ಎಡಪದವಿನಲ್ಲಿ ಬಾವಿಗೆ ಬಿದ್ದ ಅಪರೂಪದ ಕರಿಚಿರತೆಯ ರಕ್ಷಣೆ


Team Udayavani, Apr 1, 2024, 12:45 AM IST

ಎಡಪದವಿನಲ್ಲಿ ಬಾವಿಗೆ ಬಿದ್ದ ಅಪರೂಪದ ಕರಿಚಿರತೆಯ ರಕ್ಷಣೆ

ಕೈಕಂಬ: ಕರಾವಳಿ ಭಾಗದಲ್ಲಿ ಬಲು ಅಪೂರ್ವ ಎನಿಸಿರುವ ಕಪ್ಪು ಚಿರತೆಯೊಂದು ಎಡಪದವು ಸಮೀಪದ ಗೊಸ್ಪಾಲ್‌ ಸನಿಲದಲ್ಲಿ ಶನಿವಾರ ರಾತ್ರಿ ಬಾವಿಗೆ ಬಿದ್ದಿದೆ. ಅರಣ್ಯ ಇಲಾಖೆಯವರು ಸ್ಥಳೀಯರ ಸಹಕಾರದೊಂದಿಗೆ 3 ತಾಸು ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಮೇಲೆತ್ತಿದ್ದಾರೆ.

ಈ ಪ್ರದೇಶದಲ್ಲಿ ಚಿರತೆಗಳು ಆಗಾಗ ಕಂಡುಬರುತ್ತಿದ್ದು ನಾಯಿಗಳು ಕಾಣೆಯಾಗುತ್ತಿದ್ದವು. ಆದರೆ ಕರಿ ಚಿರತೆ ಕಂಡುಬಂದಿರುವುದು ವಿಶೇಷ. ಸನಿಲ ನಿವಾಸಿ ಶಕುಂತಲಾ ಆಚಾರ್ಯ ಅವರ ಮನೆಯಂಗಳದ ಬಾವಿಯಲ್ಲಿ ರವಿವಾರ ಬೆಳಗ್ಗೆ ಚಿರತೆ ಪತ್ತೆಯಾಗಿತ್ತು. ಮನೆಯವರು ಅದೇ ಬಾವಿಯಿಂದ 2 ಕೊಡ ನೀರು ಸೇದಿ ಕೊಂಡೊಯ್ದಿದ್ದು, 3ನೇ ಬಾರಿ ಸೇದಲು ಹೋದಾಗ ಚಿರತೆ ಇರುವುದು ಗಮನಕ್ಕೆ ಬಂತು. ಸ್ಥಳೀಯರಿಗೆ ಮತ್ತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.

ವಲಯ ಅರಣ್ಯಾ ಧಿಕಾರಿ ರಾಜೇಶ್‌ ಬಳೆಗಾರ್‌ ನೇತೃತ್ವದಲ್ಲಿ ಸಹಾಯಕ ವಲಯ ಅರಣ್ಯಾ ಧಿಕಾರಿ ಜಗರಾಜ್‌, ಅರಣ್ಯ ಪಾಲಕರಾದ ದಿನೇಶ್‌ ಕುಮಾರ್‌ ಮತ್ತು ಕ್ಯಾತಲಿಂಗ, ಸೂರಜ್‌ ಅವರ ತಂಡ ಕೂಡಲೇ ಬೋನು ಬಲೆ ಇನ್ನಿತರ ಪರಿಕರಗಳೊಂದಿಗೆ ಆಗಮಿಸಿದರು. 9 ಗಂಟೆಯ ವೇಳೆಗೆ ಸ್ಥಳೀಯರಾದ ಗಣೇಶ್‌ ನಾಯಕ್‌ ಎಡಪದವು, ಹರೀಶ್‌ ಎಡಪದವು ಮತ್ತು ಮೌರಿಸ್‌ ಪಿಂಟೋ ಸಹಿತ ಹಲವರ ಸಹಾಯದೊಂದಿಗೆ ಚಿರತೆಯನ್ನು ಹಿಡಿಯುವ ಕಾರ್ಯ ಆರಂಭಿಸಲಾಗಿತ್ತು.

