Poetry: ಸಾಹಿತ್ಯ ಲೋಕದ ಭಾವಯಾನ ‘ಕವನ’


Team Udayavani, Mar 22, 2024, 4:00 PM IST

7-uv-fusion

ಕವನ ಸಾಸುವೆಯಲ್ಲಿ ಸಾಗರವನ್ನು ತೋರಬಲ್ಲ ಸಾಹಿತ್ಯ ಪ್ರಕಾರ. ಬೆಳಕಿನ ದೊಂದಿಯಂಥ ಕವಿತೆ ಅಥವಾ ಕವನ ಸಾಹಿತ್ಯದಲ್ಲಿನ ಉಳಿದೆಲ್ಲ ಪ್ರಕಾರಗಳಿಗಿಂತ ವಿಭಿನ್ನ ಮತ್ತು ಚೆನ್ನ.

ಸಾಹಿತ್ಯ ಕ್ಷೇತ್ರಕ್ಕೆ ಕಥೆ, ಕಾದಂಬರಿ, ಅಂಕಣ ಸಾಹಿತ್ಯ, ನಾಟಕ, ಪ್ರಬಂಧ ಹೀಗೆ ಯಾವುದೇ ಮಾರ್ಗದ ಮೂಲಕ ಪ್ರವೇಶಿಸಬಹುದು. ಆದರೆ ಬರೆಯಲು ಹೊರಡುವ ಸಾಹಿತ್ಯಪ್ರೇಮಿಯ ಮೊದಲ ಒಲವು ಮಾತ್ರ ಕವನವೇ. ಕಾರಣ ಇಷ್ಟೇ, ಅಕ್ಷರಲೋಕಕ್ಕೆ ಧುಮುಕುವ ಹುಮ್ಮಸ್ಸಿಗೆ ಪೂರಕವೆಂಬಂತೆ ಕಡಿಮೆ ಸಮಯ ಮತ್ತು ಕಡಿಮೆ ಪದಗಳಲ್ಲಿ ತನ್ನ ಒಳಗುದಿಯನ್ನು ವ್ಯಕ್ತಪಡಿಸುವ ಧಾವಂತಕ್ಕೆ ದ್ವಾರವಾಗಿ ಕವಿತೆಯೇ ಆಯ್ಕೆಯಾಗಿಬಿಡುತ್ತದೆ.

ಕವನ ಚಿತ್ರಿಸುವಾಗ ಪ್ರಾಸ ಪದಗಳ ಚಮತ್ಕಾರ ತೋರಬಹುದು, ಸೂಚ್ಯವಾಗಿ ಗಂಭೀರ ವಿಷಯವನ್ನು ಹೇಳಿಬಿಡಬಹುದು, ಭಯವೆನಿಸುವ ಬೇಗುದಿಯನ್ನು ಪದಗಳ ಹೊದಿಕೆಯಡಿ ಮುಚ್ಚಿ ಹೇಳಿಬಿಡಬಹುದು ಈ ಬಗೆಯ ಹಲವಾರು ಕಾರಣಗಳಿಗಾಗಿ ಬರೆಹಶೈಶವಕ್ಕೆ ಕವಿತೆ ಮೆಚ್ಚಿನ ಆಟಿಕೆಯಾಗುತ್ತದೆ.

ಈಗ ಫೇಸುºಕ್‌ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಮುಕ್ತ ಬರೆಹಕ್ಕೆ ಅವಕಾಶವಿದ್ದ ಕಾರಣದಿಂದಾಗಿ ಅನೇಕರು ಕವಿತೆಗಳನ್ನು ಹೆಚ್ಚೆಚ್ಚು ಬರೆಯುತ್ತಿದ್ದಾರೆ. ಎಲ್ಲವೂ ಅತ್ಯುತ್ತಮ ಅಂತಲೋ, ಎಲ್ಲವೂ ಕಳಪೆಯಂತಲೋ ಪರಿಗಣಿಸಬೇಕಿಲ್ಲ. ಎಲ್ಲ ಬಗೆಯ ಕವಿತೆಗಳು ಅಲ್ಲಿ ರೂಪತಾಳಿ ನಿಲ್ಲುತ್ತವೆ. ಇತ್ತೀಚಿನ ಕವಿತೆಗಳ ಬಗ್ಗೆ ಸುಮ್ಮನೆ ಒಂದು ತಮಾಷೆಯ ಮಾತಿದೆ. ಪದದ ಪಕ್ಕ ಪದ ಬರೆದರೆ ಗದ್ಯ, ಪದದ ಕೆಳಗೆ ಪದ ಬರೆದರೆ ಪದ್ಯ ಎಂದು. ಈ ಬಗೆಯ ಕವಿತೆಗಳನ್ನೂ ಈಗ ಕಾಣಬಹುದು. ಇದರ ಹೊರತಾಗಿ ಕಣ್ಣುಹಾಯಿಸಿದರೆ ನಮಗೆ ಪುಟ್ಟ ಮೂರು ನಾಲ್ಕು ಸಾಲಿನ ಕವಿತೆಗಳಿಂದ ಪುಟಗಟ್ಟಲೆ ತಮ್ಮ ವಿಸ್ತಾರ ವ್ಯಾಪಿಸಿಕೊಂಡ ಖಂಡಕಾವ್ಯಗಳ ತನಕ ಅನೇಕ ಗಾತ್ರದ ಕವಿತೆಗಳು ಸಿಗುತ್ತವೆ.

