ಸಿಂಧನೂರು: ನಗರಸಭೆ ಖಜಾನೆಗೆ ಝಣ ಝಣ ಕಾಂಚಾಣ!


Team Udayavani, Apr 11, 2024, 5:51 PM IST

ಸಿಂಧನೂರು: ನಗರಸಭೆ ಖಜಾನೆಗೆ ಝಣ ಝಣ ಕಾಂಚಾಣ!

ಉದಯವಾಣಿ ಸಮಾಚಾರ
ಸಿಂಧನೂರು: ಡಂಗುರ ಹಾಕಿಸಿ ಮನೆ ಬಾಗಿಲಿಗೂ ಹೋದಾಗಲೂ ಕೆಲವೊಮ್ಮೆ ನಿರೀಕ್ಷಿತ ಸ್ಪಂದನೆ ದೊರೆಯಲ್ಲ. ಬೆಳೆಯುತ್ತಿರುವ ನಗರ ಸಿಂಧನೂರಿನಲ್ಲಿ ಈಗ ನಗರಸಭೆ ಕರೆಗೆ ಜನ ಸ್ಪಂದಿಸಿದ್ದು, ಖಜಾನೆಗೆ ನಿತ್ಯ 10 ರಿಂದ 12 ಲಕ್ಷ ರೂ.ವರೆಗೆ ತೆರಿಗೆ ಸಂದಾಯವಾಗುತ್ತಿದೆ.

ಸಾರ್ವಜನಿಕರೇ ಸ್ವಯಂ ಪ್ರೇರಣೆಯಿಂದ ತೆರಿಗೆ ಕಟ್ಟಲು ನಗರಸಭೆಗೆ ಧಾವಿಸುತ್ತಿದ್ದು, ಸರದಿ ನಿಲ್ಲುವಷ್ಟು ದಟ್ಟಣೆ ಉಂಟಾಗಿದೆ. ಪಾಳೆ ಪ್ರಕಾರ ಒಬ್ಬೊಬ್ಬರಾಗಿ ತೆರಿಗೆ ಕಟ್ಟುತ್ತಿರುವುದರ ಪರಿಣಾಮ ನಗರಸಭೆಯ “ಸ್ವಯಂ ಆದಾಯ’ಕ್ಕೂ ಮನ್ನಣೆ ದೊರಕಿದೆ. ಆಸ್ತಿ ತೆರಿಗೆ, ನೀರಿನ ಶುಲ್ಕ, ಅಂಗಡಿ ಮಳಿಗೆ ಬಾಡಿಗೆಯ ಶುಲ್ಕಗಳು ಇದರಲ್ಲಿ ಸೇರಿವೆ.

ನಗರಸಭೆ ಪ್ರಯತ್ನಕ್ಕೆ ಸ್ಪಂದನೆ: 2024-25ನೇ ಸಾಲಿಗೆ ಸಂಬಂಧಿ ಸಿ ಏಪ್ರಿಲ್‌ನಲ್ಲಿ ಭರಿಸುವ ತೆರಿಗೆ ಮೊತ್ತಕ್ಕೆ ಶೇ.5 ರಿಯಾಯಿತಿ ಘೋಷಿಸಲಾಗಿದೆ. ನಂತರದ ಎರಡು ತಿಂಗಳು ದಂಡ ಮುಕ್ತ, ಬಳಿಕ ದಂಡ ಸಮೇತ ಎನ್ನುವ ಪ್ರಕಟಣೆ ಹೊರಡಿಸಲಾಗಿದೆ. ಇದಾಗ ಬಳಿಕ ಬಹುತೇಕರು ಜಾಗೃತರಾಗಿ ತೆರಿಗೆ ಕಟ್ಟುವ ಮೂಲಕ ಸೌಲಭ್ಯ ಕೇಳಲು ಜಾಗೃತರಾದಂತಿದೆ. ದೈನಂದಿನ ಏಪ್ರಿಲ್‌ ಆರಂಭದಿಂದ ಈವರೆಗೆ ಭಾರಿ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗಿದೆ. ದಿನವೊಂದಕ್ಕೆ 10-12 ಲಕ್ಷ ರೂ. ಸರಾಸರಿಯಾದರೆ, ಕೆಲವೊಮ್ಮೆ ಒಂದೇ ದಿನ 14 ಲಕ್ಷ ರೂ.ಗೂ ಹೆಚ್ಚಿನ ತೆರಿಗೆಯನ್ನು ಜನ ಕಟ್ಟಿದ್ದಾರೆ.

