Obsessive Psychiatry: ಗೀಳು ಮನೋರೋಗ


Team Udayavani, Apr 16, 2024, 6:32 PM IST

7-

ಜಾಗತಿಕವಾಗಿ ಪ್ರತೀ 100 ಮಂದಿಯಲ್ಲಿ ಮೂವರನ್ನು ಬಾಧಿಸುವ ಒಂದು ಸಾಮಾನ್ಯ ಮನೋರೋಗ ಒಬೆÕಸಿವ್‌ ಕಂಪಲ್ಸಿವ್‌ ಡಿಸಾರ್ಡರ್‌ ಅಥವಾ ಗೀಳು ಮನೋರೋಗ. ಇದೊಂದು ಸಾಮಾನ್ಯವಾದ ಮನೋರೋಗವಾಗಿದ್ದರೂ ರೋಗಿಗಳು ತಮ್ಮ ಆಲೋಚನೆಯಲ್ಲಿಯೇ ಏನೋ ತಪ್ಪಾಗಿದೆ ಅಥವಾ ಸಮಸ್ಯೆ ಇದೆ ಎಂದು ಭಾವಿಸುತ್ತಾರೆ. ಈ ಕಾರಣದಿಂದಾಗಿ ರೋಗಿಗಳು ತಡವಾಗಿ ವೈದ್ಯಕೀಯ ನೆರವಿನ ಮೊರೆ ಹೋಗುವಂತಾಗುತ್ತದೆ.

ಈ ಮನೋರೋಗವು ಈ ಕೆಳಗಿನ ಲಕ್ಷಣಗಳನ್ನು ಹೊಂದಿರುತ್ತದೆ

  1. ಪುನರಾವರ್ತನೆಯಾಗುವ, ಗೊಂದಲವನ್ನು ಉಂಟು ಮಾಡುವ, ಚಿಂತೆಗೀಡು ಮಾಡುವ ಆಲೋಚನೆಗಳು/ಚಿತ್ರಗಳು – ಇವುಗಳನ್ನು ನಿಲ್ಲಿಸಲು ಕಷ್ಟವಾಗುತ್ತದೆ ಮತ್ತು ಇವುಗಳಿಂದಾಗಿ ಆತಂಕ ಉಂಟಾಗುತ್ತದೆ (ಗೀಳು).
  2. ಈ ಆಲೋಚನೆಗಳನ್ನು ಕಡಿಮೆಗೊಳಿಸುವುದಕ್ಕಾಗಿ ಪುನರಾವರ್ತಿತ ಆಲೋಚನೆಗಳು ಅಥವಾ ಕ್ರಿಯೆಗಳು ಉಂಟಾಗಬಹುದು; ಇವುಗಳನ್ನು ಕೂಡ ನಿಯಂತ್ರಿಸುವುದು ಕಷ್ಟವಾಗುತ್ತದೆ (ಒತ್ತಾಯ).
  3. ಆಲೋಚನೆಗಳು ಲೈಂಗಿಕ ಸಂಬಂಧಿ, ದೇವನಿಂದನಾತ್ಮಕ, ಆಕ್ರಮಣಕಾರಿ, ವಿಷಮಯ ಅಥವಾ ಸಂಶಯಾತ್ಮಕ ಅಥವಾ ಇವುಗಳ ಸಂಯೋಜನೆಯ ಸ್ವರೂಪದ್ದಾಗಿರಬಹುದು.
  4. ಒತ್ತಾಯಗಳು ಸಾಮಾನ್ಯವಾಗಿ ಗೀಳುಗಳಿಗೆ ಸಂಬಂಧಿಸಿರುತ್ತವೆ ಮತ್ತು ಮತ್ತೆ ಮತ್ತೆ ತೊಳೆಯುವುದು, ಪರಿಶೀಲಿಸುವುದು, ಪ್ರಾರ್ಥಿಸುವುದು ಅಥವಾ ಇವುಗಳ ಸಂಯೋಜನೆಯಾಗಿರಬಹುದು.
  5. ಈ ಲಕ್ಷಣಗಳು ಸಾಮಾನ್ಯವಾಗಿ ದಿನಕ್ಕೆ 1 ತಾಸಿಗಿಂತ ಹೆಚ್ಚು ಸಮಯ ಕಾಣಿಸಿಕೊಳ್ಳುತ್ತವೆ ಹಾಗೂ ಗಮನಾರ್ಹ ಚಟುವಟಿಕೆ ಲೋಪ ಮತ್ತು ಒತ್ತಡಕ್ಕೆ ಕಾರಣವಾಗುತ್ತವೆ.
  6. ರೋಗಿಗಳು ಸ್ವತಃ ಈ ಆಲೋಚನೆಗಳು ಮತ್ತು ಕ್ರಿಯೆಗಳು ಅತಿಯಾದವು ಮತ್ತು ಅಕಾರಣವಾಗಿರುವಂಥವು ಎಂಬುದನ್ನು ಗುರುತಿಸಲು ಶಕ್ತರಾಗಿರುತ್ತಾರೆ; ಆದರೂ ಅವರಿಗೆ ಅವುಗಳನ್ನು ನಿಲ್ಲಿಸಲು ಅಥವಾ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ.

