ಗಿ ದೇವಸ್ಥಾನದಿಂದ ಬಂದು ಇಲ್ಲಿ ಗದ್ದುಗೆ ಸುತ್ತುವರಿದು ಬೇವಿನ ಉಡಿ ಹರಕೆ ಸಲ್ಲಿಸಿದರು. ಭಕ್ತರು ಸರತಿಯಲ್ಲಿ ನಿಂತು ದೇವಿ ದರ್ಶನ ಪಡೆದರೆ, ಕೆಲವರು ತಮ್ಮ ಮಕ್ಕಳನ್ನು ಎತ್ತಿ ಹಿಡಿದು ದೇವಿ ದರ್ಶನ ಮಾಡಿಸಿದರು.

ಶಾಸಕ ಭೀಮಣ್ಣ ನಾಯ್ಕ, ಪತ್ನಿ ಗೀತಾ ನಾಯ್ಕ, ಪುತ್ರ ಅಶ್ವಿ‌ನ್‌ ಸೇರಿದಂತೆ ಸಕುಟುಂಬ ಸಹಿತ ಅಮ್ಮನ ದರ್ಶನ ಪಡೆದು ಕಾಯಿ ಹಾಗೂ ಅಡಿಕೆಯ ತುಲಾಭಾರ ನಡೆಸಿದರು. ಕುಮಟಾ ಮಾಜಿ ಶಾಸಕಿ ಶಾರದಾ ಶೆಟ್ಟಿ ಕೂಡ ದೇವಿ ದರ್ಶನ ಪಡೆದರು.

ವಿವಿಧ ಉಚಿತ ಸೇವೆ: ಈ ಮಧ್ಯೆ ಬಿಸಿಲಿನ ಝಳ  ಹೆಚ್ಚಿದ್ದು ಎಸಿಸಿ ಸಿಮೆಂಟ್‌ ನಿಂದ ಮತ್ತು ವಿಶ್ವ ಹಿಂದೂ ಪರಿಷತ್‌ನಿಂದ ಉಚಿತ ಮಜ್ಜಿಗೆ ಸೇವೆ ನೀಡಲಾಯಿತು. ದೇವಸ್ಥಾನದಿಂದ ಭಕ್ತರಿಗೆ ಪಾನಕ ವಿತರಿಸಲಾಯಿತು. ಕೆನರಾ ಬಾರ್‌ ಬೆಂಡಿಗ್‌ ಸೆಂಟ್ರಿಂಗ್‌ ಅಸೋಸಿಯೇಶನ್‌ ತಂಡದಿಂದ ಮಹಿಳೆಯರಿಗಾಗಿ ಉಚಿತವಾಗಿ ವಿಶ್ರಾಂತಿ ಕೋಣೆ ತೆರೆದು ಕುಡಿಯಲು ನೀರು ಒದಗಿಸಲಾಯಿತು.

ನಗರದ ಉಣ್ಣೇಮಠ ಗಲ್ಲಿಯಲ್ಲಿ ಶ್ರೀಅನ್ನಪೂರ್ಣೇಶ್ವರಿ ಟ್ರಸ್ಟ್‌ ನಿಂದ ಅನ್ನದಾನ ಸೇವೆ ಆರಂಭಿಸಲಾಯಿತು. ಮಾ.26 ರ
ತನಕ ನಿತ್ಯ ಅನ್ನದಾನ ಸೇವೆ ನಡೆಯಲಿದ್ದು, ಟ್ರಸ್ಟನ ಸಚಿನ್‌ ಕೋಡಕಣಿ, ಶ್ರೀಪತಿ ನಾಯ್ಕ, ಸತೀಶ ನಾಯ್ಕ ಮಧುರವಳ್ಳಿ, ದಿನೇಶ ನಾಯ್ಕ, ರಾಜೇಶ ಚಾವಡಿ, ರಾಜೇಶ ಮೈದುರ್ಗಿಮಠ, ಉದಯ ಶೆಟ್ಟಿ, ಕೇಶವ ಪಾಕೇಕರ್‌, ಕಿರಣ ಮಡಿವಾಳ ಇದ್ದರು. ಸುಮಾರು 4 ಸಾವಿರಕ್ಕೂ ಅಧಿಕ ಭಕ್ತರು ಪ್ರಸಾದ ಭೋಜನ ಮಾಡಿದರು. ಶ್ರೀ ಮಾರಿಕಾಂಬಾ ದೇವಸ್ಥಾನದಿಂದ ಮಾರಿಗುಡಿ ಹಿಂಭಾಗದಲ್ಲಿ ದೇವಸ್ಥಾನದಿಂದ ಅನ್ನದಾನ ಸೇವೆ ಕೂಡ ನಡೆಯಿತು.

