ಕೋಣ್ಕಿ: ಹೂಳು ತುಂಬಿ ಕೃತಕ ನೆರೆ-ಸ್ವಂತ ಖರ್ಚಿನಲ್ಲಿ ಕಾಲುವೆಯ ಹೂಳೆತ್ತಿದ ರೈತರು


Team Udayavani, Apr 2, 2024, 4:15 PM IST

ಕೋಣ್ಕಿ: ಹೂಳು ತುಂಬಿ ಕೃತಕ ನೆರೆ-ಸ್ವಂತ ಖರ್ಚಿನಲ್ಲಿ ಕಾಲುವೆಯ ಹೂಳೆತ್ತಿದ ರೈತರು

ಮುಳ್ಳಿಕಟ್ಟೆ: ಜನಪ್ರತಿನಿಧಿಗಳು, ಅಧಿಕಾರಿಗಳು ಇಂದು ಮಾಡಿಕೊಡುತ್ತಾರೆ, ನಾಳೆ ಮಾಡಿಕೊಡುತ್ತಾರೆ ಎಂದು ಕಳೆದ ಐದಾರು ವರ್ಷ ಗಳಿಂದ ಕಾಲುವೆಯ ಹೂಳೆತ್ತಲು ಕಾದು ಕಾದು ಹೈರಾಣಾದ ರೈತರು, ಕೊನೆಗೆ ತಾವೇ ಹಣ ಹೊಂದಿಸಿ, ಸ್ವಂತ ಖರ್ಚಿನಲ್ಲಿ ಆ ಕಾಲುವೆಯ ಹೂಳೆತ್ತುವ ಕಾರ್ಯಕ್ಕೆ ಮುಂದಾಗಿದ್ದಾರೆ.

ನಾಡ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೋಣ್ಕಿ – ಕುಡ್ಗಿತ್ಲುವಿನಲ್ಲಿ ರೈತರೇ ಹಣ ಒಟ್ಟು ಮಾಡಿ, ಕೆರೆ ಬದಿಯ ಹೂಳೆತ್ತಿ, ಮಳೆಗಾಲದಲ್ಲಿ ಕೃತಕ ನೆರೆಯಾಗುವುದನ್ನು ತಪ್ಪಿಸುವ ಕಾರ್ಯ ಮಾಡಿದ್ದಾರೆ.

ಕೃತಕ ನೆರೆಯಿಂದ ಗದ್ದೆ ಜಲಾವೃತ ಕೋಣ್ಕಿ – ಕುಡ್ಗಿತ್ಲುವಿನಲ್ಲಿ ಕೆರೆ ಬದಿಯ ಕಾಲುವೆ (ತೋಡು) ಕಸ, ಗಿಡಗಂಟಿಗಳಿಂದ
ತುಂಬಿಕೊಂಡಿದ್ದಲ್ಲದೆ, ಹೂಳು ತುಂಬಿಕೊಂಡಿತ್ತು. ಇದರಿಂದ ಈ ಕಾಲುವೆಯಲ್ಲಿ ಮಳೆ ನೀರು ಸರಾಗ ಹರಿದುಹೋಗಲು ಸಮಸ್ಯೆಯಾಗುತ್ತಿತ್ತು. ಈ ಭಾಗದ ಪೂರ್ತಿ ಮಳೆ ನೀರು ಹರಿದು ಸೌಪರ್ಣಿಕಾ ನದಿಗೆ ಸೇರಲು ಇರುವುದು ಇದೊಂದೇ ತೋಡು.
ಇದರಿಂದ ಪ್ರತೀ ವರ್ಷ ಇಲ್ಲಿ ಕೃತಕ ನೆರೆ ಉಂಟಾಗಿ, ನೂರಾರು ಎಕ್ರೆ ಕೃಷಿ ಭೂವಿ ಜಲಾವೃತಗೊಂಡು, ಬೆಳೆ ನಾಶವಾಗುತ್ತಿತ್ತು. ಮುಂಗಾರಿನಲ್ಲಿ ಬೆಳೆದ ಬೆಳೆ ಪೂರ್ತಿ ಮಳೆಗೆ ಆಹುತಿಯಾಗುತ್ತಿತ್ತು.