ಸಾಮಾನ್ಯವಾಗಿ ಈ ಆಲೋಚನೆಗಳು ಮತ್ತು ಕ್ರಿಯೆಗಳು ಕಿರಿಕಿರಿದಾಯಕ ಸ್ವಭಾವದವಾದ್ದರಿಂದ ರೋಗಿಗಳು ಸಾಮಾನ್ಯವಾಗಿ ತಪ್ಪಿತಸ್ಥ ಭಾವನೆಯನ್ನು ಬೆಳೆಸಿಕೊಳ್ಳುತ್ತಾರೆ ಮತ್ತು ಈ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕ್ರಮೇಣ ಖನ್ನತೆಯ ಲಕ್ಷಣಗಳನ್ನು ಪ್ರದರ್ಶಿಸುತ್ತಾರೆ. ಗೀಳು ಮನೋರೋಗ ತಲೆದೋರುವುದಕ್ಕೆ ನಿರ್ದಿಷ್ಟವಾದ ಕಾರಣಗಳಿಲ್ಲ; ಆದರೆ ಇದು ವಂಶಪಾರಂಪರ್ಯವಾಗಿ ಬರಬಹುದಾಗಿದೆ.

ಪ್ರಕರಣ ಉದಾಹರಣೆ

ಅನಿತಾ 20 ವರ್ಷ ವಯಸ್ಸಿನ ಯುವತಿ, ಈಗ ಬಿಎ ಪದವಿ ಓದುತ್ತಿದ್ದಾಳೆ. ಕಳೆದ 3 ವರ್ಷಗಳಿಂದ ಯಾವುದೇ ಮೇಜು ಅಥವಾ ಅಂಟಿನ ವಸ್ತುಗಳನ್ನು ಮುಟ್ಟಿದಾಗ ತನ್ನ ಕೈಗಳು ಕೊಳೆಯಾಗಿವೆ ಎಂಬ ಆಲೋಚನೆ ಪದೇ ಪದೆ ತನ್ನಲ್ಲಿ ಮೂಡುತ್ತಿರುತ್ತದೆ ಎಂದಾಕೆ ಹೇಳುತ್ತಾಳೆ.

ಈ ಆಲೋಚನೆಗಳು ಎಷ್ಟು ಒತ್ತಡದಾಯಕ ಮತ್ತು ಪದೇಪದೆ ಮೂಡುತ್ತವೆ ಎಂದರೆ ಕೈಗಳು ಶುಚಿಯಾಗಿವೆ ಎಂಬ ಭಾವನೆ ಮೂಡುವುದಕ್ಕೆ ಹಲವು ಬಾರಿ ಕೈಗಳನ್ನು ತೊಳೆಯುವಂತೆ ಆಗುತ್ತದೆ. ಆಕೆ ಕೈಗಳನ್ನು ತೊಳೆಯುತ್ತ ಬಾತ್‌ರೂಮ್‌ನಲ್ಲಿ ಗಂಟೆಗಟ್ಟಲೆ ಕಳೆಯುತ್ತಾಳೆ, ಇದು ಅತಿಯಾಯಿತು ಎಂಬುದು ಸ್ವತಃ ಆಕೆಗೆ ತಿಳಿದಿದ್ದರೂ ಇದನ್ನು ನಿಯಂತ್ರಿಸುವುದಕ್ಕೆ ಆಕೆಗೆ ಸಾಧ್ಯವಾಗುತ್ತಿಲ್ಲ.

