Yugadi: ಯುಗದ ಆರಂಭದ ಮುನ್ನುಡಿ ಈ ಯುಗಾದಿ


Team Udayavani, Apr 24, 2024, 2:51 PM IST

4-uv-fusion

ನಮ್ಮ ಭಾರತ ದೇಶವು ಸಂಸ್ಕೃತಿ, ಸಂಪ್ರದಾಯ ಆಚಾರ ವಿಚಾರಗಳ ನೆಲೆಬೀಡಾಗಿದೆ. ಸನಾತನ ಕಾಲದಿಂದಲೂ ನಮ್ಮ ನಾಡು ಸಂಸ್ಕೃತಿಮಯವಾಗಿದೆ. ಭಾರತದಂತೆಯೇ ನಮ್ಮ ಕರ್ನಾಟಕ, ಕನ್ನಡ ನಾಡು ಸಹ ಸಂಸ್ಕೃತಿಯಿಂದ ಮೆರೆಯುವ ಸಿರಿನಾಡಾಗಿದೆ.

ಅನಾದಿ ಕಾಲದಿಂದಲೂ ನಮ್ಮ ಪೂರ್ವಿಕರು ಕಾಲಕ್ಕೆ ತಕ್ಕಂತೆ ಹಲವಾರು ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದಾರೆ. ಪ್ರತಿಯೊಂದು ಹಬ್ಬದಲ್ಲೂ ಒಂದೊಂದು ವಿಶೇಷತೆಗಳಿರುತ್ತದೆ. ಅದರಂತೆಯೇ ನಮಗೆಲ್ಲಾ ಹೊಸವರ್ಷದ ಆರಂಭದ ಕಾಲ, ಯುಗಾರಂಭದ ಕಾಲದ ಹಬ್ಬವೇ, ನಾವೆಲ್ಲಾ ಸಡಗರ ಸಂಭ್ರಮದಿಂದ ಆಚರಿಸುವ ಯುಗಾದಿ ಹಬ್ಬ.

ಯುಗಾದಿ ಎಂಬ ಪದವು ಯುಗ ಮತ್ತು ಆದಿ ಎಂಬ ಎರಡು ಪದಗಳಿಂದ ಸೃಷ್ಟಿಯಾಗಿದೆ. “ಯುಗ’ ಎಂದರೆ ಹೊಸ ಕಾಲ ಎಂದೂ “ಆದಿ’ ಎಂದರೆ ಆರಂಭ ಎಂತಲೂ ಹೊಸ ಕಾಲದ ಹೊಸ ಯುಗದ ಆರಂಭದ ಕಾಲವಾಗಿ ಈ ಯುಗಾದಿ ಹಬ್ಬವನ್ನು ಆಚರಿಸುತ್ತೇವೆ.

ಈ ಹಬ್ಬವನ್ನು ನಮ್ಮ ಹಿಂದೂ ಧರ್ಮದವರು ಹೊಸ ವರ್ಷವೆಂದೂ ಕರೆಯುತ್ತೇವೆ, ಹೀಗೆ ಕರೆಯಲು ಕಾರಣಗಳೂ ಇವೆ. ಪ್ರಕೃತಿಯಲ್ಲಿ ಆಗುವ ನೂತನ ಬದಲಾವಣೆಗಳು. ಎಲ್ಲಿ ಕಣ್ಣರಳಿಸಿ ನೋಡಿದರೂ ಸುತ್ತಮುತ್ತಲಿನ ವಾತಾವರಣವೆಲ್ಲವೂ ಹಸುರು ಚಿಗುರಿನಿಂದ ಕಂಗೊಳಿಸುತ್ತಿರುತ್ತದೆ. ಮರಗಿಡ ಬಳ್ಳಿಗಳೆಲ್ಲವೂ ಚಿಗುರೊಡೆದು ಸಂತಸದಿ ನಲಿವ ಹಾಗೆ ಕಾಣುತ್ತದೆ.

