IPL; ಗುಜರಾತ್ ವಿರುದ್ಧ ಮೊದಲ ಜಯದ ನಿರೀಕ್ಷೆಯಲ್ಲಿ ಲಕ್ನೋ
Team Udayavani, Apr 7, 2024, 6:45 AM IST
ಲಕ್ನೋ: ಎರಡು ವರ್ಷಗಳ ಹಿಂದೆ ಒಟ್ಟೊಟ್ಟಿಗೆ ಐಪಿಎಲ್ ಪ್ರವೇಶಿ ಸಿದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ರವಿವಾರ ರಾತ್ರಿ ತಮ್ಮ 5ನೇ ಪಂದ್ಯದಲ್ಲಿ ಮುಖಾ ಮುಖಿಯಾಗಲಿವೆ. ವಿಶೇಷವೆಂದರೆ, ಈವರೆಗೆ ಆಡಿದ ನಾಲ್ಕೂ ಪಂದ್ಯಗಳಲ್ಲಿ ಲಕ್ನೋ ತಂಡ ಗುಜರಾತ್ಗೆ ಶರಣಾಗಿದೆ. ಈ ಸಲವಾದರೂ ಗೆಲುವಿನ ಲಕ್ ಒಲಿ ದೀತೆಂಬ ವಿಶ್ವಾಸ ಲಕ್ನೋ ತಂಡದ್ದು.
ಈ ನಂಬಿಕೆಗೆ ಮುಖ್ಯ ಕಾರಣ ಮಾಯಾಂಕ್ ಯಾದವ್ ಎಂಬ ನೂತನ ವೇಗದ ಅಸ್ತ್ರ. ತನ್ನ ಶರವೇಗದ ಎಸೆತಗಳ ಮೂಲಕ ಪಂಜಾಬ್ ವಿರುದ್ಧ 27ಕ್ಕೆ 3 ವಿಕೆಟ್, ಬಳಿಕ ಬೆಂಗಳೂರಿನಲ್ಲಿ ಆರ್ಸಿಬಿ ವಿರುದ್ಧ 14ಕ್ಕೆ 3 ವಿಕೆಟ್ ಉರುಳಿಸಿರುವ ಪರಾಕ್ರಮ ಮಾಯಾಂಕ್ ಯಾದವ್ ಅವರದು. ಇದೇ ಲಯದಲ್ಲಿ ಸಾಗಿದರೆ ಮಾಯಾಂಕ್ ಯಾದವ್ ಗುಜರಾತ್ಗೂ ಸಿಂಹಸ್ವಪ್ನರಾಗುವ ಸಾಧ್ಯತೆ ಇದೆ.
ಈ ಸೀಸನ್ನಲ್ಲಿ ಎರಡೂ ತಂಡಗಳು ತಲಾ 2 ಗೆಲುವು ಕಂಡಿದೆ. ಆದರೆ ಲಕ್ನೋ ಆಡಿದ್ದು 3 ಪಂದ್ಯ ಮಾತ್ರ. ಗುಜರಾತ್ 4 ಪಂದ್ಯಗಳನ್ನಾಡಿದೆ. ಇತ್ತಂಡಗಳು ಲಕ್ನೋದಲ್ಲಿ ಎದುರಾಗುತ್ತಿರುವ 2ನೇ ನಿದರ್ಶನ ಇದಾಗಿದೆ. ಕಳೆದ ವರ್ಷ 7ಕ್ಕೆ 128 ರನ್ ಗಳಿಸಿ ಬ್ಯಾಟಿಂಗ್ ಬರಗಾಲ ಅನುಭವಿಸಿದ್ದ ಲಕ್ನೋ 7 ವಿಕೆಟ್ಗಳ ಸೋಲನ್ನು ಹೊತ್ತುಕೊಂಡಿತ್ತು.
