Ayodhya; ಬಿಸಿಲಿನ ಬೇಗೆ ತಣಿಸಲು ಬಾಲಕರಾಮನಿಗೆ ಹತ್ತಿವಸ್ತ್ರ!
Team Udayavani, Apr 1, 2024, 6:15 AM IST
ಲಕ್ನೋ: ದೇಶದ ಹಲವು ಭಾಗಗಳಲ್ಲಿ ಬಿಸಿಲ ಝಳ ಹೆಚ್ಚಿರುವಂತೆಯೇ ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲಕ ರಾಮನ ಬೇಸಗೆ ಆರೈಕೆಯೂ ಆರಂಭಗೊಂಡಿದೆ. ಬೇಗೆ ಹೆಚ್ಚದಿರಲೆಂದು ಬಾಲಕ ರಾಮನಿಗೆ ಹತ್ತಿ ವಸ್ತ್ರಗಳ ಧಾರಣೆ ಮಾಡಲಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿದೆ.
ಹತ್ತಿ ವಸ್ತ್ರವನ್ನು ಧರಿಸಿರುವ ಬಾಲಕ ರಾಮನ ವಿಗ್ರಹದ ಫೋಟೋವನ್ನು ಜನ್ಮಭೂಮಿ ಟ್ರಸ್ಟ್ ಎಕ್ಸ್ನಲ್ಲಿ ಹಂಚಿಕೊಂಡಿದೆ. ಅಲ್ಲದೇ ಪ್ರಭು ರಾಮನಿಗೆ ಧರಿಸಿರುವ ವಸ್ತ್ರವು ಕೈಮಗ್ಗದಲ್ಲಿ ನೇಯ್ದಿರುವ ಮಲ್ಮಲ್ ಹತ್ತಿ ಬಟ್ಟೆಯಾಗಿದ್ದು, ನೈಸರ್ಗಿಕ ಬಣ್ಣದಿಂದ ಅದನ್ನು ಅಲಂಕರಿಸಲಾಗಿದೆ. ಜತೆಗೆ ಬಣ್ಣದ ಹೂವಿನ ಬುಟ್ಟಿಗಳಿಂದ ವಸ್ತ್ರವನ್ನು ಅಲಂಕರಿಸಿರುವುದಾಗಿಯೂ ಟ್ರಸ್ಟ್ ಮಾಹಿತಿ ನೀಡಿದೆ.
ಇತ್ತೀಚೆಗೆ ಅಯೋಧ್ಯೆಯ ರಾಮ ಮಂದಿರದಲ್ಲಿ ಭವ್ಯವಾಗಿ ಹೋಳಿ ಹಬ್ಬವನ್ನು ಆಚರಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.