IT; ಕಾಂಗ್ರೆಸ್‌ಗೆ 2,500 ಕೋ.ರೂ. ಆದಾಯ ತೆರಿಗೆ ಸಂಕಷ್ಟ?

ಗೊತ್ತಿದ್ದರೂ ಕಾಂಗ್ರೆಸ್‌ನಿಂದ ಪಾವತಿ ವಿಳಂಬ, ಅದಕ್ಕೇ ನೋಟಿಸ್‌: ಐಟಿ ಮೂಲಗಳು

Team Udayavani, Mar 31, 2024, 7:00 AM IST

congress

ಹೊಸದಿಲ್ಲಿ: ಲೋಕಸಭೆ ಚುನಾವಣೆಯ ಕಾವು ಏರುತ್ತಿರುವಂತೆಯೇ ಕಾಂಗ್ರೆಸ್‌ ಪಕ್ಷವು ಸವಾಲುಗಳ ಮೇಲೆ ಸವಾಲು ಎದುರಿಸುತ್ತಿದೆ. ಈಗಾಗಲೇ 1,823 ಕೋಟಿ ರೂ. ಆದಾಯ ತೆರಿಗೆ ಬಾಕಿ ನೋಟಿಸ್‌ ಪಡೆದಿರುವ ಕಾಂಗ್ರೆಸ್‌ಗೆ ಶುಕ್ರವಾರ ರಾತ್ರಿ ಇನ್ನೆರಡು ನೋಟಿಸ್‌ ಬಂದಿವೆ. ಈ ಹಿನ್ನೆಲೆಯಲ್ಲಿ ಒಟ್ಟು 2,500 ಕೋಟಿ ರೂ. ತೆರಿಗೆ ಪಾವತಿ ಮಾಡಬೇಕಾದ ಸಂದಿಗ್ಧಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.
ಕಾಂಗ್ರೆಸ್‌ಗೆ ಐಟಿ ದಾಳಿ ನಡೆಯಲಿರುವುದು ಗೊತ್ತಿತ್ತು. ವಿಚಾರಣ ಪ್ರಕ್ರಿಯೆಗಳು ನಡೆಯುವ ಬಗ್ಗೆ ಮಾಹಿತಿಯಿತ್ತು. ಪ್ರತಿಕ್ರಿಯಿಸಲು ಬೇಕಾದಷ್ಟು ಸಮಯ ವನ್ನೂ ನೀಡಲಾಗಿತ್ತು. ದಿಲ್ಲಿ ಉಚ್ಚ ನ್ಯಾಯಾಲಯದಲ್ಲೂ ಈ ಬಗ್ಗೆ ತಿಳಿಸಲಾಗಿತ್ತು. ಅವಕ್ಕೆಲ್ಲ ಪ್ರತಿಕ್ರಿಯಿಸದೆ ವಿಳಂಬ ಮಾಡಿದ್ದರಿಂದಲೇ ಈ ನೋಟಿಸ್‌ ನೀಡಲಾಗಿದೆ ಎಂದು ಐಟಿ ಮೂಲಗಳು ಹೇಳಿವೆ.

2019ರಲ್ಲೇ ದಾಳಿ
2019ರ ಎಪ್ರಿಲ್‌ನಲ್ಲಿ ಐಟಿ ಇಲಾಖೆಯು ಅಂದಿನ ಮಧ್ಯಪ್ರದೇಶ ಸಿಎಂ ಕಮಲ್‌ನಾಥ್‌ ಅವರ ಸಹವರ್ತಿಗಳ ಮನೆಗಳ ಮೇಲೆ ದಾಳಿ ನಡೆಸಿತ್ತು. ಆಗ ಕಮಲ್‌ನಾಥ್‌ ಅವರ ನಿಕಟವರ್ತಿ ಎನ್ನಲಾಗಿದ್ದವರಿಗೆ ಸೇರಿದ ಕಂಪೆನಿ ಮತ್ತು ಮೇಘಾ ಎಂಜಿನಿಯರಿಂಗ್‌ನಿಂದ ಕಾಂಗ್ರೆಸ್‌ ನಗದು ಪಡೆದಿರುವುದು ರಶೀದಿಗಳಿಂದ ಗೊತ್ತಾಗಿತ್ತು. 2013-14ರಿಂದ 2019ರ ಎಪ್ರಿಲ್‌ ವರೆಗಿನ ಅವಧಿಯಲ್ಲಿ ಈ ರೀತಿ 626 ಕೋಟಿ ರೂ.ವರೆಗೆ ಹಣ ಕಾಂಗ್ರೆಸ್‌ಗೆ ಸಂದಾಯವಾಗಿತ್ತು. ಈ ಎಲ್ಲ ದಾಖಲೆಗಳಿದ್ದೇ ಐಟಿ ಇಲಾಖೆಯು ಸರಣಿ ನೋಟಿಸ್‌ ನೀಡಿದೆ.

