![Rain Heavy](https://www.udayavani.com/wp-content/uploads/2024/07/Rain-Heavy-415x276.jpg)
MaMataಗೆ ಮುಖಭಂಗ-25,000 ಶಿಕ್ಷಕರ ನೇಮಕಾತಿ ರದ್ದು, ಸಂಬಳ ಮರಳಿಸಿ: ಹೈಕೋರ್ಟ್
Team Udayavani, Apr 22, 2024, 3:39 PM IST
![MaMataಗೆ ಮುಖಭಂಗ-25,000 ಶಿಕ್ಷಕರ ನೇಮಕಾತಿ ರದ್ದು, ಸಂಬಳ ಮರಳಿಸಿ: ಹೈಕೋರ್ಟ್](https://www.udayavani.com/wp-content/uploads/2024/04/Bombay-620x381.jpg)
ನವದೆಹಲಿ: ಸರ್ಕಾರಿ ಪ್ರಾಯೋಜಿತ ಹಾಗೂ ಅನುದಾನಿತ ಶಾಲೆಗಳಿಗೆ 2016ರಲ್ಲಿ ಮಾಡಿದ್ದ ಶಿಕ್ಷಕರ ನೇಮಕಾತಿಯನ್ನು ಕೋಲ್ಕತಾ ಹೈಕೋರ್ಟ್ ರದ್ದುಗೊಳಿಸಿದ್ದು, ಇದು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾದಂತಾಗಿದೆ.
ಇದನ್ನೂ ಓದಿ:Court: ಅತ್ಯಾಚಾರಕ್ಕೊಳಗಾದ 14 ವರ್ಷದ ಅಪ್ರಾಪ್ತೆಯ ಗರ್ಭಪಾತಕ್ಕೆ ಸುಪ್ರೀಂಕೋರ್ಟ್ ಅನುಮತಿ
ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ನೇಮಕಗೊಂಡಿದ್ದ ಸುಮಾರು 25,753 ಶಿಕ್ಷಕರು ಇದೀಗ ಕೆಲಸ ಕಳೆದುಕೊಳ್ಳುವ ಭಯದಲ್ಲಿದ್ದು, ಜೊತೆಗೆ ಕರ್ತವ್ಯಕ್ಕೆ ಹಾಜರಾಗಿದ್ದ ದಿನದಿಂದ ಹಿಡಿದು ಈವರೆಗೆ ಪಡೆದ ಸಂಬಳವನ್ನು ಶೇ.12ರಷ್ಟು ಬಡ್ಡಿದರದೊಂದಿಗೆ ವಾಪಸ್ ಮರಳಿಸುವಂತೆ ಹೈಕೋರ್ಟ್ ಸಂದೇಶ ರವಾನಿಸಿದೆ.
ಖಾಲಿ OMR ಶೀಟ್ ಸಲ್ಲಿಸಿದ ನಂತರ ಕಾನೂನು ಬಾಹಿರವಾಗಿ ನೇಮಕಗೊಂಡ ಶಾಲಾ ಶಿಕ್ಷಕರು ನಾಲ್ಕು ವಾರಗಳಲ್ಲಿ ತಮ್ಮ ವೇತನ ಹಿಂದಿರುಗಿಸಬೇಕು ಎಂದು ನ್ಯಾಯಮೂರ್ತಿ ದೇಬಂಗ್ಸು ಬಸಾಕ್ ಮತ್ತು ನ್ಯಾಯಮೂರ್ತಿ ಶಬ್ಬರ್ ರಶೀದಿ ಅವರನ್ನೊಳಗೊಂಡ ಪೀಠ ಆದೇಶ ನೀಡಿದೆ. ಅಷ್ಟೇ ಅಲ್ಲ ಈ ಶಿಕ್ಷಕರ ಸಂಬಳ ವಸೂಲಿ ಮಾಡುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗೆ ವಹಿಸಲಾಗಿದೆ.