ತಗ್ಗು ಪ್ರದೇಶದಲ್ಲಿರುವ ಬಾವಿಯ ಸುತ್ತ ಇಕ್ಕಟ್ಟಾಗಿತ್ತು. ಇನ್ನೊಂದೆಡೆ 1 ಸಾವಿರದಷ್ಟು ಜನರು ಜಮಾಯಿಸಿದ್ದರು. ವೀಡಿಯೋ, ಫೋಟೋ ತೆಗೆಯಲೆಂದು ಮುಂದೆ ಬರುವ ಕುತೂಹಲಿಗಳ ನಡುವೆ ಕಾರ್ಯಾಚರಣೆ ತ್ರಾಸದಾಯಕವಾಗಿತ್ತು. ಬಳಿಕ ಬಜಪೆ ಪೊಲೀಸರು ಜನರನ್ನು ನಿಯಂತ್ರಿಸಿದರು. 11.30ಕ್ಕೆ ಚಿರತೆಯನ್ನು ಸುರಕ್ಷಿತವಾಗಿ ಬೋನಿನೊಳಗೆ ಸೇರಿಸಲಾಯಿತು.

ಚಿರತೆಗೆ ಆಹಾರವಾದ ಹಸು!
ಶನಿವಾರ ರಾತ್ರಿ 10.30ರ ಸುಮಾರಿಗೆಕಪ್ಪು ಚಿರತೆ ಬಾವಿಗೆ ಬಿದ್ದಿರುವ ಸ್ಥಳಕ್ಕಿಂತ ಸುಮಾರು 2 ಕಿ.ಮೀ. ದೂರದ
ಮಡಪಾಡಿಯ ನಾರ್ಬರ್ಟ್‌ ಮಥಾಯಸ್‌ ಅವರ 6 ತಿಂಗಳ ದನದ ಕರುವನ್ನು ಚಿರತೆಯೊಂದು ತೋಟಕ್ಕೆ ಎಳೆದೊಯ್ದು ಕುತ್ತಿಗೆ, ಎದೆಯ ಭಾಗವನ್ನು ತಿಂದು ಹಾಕಿತ್ತು. ಇದು ಮನೆಯವರ ಗಮನಕ್ಕೆ ಬಂದರೂ ರಾತ್ರಿಯಾಗಿರುವ ಕಾರಣ ಕರುವಿನ ಶವವನ್ನು ಅಲ್ಲೇ ಬಿಟ್ಟಿದ್ದರು. ಮಧ್ಯರಾತ್ರಿ ಮತ್ತೆ ಬಂದ ಚಿರತೆ ಹಸುವಿನ ಎದೆ ಹಾಗೂ ಕುತ್ತಿಗೆಯ ಭಾಗವನ್ನು ತಿಂದಿದೆ. ಅದು ಕಪ್ಪು ಚಿರತೆಯದೇ ಕೆಲಸವೋ ಬೇರೆ ಚಿರತೆಯದೋ ಎಂಬುದು ದೃಢಪಟ್ಟಿಲ್ಲ. ಒಟ್ಟಿನಲ್ಲಿ ಕಪ್ಪು ಚಿರತೆಯ ಸೆರೆಯಿಂದಾಗಿ ಜನ ನಿಟ್ಟುಸಿರು ಬಿಟ್ಟಿದ್ದಾರೆ.

ನ್ನೂ ಒಂದೆರಡು ಚಿರತೆ ಪರಿಸರದಲ್ಲಿ ಇರುವ ಅನುಮಾನ ವ್ಯಕ್ತವಾಗಿರು ವುದರಿಂದ ಬೋನು ಇಡುವ ಬಗ್ಗೆ ಅರಣ್ಯ ಇಲಾಖೆ ಚಿಂತಿಸಿದೆ.

