ಪುತ್ತೂರು ಜಲಸಿರಿ ಅನುಷ್ಠಾನ; ಮನೆ, ಮನೆಗೆ ಗಂಗೆ ಹರಿಯಲು ಹತ್ತಾರು ಸವಾಲು


Team Udayavani, Apr 2, 2024, 2:58 PM IST

ಪುತ್ತೂರು ಜಲಸಿರಿ ಅನುಷ್ಠಾನ; ಮನೆ, ಮನೆಗೆ ಗಂಗೆ ಹರಿಯಲು ಹತ್ತಾರು ಸವಾಲು

ಪುತ್ತೂರು: ನಗರಕ್ಕೆ ಶಾಶ್ವತ ‌ಕುಡಿಯುವ ನೀರಿನ ಪೂರೈಕೆಗೆ ಆರು ವರ್ಷಗಳ ಹಿಂದೆ ಜಾರಿಯಾದ ಜಲಸಿರಿ ಯೋಜನೆಯ ಅನುಷ್ಠಾನದ ಹಂತದ ಗಡುವು ಮಾ.31ಕ್ಕೆ ಮುಕ್ತಾಯ ಗೊಂಡಿದ್ದರೂ ಮನೆ-ಮನೆಗೆ ಗಂಗೆ ಹರಿಯಲು ಇರುವ ಹತ್ತಾರು ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ!

ವಲಯವಾರು ವ್ಯಾಪ್ತಿಯಲ್ಲಿ ನೀರು ಪೂರೈಕೆಯ ಪ್ರಾಯೋಗಿಕ ಕಾರ್ಯ ನಡೆಸಲಾಗುತ್ತಿದೆ ಎಂದು ಜಲಸಿರಿ ಅಧಿಕಾರಿಗಳು ಹೇಳುತ್ತಿದ್ದು ಈ ವೇಳೆ ಯಲ್ಲಿ ಹಲವು ಸಮಸ್ಯೆಗಳು ಕಂಡು ಬರುತ್ತಿದರಿಂದ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಕೆಲ ಸಮಯ ತಗಲಬ ಹುದು ಎನ್ನಲಾಗುತ್ತಿದೆ.

113 ಕೋ.ರೂ.ವೆಚ್ಚ
ಎಡಿಬಿ ಯೋಜನೆಯಡಿ ಜಾರಿಗೆ ತರಲಾದ ಜಲಸಿರಿಯನ್ನು ಕುಡ್ಸೆಂಪ್‌ ಕಾರ್ಯಕ್ರಮದಡಿ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಣಕಾಸು ನಿಗಮ (ಕೆಯುಐಡಿಎಫ್‌ಸಿ) ಅನುಷ್ಠಾನ ಗೊಳಿಸುತ್ತಿದೆ. ಇದರ ಒಟ್ಟು ವೆಚ್ಚ 113 ಕೋ.ರೂ. ಪ್ರಸ್ತುತ ಕಳೆದ ಹದಿನಾರು ವರ್ಷದಿಂದ ಉಪ್ಪಿನಂಗಡಿಯ ನೆಕ್ಕಿಲಾಡಿಯಲ್ಲಿ ಕುಮಾರಧಾರಾ ನದಿ ಯಿಂದ ನೀರೆತ್ತಿ ಶುದ್ಧಕರಿಸಿ ನಗರಕ್ಕೆ ಪೂರೈಸಲಾಗುತ್ತಿದ್ದು ಇಲ್ಲಿನ ವ್ಯವಸ್ಥೆಯನ್ನು ಜಲಸಿರಿ ಮೂಲಕ ಮೇಲ್ದರ್ಜೆಗೇರಿಸಿ ನೀರು ಪೂರೈಸುವ ಯೋಜನೆ ರೂಪಿಸ ಲಾಗಿದೆ. ಯುರೋಪ್‌ ಮೂಲದ ಸುಯೇಝ್ ಇಂಡಿಯಾ ಲಿಮಿಟೆಡ್‌ ಸಂಸ್ಥೆ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದೆ.