ಏತನ್ಮಧ್ಯೆ ನೇಮಕಾತಿಯಲ್ಲಿ ತರಬೇತಿಗೆ ಆಯ್ಕೆಯಾಗಿದ್ದ ಸೋಮ ದಾಸ್ ಎಂಬಾತ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಮಾನವೀಯತೆ ದೃಷ್ಠಿಯಿಂದ ಆತನನ್ನು ಕೆಲಸದಲ್ಲಿ ಮುಂದುವರಿಯುವಂತೆ ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.
ಸುಪ್ರೀಂಕೋರ್ಟ್ ನಿರ್ದೇಶನದಂತೆ, ಈ ಪ್ರಕರಣದ ಕುರಿತು ನೇಮಕಾತಿ ಪ್ರಕ್ರಿಯ ಬಗ್ಗೆ ಸಿಬಿಐ ತನಿಖೆ ನಡೆಸಿ, ಮೂರು ತಿಂಗಳೊಳಗೆ ವರದಿ ಒಪ್ಪಿಸುವಂತೆ ತಿಳಿಸಿತ್ತು, ವೆಸ್ಟ್ ಬೆಂಗಾಲ್ ಸ್ಕೂಲ್ ಸರ್ವೀಸ್ ಕಮಿಷನ್ (ಡಬ್ಲ್ಯುಬಿ ಎಸ್ ಎಎಸ್ ಸಿ) ಹೊಸದಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ಸೂಚನೆ ನೀಡಿದೆ.
ಕೋಲ್ಕತಾ ಹೈಕೋರ್ಟ್ ತೀರ್ಪಿನ ವಿರುದ್ಧ ಪಶ್ಚಿಮಬಂಗಾಳ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ. ಈಗಾಗಲೇ ಶಿಕ್ಷಕರ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಮತ್ತು ಮಾಜಿ ಅಧಿಕಾರಿಗಳು ಜೈಲಿನಲ್ಲಿದ್ದಾರೆ.
ಟಾಪ್ ನ್ಯೂಸ್
![Rain Heavy](https://www.udayavani.com/wp-content/uploads/2024/07/Rain-Heavy-415x276.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![1-asaas](https://www.udayavani.com/wp-content/uploads/2024/07/1-asaas-150x100.jpg)
Manipur; ಪರಿಹಾರ ಶಿಬಿರಗಳಿಗೆ ರಾಹುಲ್ ಗಾಂಧಿ ಭೇಟಿ: ಅಚಲ ಬದ್ಧತೆ ಎಂದ ಕಾಂಗ್ರೆಸ್
![Sandeshkhali Case:ಸಿಬಿಐ ತನಿಖೆ ಎತ್ತಿಹಿಡಿದ ಸುಪ್ರೀಂ,ಪಶ್ಚಿಮಬಂಗಾಳ ಸರ್ಕಾರದ ಅರ್ಜಿ ವಜಾ!](https://www.udayavani.com/wp-content/uploads/2024/07/Apex-150x84.jpg)
Sandeshkhali Case:ಸಿಬಿಐ ತನಿಖೆ ಎತ್ತಿಹಿಡಿದ ಸುಪ್ರೀಂ,ಪಶ್ಚಿಮಬಂಗಾಳ ಸರ್ಕಾರದ ಅರ್ಜಿ ವಜಾ!
![Compulsory menstrual leave issue; What did the Supreme Court say?](https://www.udayavani.com/wp-content/uploads/2024/07/menstrual-150x83.jpg)
Menstrual Leave; ಕಡ್ಡಾಯ ಮುಟ್ಟಿನ ರಜೆ ವಿಚಾರ; ಸುಪ್ರೀಂ ಕೋರ್ಟ್ ಹೇಳಿದ್ದೇನು?
