![Huccha movie to be re-released with technical update](https://www.udayavani.com/wp-content/uploads/2024/07/huccha-415x229.jpg)
Ullal: ಬರ್ಬರವಾಗಿ ಚೂರಿಯಿಂದ ಇರಿದು ವ್ಯಕ್ತಿಯ ಕೊಲೆಯತ್ನ
ಖ್ಯಾತ ಈಜುಪಟು ಕೃತ್ಯ ಎಸಗಿರುವುದಾಗಿ ಹೇಳಲಾಗಿದೆ... ಪತ್ನಿ ಮತ್ತು ಪುತ್ರಿಯೂ ಹತ್ಯೆಯಾಗಿದ್ದರು..!!
Team Udayavani, Apr 6, 2024, 8:15 PM IST
![crime (2)](https://www.udayavani.com/wp-content/uploads/2024/04/crime-2-1-620x420.jpg)
ಮಂಗಳೂರು: ಪಂಜಿಮೊಗರು ಮೂಲದ ನಿವಾಸಿ ಪ್ರಸ್ತುತ ಉಳ್ಳಾಲ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಹಮೀದ್ ಎಂಬವರಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಉಳ್ಳಾಲ ನಗರಸಭೆ ಸಮೀಪದ ಬಾಡಿಗೆ ಮನೆಯಲ್ಲಿ ಶನಿವಾರ ನಡೆದಿದೆ.
ಗಂಭೀರ ಸ್ಥಿತಿಯಲ್ಲಿದ್ದ ಹಮೀದ್ ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರು ಬಂದರು ಭಾಗದ ಖ್ಯಾತ ಈಜುಪಟು ಜಾವೇದ್ ಎಂಬಾತ ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ.
ಉಳ್ಳಾಲ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಯಾವ ವಿಚಾರದಲ್ಲಿ ಕೊಲೆಗೆ ಯತ್ನಿಸಲಾಗಿದೆ ಎಂದು ತನಿಖೆ ನಡೆಸುತ್ತಿದ್ದು, ಮೇಲ್ನೋಟಕ್ಕೆ ಹಣದ ವಿಚಾರದಲ್ಲಿ ಕೊಲೆ ಯತ್ನ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಈ ಹಿಂದೆ ಹಮೀದ್ ಅವರ ಪತ್ನಿ ಮತ್ತು ಮಗಳು ಪಂಜಿಮೊಗರುವಿನಲ್ಲಿ ಕೊಲೆಯಾಗಿದ್ದರು. 2011ರ ಜೂ.28ರಂದು ರಜಿಯಾ ಮತ್ತು ಆಕೆಯ ಪುಟ್ಟ ಮಗು ಫಾತಿಮಾ ಜುವಾ ಅವರನ್ನು ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣ ಕರಾವಳಿಯಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು.
ಡಬಲ್ ಮರ್ಡರ್ ಆರೋಪಿಗಳು 13 ವರ್ಷ ಕಳೆದರೂ ಪತ್ತೆಯಾಗಿಲ್ಲ. ಸ್ಥಳೀಯ ಪೊಲೀಸರ ಜತೆ ಸಿಐಡಿ ತನಿಖೆ ನಡೆದರೂ ಹಂತಕರು ಪತ್ತೆಯಾಗಿಲ್ಲ. ಮೃತ ರಝಿಯಾಳ ಪತಿ ಹಮೀದ್ ಪಿ.ಎಂ. ವಿರುದ್ದ ಆರೋಪ ಕೇಳಿ ಬಂದಿತ್ತು. ಹಮೀದ್ ಮನೆಯಿಂದ ಹೊರ ಹೋದ 30 ನಿಮಿಷದ ಬಳಿಕ ಹತ್ಯೆ, ನಡೆದಿತ್ತು.ಆದರೆ ಸ್ಥಳೀಯ ಪೊಲೀಸರು ಹಾಗೂ ಸಿಐಡಿ ತನಿಖೆ ವೇಳೆ ಹಮೀದ್ ಕೈವಾಡ ಇಲ್ಲ ಎಂದು ಸಾಬೀತಾಗಿತ್ತು.
ಟಾಪ್ ನ್ಯೂಸ್
![Huccha movie to be re-released with technical update](https://www.udayavani.com/wp-content/uploads/2024/07/huccha-415x229.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.