ಇದರಿಂದಾಗಿ ಆಕೆಗೆ ದೈನಂದಿನ ಕೆಲಸಕಾರ್ಯಗಳನ್ನು ಪೂರ್ತಿಗೊಳಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಮತ್ತು ಪದೇಪದೆ ಕೈಗಳನ್ನು ತೊಳೆಯುವುದರಿಂದ ಕೈಗಳ ಚರ್ಮ ಎದ್ದು ಬರುವಂತಾಗಿದೆ. ಈ ಮೇಲಿನ ತೊಂದರೆಗಳಿಂದ ಆಕೆ ವೈದ್ಯಕೀಯ ಸಹಾಯವನ್ನು ಯಾಚಿಸಿದ್ದಾಳೆ. ಇದಕ್ಕೆ ಸೂಕ್ತವಾದ ಔಷಧೋಪಚಾರ ಆರಂಭಿಸಿದ ಬಳಿಕ ಈ ಲಕ್ಷಣಗಳ ಮೇಲೆ ಅನಿತಾ ಸಾಕಷ್ಟು ನಿಯಂತ್ರಣ ಹೊಂದುವುದು ಸಾಧ್ಯವಾಗಿದೆ ಮತ್ತು ಹಿಂದಿನಂತೆ ಸಹಜವಾಗಿ ಇರುವುದಕ್ಕೆ ಸಾಧ್ಯವಾಗಿದೆ.

ಗೀಳು ಮನೋರೋಗಕ್ಕೆ ಚಿಕಿತ್ಸೆ

ಗೀಳು ಮನೋರೋಗವನ್ನು ಹೊಂದಿರುವ ರೋಗಿಗಳನ್ನು ಬಾಧಿಸುತ್ತಿರುವ ಗೀಳುಗಳು ಮತ್ತು ಒತ್ತಾಯಗಳನ್ನು ಅರ್ಥ ಮಾಡಿಕೊಳ್ಳಲು ಮತ್ತು ಲಕ್ಷಣಗಳ ತೀವ್ರತೆಯನ್ನು ವಿಶ್ಲೇಷಿಸಲು ವಿವರವಾದ ಪರಿಶೀಲನೆಯನ್ನು ನಡೆಸಬೇಕಾಗುತ್ತದೆ. ಕೆಲವು ಗೀಳುಗಳಿಗೆ ಸಂಬಂಧಿಸಿ ತಪ್ಪಿತಸ್ಥ ಮತ್ತು ದುಃಖ ಭಾವನೆ ಉಂಟಾಗುವುದರಿಂದ ಖನ್ನತೆ ಮತ್ತು ಆತಂಕವನ್ನೂ ವಿಶ್ಲೇಷಿಸಬೇಕಾಗುತ್ತದೆ. ರೋಗಿ ಮತ್ತು ಅವರ ಕುಟುಂಬಕ್ಕೆ ಈ ಕಾಯಿಲೆಯ ಬಗ್ಗೆ ವಿವರವಾದ ಮಾಹಿತಿ, ವಿವರಣೆಯನ್ನು ನೀಡಲಾಗುತ್ತದೆ.