![Tragedy: ರೈಲು ಹತ್ತುವ ವೇಳೆ ರೈಲಿನಡಿ ಬಿದ್ದು ಎರಡೂ ಕಾಲನ್ನು ಕಳೆದುಕೊಂಡ ಮಹಿಳೆ](https://www.udayavani.com/wp-content/uploads/2024/07/train-1-150x103.jpg)
Tragedy: ರೈಲು ಹತ್ತುವ ವೇಳೆ ರೈಲಿನಡಿ ಬಿದ್ದು ಎರಡೂ ಕಾಲುಗಳನ್ನು ಕಳೆದುಕೊಂಡ ಮಹಿಳೆ
![Bus Overturns: ಹರಿಯಾಣದಲ್ಲಿ ಬಸ್ ಪಲ್ಟಿಯಾಗಿ 40 ಮಕ್ಕಳಿಗೆ ಗಾಯ, ಆಸ್ಪತ್ರೆಗೆ ದಾಖಲು](https://www.udayavani.com/wp-content/uploads/2024/07/haryana-150x84.jpg)
Bus Overturns: ಹರಿಯಾಣದಲ್ಲಿ ಬಸ್ ಪಲ್ಟಿಯಾಗಿ 40 ಮಕ್ಕಳಿಗೆ ಗಾಯ, ಆಸ್ಪತ್ರೆಗೆ ದಾಖಲು
MUST WATCH
ಹೊಸ ಸೇರ್ಪಡೆ
![Rain Heavy](https://www.udayavani.com/wp-content/uploads/2024/07/Rain-Heavy-150x100.jpg)
Heavy Rain ಅಬ್ಬರ; ಜು.9 ರಂದು ಉಡುಪಿ ಜಿಲ್ಲಾದ್ಯಂತ ಪಿಯುಸಿವರೆಗೆ ರಜೆ
![1-asaas](https://www.udayavani.com/wp-content/uploads/2024/07/1-asaas-150x100.jpg)
Manipur; ಪರಿಹಾರ ಶಿಬಿರಗಳಿಗೆ ರಾಹುಲ್ ಗಾಂಧಿ ಭೇಟಿ: ಅಚಲ ಬದ್ಧತೆ ಎಂದ ಕಾಂಗ್ರೆಸ್
![Sandeshkhali Case:ಸಿಬಿಐ ತನಿಖೆ ಎತ್ತಿಹಿಡಿದ ಸುಪ್ರೀಂ,ಪಶ್ಚಿಮಬಂಗಾಳ ಸರ್ಕಾರದ ಅರ್ಜಿ ವಜಾ!](https://www.udayavani.com/wp-content/uploads/2024/07/Apex-150x84.jpg)
Sandeshkhali Case:ಸಿಬಿಐ ತನಿಖೆ ಎತ್ತಿಹಿಡಿದ ಸುಪ್ರೀಂ,ಪಶ್ಚಿಮಬಂಗಾಳ ಸರ್ಕಾರದ ಅರ್ಜಿ ವಜಾ!
![Shirva; ವಿಜಯಾ ಬ್ಯಾಂಕ್ ನಿವೃತ್ತ ಚೀಫ್ ಮ್ಯಾನೇಜರ್ ಕೆ. ದಿವಾಕರ ಮಾರ್ಲ ನಿಧನ](https://www.udayavani.com/wp-content/uploads/2024/07/shirva-150x83.jpg)
Shirva; ವಿಜಯಾ ಬ್ಯಾಂಕ್ ನಿವೃತ್ತ ಚೀಫ್ ಮ್ಯಾನೇಜರ್ ಕೆ. ದಿವಾಕರ ಮಾರ್ಲ ನಿಧನ
![SSMB29: ಮಹೇಶ್ – ಪ್ರಭಾಸ್ ಚಿತ್ರದ ಕಲಾವಿದರಿಗೆ ನಟನೆಯ ಟಿಪ್ಸ್ ನೀಡಲಿದ್ದಾರೆ ಹಿರಿಯ ನಟ](https://www.udayavani.com/wp-content/uploads/2024/07/15-4-150x90.jpg)
SSMB29: ಮಹೇಶ್ – ಪ್ರಭಾಸ್ ಚಿತ್ರದ ಕಲಾವಿದರಿಗೆ ನಟನೆಯ ಟಿಪ್ಸ್ ನೀಡಲಿದ್ದಾರೆ ಹಿರಿಯ ನಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.