ಲಕ್ನೋದ ಬ್ಯಾಟಿಂಗ್ ಸರದಿ ಹೆಚ್ಚು ಬಲಾಡ್ಯ. ಡಿ ಕಾಕ್, ರಾಹುಲ್, ಪೂರಣ್, ಕೃಣಾಲ್ ಪಾಂಡ್ಯ ಉತ್ತಮ ಲಯದಲ್ಲಿದ್ದಾರೆ. ಆದರೆ ಪಡಿಕ್ಕಲ್, ಸ್ಟೋಯಿನಿಸ್ ಪ್ರಯತ್ನ ಸಾಲದು. ಬೌಲಿಂಗ್ ಘಾತಕವೇನಲ್ಲ. ನವೀನ್ ಉಲ್ ಹಕ್, ಯಶ್ ಠಾಕೂರ್, ಮೊಹ್ಸಿನ್ ಖಾನ್, ಸ್ಟೋಯಿನಿಸ್, ರವಿ ಬಿಷ್ಣೋಯಿ ತವರಿನ ಅಂಗಳದಲ್ಲಿ ಎಷ್ಟರ ಮಟ್ಟಿಗೆ ಪರಿಣಾಮ ಬೀರಬಹುದು ಎಂದುದೊಂದು ಪ್ರಶ್ನೆ.
ಗಿಲ್ ಮೇಲೆ ಅವಲಂಬನೆ
ಗುಜರಾತ್ ಬ್ಯಾಟಿಂಗ್ ಸರದಿ ಗಿಲ್ ಅವರನ್ನು ಹೆಚ್ಚು ಅವಲಂಭಿಸಿದೆ. ಪಂಜಾಬ್ ವಿರುದ್ಧ 48 ಎಸೆತಗಳಿಂದ ಅಜೇಯ 89 ರನ್ ಬಾರಿಸಿದ ಸಾಹಸ ಇವರದು. ಆದರೆ ಬೃಹತ್ ಮೊತ್ತ ದಾಖಲಿಸಿಯೂ ಇದನ್ನು ಉಳಿಸಿಕೊಳ್ಳಲಾಗಲಿಲ್ಲ. ಕಾರಣ, ಬೌಲಿಂಗ್ ವೈಫಲ್ಯ. ಮೋಹಿತ್ ಶರ್ಮ, ಒಮರ್ಜಾಯ್, ಉಮೇಶ್ ಯಾದವ್, ರಶೀದ್ ಖಾನ್ ಮತ್ತು ನೂರ್ ಅಹ್ಮದ್ ಅವರ ಎಸೆತಗಳು ಹರಿತಗೊಂಡರಷ್ಟೇ ಗುಜರಾತ್ ಗೆಲುವಿನ ಹಳಿ ಏರೀತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Asian Champions Trophy: ಕೊರಿಯಾ ವಿರುದ್ದ ಗೆದ್ದು ಫೈನಲ್ ಪ್ರವೇಶಿಸಿದ ಭಾರತ ಹಾಕಿ ತಂಡ
International ಕರಾಟೆ ಚಾಂಪಿಯನ್ ಶಿಪ್; ಸುಜಲ್ ಜೆ ಶೆಟ್ಟಿಗೆ ಬೆಳ್ಳಿ,ಕಂಚು
ENGvsAUS: ಏಕದಿನ ಸರಣಿಗೂ ಬಟ್ಲರ್ ಅಲಭ್ಯ; ಎಸ್ಆರ್ಎಚ್ ಆಟಗಾರನಿಗೆ ನಾಯಕತ್ವ
B–G Trophy: ಈತನೇ ಭಾರತದ ಮುಂದಿನ ಸೂಪರ್ ಸ್ಟಾರ್ ಎಂದ ಸ್ಟೀವ್ ಸ್ಮಿತ್, ಸ್ಟಾರ್ಕ್
Asian Champions Trophy ಸೆಮಿಫೈನಲ್ : ಕೊರಿಯಾ ವಿರುದ್ಧ ಭಾರತ ಫೇವರಿಟ್
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.