8.5 ಎಂಎಲ್‌ಡಿ ಸಂಸ್ಕರಣ ಘಟಕ
ನೆಕ್ಕಿಲಾಡಿಯಲ್ಲಿ ಈಗಿರುವ 6.8 ಎಂಎಲ್‌ಡಿ ಸಂಸ್ಕರಣ ಘಟಕ ದುರಸ್ತಿ ಮಾಡಿ ಹೊಸದಾಗಿ ಸ್ಥಾಪನೆ ಮಾಡುವ ಜತೆಗೆ ಹೊಸದಾಗಿ 8.5 ಎಂಎಲ್‌ಡಿ ಸಂಸ್ಕರಣ ಘಟಕ ನಿರ್ಮಿಸಲಾಗಿದೆ. ನೆಕ್ಕಿಲಾಡಿಯಿಂದ ಪುತ್ತೂರು- ಉಪ್ಪಿನಂಗಡಿ ರಸ್ತೆ ಬದಿಗಳಲ್ಲಿ ಅಳವಡಿಸಿದ ಪೈಪ್‌ಲೈನ್‌ ಮೂಲಕ ಪುತ್ತೂರು ನಗರಕ್ಕೆ 2 ಸ್ಥಾವರಗಳಿಂದ ಒಟ್ಟು 15 ಎಂಎಲ್‌ಡಿ ನೀರು ಹರಿಯುತ್ತಿದೆ. ನೀರಿನ
ಸಂಗ್ರಹಣೆಗಾಗಿ ನಗರದ ಸೀಟಿ ಗುಡ್ಡೆಯಲ್ಲಿ 24 ಲಕ್ಷ ಲೀಟರ್‌ ಸಾಮರ್ಥಯದ ಓವರ್‌ ಹೆಡ್‌ ಟ್ಯಾಂಕ್‌, ಸಿ.ಟಿ.ಒ. ಗುಡ್ಡೆ, ಕೆಮ್ಮಾಯಿ, ಪಡೀಲ್‌, ಬಲಾ°ಡ್‌ ಸೇರಿದಂತೆ ನಗರಸಭಾ ವ್ಯಾಪ್ತಿಯಲ್ಲಿ ಒಟ್ಟು 11 ಮೆಗಾ ಓವರ್‌ ಹೆಡ್‌ ಟ್ಯಾಂಕ್‌ಗಳು
ನಿರ್ಮಾಣಗೊಂಡಿದ್ದು ನೀರು ಪೂರೈಕೆಯ ವ್ಯವಸ್ಥೆ ಪೂರ್ಣಗೊಂಡಿದೆ ಎನ್ನುತ್ತಾರೆ ಜಲಸಿರಿಯ ಅಧಿಕಾರಿಗಳು.

ಸಮಸ್ಯೆಗಳ ಸರಮಾಲೆ 
ಕಾಮಗಾರಿ ಆರಂಭಗೊಂಡು ಅನಂತರ ಕೋವಿಡ್‌ ಕಾರಣದಿಂದ 2 ವರ್ಷ ಸ್ಥಗಿತಗೊಂಡಿತ್ತು. ಪೈಪ್‌ ಅಳವಡಿಕೆ ಸಂದರ್ಭದಲ್ಲಿ ರಸ್ತೆ ಅಗೆತದಿಂದ ಸಂಚಾರ ಕಡಿತ ಸೇರಿದಂತೆ ನಗರಸಭೆಯ ಸಾಮಾನ್ಯ ಸಭೆಗಳಲ್ಲಿ ಕಾಮಗಾರಿ ವಿರುದ್ಧ ಆರೋಪಗಳ ಸುರಿಮಳೆಯೇ ಕೇಳಿ ಬಂದಿತ್ತು. ಅದು ಈಗಲೂ ಮುಂದುವರಿದಿದೆ.