ಯುಗಾದಿಯು ಜೀವನದಲ್ಲಿ ನೋವು, ನಲಿವು, ಕಷ್ಟ ಸುಖಗಳು ಬರುವುದು ಸರ್ವೇ ಸಾಮಾನ್ಯ. ಕಷ್ಟ ಬಂದಾಗ ಕುಗ್ಗದೆ ಸುಖ ಬಂದಾಗ ಹಿಗ್ಗದೆ ಜೀವನದಲ್ಲಿ ಬರುವ ಎಲ್ಲ ಸವಾಲುಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂಬ ಸಂದೇಶವನ್ನು ಸಾರುವ ದ್ಯೋತಕವಾಗಿದೆ.

ಹಾಗೆಯೇ ನಮ್ಮ ಸಂಪ್ರದಾಯ, ಆಚಾರ, ವಿಚಾರಗಳೆಲ್ಲವೂ ಭದ್ರಬುನಾದಿ ತಳಪಾಯದ ಮೇಲೆ ಅಂತಸ್ತು ಕಟ್ಟಿದ ಹಾಗೆ ಅವು ನಮ್ಮ ಹಿರಿಯರು ಮಾಡಿರುವ ಮೌಲ್ಯಯುತವಾದ ಸಾಧಕಗಳಾಗಿವೆ. ಅವರು ಅನುಸರಿಸಿಕೊಂಡು ಬಂದಿರುವ ಸಂಪ್ರದಾಯ ಆಚಾರ ವಿಚಾರಗಳನ್ನು ನಾವೂ ಪಾಲಿಸುತ್ತಾ ನಮ್ಮ ಮುಂದಿನ ಪೀಳಿಗೆಯವರಿಗೂ ಉಳಿಸಿ ಕಲಿಸಿಕೊಡಬೇಕಾಗಿದೆ. ಏಕೆಂದರೆ ನಮ್ಮ ಯಾವುದೇ ಸಂಪ್ರದಾಯ ಆಚಾರ ವಿಚಾರಗಳನ್ನು ವೈಜ್ಞಾನಿಕ ದೃಷ್ಟಿಯಿಂದ ಪರಿಶೀಲಿಸಿದಾಗ ಅವು ನಮ್ಮ ಆರೋಗ್ಯದ ದೃಷ್ಟಿಯಿಂದ ಮತ್ತು ಜೀವನ ನಿರ್ವಹಿಸುವ ದೃಷ್ಟಿಯಿಂದ ಉತ್ತಮವಾದವುಗಳಾಗಿವೆ. ಅದರಲ್ಲೂ ಈ ಯುಗಾದಿ ಹಬ್ಬದಿಂದ ತಿಳಿದು ಬರುವ ಅಂಶಗಳೆಂದರೆ, ಮಾವು – ಬೇವುಗಳ ಸಮ್ಮಿಲನವು ನಮ್ಮ ಜೀವನದಲ್ಲಿ ಪರಿಸ್ಥಿತಿಗಳು ಏರುಪೇರಾದಾಗಲೂ ಒಂದೇ ರೀತಿಯಲ್ಲಿ ಸಮನಾಗಿ ಸರಿದೂಗಿಸಿಕೊಂಡು ಹೋಗಬೇಕೆನ್ನುವ ಜೀವನ ಸಂದೇಶವನ್ನು ತಿಳಿಸಿಕೊಡುತ್ತದೆ. ಹಾಗೆಯೇ ಬೇವು – ಬೆಲ್ಲದ ಮಿಶ್ರಣವನ್ನು ತಿನ್ನುವುದರಿಂದ ನಮಗೆ ಅಪಾರ ಪ್ರಯೋಜನಗಳಿವೆ.