10 ಕೋಟಿ ರೂ. ಟಾರ್ಗೆಟ್‌: ನಗರಸಭೆ 2022-23ನೇ ಸಾಲಿನಲ್ಲಿ ವಾರ್ಷಿಕ 10 ಕೋಟಿ 80 ಲಕ್ಷ 37 ಸಾವಿರ ರೂ.ತೆರಿಗೆ ಸಂಗ್ರಹ ಗುರಿ ಹೊಂದಿತ್ತು. ಆಸ್ತಿ ತೆರಿಗೆ, ನೀರಿನ ಶುಲ್ಕ, ಅಂಗಡಿ ಮಳಿಗೆ ಶುಲ್ಕ ಒಳಗೊಂಡು 5 ಕೋಟಿ 67 ಲಕ್ಷ 66 ಸಾವಿರ ರೂ. ಸಂಗ್ರಹವಾಗಿತ್ತು. 2023-24ನೇ ಸಾಲಿನಲ್ಲಿ 10 ಕೋಟಿ 69 ಲಕ್ಷ 21 ಸಾವಿರ ರೂ. ತೆರಿಗೆ ಬೇಡಿಕೆಯಿತ್ತು. 6 ಕೋಟಿ 60 ಲಕ್ಷ 93
ಸಾವಿರ ರೂ. ಸಂಗ್ರಹ ಮಾಡಲಾಗಿದೆ. ಶೇ.91.16 ಆಸ್ತಿ ತೆರಿಗೆ, ಶೇ.18.78 ನೀರಿನ ತೆರಿಗೆ, ಶೇ.54.22 ಅಂಗಡಿ ಮಳಿಗೆ ತೆರಿಗೆ ಸಂಗ್ರಹಿಸಿದ ಕೀರ್ತಿ ನಗರಸಭೆಗೆ ದಕ್ಕಿದೆ.

ನಳಗಳ ತೆರಿಗೆ ಸಂಗ್ರಹ ಕಡಿತಗೊಂಡ ಹಳೇ ಬಾಕಿ ಪ್ರಮಾಣ ಹೆಚ್ಚಿರುವುದರಿಂದ ಗುರಿ ಸಾಧನೆಯಲ್ಲಿ ಹೆಚ್ಚಿನ ಸಾಂಖ್ಯಿಕ ದಾಖಲೆ ಕಂಡು ಬಂದಿಲ್ಲ. ಇನ್ನು ಮಳಿಗೆ ವಿಷಯದಲ್ಲೂ ಹಳೇ ಮಳಿಗೆ ತೆರವುಗೊಳಿಸಿದ ಬಳಿಕವೂ ಉಳಿದ ಬಾಕಿಯೂ ಸಾಧನೆಗೆ ಅಡ್ಡಿಯಾಗಿದೆ. ಇನ್ನುಳಿದ ಚಾಲ್ತಿ ತೆರಿಗೆ ಸಂಗ್ರಹಿಸುವ ವಿಷಯದಲ್ಲಿ ನಗರಸಭೆ ಮುನ್ನಡೆ ಸಾಧಿಸಿದೆ.

ತೆರಿಗೆ ಸಂಗ್ರಹಕ್ಕೆ ಸಂಬಂಧಿಸಿ ಸಾರ್ವಜನಿಕ ಜಾಗೃತಿ, ಶೇ.5 ರಿಯಾಯಿತಿ ಘೋಷಣೆಯಿಂದಾಗಿ ಜನರಿಂದ ಉತ್ತಮ
ಸ್ಪಂದನೆ ವ್ಯಕ್ತವಾಗಿದೆ. ಇದೊಂದು ಸಂತಸದ ವಿಚಾರ.
*ಮಂಜುನಾಥ ಗುಂಡೂರು,
ಪೌರಾಯುಕ್ತರು, ನಗರಸಭೆ, ಸಿಂಧನೂರು

*ಯಮನಪ್ಪ ಪವಾರ

ಟಾಪ್ ನ್ಯೂಸ್

atishi

Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

laTirumala Tirupa ಲಡ್ಡು ಪ್ರಸಾದ ಪ್ರಮಾದ!

Tirumala Tirupa ಲಡ್ಡು ಪ್ರಸಾದ ಪ್ರಮಾದ!

PM Modi U.S. visit: ಇಂದಿನಿಂದ 3 ದಿನಗಳ ಕಾಲ ಮೋದಿ ಅಮೆರಿಕ ಪ್ರವಾಸ

PM Modi U.S. visit: ಇಂದಿನಿಂದ 3 ದಿನಗಳ ಕಾಲ ಮೋದಿ ಅಮೆರಿಕ ಪ್ರವಾಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yermarus: Private bus caused end of 150 sheeps

Yermarus: ಖಾಸಗಿ ಬಸ್ ಹರಿದು 150 ಕುರಿಗಳ ಮಾರಣಹೋಮ

1-mosale

Raichur ಡಿ.ರಾಂಪುರದಲ್ಲಿ ಭಾರೀ ಗಾತ್ರದ ಮೊಸಳೆ ಸೆರೆ

10-ns-bosuaju

Raichur: ಬಿಜೆಪಿಯವರು ಮೈಮೇಲೆ ಬಂದಂತೆ ಆಡುತ್ತಿದ್ದಾರೆ: ಸಚಿವ ಎನ್.ಎಸ್.ಭೋಸರಾಜು

Cabinet Meeting: ಬೀದರ್‌, ರಾಯಚೂರು ನಗರಸಭೆ ಮೇಲ್ದರ್ಜೆಗೇರಿಸಲು ಸಂಪುಟ ಒಪ್ಪಿಗೆ

Cabinet Meeting: ಬೀದರ್‌, ರಾಯಚೂರು ನಗರಸಭೆ ಮೇಲ್ದರ್ಜೆಗೇರಿಸಲು ಸಂಪುಟ ಒಪ್ಪಿಗೆ

SIddu-Phone

Kalaburagi: ಪತಿ ಕೊಲೆ ಪ್ರಕರಣ ತನಿಖೆಗಾಗಿ ಸಿಎಂಗೆ ಮನವಿ ಸಲ್ಲಿಸಿದ ಪತ್ನಿ; ಎಸ್‌ಪಿಗೆ ಕರೆ 

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

atishi

Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.