ಎಂಟು ವರ್ಷ ನಿರ್ವಹಣೆ ಕಾಲ
ಜಲಸಿರಿ ಅಧಿಕಾರಿಗಳು ಹೇಳುವ ಪ್ರಕಾರ, ಕಾಮಗಾರಿ ಅನುಷ್ಠಾನದ ಕೊನೆ ಹಂತದಲ್ಲಿ ಇದ್ದೇವೆ. ಹಸ್ತಾಂತರದ ಬಗ್ಗೆ ನಾವಿನ್ನು ಡಿಕ್ಲೇರ್‌  ಮಾಡಿಲ್ಲ. ಮಾ. 31ಕ್ಕೆ ಕೆಯುಐಡಿಎಫ್‌ಸಿ ಅವರ ಟ್ರಾನ್ಸ್‌ಮಿಶನ್‌ ಅವಧಿ ಮುಗಿಯುತ್ತದೆ. ನಾವು ಡಿಕ್ಲೇರ್‌ ಮಾಡಿದ ಅನಂತರದ ಮುಂದಿನ 8 ವರ್ಷಗಳ ಕಾಲ ನಿರ್ವಹಣೆಯ ಹೊಣೆಯನ್ನು ಕೆಯುಐಡಿಎಫ್‌ಸಿ ಹೊತ್ತುಕೊಂಡಿದೆ. ನಿರ್ವಹಣೆಗೆ 41 ಕೋಟಿ ಮೀಸಲಿರಿಸಲಾಗಿದೆ. ಜ. 1ರಿಂದ ನಗರಸಭೆಯು ನೀರಿನ ಪೂರೈಕೆಯ ಕಾರ್ಯ ಸ್ಥಗಿತಗೊಳಿಸಿದ್ದು ಕೆಯುಐಡಿಎಫ್‌
ಸಿಯೇ ಪ್ರಾಯೋಗಿಕವಾಗಿ ನೀರು ಹರಿಸುತ್ತಿದೆ. ನಗರಸಭೆಯಲ್ಲಿ ಪ್ರತ್ಯೇ  ಜಲಸಿರಿ ಕಚೇರಿ, ಕಸ್ಟಮರ್‌ ಕೇರ್‌ ಸೆಂಟರ್‌ ತೆರೆಯಲಾಗಿದೆ. ಬಿಲ್‌ ಸಂಗ್ರಹ ಕೂಡ ನಿಗಮವೇ ಮಾಡುತ್ತಿದೆ. ಇದಕ್ಕಾಗಿ ನಗರಸಭೆಯೊಂದಿಗೆ ಜಂಟಿ ಎಸ್ಕೋ ಖಾತೆ ತೆರೆಯಲಾಗಿದೆ.

ಪವರ್‌ ಸಮಸ್ಯೆ
ಹೊಸ ಎಚ್‌ಡಿಪಿಇ ಪೈಪ್‌ಗ್ಳನ್ನು ಹಳೆಯ ಪೈಪ್‌ಗೆ ಜೋಡಿಸುವ ಸಂದರ್ಭದಲ್ಲಿ ಸಮಸ್ಯೆ ಉಂಟಾಗುತ್ತಿದ್ದು ಹೀಗಾಗಿ ಕೆಲವೆಡೆ ಮನೆಗಳಿಗೆ ನೀರು ಪೂರೈಕೆ ಆಗುತ್ತಿಲ್ಲ. ದೊಡ್ಡ ಪೈಪ್‌ನಲ್ಲಿ ಬಂದ ನೀರು ಹಳೆಯ ಸಣ್ಣ ಪೈಪ್‌ ಹರಿಯುವಾಗ ಬ್ಲಾಕ್‌ ಆಗುತ್ತಿದೆ. ವಾರಕ್ಕೊಮ್ಮೆ ಪವರ್‌ ಲೋಡ್‌ ಶೆಡ್ಡಿಂಗ್‌ ಇದ್ದು ಪೈಪ್‌ನಲ್ಲಿ ನೀರು ಖಾಲಿಯಾಗಿ ಗಾಳಿ ತುಂಬಿ ಸಮಸ್ಯೆ ಉಂಟಾಗುತ್ತಿದೆ ಎನ್ನುತ್ತಾರೆ ಜಲಸಿರಿ ಅಧಿಕಾರಿಗಳು. ನಗರದಲ್ಲಿ 24/7 ನೀರು ಪೂರೈಕೆಯ ಜಲಸಿರಿ ಯೋಜನೆ ಸಮರ್ಪಕವಾಗಿ ಅನುಷ್ಠಾನ ಆಗಿಲ್ಲ. ಬಿರು ಬೇಸಗೆಯಲ್ಲಿಯೇ ನೀರಿನ ಸಮಸ್ಯೆ ಉಂಟಾಗಿದೆ. ಹೊಸ ಪೈಪುಗಳಿಗೆ ಸಂಪರ್ಕ ಕೊಡುವ ನಿಟ್ಟಿನಲ್ಲಿ ರಸ್ತೆಯನ್ನು ಅಗೆದು ಹಳೆ ಪೈಪುಗಳಿಗೆ ಹಾನಿ ಉಂಟಾಗಿ ನೀರು ಪೂರೈಕೆ ಕಡಿತಗೊಂಡಿದೆ. ಈ ಬಗ್ಗೆ ದೂರು ಸಲ್ಲಿಸಿದರೂ ಸ್ಪಂದನೆ ಸಿಕ್ಕಿಲ್ಲ.
-ನೂರುದ್ದೀನ್‌ ಸಾಲ್ಮರ, ನ್ಯಾಯವಾದಿ

