Bengaluru Water Crisis; ಇತರ ಕಾರಣಕ್ಕೆ ಕುಡಿಯುವ ನೀರು ಬಳಸಿದ 22 ಕುಟುಂಬಗಳಿಗೆ ದಂಡ
Team Udayavani, Mar 25, 2024, 4:36 PM IST
ಬೆಂಗಳೂರು: ಕುಡಿಯುವ ನೀರನ್ನು ಇತರೆ ಬಳಕೆಗೆ ಉಪಯೋಗಿಸಿದ ಕಾರಣಕ್ಕೆ ರಾಜಧಾನಿ ಬೆಂಗಳೂರಿನ 22 ಕುಟುಂಬಗಳಿಗೆ ದಂಡ ವಿಧಿಸಲಾಗಿದೆ. ಕಾರು-ಬೈಕ್ ತೊಳೆಯಲು, ಗಾರ್ಡನ್ ಗಳಿಗೆ ಕುಡಿಯುವ ನೀರನ್ನು ಬಳಸಿದ ಕಾರಣಕ್ಕೆ ದಂಡ ವಿಧಿಸಲಾಗಿದೆ ಎಂದು ವರದಿ ತಿಳಿಸಿದೆ.
ರಾಜ್ಯದಲ್ಲಿ ತೀವ್ರ ಅಭಾವವಿರುವ ನೀರಿನ ಸಂರಕ್ಷಣೆಗಾಗಿ ನೀರು ಸರಬರಾಜು ಮಂಡಳಿಯ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರತಿ ಕುಟುಂಬವು 5,000 ರೂ ದಂಡವನ್ನು ಪಾವತಿಸಬೇಕಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) 22 ಮನೆಗಳಿಂದ ₹ 1.1 ಲಕ್ಷ ದಂಡವನ್ನು ಸಂಗ್ರಹಿಸಿದೆ ಎಂದು ತಿಳಿಸಿದೆ. ನಗರದ ವಿವಿಧ ಪ್ರದೇಶಗಳಿಂದ ದಂಡವನ್ನು ಸಂಗ್ರಹಿಸಲಾಗಿದ್ದು, ದಕ್ಷಿಣ ಪ್ರದೇಶದಿಂದ ಅತಿ ಹೆಚ್ಚು (80,000 ರೂ.) ದಂಡವನ್ನು ಸಂಗ್ರಹಿಸಲಾಗಿದೆ ಎಂದಿದೆ.
ಈ ತಿಂಗಳ ಆರಂಭದಲ್ಲಿ, ಬಿಡಬ್ಲ್ಯುಎಸ್ಎಸ್ ಬಿ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು ಕುಡಿಯುವ ನೀರಿನ ಮಿತವ್ಯಯ ಬಳಕೆಗೆ ಶಿಫಾರಸು ಮಾಡಿತ್ತು. ವಾಹನಗಳನ್ನು ತೊಳೆಯಲು, ನಿರ್ಮಾಣ ಮತ್ತು ಮನರಂಜನಾ ಉದ್ದೇಶಗಳಿಗಾಗಿ ಕುಡಿಯುವ ನೀರನ್ನು ಬಳಸುವುದನ್ನು ತಪ್ಪಿಸುವಂತೆ ನಗರದ ನಿವಾಸಿಗಳಿಗೆ ಒತ್ತಾಯಿಸಲಾಗಿದೆ.
ಪುನರಾವರ್ತಿತ ಅಪರಾಧಿಗಳಿಗೆ, ಆದೇಶವನ್ನು ಉಲ್ಲಂಘಿಸಿದಾಗ ಪ್ರತಿ ಬಾರಿಯೂ 500 ರೂ ಹೆಚ್ಚುವರಿ ದಂಡವನ್ನು ವಿಧಿಸಲು ಮಂಡಳಿಯು ನಿರ್ಧರಿಸಿದೆ.
ಹೋಳಿ ಆಚರಣೆಯ ಸಂದರ್ಭದಲ್ಲಿ, ಪೂಲ್ ಪಾರ್ಟಿಗಳು ಮತ್ತು ರೈನ್ ಡ್ಯಾನ್ಸ್ ಗಳಿಗೆ ಕಾವೇರಿ ಮತ್ತು ಬೋರ್ವೆಲ್ ನೀರನ್ನು ಬಳಸದಂತೆ ನಿವಾಸಿಗಳಿಗೆ ಸಲಹೆ ನೀಡಿದೆ. ನೀರಿನ ಬಳಕೆಯನ್ನು ಕಡಿಮೆ ಮಾಡಲು ಏರೇಟರ್ ಗಳನ್ನು ಸ್ಥಾಪಿಸಲು ಹೋಟೆಲ್ ಗಳು, ಅಪಾರ್ಟ್ಮೆಂಟ್ ಗಳು ಮತ್ತು ಕೈಗಾರಿಕೆಗಳನ್ನು ಉತ್ತೇಜಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suspension: ಸುಳ್ಳು ಮಾಹಿತಿ ಮೇರೆಗೆ ಇಬ್ಬರು ಯುವಕರ ಬಂಧನ; ನಾಲ್ವರು ಪೊಲೀಸರು ಅಮಾನತು
Bengaluru: ನಗರದಲ್ಲಿ ಏಕಕಾಲಕ್ಕೆ 200 ಗಣೇಶ ಮೂರ್ತಿಗಳ ಮೆರವಣಿಗೆ
Parappana Agrahara Prison: ಪರಪ್ಪನ ಅಗ್ರಹಾರ ಜೈಲಲ್ಲಿ ಮತ್ತೆ ಮೊಬೈಲ್ಗಳು ಪತ್ತೆ
Bengaluru: ಚಿನ್ನಾಭರಣ ಮಳಿಗೆಯಲ್ಲಿ ತಡರಾತ್ರಿ ದುಷ್ಕರ್ಮಿಗಳಿಂದ ಕಳವಿಗೆ ಯತ್ನ
BBMP: ರಜೆ ದಿನದಲ್ಲೂ ಗುಂಡಿ ಮುಚ್ಚಿದ ಪಾಲಿಕೆ ನೌಕರರು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Mudubidire: 77 ಕೋ.ರೂ. ವೆಚ್ಚದ ಅಮೃತ್ 2.0 ನೀರಿನ ಯೋಜನೆಗೆ ಚಾಲನೆ
Movie Release: ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್ ಬೆಳ್ಳಿ’ ತೆರೆಗೆ
Space Wonder: ಇಂದು ವಿಶೇಷ ಸೂಪರ್ಮೂನ್
Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್ಐಎಗೆ ವಹಿಸಲಿ: ಶಾಸಕ ಸುನಿಲ್ ಕುಮಾರ್
Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.