ಎಲ್ಲ ಬಗೆಯ ಕವಿತೆಗಳಲ್ಲಿ ಹೊಸತನ, ರಮ್ಯತೆ, ಒಳದನಿ, ತುಡಿತ, ಭಾವ ವ್ಯಕ್ತಗೊಳ್ಳುತ್ತಿರುತ್ತದೆ. ಓದುಗ ಅದಕ್ಕೆ ತೆರೆದುಕೊಳ್ಳಬೇಕು. ಓದುಗನ ಹೃದಯವೀಣೆ ಕವಿಯ ಭಾವವೀಣೆಯೊಂದಿಗೆ ಶ್ರುತಿಗೊಂಡಾಗ ಕಾವ್ಯಗಾನ ಹೊಮ್ಮುತ್ತದೆ. ಈ ಕಾರಣಕ್ಕಾಗಿಯೇ ಕವಿತೆ ಅಥವಾ ಕಾವ್ಯದ ಓದುಗರನ್ನು ಓದುಗ ಎನ್ನದೇ ಸಹೃದಯ ಎನ್ನುತ್ತಾರೆ. ಕವನಗಳು ಒಂದೇ ಓಘದಲ್ಲಿ ಓದಿ ಮುಗಿಸುವ ಅವಸರ ಬಯಸುವುದಿಲ್ಲ.

ಒಂದೊಂದು ಕವಿತೆಯೂ ಒಂದೊಂದು ಭಾವಬೀಜ. ಓದಿದಾಗ ಅಥವಾ ಕೇಳಿದಾಗ ಮನದ ಮಣ್ಣಲ್ಲಿ ಬಿತ್ತರಗೊಂಡು ನಿರಂತರವಾಗಿ ನಿಧಾನವಾಗಿ ಸಾತತ್ಯದಲ್ಲಿ ಚಿಗುರುತ್ತದೆ; ವಿಕಸಿತಗೊಳ್ಳುತ್ತದೆ; ಮೊಗ್ಗು ಮೂಡುತ್ತದೆ; ಅರಳಿ ಹೂವಾಗುತ್ತದೆ. ಆಗಲೇ ನೋಡಿ ಕವಿತೆಯ ಘಮಲು, ಹೊಳಹು ಪಸರಿಸಿ ಹೃದಯಕ್ಕೆ ಮುದದಾಲಿಂಗನ ದಕ್ಕುವುದು. ಆ ಹೂವು ನಿಧಾನಕ್ಕೆ ಬೀಜವೊಂದನ್ನು ನೀಡಿದಾಗ ಓದುಗನಲ್ಲಿ ಹೊಸತೊಂದು ಸ್ಪೂರ್ತಿ ಚಿಮ್ಮಿ ಮನದಗರ್ಭದಲ್ಲೊಂದು ಕವಿತೆ ಆವಿರ್ಭವಿಸುತ್ತದೆ. ಹೊಸ ಕವಿತೆ ಹೊರಬರುತ್ತದೆ.

ಕವಿತೆಯ ಅರ್ಥ ಕೂಡ ಒಂದೇ ಬಗೆಯದ್ದಲ್ಲ. ಕವಿತೆ ಅಂಗೈಲಿ ಜೋಪಾನವಾಗಿ ಹಿಡಿದಿಟ್ಟ ದೀಪ. ಯಾರಿಗೆ ಯಾವ ಬೆರಳ ಸಂದಿಯಿಂದ ಹೊಮ್ಮಿದ ಬೆಳಕು ದಕ್ಕುವುದೋ ಅದೇ ಅವರ ಪಾಲಿನ ಅರ್ಥ. ಈ ನಮ್ಯತೆ ಕವಿತೆಗೆ ಇರುವ ಕಾರಣಕ್ಕೆ ಕವಿತೆಗೆ ಅನಂತತೆ ಮತ್ತು ಜನಪ್ರಿಯತೆ ಸಿಕ್ಕಿರುವುದು. ಕವಿತೆಯ ಸ್ವಾದ ದಕ್ಕಬೇಕಾದರೆ ಒಂದು ಕವಿತೆ ಓದಬೇಕು, ಅದನ್ನೇ ಮನದಲ್ಲಿ ಧ್ಯಾನಿಸಬೇಕು. ಅದು ಮಾಗಿ ತಾನೇ ತನ್ನೊಳಗಿನ ಒಂದು ಅರ್ಥವನ್ನು ಕೊಡುವ ತನಕ ಕಾಯಬೇಕು. ಅದರೊಟ್ಟಿಗೆ ಮಾಗಬೇಕು. ನಾವೂ ಕವಿತೆಯಾಗಿಬಿಡಬೇಕು…. ಕವಿತೆಯೊಂದಿಗೆ ಸಾಫ‌ಲ್ಯ ಸಾಧಿಸುವ ಸುಲಭ ಸಾಧ್ಯತೆ ಇದು.

-ಚಿದಂಬರ ಕುಲಕರ್ಣಿ

ಧಾರವಾಡ ವಿವಿ

ಟಾಪ್ ನ್ಯೂಸ್

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.