Summer Heat: ಕಡುಬೇಸಗೆಯಲ್ಲಿರಲಿ ಪ್ರಾಣಿಪಕ್ಷಿಗಳ ಮೇಲೆ ಕರುಣೆ
Team Udayavani, Apr 21, 2024, 2:00 PM IST
ಮಾನವರಾದ ನಾವು ದಿನನಿತ್ಯ ಜೀವನದಲ್ಲಿ ನಮಗೆ ಯಾವ ಅಗತ್ಯಗಳು ಬೇಕಿವೆಯೋ ಅವುಗಳನ್ನು ನಾವೇ ಈಡೇರಿಸಿಕೊಳ್ಳುತ್ತೇವೆ. ನಮಗೆ ಹೇಗೆ ಬೇಕೋ ಹಾಗೆ ಜೀವನ ನಡೆಸುತ್ತೇವೆ. ಚಳಿಯಾದಾಗ ಬೆಚ್ಚಗಿನ ಧಿರಿಸು ಧರಿಸಿ, ಬಿಸಿ ಬಿಸಿ ಆಹಾರ ತಿಂಡಿ ಪದಾರ್ಥಗಳನ್ನು ತಿಂದು ತೇಗುತ್ತೇವೆ.
ಹಾಗೇ ಬೇಸಗೆಯಲ್ಲಿ ಕಾಟನ್ ಉಡುಪುಗಳನ್ನು ಧರಿಸಿ, ತಂಪು ಪಾನೀಯಗಳನ್ನು ಹೆಚ್ಚಾಗಿ ಸೇವಿಸುತ್ತೇವೆ. ಹಣ್ಣುಗಳನ್ನು ತಿನ್ನುವುದು, ನೀರನ್ನು ಹೆಚ್ಚಾಗಿ ಕುಡಿಯುವುದು, ಬಿಸಿಲಿಗೆ ಬಾಡದ ಹಾಗೆ ನಮ್ಮನ್ನು ನಾವು ಕಾಪಾಡಿಕೊಳ್ಳುವುದು, ಸೆಕೆಯಾದಾಗ ಫ್ಯಾನ್, ಎ.ಸಿ ಹೀಗೆ ಎಲ್ಲ ರೀತಿಯಲ್ಲೂ ನಮ್ಮ ಕುಟುಂಬ, ಸಮಾಜ ಬೇಸಗೆ ಕಾಲವನ್ನು ಎದುರಿಸುತ್ತದೆ.
ಆದರೆ ಈ ವರ್ಷದ ಬಿಸಿಲಿನ ತಾಪಕ್ಕೆ ಕೆರೆ, ಬಾವಿಗಳಲ್ಲಿನ ನೀರು ಬತ್ತಿ ಹೋಗಿದೆ. ಸಾಕಷ್ಟು ಅನುಕೂಲಗಳಿದ್ದ ಮನುಷ್ಯನಿಗೇ ಈ ತಾಪವನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಇನ್ನು ಪ್ರಾಣಿ-ಪಕ್ಷಿಗಳ ಗೋಳು ಯಾವ ರೀತಿಯಾಗಿರಬಹುದು ? ಈಗ ಅದೆಷ್ಟೋ ಪ್ರಾಣಿ, ಪಕ್ಷಿಗಳು ಉರಿಬಿಸಿಲಿನ ತಾಪ ತಾಳಲಾರದೆ, ಕುಡಿಯುವ ನೀರಿಲ್ಲದೆ ಸಾಯುತ್ತಿವೆ.
