ಶಿವಮೊಗ್ಗ: “ಸಂಸ್ಕೃತಿ ರಕ್ಷಣೆಯಲ್ಲಿ ಕಲಾವಿದರ ಸಾಧನೆ ಅಪಾರ’
ಅಯೋಧ್ಯೆಯಲ್ಲಿ ಕಲ್ಲಿನ ರಥ ಕೆತ್ತನೆ ಮಾಡಿರುವುದು ಹೆಮ್ಮೆಯ ಸಂಗತಿ
Team Udayavani, Apr 10, 2024, 3:42 PM IST
■ ಉದಯವಾಣಿ ಸಮಾಚಾರ
ಶಿವಮೊಗ್ಗ: ಹಿಂದುತ್ವ, ಸಂಸ್ಕಾರ, ಸಂಸ್ಕೃತಿಯನ್ನು ಉಳಿಸುವಲ್ಲಿ ಭಾರತೀಯ ಕಲಾವಿದರ ಸಾಧನೆ ಅವಿರತವಾಗಿದೆ ಎಂದು ಹಿರಿಯ ಯಕ್ಷಗಾನ ಕಲಾವಿದ, ರಾಜ್ಯೋತ್ಸವ ಪುರಸ್ಕೃತ ಎಂ.ಕೆ. ರಮೇಶ್ ಆಚಾರ್ಯ ಬಣ್ಣಿಸಿದರು.
ಕುವೆಂಪು ರಂಗಮಂದಿರದಲ್ಲಿ ಶ್ರೀ ವಿಶ್ವಕರ್ಮ ಯಕ್ಷಾಭಿಮಾನಿ ವೇದಿಕೆಯಿಂದ ಭಾನುವಾರ ಶಿಲ್ಪಿಗಳಾದ ಅರುಣ್ ಯೋಗಿರಾಜ್ ಮತ್ತು ರಾಜ ಗೋಪಾಲ್ ಆಚಾರ್ಯ ಅವರಿಗೆ ಹಮ್ಮಿಕೊಂಡಿದ್ದ ಗೌರವ ಸನ್ಮಾನ ಹಾಗೂ ಭಾವಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಿರಂತರ ಸಾಧನೆಯಿಂದ ವ್ಯಕ್ತಿಗಳಿಗೆ ಸಿದ್ಧಿ ದೊರಯಲಿದೆ. ಸಿದ್ಧಿಯಿಂದ ಶ್ರೇಷ್ಠರಾಗುತ್ತಾರೆ. ಅದಕ್ಕೆ ಶಿಲ್ಪ ಕಲಾವಿದ ಅರುಣ್ ಯೋಗಿರಾಜ್ ಮತ್ತು ರಾಜಗೋಪಾಲ್ ಆಚಾರ್ಯ ಸಾಕ್ಷಿ ಎಂದು ತಿಳಿಸಿದರು.
ವಿದ್ಯೆಗೆ ವಿನಯವೇ ಭೂಷಣವಾಗಿದೆ. ವಿದ್ಯೆ ಜತೆಗೆ ಅಹಂಕಾರ ಬೆರೆತರೆ ಬೆಳವಣಿಗೆ ಅಸಾಧ್ಯ. ಜೀವನದಲ್ಲಿ ಯಾವಾಗಲೂ ಅವಕಾಶಗಳು ಸಿಗುವುದಿಲ್ಲ. ಒಮ್ಮೆ ಸಿಕ್ಕಾಗ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅದು ಸಾಧ್ಯವಾದರೆ ಜೀವನದಲ್ಲಿ ಉತ್ತುಂಗಕ್ಕೆ ಹೋಗಬಹುದು. ಶಿಲ್ಪಶಾಸ್ತ್ರ ಅಧ್ಯಯನ ಮಾಡಿ ಅಯೋಧ್ಯೆಯಲ್ಲಿ ರಾಮನ ವಿಗ್ರಹ ಕೆತ್ತುವ ಮೂಲಕ ಅಂತಹ
ಉತ್ತುಂಗಕ್ಕೆ ಅರುಣ್ ಯೋಗಿರಾಜ್ ಹೋಗಿದ್ದಾರೆ ಎಂದು ಶ್ಲಾಘಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಇಡೀ ವಿಶ್ವಕ್ಕೆ ಭಾರತೀಯ ಕಲೆಯನ್ನು ಶಿಲ್ಪಿ ಅರುಣ್
ಯೋಗಿರಾಜ್ ಪರಿಚಯಿಸಿದ್ದಾರೆ. ಅಯೋಧ್ಯೆ ರಾಮಮಂದಿರ ವಿಚಾರ ದಶಕಗಳ ಕನಸು ಆಗಿದ್ದು, ಅಂತಹ ಇತಿಹಾಸವಿರುವ
ಮಂದಿರದಲ್ಲಿ ಅರುಣ್ ಯೋಗಿರಾಜ್ ಕೆತ್ತನೆಯ ರಾಮನ ವಿಗ್ರಹ ಪ್ರತಿಷ್ಠಾಪನೆ ಆಗಿರುವುದು ಕರ್ನಾಟಕದ ಪಾಲಿಗೆ ಹೆಮ್ಮೆಯ
ವಿಷಯ ಎಂದರು.
