Sumalatha ಸುದ್ದಿಗೆ ಹೋಗಿಲ್ಲ;ಮುಂದೆಯೂ ಹೋಗಲಾರೆ: ಡಿಕೆಶಿ
ಕುಂಬಳಕಾಯಿ ಕಳ್ಳ ಅಂದರೆ ಅವರೇಕೆ ಹೆಗಲು ಮುಟ್ಟಿಕೊಂಡು ನೋಡಬೇಕು?
Team Udayavani, Apr 1, 2024, 11:55 PM IST
ಬೆಂಗಳೂರು: ಕುಂಬಳಕಾಯಿ ಕಳ್ಳ ಅಂದರೆ ಸಂಸದೆ ಸುಮಲತಾ ಯಾಕೆ ಹೆಗಲು ಮುಟ್ಟಿಕೊಂಡು ನೋಡಬೇಕು?
-ಅಂಬರೀಷ್ ಕಾಂಗ್ರೆಸ್ಗೆ ಏನು ಅನ್ಯಾಯ ಮಾಡಿದರು ಎಂದು ಕೇಳಿದ ಸುಮಲತಾಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೇಳಿದ ಮರುಪ್ರಶ್ನೆ ಇದು.
ನಾನು ಸುಮಲತಾ ಸುದ್ದಿಗೆ ಹೋಗಿಲ್ಲ; ಮುಂದೆ ಹೋಗುವುದೂ ಇಲ್ಲ. ಅವರ ಸುದ್ದಿ ನನಗೆ ಅಗತ್ಯ ಇಲ್ಲ. ನಾನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಉದ್ದೇಶಿಸಿ “ವಿಷ’ದ ಹೇಳಿಕೆ ನೀಡಿದ್ದೇನೆ. ಅದಕ್ಕೆ ಸುಮಲತಾ ಯಾಕೆ ಪ್ರತಿಕ್ರಿಯಿಸಬೇಕು ಎಂದು ಖಾರವಾಗಿ ಕೇಳಿದರು.
ಸದಾಶಿವ ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಷ್ ಅವರಿಗೆ ಕಾಂಗ್ರೆಸ್ ಏನು ಮಾಡಿದೆ ಅನ್ನುವುದು ಇಡೀ ದೇಶಕ್ಕೆ ಗೊತ್ತಿದೆ. ಅವರು ಕೊನೆಯುಸಿರು ಬಿಡುವ ವೇಳೆಯಲ್ಲಿ ಏನು ಹೇಳಿದರು ಎಂಬುದೂ ಗೊತ್ತಿದೆ. ನಾವು ಈಗ ಆ ವಿಚಾರಗಳನ್ನು ಮಾತನಾಡುವುದಿಲ್ಲ ಎಂದರು.
ದೇಣಿಗೆ ಸಂಗ್ರಹಕ್ಕೆ ರಾಹುಲ್ ಗಾಂಧಿ ಕರೆ ನೀಡಿರುವ ಬಗ್ಗೆ ಕೇಳಿದಾಗ, ಚುನಾವಣೆ ನಡೆಸಬೇಕು. ನಿಮಗೆ (ಮಾಧ್ಯಮಗಳಿಗೆ) ಜಾಹೀರಾತು ನೀಡಬೇಕು. ದೇಣಿಗೆ ಸಂಗ್ರಹ ಮಾಡಲೇಬೇಕು ವಿಧಿ ಇಲ್ಲವಲ್ಲ ಎಂದು ಹೇಳಿದರು. ನಿಮಗೂ ಐಟಿ ನೋಟಿಸ್ ಬಂದಿದೆ ಎಂದಾಗ, ಇದಕ್ಕೆ ಅನಂತರ ಉತ್ತರಿಸುತ್ತೇನೆ ಎಂದಷ್ಟೇ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Channapatna By-Election: ಯೋಗೇಶ್ವರ್ ಎನ್ಡಿಎ ಅಭ್ಯರ್ಥಿ?
Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…
Gujarat: ನಕಲಿ ಪೊಲೀಸ್ ಆಯ್ತು, ಅರೆಸ್ಟ್ ಆಯ್ತು.. ಈಗ ನಕಲಿ ಕೋರ್ಟ್!
Hockey: ಜರ್ಮನಿ ವಿರುದ್ಧ “ಪ್ಯಾರಿಸ್ ಪ್ರತಿಕಾರ’ಕ್ಕೆ ಸಿದ್ಧತೆ
IT: ಈ ವರ್ಷದ ಮೊದಲಾರ್ಧದಲ್ಲಿ ಅಗ್ರ 5 ಐಟಿ ಸಂಸ್ಥೆಗಳಲ್ಲಿ 13 ಸಾವಿರ ನೇಮಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.