ಕೋಣ್ಕಿ ಹಾಗೂ ಕುಡ್ಗಿತ್ಲು ಎರಡೂ ಪ್ರದೇಶಗಳು ಸೇರಿ ನೂರಾರು ಎಕ್ರೆ ಗದ್ದೆಗಳಿದ್ದು, ಸುಮಾರು 100ಕ್ಕೂ ಮಿಕ್ಕಿ ರೈತರು ಮುಂಗಾರಿನಲ್ಲಿ ಭತ್ತದ ಬೆಳೆಯನ್ನು ನೆಚ್ಚಿಕೊಂಡಿದ್ದಾರೆ. ಆದರೆ ಕಳೆದ ಕೆಲವು ವರ್ಷಗಳಿಂದ ಕಾಲುವೆಯಲ್ಲಿ ಹೂಳು
ತುಂಬಿ, ರೈತರು ಲಾಭಕ್ಕಿಂತ ನಷ್ಟವನ್ನೇ ಅನುಭವಿಸುವಂತಾಗಿತ್ತು. ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು, ಪಂಚಾಯತ್‌ಗೆ ಅನೇಕ ಬಾರಿ ಈ ಕಾಲುವೆಯ ಹೂಳೆತ್ತಿ, ಕಸ, ಗಿಡಗಂಟಿ ತೆಗೆಯಲು ಮನವಿ ಕೊಟ್ಟರೂ, ಯಾರೂ ಕೂಡ ಈ ಬಗ್ಗೆ ಸ್ಪಂದಿಸಿಲ್ಲ ಎನ್ನುವುದಾಗಿ ಊರವರು ದೂರಿಕೊಂಡಿದ್ದಾರೆ.

ಕೃಷಿಗೆ ಅನುಕೂಲ
ನಾವು ಅನೇಕ ವರ್ಷಗಳಿಂದ ಈ ಕಾಲುವೆಯ ಹೂಳೆತ್ತಿ, ಸ್ವಚ್ಛ ಮಾಡಲು ಮನವಿ ಮಾಡಿಕೊಂಡಿದ್ದೇವು. ಆದರೆ ಈವರೆಗೆ ಯಾರೂ ಆ ಕೆಲಸ ಮಾಡಿಲ್ಲ. ಅದಕ್ಕೆ ನಾವೇ ರೈತರೆಲ್ಲ ಒಟ್ಟಾಗಿ, ಹಣ ಒಟ್ಟು ಮಾಡಿ, ಜೆಸಿಬಿ ಮೂಲಕ ಕೆರೆಯ ಸ್ವಚ್ಛತ ಕಾರ್ಯವನ್ನು ಕೈಗೊಂಡಿದ್ದೇವೆ. ಇದರಿಂದ ಮುಂಗಾರು ಹಂಗಾಮಿನ ಕೃಷಿ ಕಾರ್ಯಕ್ಕೆ ಅನುಕೂಲವಾಗಲಿದೆ.
ರಾಘವೇಂದ್ರ
ಮೊಗವೀರ ಕೋಣ್ಕಿ, ರೈತರು

*ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16-kumbashi

Ganesh Chaturthi; ಆನೆಗುಡ್ಡೆ: ಸಂಭ್ರಮದ ಶ್ರೀ ವಿನಾಯಕ ಚತುರ್ಥಿ; ಹರಿದು ಬಂದ ಭಕ್ತ ಸಮೂಹ

Fake Document  ಸೃಷ್ಟಿಸಿ ವಾಹನ ನೋಂದಣಿ: ದೂರು ದಾಖಲು

Fake Document ಸೃಷ್ಟಿಸಿ ವಾಹನ ನೋಂದಣಿ: ದೂರು ದಾಖಲು

Kundapura ವಂಚನೆ: ಫೈನಾನ್ಸ್‌ ಸಿಬಂದಿ ವಿರುದ್ಧ ದೂರು

Kundapura ವಂಚನೆ: ಫೈನಾನ್ಸ್‌ ಸಿಬಂದಿ ವಿರುದ್ಧ ದೂರು

kuKundapura ಪ್ರತ್ಯೇಕ ಪ್ರಕರಣ: ಮೂವರು ದಿಢೀರ್‌ ಸಾವು

Kundapura ಪ್ರತ್ಯೇಕ ಪ್ರಕರಣ: ಮೂವರು ದಿಢೀರ್‌ ಸಾವು

Kundapura: ಊರಿಗೆ ಹೆಮ್ಮೆ: ಶಾಸಕ ಗಂಟಿಹೊಳೆ

Kundapura: ಊರಿಗೆ ಹೆಮ್ಮೆ: ಶಾಸಕ ಗಂಟಿಹೊಳೆ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.