ಜಲಸಿರಿ ಯೋಜನೆ ಪ್ರಾಯೋಗಿಕ ಹಂತದಲ್ಲಿದೆ. ಸಣ್ಣ-ಪುಟ್ಟ ಸಮಸ್ಯೆ ಇರುವುದು ನಿಜ. ಅದನ್ನು ಹಂತ ಹಂತವಾಗಿ ನಿವಾರಿಸಿಕೊಳ್ಳಲಾಗುವುದು. ಈಗಾಗಲೇ 10 ಸಾವಿರ ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದ್ದು800 ಅಧಿಕ ಮನೆ, ವಾಣಿಜ್ಯ ಕಟ್ಟಡಗಳಿಗೆ ಬಾಕಿ ಇದೆ. ಇಲ್ಲಿಗೂ ಸಂಪರ್ಕ ಕಲ್ಪಿಸುವ ಕಾರ್ಯ ನಡೆಯುತ್ತಿದೆ.
ಕುಮಾರಸ್ವಾಮಿ,
ಕಾರ್ಯನಿರ್ವಾಹಕ ಎಂಜಿನಿಯರ್‌ ಕೆಯುಐಡಿಎಫ್‌ಸಿ

*ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-bantwala-1

Bantwala: ನವ ದಂಪತಿ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತ; ಪತ್ನಿ ಮೃತ್ಯು, ಪತಿ ಗಂಭೀರ

Belthangady ಅಂಗಮಾರಿ ರೋಗ ಲಕ್ಷಣ: ಪರಿಶೀಲನೆ

Belthangady ಅಂಗಮಾರಿ ರೋಗ ಲಕ್ಷಣ: ಪರಿಶೀಲನೆ

Untitled-1

Uppinangady ವಿವಾಹಿತೆ ನಾಪತ್ತೆ: ದೂರು ದಾಖಲು

Suresh ಬಲ್ನಾಡು ಅವರಿಗೆ ಸಾಂಬಾರ ಕೃಷಿಕ ಪ್ರಶಸ್ತಿ ಪ್ರದಾನ

Suresh ಬಲ್ನಾಡು ಅವರಿಗೆ ಸಾಂಬಾರ ಕೃಷಿಕ ಪ್ರಶಸ್ತಿ ಪ್ರದಾನ

Engineer Bantwal ಜಯಂತ್‌ ಬಾಳಿಗ ಅವರಿಗೆ ಪ್ರತಿಷ್ಠಿತ ಮಿಲೇನಿಯಂ ಟೆಕ್ನಾಲಿಜಿ ಪ್ರಶಸ್ತಿ

Engineer Bantwal ಜಯಂತ್‌ ಬಾಳಿಗ ಅವರಿಗೆ ಪ್ರತಿಷ್ಠಿತ ಮಿಲೇನಿಯಂ ಟೆಕ್ನಾಲಿಜಿ ಪ್ರಶಸ್ತಿ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.