ಪರಿ ಣಾ ಮವಾಗಿ ಕಾಂಗ್ರೆಸ್‌ ಬರೋ ಬ್ಬ ರಿ 2,500 ಕೋಟಿ ರೂ.ವರೆಗೆ ತೆರಿಗೆ ಪಾವತಿಸಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ. ಕಮಲ್‌ನಾಥ್‌ ಅವರ ಅಧಿಕೃತ ಕಚೇರಿಯ ಮೂಲಕ ಎಐಸಿಸಿಗೆ 20 ಕೋಟಿ ರೂ. ಸಂದಾ ಯ ವಾದ ಸಾಕ್ಷ್ಯ ಕೂಡ ಐಟಿ ಇಲಾಖೆ ಬಳಿ ಇದೆ ಎನ್ನಲಾಗಿದೆ.

ಗುತ್ತಿಗೆಗೆ ಪ್ರತಿಯಾಗಿ ನಗದು
ಮೇಘಾ ಎಂಜಿನಿಯರಿಂಗ್‌ಗೆ ಗುತ್ತಿಗೆ ನೀಡಿದ್ದಕ್ಕೆ ಪ್ರತಿಯಾಗಿ ನಗದನ್ನು ನೀಡಲಾಗಿದೆ. ಕಮಲನಾಥ್‌ ಅವರ ಸಹವರ್ತಿಗಳಿಂದ ಬಂದ ನಗದು ಮಧ್ಯಪ್ರದೇಶದಲ್ಲಿ ನಡೆಸಲಾದ ದೊಡ್ಡ ಭ್ರಷ್ಟಾಚಾರದ ಹಣ. ಈ ಹಗರಣದಲ್ಲಿ ಹಿರಿಯ ಅಧಿಕಾರಿಗಳು, ಸಚಿವರು, ಉದ್ಯಮಿಗಳ ಸಹಿತ ಹಲವರಿಂದ ಲಂಚ ಪಡೆಯಲಾಗಿದೆ. ದಾಳಿ ವೇಳೆ ದೊರೆತ ದಾಖಲೆಗಳು, ವಾಟ್ಸ್‌ಆ್ಯಪ್‌ ಸಂದೇಶಗಳು ಮತ್ತು ದಾಖಲಿಸಿಕೊಳ್ಳಲಾದ ಹೇಳಿಕೆಗಳು ನಗದು ಪಡೆದಿದ್ದನ್ನು ಸಾಬೀತುಪಡಿಸುತ್ತವೆ ಎಂದು ಮೂಲಗಳು ತಿಳಿಸಿವೆ. ಆದಾಯ ತೆರಿಗೆ ಇಲಾಖೆ ಕಾಯ್ದೆಯ 13ಎ ಸೆಕ್ಷನ್‌ ಪ್ರಕಾರ ರಾಜಕೀಯ ಪಕ್ಷವು 2 ಸಾವಿರ ರೂ.ಗಳಿಗಿಂತ ಹೆಚ್ಚು ಮೊತ್ತದ ದೇಣಿಗೆಯನ್ನು ನಗದು ರೂಪದಲ್ಲಿ ಪಡೆಯುವುದರ ಸಹಿತ ಅನೇಕ ಷರತ್ತುಗಳನ್ನು ಪಾಲಿ ಸದೆ ಇದ್ದರೆ ತೆರಿಗೆ ವಿನಾಯಿತಿ ದೊರೆಯುವುದಿಲ್ಲ. ಆಗ ಪಕ್ಷವು ಪಡೆದು ಅಷ್ಟೂ ಹಣಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ. ಕಾಂಗ್ರೆಸ್‌ ವಿಷಯದಲ್ಲೂ ಈ ಅಂಶವೇ ಉರುಳಾಗಿದೆ.

ಎಲ್ಲ ಪಕ್ಷಗಳಿಗೂ ಎಚ್ಚರಿಕೆ: ಚಿದಂಬರಂ
ಕಾಂಗ್ರೆಸ್‌ ಪಕ್ಷಕ್ಕೆ ಆದಾಯ ತೆರಿಗೆ ಇಲಾಖೆಯು 130 ಕೋಟಿ ರೂ. ದಂಡ ವಿಧಿಸಿರುವುದು ಎಲ್ಲ ರಾಜಕೀಯ ಪಕ್ಷಗಳು ಮತ್ತು ಜನರಿಗೆ ನೀಡಿರುವ ಎಚ್ಚರಿಕೆಯ ಘಂಟೆಯಾಗಿದೆ ಎಂದು ಕಾಂಗ್ರೆಸ್‌ ನಾಯಕ ಪಿ. ಚಿದಂಬರಂ ಹೇಳಿದ್ದಾರೆ. ಬಿಜೆಪಿಯ ಅಜೆಂಡಾ ಒಂದು ರಾಷ್ಟ್ರ ಒಂದು ಚುನಾವಣೆ ಎಂದರೆ ಬೇರೆ ಏನೂ ಅಲ್ಲ; ಒಂದು ರಾಷ್ಟ್ರ, ಒಂದು ಪಕ್ಷವೇ ಆಗಿದೆ. ಇದು ಎಲ್ಲರಿಗೂ ಎಚ್ಚರಿಕೆಯ ಘಂಟೆ ಎಂದು ಅವರು ತಮಿಳುನಾಡಿನ ಪುದುಕೊಟ್ಟೈಯಲ್ಲಿ ತಿಳಿಸಿದ್ದಾರೆ.

