![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Mar 26, 2024, 3:13 PM IST
ಹೈದರಾಬಾದ್: ʼಆರ್ ಆರ್ ಆರ್ʼ ಬಳಿಕ ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳದಿರುವ ನಟ ಜೂ.ಎನ್ ಟಿಆರ್ ಸದ್ಯ ʼದೇವರʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಗೋವಾದಲ್ಲಿ ʼದೇವರʼ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ʼಆರ್ ಆರ್ ಆರ್ʼ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಜೂ.ಎನ್ ಟಿಆರ್ ಅವರ ಮುಂದಿನ ಸಿನಿಮಾಗಳನ್ನು ನೋಡಲು ಫ್ಯಾನ್ಸ್ ಗಳು ಕಾಯುತ್ತಿದ್ದಾರೆ. ʼದೇವರʼ ಎರಡು ವಿಭಾಗದಲ್ಲಿ ತೆರೆಗೆ ಬರಲಿದ್ದು, ಆ ಬಳಿಕ ಅವರು ಹೃತಿಕ್ ರೋಷನ್ ಅಭಿನಯದ ʼವಾರ್ -2ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ದೊಡ್ಡ ಪ್ರಾಜೆಕ್ಟ್ ನಲ್ಲಿ ಕಾಣಿಸಿಕೊಳ್ಳಲಿರುವ ಜೂ.ಎನ್ ಟಿಆರ್ ʼಕೆಜಿಎಫ್ʼ ನಿರ್ದೇಶಕ ಪ್ರಶಾಂತ್ ನೀಲ್ ಅವರೊಂದಿಗೆ ಸಿನಿಮಾ ಮಾಡುತ್ತಿರುವುದು ಗೊತ್ತೇ ಇದೆ. ಆದರೆ ಈ ಸಿನಿಮಾ ಅನೌನ್ಸ್ ಆದ ಬಳಿಕ ಅದರ ಬಗ್ಗೆ ಬೇರೆ ಅಪ್ಡೇಟ್ ಗಳು ಹೊರಬಿದ್ದಿಲ್ಲ.
ಮುಂದಿನ ವರ್ಷ ಈ ಸಿನಿಮಾ ಆರಂಭಗೊಳ್ಳಲಿದೆ. ಇದೀಗ ಬಂದಿರುವ ಲೇಟೆಸ್ಟ್ ಮಾಹಿತಿ ಪ್ರಕಾರ ಪ್ರಶಾಂತ್ ನೀಲ್ ಅವರ ಈ ಸಿನಿಮಾ ʼಕೆಜಿಎಫ್ʼ ನಂತೆಯೇ ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ಎನ್ನಲಾಗುತ್ತಿದೆ.
ಆದರೆ ಇದು ಅಧಿಕೃತವಾಗಿಲ್ಲ. ಒಂದು ವೇಳೆ ಇದು ಅಧಿಕೃತವಾದರೆ ಜೂ.ಎನ್ ಟಿಆರ್ ಅವರು ʼದೇವರʼ ಸಿನಿಮಾದ ಎರಡು ಪಾರ್ಟ್ ಮುಗಿಸಿ, ವಾರ್ -2 ಬಳಿಕ ಈ ಸಿನಿಮಾದ ಎರಡು ಪಾರ್ಟ್ ಗಳಲ್ಲಿ ನಟಿಸಲಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.