![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Mar 26, 2024, 7:56 PM IST
ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿ ತಂಡಗಳು ಕಳೆದ 24 ಗಂಟೆಗಳಲ್ಲಿ ನಗದು, ಮದ್ಯ, ಮಾದಕ ವಸ್ತು, ಉಚಿತ ಉಡುಗೊರೆ ಸೇರಿ 1.30 ಕೋಟಿ ರೂ.ಗೂ ಅಧಿಕ ಮೌಲ್ಯದ ಚುನಾವಣಾ ಅಕ್ರಮ ಜಪ್ತಿ ಮಾಡಿದೆ. ನೀತಿ ಸಂಹಿತೆ ಜಾರಿಯಾದ ಬಳಿಕ ಈವರೆಗೆ 48.56 ಕೋಟಿ ರೂ. ಮೌಲ್ಯದ ಅಕ್ರಮ ಜಪ್ತಿ ಮಾಡಲಾಗಿದೆ.
ಕಳೆದ 24 ಗಂಟೆಗಳ ಕ್ಷಿಪ್ರ ಪಡೆಗಳು, ಸ್ಥಿರ ಕಣ್ಗಾವಲು ತಂಡಗಳು ಮತ್ತು ಪೊಲೀಸರು 56.55 ಲಕ್ಷ ರೂ. ಜಪ್ತಿ ಮಾಡಿದ್ದು, 15.36 ಲಕ್ಷ ರೂ. ಮೌಲ್ಯದ ಉಚಿತ ಉಡುಗೊರೆಗಳು, 15.16 ಲಕ್ಷ ರೂ. ಇತರೆ, 38.04 ಲಕ್ಷ ರೂ. ಮೌಲ್ಯದ 11,781 ಲೀ. ಮದ್ಯ, 5.21 ಲಕ್ಷ ಮೌಲ್ಯದ 8.40 ಕೆ.ಜಿ. ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಚುನಾವಣೆ ಘೋಷಣೆಯಾದ ದಿನದಿಂದ ಈವರೆಗೆ ಒಟ್ಟು 18.38 ಕೋಟಿ ರೂ. ನಗದು, 45.98 ಲಕ್ಷ ರೂ. ಮೌಲ್ಯದ ಉಚಿತ ಉಡುಗೊರೆ, 2.36 ಕೋಟಿ ರೂ. ಮೌಲ್ಯದ ಇತರೆ, 24.91 ಕೋಟಿ ರೂ. ಮೌಲ್ಯದ 7.86 ಲಕ್ಷ ಲೀ. ಮದ್ಯ, 83.40 ಲಕ್ಷ ರೂ. ಮೌಲ್ಯದ 118 ಕೆ.ಜಿ. ಮಾದಕ ವಸ್ತು, 1.27 ಕೋಟಿ ರೂ. ಮೌಲ್ಯದ 2.08 ಕೆ.ಜಿ. ಚಿನ್ನ ಸೇರಿದಂತೆ ಈವರೆಗೆ 48.56 ಕೋಟಿ ರೂ. ಮೌಲ್ಯದ ಅಕ್ರಮ ಪತ್ತೆಯಾಗಿದೆ.
760 ಎಫ್ಐಆರ್ ದಾಖಲಿಸಲಾಗಿದ್ದರೆ, 89,624 ಶಸ್ತ್ರಾಸ್ತ್ರ ಠೇವಣಿ, 850 ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಅಬಕಾರಿ ಇಲಾಖೆ ಘೋರ ಅಪರಾಧ ಅಡಿಯಲ್ಲಿ 765 ಪ್ರಕರಣ ದಾಖಲಿಸಿದೆ. ವಿಜಯನಗರದ ಸಿದ್ಧಾಪುರ ಚೆಕ್ಪೋಸ್ಟ್ನಲ್ಲಿ 20 ಲಕ್ಷ ರೂ. ನಗದು, ಧಾರವಾಡದ ಅಣ್ಣಿಗೇರಿ ಪೊಲೀಸರು 1.35 ಲಕ್ಷ ರೂ. ಮೌಲ್ಯದ ಸೀರೆಗಳನ್ನು ವಶಕ್ಕೆ ಪಡೆದಿದ್ದಾರೆ.
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
You seem to have an Ad Blocker on.
To continue reading, please turn it off or whitelist Udayavani.