ಹಳ್ಳಿಗಳ ಲ್ಲಾದರೂ ಕೆರೆ, ಬಾವಿಗಳಾದರೂ ಇವೆ. ಆದರೆ ಕಾಂಕ್ರೀಟ್ ಕಾಡುಗಳಲ್ಲಿ ಅದೂ ಇಲ್ಲ. ಇಲ್ಲಿ ಹೇಗೆ ಪ್ರಾಣಿ-ಪಕ್ಷಿಗಳು ತಮ್ಮ ದಾಹವನ್ನು ತೀರಿಸಿಕೊಂಡಾವು? ಆದ್ದರಿಂದ ಕಾಂಕ್ರೀಟ್ ಕಾಡಿನಲ್ಲಿರುವ ನಾವು ಒಂದು ಸಣ್ಣ ಕೆಲಸ ಮಾಡಬೇಕಿದೆ. ಅದೇನೆಂದರೆ ನಮ್ಮ ಮನೆಯ ಮುಂಭಾಗ ಅಥವಾ ಮನೆಯ ಮೇಲಿನ ಗಾರ್ಡನ್ನಲ್ಲಿ ಒಂದು ಪಾತ್ರೆಯಲ್ಲಿ ನೀರು ತುಂಬಿಟ್ಟರೆ ಪಕ್ಷಿಗಳು ಬಂದು ನೀರು ಕುಡಿದು ತಮ್ಮ ದಾಹ ಇಂಗಿಸಿಕೊಳ್ಳುತ್ತವೆ. ಹಾಗೆಯೇ ಒಂದು ಬಟ್ಟಲಿನಲ್ಲಿ ಧಾನ್ಯ, ಕಾಳುಗಳನ್ನು ಅಳತೆ ಮೀರದಂತೆ ತುಂಬಿಸಿಟ್ಟರೆ ಪಕ್ಷಿಗಳು ತಿಂದು ತಮ್ಮ ಹೊಟ್ಟೆ ಹಸಿವನ್ನು ನೀಗಿಸಿಕೊಳ್ಳುತ್ತವೆ.
ಇದು ನಾವು ಮಾಡುವ ಸಣ್ಣ ಕಾರ್ಯ ಎನಿಸಬಹುದು ಆದರೆ ಪ್ರತೀ ದಿನ ಬಿಡದೆ ಈ ಪ್ರಯತ್ನವನ್ನು ಮುಂದುವರಿಸಿದರೆ ನಮ್ಮ ಸಣ್ಣ ಕಾರ್ಯದಿಂದಾಗಿ ಒಂದು ಪಕ್ಷಿಯಾದರೂ ತನ್ನ ದಾಹವನ್ನು ತಣಿಸಿಕೊಂಡು ಜೀವ ಉಳಿಸಿಕೊಂಡೀತು.
ಮಾನವರಾದ ನಾವು ದಿನನಿತ್ಯ ಅಗತ್ಯಗಳನ್ನು ಈಡೇರಿಸಿಕೊಂಡು ನಮ್ಮಿಚ್ಛೆ ಬಂದಂತೆ ಬದುಕು ಸಾಗಿಸುತ್ತಿದ್ದೇವೆ. ಎಲ್ಲವನ್ನೂ ನಾವೇ ತಿಂದು ತೇಗುವ ಬದಲು ಸ್ವಲ್ಪವಾದರೂ ಸಮಾಜಮುಖೀಯಾಗಿ ಬಾಳ್ಳೋಣ. ಸಮಾಜದಲ್ಲಿನ ಜೀವಿಗಳಿಗೆ ಅಲ್ಪವಾದರೂ ಸಹಾಯ ಮಾಡುತ್ತಾ ಅವುಗಳನ್ನೂ ಬದುಕಿಸುತ್ತಾ ನಾವೂ ಬದುಕೋಣ. ಏನಂತೀರಾ…?
-ಭಾಗ್ಯ ಜೆ.
ಮೈಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Panaji: ಮಲ್ಪೆಯ 2 ಮೀನುಗಾರಿಕಾ ಬೋಟ್ ಗಳನ್ನು ವಶಪಡಿಸಿಕೊಂಡ ಗೋವಾ ಸರಕಾರ!
Mangaluru: ಅಯೋಧ್ಯೆ ಮಾದರಿ ಎಲ್ಲ ದೇವಾಲಯಗಳಿಗೂ ವಿಶ್ವಸ್ಥ ಮಂಡಳಿ ರೂಪಿಸಿ: ಪೇಜಾವರ ಶ್ರೀ
Jammu Kashmir: ಬಿಜೆಪಿಯ ʼನಯಾ ಕಾಶ್ಮೀರʼ ಕೈಕೊಟ್ಟಿದ್ದೆಲ್ಲಿ? ಕಣಿವೆಯ ಜನರ ಭಾವನೆಯೇನು?
Varun Tej; ನ.14ಕ್ಕೆ ‘ಮಟ್ಕಾ’ ತೆರೆಗೆ
Sandalwood: ಎಚ್ಚರಗೊಂಡ ನಿದ್ರಾದೇವಿ; ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ನತ್ತ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.