ಸೆರೆಯಾದ ಕಪ್ಪು ಚಿರತೆಗೆ ಸುಮಾರು 5 ವರ್ಷ ಅಂದಾಜಿಸಲಾಗಿದೆ. ಪಿಲಿಕುಳ ನಿಸರ್ಗಧಾಮದಲ್ಲಿಯೂ ಕಪ್ಪುಚಿರತೆ ಇಲ್ಲದ ಕಾರಣ ಇದನ್ನು ಅಲ್ಲಿಗೆ ನೀಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಸ್ಥಳೀಯರ ಸಹಕಾರ ದಲ್ಲಿ ಕಪ್ಪು ಚಿರತೆಯನ್ನು ರಕ್ಷಿಸ ಲಾಗಿದೆ. ಈ ಪ್ರದೇಶ ದಲ್ಲಿ ಬಲು ಅಪರೂಪ ದ್ದಾಗಿರುವ ಕಪ್ಪುಚಿರತೆ ಪಶುವೈದ್ಯರಿಂದ ತಪಾಸಣೆ ನಡೆಸಿ ಬಳಿಕ ಅವರ ಸಲಹೆ ಯಂತೆ ಮುಂದಿನ ಕ್ರಮ ಕೈಗೊಳ್ಳ ಲಾಗುವುದು.
– ರಾಜೇಶ್‌ ಬಳೆಗಾರ್‌, ವಲಯ ಅರಣ್ಯಾಧಿಕಾರಿ

ಪರ್ಕಳದಲ್ಲಿ ಚಿರತೆ ಓಡಾಟ
ಮಣಿಪಾಲ: ಸರಳೇಬೆಟ್ಟು, ಪರ್ಕಳ, ಸಣ್ಣಕ್ಕಿಬೆಟ್ಟು, ಕೆಳ ಪರ್ಕಳ ಪರಿಸರದಲ್ಲಿ ಚಿರತೆ ಓಡಾಟ ಗಮನಕ್ಕೆ ಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಸರಳೇಬೆಟ್ಟು ಮನೆಯೊಂದರ ಬಳಿ ಆಗಮಿಸಿದ ಚಿರತೆ ಕೋಳಿ ಗೂಡಿನಲ್ಲಿದ್ದ ಎರಡು ಕೋಳಿಯನ್ನು ತಿಂದಿದೆ. ಈ ಹಿಂದೆ ಸರಳೇಬೆಟ್ಟು ಕೋಡಿ ಪರಿಸರದಲ್ಲಿ ಚಿರತೆ ಸೆರೆ ಹಿಡಿಯಲು ಬೋನು ಇರಿಸಿದ್ದರೂ ಈ ಕ್ರಮ ಯಶಸ್ವಿಯಾಗಿಲ್ಲ. ಸುತ್ತಮುತ್ತಲಿನ ಪರಿಸರದಲ್ಲಿ ಎರಡು ಮೂರು ಸ್ಥಳದಲ್ಲಿ ಬೋನು ಇರಿಸಿ ಚಿರತೆ ಸೆರೆ ಹಿಡಿಯಲು ಸ್ಥಳೀಯರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.

ಟಾಪ್ ನ್ಯೂಸ್

Test Cricket : ಮೆಂಡಿಸ್‌ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ

Test Cricket : ಮೆಂಡಿಸ್‌ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ

Nirashritha

Udupi: ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಜಿಲ್ಲಾಡಳಿತದಲ್ಲಿ ಭಿಕ್ಷೆ ಬೇಡಬೇಕಾದ ಸ್ಥಿತಿ

1-horoscope

Daily Horoscope: ಮನೋಬಲವನ್ನು ಹೆಚ್ಚಿಸಿ ಕೊಂಡಷ್ಟೂ ಹೆಚ್ಚು ಅನುಕೂಲ

Monkey-Pox

Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Monkey-Pox

Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

Kadri-park

Mangaluru: ಕದ್ರಿ ಪಾರ್ಕ್‌ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ

Puspa-Amar

Guarantee: ಅನುಷ್ಠಾನಕ್ಕೆ ಗ್ರಾಮ ಪಂಚಾಯಿತಿಯಲ್ಲೂ ನೋಡಲ್‌ ಅಧಿಕಾರಿ: ಪುಷ್ಪಾ ಅಮರನಾಥ್‌

MU-Univerasity

Virtual Meeting: ಮಂಗಳೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿ ಸಭೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Test Cricket : ಮೆಂಡಿಸ್‌ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ

Test Cricket : ಮೆಂಡಿಸ್‌ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ

Nirashritha

Udupi: ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಜಿಲ್ಲಾಡಳಿತದಲ್ಲಿ ಭಿಕ್ಷೆ ಬೇಡಬೇಕಾದ ಸ್ಥಿತಿ

1-horoscope

Daily Horoscope: ಮನೋಬಲವನ್ನು ಹೆಚ್ಚಿಸಿ ಕೊಂಡಷ್ಟೂ ಹೆಚ್ಚು ಅನುಕೂಲ

Monkey-Pox

Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.