ನೋಟಿಸ್‌ಗಳ ಹಿಂದೇನಿದೆ?
2019ರಲ್ಲಿ ಅಂದಿನ ಮಧ್ಯಪ್ರದೇಶ ಸಿಎಂ ಕಮಲನಾಥ್‌ ಸಹವರ್ತಿಗಳ ಮೇಲೆ ಐಟಿ ದಾಳಿ
ಮೇಘಾ ಎಂಜಿನಿಯರಿಂಗ್‌ ಮತ್ತಿತರ ಕಂಪೆನಿಗಳಿಂದ “ಕೈ’ಗೆ 626 ಕೋಟಿ ರೂ. ದೇಣಿಗೆ
ಕಮಲ್‌ನಾಥ್‌ ಅಧಿಕೃತ ಕಚೇರಿ ಯಿಂದಲೇ ಎಐಸಿಸಿಗೆ 20 ಕೋಟಿ ರೂ. ಸಂದಾಯ. ಈ ಬಗ್ಗೆ ಐಟಿ ಬಳಿಯಿದೆ ರಶೀದಿ, ಇತರ ಸಾಕ್ಷ್ಯ?
ಎಲ್ಲ ದಾಖಲೆಗಳನ್ನಿಟ್ಟು ಕೊಂಡೇ ಐಟಿ ಇಲಾಖೆಯಿಂದ ಕಾಂಗ್ರೆಸ್‌ಗೆ ಸರಣಿ ನೋಟಿಸ್‌

1,823 ಕೋಟಿ ರೂ. ಪಾವತಿಗೆ ನೋಟಿಸ್‌ ಬಂದ ಬೆನ್ನಲ್ಲೇ ಐಟಿ ಇಲಾಖೆ ಮತ್ತೆರಡು ನೋಟಿಸ್‌ ನೀಡಿದೆ. ಕಾಂಗ್ರೆಸ್‌ ತೆರಿಗೆ ಭಯೋತ್ಪಾದನೆಗೆ ಗುರಿಯಾಗುತ್ತಿದೆ.
– ಜೈರಾಮ್‌ ರಮೇಶ್‌, ಕಾಂಗ್ರೆಸ್‌ ನಾಯಕ

ಟಾಪ್ ನ್ಯೂಸ್

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

NANGI-KADALKORETA

Nangi: ತೀವ್ರಗೊಂಡ ಕಡಲ್ಕೊರೆತ… ಬೀಚ್‌ ವ್ಯೂ ರೆಸಾರ್ಟ್‌ ಸಮುದ್ರ ಪಾಲಾಗುವ ಸಾಧ್ಯತೆ

Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು

Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Election: ಅಯೋಧ್ಯೇಲಿ ಸ್ಪರ್ಧಿಸಿದ್ರೆ ಮೋದಿ ಸೋಲು ಎಂದಿತ್ತು ಸಮೀಕ್ಷೆ: ರಾಗಾ

Election: ಅಯೋಧ್ಯೇಲಿ ಸ್ಪರ್ಧಿಸಿದ್ರೆ ಮೋದಿ ಸೋಲು ಎಂದಿತ್ತು ಸಮೀಕ್ಷೆ: ರಾಗಾ

Satyendar Jain: 7 ಕೋಟಿ ರೂ. ಲಂಚ ಆರೋಪ: ಆಪ್‌ ನಾಯಕ ಸತ್ಯೇಂದ್ರ ಜೈನ್‌ ವಿರುದ್ಧ ತನಿಖೆ

Satyendar Jain: 7 ಕೋಟಿ ರೂ. ಲಂಚ ಆರೋಪ: ಆಪ್‌ ನಾಯಕ ಸತ್ಯೇಂದ್ರ ಜೈನ್‌ ವಿರುದ್ಧ ತನಿಖೆ

Hathras Stampede: ಭೋಲೆ ಬಾಬಾ ವಿರುದ್ಧ ಮೊದಲ ಕೇಸು ದಾಖಲು…

Hathras Stampede: ಭೋಲೆ ಬಾಬಾ ವಿರುದ್ಧ ಮೊದಲ ಕೇಸು ದಾಖಲು…

Kuno National Park: ಕುನೋದಲ್ಲಿ ಮಳೆ ವೇಳೆ ಚೀತಾ ಮರಿಗಳ ಆಟದ ವಿಡಿಯೋ ವೈರಲ್‌

Kuno National Park: ಕುನೋದಲ್ಲಿ ಮಳೆ ವೇಳೆ ಚೀತಾ ಮರಿಗಳ ಆಟದ ವಿಡಿಯೋ ವೈರಲ್‌

army

Kulgam; ಭೀಕರ ಗುಂಡಿನ ಕಾಳಗದಲ್ಲಿ ನಾಲ್ವರು ಉಗ್ರರ ಹತ್ಯೆ: ಯೋಧ ಹುತಾತ್ಮ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.