ಮಾರಿ ದರ್ಶನ ಪಡೆದ ಕೋಣ


ಬುಧವಾರ ರಾತ್ರಿಯಿಂದಲೇ ಜಾತ್ರೆಗೆ ರಂಗು ಏರಿದ್ದು, ದೀಪಾಲಂಕಾರದಿಂದ ಗದ್ದುಗೆಯ ಮುಖ ಮಂಟಪ ಗಮನ ಸೆಳೆಯುತ್ತಿದೆ. ಬುಧವಾರ ರಾತ್ರಿ ಗದ್ದುಗೆ ಏರಿದ ಮಾರಿಕಾಂಬಾ ದೇವಿಯನ್ನು ವರನಾದ ಪಾಂಡ್ಯ ಕೋಣವನ್ನು ತಂದು ದೇವಿ ದರ್ಶನ
ಮಾಡಿಸಲಾಯಿತು. ಪ್ರಥಮ ಬೇವಿನ ಉಡಿ ಸೇವೆ ಕೂಡ ನಡೆಯಿತು. ನಾಲ್ಕು ದಿಕ್ಕಿನಲ್ಲಿ ಹುಲುಸು ಚೆಲ್ಲಿ ಬರುವ ಶಾಸ್ತ್ರ ಕೂಡ ಗದ್ದುಗೆಯ ಹಿಂಭಾಗದಲ್ಲಿ ನಡೆಯಿತು. ಶುಕ್ರವಾರ ಬೆಳಿಗ್ಗೆ 5 ರಿಂದ ಮತ್ತೆ ಸೇವೆ ಆರಂಭವಾಗಲಿದ್ದು, ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದೆ.

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೋಕರ್ಣ: 12ರಂದು ಎನ್‌ಎಚ್‌ಎಐ ಕಚೇರಿಗೆ ಮುತ್ತಿಗೆ-ಸ್ವಾಮೀಜಿ

ಗೋಕರ್ಣ: 12ರಂದು ಎನ್‌ಎಚ್‌ಎಐ ಕಚೇರಿಗೆ ಮುತ್ತಿಗೆ-ಸ್ವಾಮೀಜಿ

Karnataka ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ : ಆರ್.ವಿ.ದೇಶಪಾಂಡೆ

Karnataka ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ : ಆರ್.ವಿ.ದೇಶಪಾಂಡೆ

Swimming; 19 ಕಿಮೀ ಗಂಗಾ ನದಿಯಲ್ಲಿ ಈಜಿ 4ನೇ ಸ್ಥಾನ ಗೆದ್ದ ಗೋಕರ್ಣದ ನೇಹಾ

Swimming; 19 ಕಿಮೀ ಗಂಗಾ ನದಿಯಲ್ಲಿ ಈಜಿ 4ನೇ ಸ್ಥಾನ ಗೆದ್ದ ಗೋಕರ್ಣದ ನೇಹಾ

4-sirsi

Sirsi: ಗುಂಡಿಗದ್ದೆ ಬಳಿ ರಸ್ತೆ ದಾಟಿದ ಚಿರತೆ! : ಸ್ಥಳೀಯರಲ್ಲಿ ಆತಂಕ

Sirsi: ದೇಶಪಾಂಡೆ ಸಿಎಂ ಆಗುವ ತೀರ್ಮಾನ ಪಕ್ಷದ ವರಿಷ್ಠರು ಕೈಗೊಳ್ಳುತ್ತಾರೆ: ಭೀಮಣ್ಣ ನಾಯ್ಕ

Sirsi: ದೇಶಪಾಂಡೆ ಸಿಎಂ ಆಗುವ ತೀರ್ಮಾನ ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ: ಭೀಮಣ್ಣ ನಾಯ್ಕ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.