![iOS 18 ನಲ್ಲಿ ಕನ್ನಡ ಸೇರಿ, ಭಾರತೀಯ ಭಾಷೆಗಳ ಬೆಂಬಲಕ್ಕೆ ಆದ್ಯತೆ](https://www.udayavani.com/wp-content/uploads/2024/07/iphone-415x279.jpg)
ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ
ಮೌನಾಚರಣೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು
Team Udayavani, Apr 22, 2024, 5:54 PM IST
![ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ](https://www.udayavani.com/wp-content/uploads/2024/04/Maha-620x297.jpg)
■ ಉದಯವಾಣಿ ಸಮಾಚಾರ
ಮಹಾಲಿಂಗಪುರ: ನರೇಂದ್ರ ಮೋದಿಯವರು ದೇಶಕ್ಕೆ ಸಿಕ್ಕ ಅಪರೂಪದ ರಾಜಕಾರಣಿ. ಭಾರತ ದೇಶದ ರಕ್ಷಣೆಗಾಗಿ ಮೋದಿ 3ನೇ ಬಾರಿಯೂ ಪ್ರಧಾನಿಯಾಗಬೇಕು ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ನಮೋ ಬ್ರಿಗೇಡ್ ಮಹಾಲಿಂಗಪುರ ಘಟಕದ ವತಿಯಿಂದ ಸ್ಥಳೀಯ ಕೆಎಲ್ಇ ಕಾಲೇಜು ಎದುರಿನ ಮೈದಾನದಲ್ಲಿ ನಮೋ ಭಾರತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರ ದಿಟ್ಟ ನಿರ್ಧಾರಗಳಿಂದ ಇಂದು ಭಾರತ ಜಗತ್ತಿನ 5ನೇ ಆರ್ಥಿಕ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಬೆಳೆದು ನಿಂತಿದೆ. ತ್ರಿವಳಿ ತಲಾಖ್ ರದ್ಧತಿಯಿಂದ ಮುಸ್ಲಿಂ ಮಹಿಳೆಯರ
ಶಕ್ತಿಯನ್ನು ಹೆಚ್ಚಿಸಿದ್ದಾರೆ.
ಸಂವಿಧಾನ ಶಿಲ್ಪಿ ಅಂಬೇಡ್ಕರ್ಗೆ ಕಾಂಗ್ರೆಸ್ನಿಂದ ಅನ್ಯಾಯವಾಗಿದೆ. ಮೋದಿಯವರು ಅಂಬೇಡ್ಕರ್ ಜನ್ಮಸ್ಥಳ, ವಿದ್ಯಾಭ್ಯಾಸ ಸ್ಥಳ, ಸಮಾಧಿಗಳನ್ನು ಪಂಚತೀರ್ಥಗಳೆಂದು ಅಭಿವೃದ್ಧಿ ಮಾಡಿದ್ದಾರೆ ಎಂದರು. ಸಾನಿಧ್ಯ ವಹಿಸಿದ್ದ ಹುಕ್ಕೇರಿಯ
ಕ್ಯಾರಗುಡ್ಡ ಮಠದ ಅಭಿನವ ಮಂಜುನಾಥ ಮಹಾಸ್ವಾಮೀಜಿ ಮಾತನಾಡಿದರು.