ಗೀಳು ಮನೋರೋಗಕ್ಕೆ ಮುಖ್ಯವಾದ ಚಿಕಿತ್ಸೆಯು ಔಷಧ (ಎಸ್‌ ಎಸ್‌ಆರ್‌ಐ ಗುಂಪು) ಮತ್ತು ಕೊಗ್ನಿಟಿವ್‌ ಬಿಹೇವಿಯರಲ್‌ ಥೆರಪಿ ಆಗಿರುತ್ತದೆ. ಈ ಎರಡೂ ಈ ಮನೋರೋಗಕ್ಕೆ ಪರಿಣಾಮಕಾರಿ ಚಿಕಿತ್ಸೆಯಾಗಿರುವುದು ಸಾಬೀತಾಗಿದೆ. ಆದರೆ ಖನ್ನತೆ ಮತ್ತು ಆತಂಕದಂತೆ ಗೀಳು ಮನೋರೋಗವಲ್ಲ; ಇದು ಗುಣ ಹೊಂದಲು 2-3 ತಿಂಗಳುಗಳು ಬೇಕಾಗುತ್ತವೆ. ಗೀಳು ಮನೋರೋಗಕ್ಕೆ ಸಾಮಾನ್ಯವಾಗಿ ನೀಡಲಾಗುವ ಔಷಧಗಳು ಎಂದರೆ ಎಸಿಟಲೊಪ್ರಾಮ್‌, ಫ್ಲುಕ್ಸೆಟೀನ್‌, ಸೆಟ್ರಾಲಿನ್‌ ಮತ್ತು ಕ್ಲೊಮಿಪ್ರಾಮಿನ್‌. ಗೀಳು ಮನೋರೋಗಕ್ಕೆ ತುತ್ತಾಗಿರುವವರು ಬೇಗನೆ ವೈದ್ಯರನ್ನು ಕಂಡು ಚಿಕಿತ್ಸೆಗೆ ಒಳಪಟ್ಟರೆ ಲಕ್ಷಣಗಳನ್ನು ಗುಣಪಡಿಸಿಕೊಂಡು ಒತ್ತಡವಿಲ್ಲದ ಸಹಜ ಸಾಮಾನ್ಯ ಜೀವನವನ್ನು ನಡೆಸಬಹುದಾಗಿದೆ.

ಗೀಳು ಮನೋರೋಗದ ಬಗ್ಗೆ ತಪ್ಪು ಕಲ್ಪನೆಗಳು.

  1. ಕೆಲವೊಮ್ಮೆ ಬಹಳ ಶಿಸ್ತಿನ, ಅಚ್ಚುಕಟ್ಟು ಸ್ವಭಾವವನ್ನು ಹೊಂದಿದ್ದು, ಎಲ್ಲವೂ ಸರಿಯಾಗಿ, ಚೆನ್ನಾಗಿ ಇರಬೇಕು ಎಂದು ಬಯಸುವ ವ್ಯಕ್ತಿಯನ್ನು ವಿವರಿಸಲು ಇದನ್ನು ತಪ್ಪಾಗಿ ಉಪಯೋಗಿಸಲಾಗುತ್ತದೆ. ಒಸಿಡಿ ಅಥವಾ ಗೀಳು ಮನೋರೋಗವು ಒಂದು ಮಾನಸಿಕ ಅನಾರೋಗ್ಯವಾಗಿದ್ದು, ಒತ್ತಡ ಮತ್ತು ಕಾರ್ಯಚಟುವಟಿಕೆಗಳಲ್ಲಿ ಕುಸಿತವನ್ನು ಉಂಟುಮಾಡುತ್ತದೆ, ಇದು ವ್ಯಕ್ತಿಯ ಸ್ವಭಾವಕ್ಕೆ ಸಂಬಂಧಿಸಿದ್ದಲ್ಲ.
  2. ಕೆಲವೊಮ್ಮೆ ಈ ಮನೋರೋಗವನ್ನು ಹೊಂದಿರುವವರು ಕೆಲವು ಸನ್ನಿವೇಶ ಅಥವಾ ಸ್ಥಳಗಳನ್ನು ಒತ್ತಾಯಪೂರ್ವಕವಾಗಿ ನಿಗ್ರಹಿಸಲು ಪ್ರಯತ್ನಿಸುವ ಮೂಲಕ ಈ ರೋಗದ ಮೇಲೆ ಹೆಚ್ಚು ನಿಯಂತ್ರಣ ಹೊಂದಲು ತೊಡಗುತ್ತಾರೆ. ಆದರೆ ಈ ತಂತ್ರಗಳು ಚಿಕಿತ್ಸೆಯ ಪರಿಣಾಮಕಾರಿ ನಿರ್ವಹಣೆಯಲ್ಲಿ ಸಹಾಯ ಮಾಡಲಾರವು.
  3. ಗೀಳು ಮನೋರೋಗವು ಶುಚಿಗೊಳಿಸುವುದಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಅತಿಯಾದ ಸಂಶಯ, ಪದೇಪದೆ ಪರಿಶೀಲಿಸುವುದು, ಬೀಗ ಹಾಕುವುದು, ಧರ್ಮ-ದೇವ ನಿಂದಕ ಆಲೋಚನೆಗಳು, ಆಕ್ರಮಣಕಾರಿ ಆಲೋಚನೆಗಳು, ಲೈಂಗಿಕ ಆಲೋಚನೆಗಳು – ಹೀಗೆ ತರಹೇವಾರಿ ವಿಧವಾದ ಲಕ್ಷಣಗಳು ಉಂಟಾಗಬಹುದು. ಸಾಮಾನ್ಯವಾಗಿ ರೋಗಿಗಳು ಒಂದಕ್ಕಿಂತ ಹೆಚ್ಚು ವಿಧವಾದ ಲಕ್ಷಣಗಳನ್ನು ಹೊಂದಿರುತ್ತಾರೆ ಹಾಗೂ ಗೀಳುಗಳು ಮತ್ತು ಒತ್ತಾಯಗಳ ವಿಧ ಮತ್ತು ತೀವ್ರತೆಯನ್ನು ವಿಶ್ಲೇಷಿಸಲು ಕೂಲಂಕಷ ಪರಿಶೀಲನೆಯನ್ನು ನಡೆಸಬೇಕಾಗುತ್ತದೆ. 4. ಗೀಳು ಮನೋರೋಗವು ಚೇತರಿಕೆ ಹೊಂದದೆ ದೀರ್ಘ‌ಕಾಲ ಮುಂದುವರಿಯುತ್ತದೆ ಎಂದೂ ನಂಬಲಾಗುತ್ತದೆ. ಇದು ಸರಿಯಲ್ಲ. ಪರಿಣಾಮಕಾರಿ ಚಿಕಿತ್ಸೆಯಿಂದ ರೋಗಿಗಳು ಚೇತರಿಸಿಕೊಳ್ಳುತ್ತಾರೆ ಮತ್ತು ಈ ಚೇತರಿಕೆಯನ್ನು ದೀರ್ಘ‌ಕಾಲ ಉಳಿಸಿಕೊಳ್ಳುವುದು ಅವರಿಗೆ ಸಾಧ್ಯವಾಗುತ್ತದೆ.

