![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Apr 16, 2024, 1:02 AM IST
ಮುಂಬಯಿ: ಮಧ್ಯ ಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಬಾಂಬೆ ಷೇರು ಪೇಟೆಯ ಸೂಚ್ಯಂಕ ಸೋಮವಾರ 845 ಅಂಕ ಕುಸಿತಗೊಂಡು 73,399 ಅಂಕಗಳಿಗಿಳಿದಿದೆ. ಜತೆಗೆ ಹೂಡಿಕೆದಾರರಿಗೆ 5.18 ಲಕ್ಷ ಕೋಟಿ ರೂ. ನಷ್ಟವಾಗಿದೆ. ವಹಿವಾಟು ಆರಂಭವಾಗುತ್ತಿದ್ದಂತೆಯೇ ಸೂಚ್ಯಂಕ ಭಾರೀ ಕುಸಿತ ಅನುಭವಿಸಿತು. ಮಧ್ಯಾಂತರದಲ್ಲಿ ಸೂಚ್ಯಂಕ 929 ಪಾಯಿಂಟ್ಸ್ ವರೆಗೆ ಕುಸಿದು, 73,315ರ ವರೆಗೆ ಇಳಿಕೆಯಾಗಿತ್ತು. ನಿಫ್ಟಿ ಕೂಡ 246.90 ಅಂಕ ಕುಸಿತಗೊಂಡು 22272.50ಗೆ ತಲುಪಿತ್ತು. ಇಷ್ಟು ಮಾತ್ರವಲ್ಲದೆ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 6 ಪೈಸೆ ಕುಸಿದು ದಿನದಂತ್ಯಕ್ಕೆ 83.44ರಲ್ಲಿ ಮುಕ್ತಾಯಗೊಂಡಿದೆ.
ಸಗಟು ಹಣದುಬ್ಬರ ಶೇ.0.53: ಇದು 3 ತಿಂಗಳಲ್ಲೇ ಗರಿಷ್ಠ
ಆಲೂಗಡ್ಡೆ, ಈರುಳ್ಳಿ ಸೇರಿ ತರಕಾರಿ ಹಾಗೂ ಕಚ್ಚಾ ತೈಲ ದರ ಏರಿಕೆಯಿಂದಾಗಿ ಕಳೆದ ಮಾರ್ಚ್ನಲ್ಲಿ ಸಗಟು ಹಣದುಬ್ಬರ ಶೇ. 0.53ಕ್ಕೆ ಏರಿಕೆಯಾಗಿದ್ದು, 3 ತಿಂಗಳ ಗರಿಷ್ಠ ಮಟ್ಟವಾಗಿದೆ. ಫೆಬ್ರವರಿಯಲ್ಲಿ ಇದು ಶೇ. 0.20ಯಷ್ಟಿತ್ತು. ಕಳೆದ ವರ್ಷ ಎಪ್ರಿಲ್ನಿಂದ ಅಕ್ಟೋಬರ್ವರೆಗೆ ಋಣಾತ್ಮಕ ವಲಯದಲ್ಲಿದ್ದ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ), ನವೆಂಬರ್ನಿಂದ ಏರಿಕೆ ಕಾಣುತ್ತಿದ್ದು ಈ ವರ್ಷ ಮಾರ್ಚ್ನಲ್ಲಿ ಗರಿಷ್ಠ ಹಂತವನ್ನು ತಲುಪಿದೆ. ಹಿಂದಿನ ವರ್ಷ ಮಾರ್ಚ್ನಲ್ಲಿ ಈ ಡಬ್ಲ್ಯುಪಿಐ ಶೇ. 1.41ರಷ್ಟಿತ್ತು.
Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್ ಕುಸಿತ
New Income Tax Bill: ಹೊಸ ಆದಾಯ ತೆರಿಗೆ ಮಸೂದೆ ಮಂಡಿಸಿದ ಕೇಂದ್ರ ವಿತ್ತ ಸಚಿವೆ
Less Burden: ಆರ್ಬಿಐ ರೆಪೋ ದರ ಕಡಿತದ ಬೆನ್ನಲ್ಲೇ ಗೃಹ ಸಾಲಗಳಿಗೂ ರಿಲೀಫ್
Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!
Gold-Silver: ಬೆಂಗಳೂರಲ್ಲಿ 10 ಗ್ರಾಂ ಚಿನ್ನಕ್ಕೆ 710 ರೂ. ಇಳಿಕೆ, ಬೆಳ್ಳಿ ಏರಿಕೆ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.