Movie: ʼಪುಷ್ಪ-2ʼ ಎದುರು ʼಸಿಂಗಂ ಅಗೇನುʼ ರಿಲೀಸ್ ಡೌಟು; ಕಾರಣವೇನು?
Team Udayavani, Apr 12, 2024, 6:34 PM IST
ಮುಂಬಯಿ: ಹಬ್ಬ ಅಥವಾ ವಿಶೇಷ ದಿನದಂದು ಬಹು ನಿರೀಕ್ಷಿತ ಸಿನಿಮಾಗಳು ಥಿಯೇಟರ್ ಗೆ ಎಂಟ್ರಿ ಕೊಡುವುದು ಸಾಮಾನ್ಯ. ಈ ವರ್ಷದ ಸ್ವಾತಂತ್ರ್ಯ ದಿನದಂದು ಬಾಲಿವುಡ್ ಹಾಗೂ ಟಾಲಿವುಡ್ ಸಿನಿರಂಗದ ನಡುವೆ ಬಾಕ್ಸ್ ಆಫೀಸ್ ಪೈಪೋಟಿ ಇರಲಿದೆ ಎನ್ನಲಾಗಿತ್ತು.
ಅಲ್ಲು ಅರ್ಜುನ್ ಅವರ ʼಪುಷ್ಪ-2ʼ ಹಾಗೂ ಅಜಯ್ ದೇವಗನ್ ಅವರ ʼಸಿಂಗಂ ಅಗೇನ್ʼ ಸಿನಿಮಾಗಳು ಆಗಸ್ಟ್ 15 ರಂದು ಒಂದೇ ದಿನ ರಿಲೀಸ್ ಆಗಲಿದೆ. ಆ ನಿಟ್ಟಿನಲ್ಲಿ ಬಾಕ್ಸ್ ಆಫೀಸ್ ನಲ್ಲಿ ಎರಡು ಸಿನಿಮಾಗಳು ಟಕ್ಕರ್ ನೀಡಲಿದೆ ಎನ್ನುವ ಮಾತುಗಳು ಸಿನಿವಲಯದಲ್ಲಿ ಹರಿದಾಡಿತ್ತು. ಆದರೆ ಇದೀಗ ʼಸಿಂಗಂ ಅಗೇನ್ʼ ಸಿನಿಮಾದ ರಿಲೀಸ್ ಬಗ್ಗೆ ಹೊಸ ವಿಚಾರವೊಂದು ಹೊರಬಿದ್ದಿದೆ.
ಮಲ್ಟಿಸ್ಟಾರ್ಸ್ ಗಳನ್ನು ಒಳಗೊಂಡಿರುವ ʼಸಿಂಗಂ ಅಗೇನ್ʼ ಸ್ವಾತಂತ್ರ್ಯ ದಿನ ರಿಲೀಸ್ ಆಗುವುದು ಡೌಟು ಎನ್ನಲಾಗುತ್ತಿದೆ. ಸಿನಿಮಾದ ಚಿತ್ರೀಕರಣಕ್ಕೆ ನಿರೀಕ್ಷೆಗಿಂತ ಹೆಚ್ಚಿನ ಸಮಯ ಬೇಕಾಗುವುದರಿಂದ ಆಗಸ್ಟ್ 15 ರಂದು ರೋಹಿತ್ ಶೆಟ್ಟಿ ಅವರ ಸಿನಿಮಾ ತೆರೆಗೆ ಬರುವುದು ಅನುಮಾನ ಎನ್ನುವುದು ಸದ್ಯ ಬಾಲಿವುಡ್ ನಲ್ಲಿ ಹರಿದಾಡುತ್ತಿರುವ ಟ್ರೆಂಡಿಂಗ್ ಟಾಪಿಕ್.
ಮೂಲಗಳ ಪ್ರಕಾರ ದೀಪಾವಳಿ ಹಬ್ಬಕ್ಕೆ ʼಸಿಂಗಂ ಅಗೇನ್ʼ ಸಿನಿಮಾವನ್ನು ರಿಲೀಸ್ ಮಾಡಲಾಗುತ್ತದೆ ಎನ್ನಲಾಗುತ್ತಿದೆ. ಹೊಸ ರಿಲೀಸ್ ಡೇಟ್ ಶೀಘ್ರದಲ್ಲಿ ಅನೌನ್ಸ್ ಆಗಲಿದೆ ಎನ್ನಲಾಗಿದೆ.
ಇನ್ನೊಂದೆಡೆ ಇತ್ತೀಚಿಗಷ್ಟೇ ʼಪುಷ್ಪ-2ʼ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಸಿನಿಮಾ ದೊಡ್ಡ ಹಿಟ್ ಆಗುವುದು ಪಕ್ಕಾ ಎನ್ನಲಾಗುತ್ತಿದೆ. ಈ ಕಾರಣದಿಂದ ಪ್ಯಾನ್ ಇಂಡಿಯಾ ಸಿನಿಮಾದ ಜೊತೆ ಪೈಪೋಟಿಗೆ ಇಳಿಯುವುದು ಬೇಡ ಎನ್ನುವ ಕಾರಣದಿಂದ ʼಸಿಂಗಂ ಅಗೇನ್ʼ ಸಿನಿಮಾದ ರಿಲೀಸ್ ಡೇಟ್ ನ್ನು ಬೇಕಂತಲೇ ಮುಂದೂಡಲಾಗಿದೆ ಎನ್ನಲಾಗುತ್ತಿದೆ.
ʼಸಿಂಗಂ ಅಗೇನ್ʼ ನಲ್ಲಿ ಅಜಯ್ ದೇವಗನ್ ,ರಣವೀರ್ ಸಿಂಗ್,ಅಕ್ಷಯ್ ಕುಮಾರ್ ,ಕರೀನಾ ಕಪೂರ್ ,ದೀಪಿಕಾ ಪಡುಕೋಣೆ ಟೈಗರ್ ಶ್ರಾಫ್, ಅರ್ಜುನ್ ಕಪೂರ್ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pushpa 2: ರಿಲೀಸ್ಗೂ ಮೊದಲೇ 900 ಕೋಟಿ ರೂ. ಕಲೆಕ್ಷನ್ ಮಾಡಿದ ಅಲ್ಲು ಅರ್ಜುನ್ ʼಪುಷ್ಪ-2ʼ
Actress: ಖ್ಯಾತ ನಟಿಯ ಮೇಲೆ ಸಾಮೂಹಿಕ ಅ*ತ್ಯಾಚಾರ.. ನಿರ್ದೇಶಕರಿಂದ ಶಾಕಿಂಗ್ ಸಂಗತಿ ರಿವೀಲ್
Tollywood: ʼಬಾಹುಬಲಿʼ ಮೂರನೇ ಪಾರ್ಟ್ ಬರುತ್ತಾ?; ಖ್ಯಾತ ನಿರ್ಮಾಪಕ ಹೇಳಿದ್ದೇನು?
Oscars 2025: ಆಸ್ಕರ್ ರೇಸ್ನಲ್ಲಿ ʼಕಲ್ಕಿ 2898 ಎಡಿʼ?: ಪೋಸ್ಟ್ ವೈರಲ್
Kollywood: 33 ವರ್ಷದ ಬಳಿಕ ರಜಿನಿ ಜತೆ ಮಣಿರತ್ನಂ ಸಿನಿಮಾ? ನಿರ್ದೇಶಕರ ಪತ್ನಿ ಹೇಳಿದ್ದೇನು?
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.