ವಿದ್ಯಾರ್ಥಿನಿ ನೇಹಾ ಹಿರೇಮಠ ಅವರಿಗೆ ಮೌನಾಚರಣೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಂತರ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಪನೆ ಮಾಡಿ ನಮೋ ಭಾರತ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ, ತೇರದಾಳ ಶಾಸಕ ಸಿದ್ದು ಸವದಿ, ಮಹಾಲಿಂಗಪುರ ನಮೋ ಬ್ರಿಗೇಡ್ ಮುಖಂಡರಾದ ರವಿ ಜವಳಗಿ, ಸಚಿನ ಕಲ್ಮಡಿ, ರಾಘು ಗರಗಟ್ಟಿ, ಸಂಗಮೇಶ ಅಂಬಲ್ಯಾಳ, ತಮ್ಮಣ್ಣಿ ಆದೆಪ್ಪನವರ, ರಾಕೇಶ ಕೆಸರಗೊಪ್ಪ, ನಂದು ಲಾತೂರ, ಆನಂದ ಶಿರಗುಪ್ಪಿ, ಮಹಾಲಿಂಗ ದೇಸಾಯಿ, ಮಂಜು ಗೊಂಬಿ, ರವಿ ಗಿರಿಸಾಗರ, ವಿನೋದ ಹುಣಶ್ಯಾಳ, ಶಶಿ ಬದ್ನಿಕಾಯಿ, ಸಚಿನ್ ಖೋತ್, ರಾಘು ಪವಾರ, ಶ್ರೀಶ ಬುದ್ನಿ, ಮಹಾಲಿಂಗ ಶಿವಣಗಿ, ಬಿಜೆಪಿ ಮುಖಂಡರಾದ ಬಸನಗೌಡ ಪಾಟೀಲ, ಮಹಾಂತೇಶ ಹಿಟ್ಟಿನಮಠ, ಪ್ರಹ್ಲಾದ ಸಣ್ಣಕ್ಕಿ, ಆನಂದ ಕಂಪು, ಬಸವರಾಜ ಹಿಟ್ಟಿನಮಠ, ಜಿ.ಎಸ್.ಗೊಂಬಿ, ಮಹಾಲಿಂಗಪ್ಪ ಕುಳ್ಳೊಳ್ಳಿ, ಶ್ರೀಮಂತ ಹಳ್ಳಿ, ಮನೋಹರ ಶಿರೋಳ, ಸಿದ್ದುಗೌಡ ಪಾಟೀಲ, ಶಿವಾನಂದ ತಿಪ್ಪಾ, ಪರಪ್ಪ
ಹುದ್ದಾರ, ಶಿವು ಅಂಗಡಿ, ಶೇಖರ ಅಂಗಡಿ, ವಿಜಯಕುಮಾರ ಸಬಕಾಳೆ ಇದ್ದರು.
ಟಾಪ್ ನ್ಯೂಸ್
![iOS 18 ನಲ್ಲಿ ಕನ್ನಡ ಸೇರಿ, ಭಾರತೀಯ ಭಾಷೆಗಳ ಬೆಂಬಲಕ್ಕೆ ಆದ್ಯತೆ](https://www.udayavani.com/wp-content/uploads/2024/07/iphone-415x279.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Rain ವಿಪತ್ತು ನಿರ್ವಹಣೆಗೆ ಸೂಕ್ತ ಮುಂಜಾಗ್ರತಾ ಕ್ರಮ ಅಗತ್ಯ: ಈರಣ್ಣ](https://www.udayavani.com/wp-content/uploads/2024/07/aa-150x84.jpg)
Rain ವಿಪತ್ತು ನಿರ್ವಹಣೆಗೆ ಸೂಕ್ತ ಮುಂಜಾಗ್ರತಾ ಕ್ರಮ ಅಗತ್ಯ: ಈರಣ್ಣ
![Plastic ತ್ಯಾಜ್ಯ ಮನುಕುಲಕ್ಕೆ ಮಾರಕ: ಫ್ರಾನ್ಸ್ ದೇಶದ ವಿದ್ಯಾರ್ಥಿ ಸೋರೇನ್](https://www.udayavani.com/wp-content/uploads/2024/07/pl-150x82.jpg)
Plastic ತ್ಯಾಜ್ಯ ಮನುಕುಲಕ್ಕೆ ಮಾರಕ: ಫ್ರಾನ್ಸ್ ದೇಶದ ವಿದ್ಯಾರ್ಥಿ ಸೋರೇನ್
![Rabakavi](https://www.udayavani.com/wp-content/uploads/2024/07/Rabakavi-150x90.jpg)
Irrigation: ರೈತರ ವಿಚಾರದಲ್ಲಿ ರಾಜಕಾರಣ ಮಾಡದಿರಿ: ಸಚಿವ ತಿಮ್ಮಾಪುರ
![ಬಹುಮುಖ ಪ್ರತಿಭೆ: ಕಾಲಪೆಟ್ಟಿಗೆಯ ಹಾರ್ಮೋನಿಯಂ ಕಲಾವಿದ ಸದಾಶಿವ ತೇಲಿ](https://www.udayavani.com/wp-content/uploads/2024/07/harmonium-150x98.jpg)
ಬಹುಮುಖ ಪ್ರತಿಭೆ: ಕಾಲಪೆಟ್ಟಿಗೆಯ ಹಾರ್ಮೋನಿಯಂ ಕಲಾವಿದ ಸದಾಶಿವ ತೇಲಿ
![Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ](https://www.udayavani.com/wp-content/uploads/2024/06/Young-Farmer-1-150x86.jpg)
Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.