-ಡಾ| ಸೋನಿಯಾ ಶೆಣೈ,

ಅಸೋಸಿಯೇಟ್‌ ಪ್ರೊಫೆಸರ್‌,

ಸೈಕಿಯಾಟ್ರಿ ವಿಭಾಗ,

ಕೆಎಂಸಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಸೈಕಿಯಾಟ್ರಿ ವಿಭಾಗ, ಕೆಎಂಸಿ, ಮಂಗಳೂರು)

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-tooth

Dental Checkup: ದಂತ ವೈದ್ಯಕೀಯ ತಪಾಸಣೆಗಳನ್ನು ತಪ್ಪಿಸಿಕೊಳ್ಳದಿರಿ

10-wayanad

Landslide Survivors: ಭೂಕುಸಿತದಿಂದ ಪಾರಾದವರಿಗೆ ಆಘಾತದಿಂದ ಚೇತರಿಸಿಕೊಳ್ಳಲು ಮಾರ್ಗದರ್ಶಿ

9-cancer

Cancer Symptoms: ಕ್ಯಾನ್ಸರ್‌ನ ಸಾಮಾನ್ಯವಲ್ಲದ ಲಕ್ಷಣಗಳು

8-weight-gain

Weight gain: ಕ್ರೀಡಾಳುಗಳಲ್ಲಿ ತೂಕ ಗಳಿಕೆ- ದೈಹಿಕ, ಮಾನಸಿಕ ಪರಿಣಾಮಗಳ ನಿರ್ವಹಣೆ

4-breastfeeding

Infant’s Immune System: ಶಿಶುವಿನ ರೋಗ ನಿರೋಧಕ ವ್ಯವಸ್ಥೆಗ ಸ್ತನ್ಯಪಾನದಿಂದ ಪ್ರಯೋಜನಗಳು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.