ಕೆಲವರ ಹೆಸರು ಇತಿಹಾಸದ ಪುಟದಲ್ಲಿ ಗತಿಸಿ ಹೋಗುತ್ತವೆ. ಆದರೆ ಅರುಣ್ ಹೆಸರು ಮುಂದಿನ ಇತಿಹಾಸದ ಪುಟದಲ್ಲಿ ಚಿರಸ್ಥಾಯಿ ಆಗಿರಲಿದೆ. ತನ್ನ ಶಕ್ತಿ ಸಾಮರ್ಥ್ಯದ ಮೂಲಕ ಇಡೀ ವಿಶ್ವಕ್ಕೆ ಸಾಬೀತುಪಡಿಸಿದ್ದು ವಿಶೇಷ. ಶಿಲ್ಪಿ ರಾಜಗೋಪಾಲ್ ಆಚಾರ್ಯ ಅವರು ಅಯೋಧ್ಯೆಯಲ್ಲಿ ಕಲ್ಲಿನ ರಥ ಕೆತ್ತನೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ಚಂದ್ರಕಾಂತ್, ವಕೀಲ ಮಧುಸೂದನ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, ಪತ್ರಕರ್ತ ಸೂರ್ಯನಾರಾಯಣ್, ಉದ್ಯಮಿಗಳಾದ ನಿವೇದನ್ ನೆಂಪೆ, ಹರ್ಷ ಕಾಮತ್, ಸುರೇಶ್ ಬಾಳೆಗುಂಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್. ಉಮೇಶ್, ಶಶಿ ಎಸ್. ಮಂಗಳಾಗಾರ್
ಇದ್ದರು.
ಮನಸೂರೆಗೊಂಡ ಭಾವಯಾನ ಕಾರ್ಯಕ್ರಮ
ವೇದಿಕೆ ಕಾರ್ಯಕ್ರಮದ ಬಳಿಕ ಡ್ರೆಸ್ಲೈನ್ ಪ್ರಾಯೋಜಕತ್ವದಲ್ಲಿ ಭಾವಯಾನ ಒಂದು ಸವಿಗಾನದ ಸಂಜೆ ಕಾರ್ಯಕ್ರಮ ಪ್ರೇಕ್ಷಕರ ಮನಸೂರೆಗೊಂಡಿತು. ಬೆಂಗಳೂರಿನ ರಾಮಚಂದ್ರ ಹಡಪದ್, ಆರ್.ಕೆ. ಸ್ಪರ್ಶ, ಶರಣೀ ಪಾಟೀಲ್ ಅವರ ಗಾಯನಕ್ಕೆ ಜನರು ಮನಸೋತರು. ರಾಘವೇಂದ್ರ ಕಾಂಚನ್ ಅಚ್ಚುಕಟ್ಟಾಗಿ ನಿರೂಪಣೆ ಮಾಡಿದರು. ದೀಪಕ್ ಜಯಶೀಲನ್, ರಂಜನ್ ಬೇವುರಾ, ಶಿವಲಿಂಗ ರಾಜಾಪುರ್, ಜಲೀಲ್ ಪಾಶಾ, ಮುನ್ನಾ, ಕೃಷ್ಣ ಆನಂದ್ ಅವರು ವಾದ್ಯ ನುಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shivamogga ವಾಯುವಿಹಾರ ಮಾಡುತ್ತಿದ್ದ ಎಂಬಿಬಿಎಸ್ ವಿದ್ಯಾರ್ಥಿ ಕುಸಿದು ಸಾ*ವು !
Sagara: ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವ ಮೆಸ್ಕಾಂ ನೀತಿ ಖಂಡನೆ; ಪ್ರತಿಭಟನೆ
Shimoga: ವಿವಾದಿತ ಫ್ಲೆಕ್ಸ್ ಹಾಗು ಖಡ್ಗ ತೆರವು ಮಾಡಿದ ಪೊಲೀಸರು
Traffic: ಆಗುಂಬೆ ಘಾಟಿಯಲ್ಲಿ ವಾಹನ ಬ್ರೇಕ್ ಫೇಲ್, ಟ್ರಾಫಿಕ್ ನಲ್ಲಿ ಸಿಲುಕಿದ ಆಂಬ್ಯುಲೆನ್ಸ್
B. Y. Vijayendra ಬಗ್ಗೆ ಹಾದಿಯಲ್ಲಿ ಮಾತನಾಡುವುದು ಸಲ್ಲ: ರೇಣುಕಾಚಾರ್ಯ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.