ಬೇವು ಸೊಪ್ಪು ಸೇವನೆಯಿಂದ ನಮ್ಮ ದೇಹದೊಳಗಿರುವ ಕೆಟ್ಟ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಬೇವು ನಮ್ಮ ಆಯುರ್ವೇದದಲ್ಲಿ ಅತೀಹೆಚ್ಚು ಔಷಧೀಯ ಗುಣಗ ಳನ್ನು ಹೊಂದಿರುವ ವಸ್ತುವಾಗಿದೆ. ಹಾಗೇ ಬೆಲ್ಲವೂ ಸಹ ಕ್ಯಾಲ್ಸಿಯಂ ಮೆಗ್ನಿàಷಿಯಂ ಅಂಶಗಳನ್ನು ಹೆಚ್ಚಾಗಿ ಹೊಂದಿದ್ದು, ನಮ್ಮ ದೇಹದ ಉಷ್ಣಾಂಶವನ್ನು ಸುಸ್ಥಿತಿಯಲ್ಲಿಟ್ಟು ನಮ್ಮ ಆರೋಗ್ಯವನ್ನೂ ಸುಸ್ಥಿರವಾಗಿ ಕಾಪಾಡಿಕೊಳ್ಳಲು ಉತ್ತಮ ಔಷಧವಾಗಿದೆ.

ಹಬ್ಬ ಎಂದರೆ ಏನು ಸಡಗರ ಏನು ಸಂಭ್ರಮ. ಮನೆಯ ಬಾಗಿಲಿಗೆ ಮಾವು ಬೇವಿನ ತಳಿರು ತೋರಣದ ಸಿಂಗಾರ, ಬಾಗಿಲ ಮುಂದೆ ಅಲಂಕೃತಗೊಂಡ ರಂಗೋಲಿ, ತಿನ್ನಲು ಸಿಹಿತಿನಿಸುಗಳ ತಯಾರಿ. ಅದರಲ್ಲೂ ಒಬ್ಬಟ್ಟಿನ ಊಟ ವಿಶೇಷವಾದುದು. ಯುಗಾದಿಯು ಮನೆ ಮಂದಿ ಬಂಧು ಬಳಗದವರೆಲ್ಲ ಒಟ್ಟಾಗಿ ಸೇರಿ ಸಂತಸದಿಂದ ಆಚರಿಸುವ ಹಬ್ಬವಾಗಿದೆ.

ಇಂದಿನ ಆಧುನಿಕತೆ ಬದುಕಲ್ಲಿ ಜನರು ಒಟ್ಟಾಗಿ ಸೇರಿ ಹಬ್ಬ ಆಚರಿಸುವಲ್ಲಿ ವಿಫ‌ಲರಾಗುತ್ತಿದ್ದಾರೆ. ಹಬ್ಬದ ನೆಪದÇÉಾದರೂ ಬಂಧು ಬಾಂಧವರು ಒಟ್ಟಿಗೆ ಸೇರೋಣ ಸಂತಸವ ಹಂಚಿಕೊಳ್ಳೋಣ. ಮನದ ನೋವು ಸಂಕಟಗಳನ್ನು ಮರೆತು ಒಂದಾಗಿ ಬೆರೆತು ಸಂತಸದಲ್ಲಿ ಮಿಂದು ಏಳ್ಳೋಣ.

ಯುಗಾದಿ ಮತ್ತೆ ಮತ್ತೆ ಬರುತಿರಲಿ ಸಡಗರವ ಹೊತ್ತು ಹೊತ್ತು ತರುತಿರಲಿ. ಹೊಸ ವರುಷವು ಎಲ್ಲರಲ್ಲೂ ಹೊಸ ತನವನ್ನು ತಂದು ಹೊಸ ದಾರಿಗೆ ಹೊಸ ಯಶಸ್ಸಿಗೆ ಮುನ್ನುಡಿ ಬರೆಯುವಂತಾಗಲಿ.

-ಭಾಗ್ಯ ಜೆ.

ಮೈಸೂರು

ಟಾಪ್ ನ್ಯೂಸ್

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

darshan

Bellary Jail: ಬೆನ್ನು ನೋವು ತಡೆಯಲಾಗದು..: ಪತ್ನಿ, ಸೋದರನ ಎದುರು ದರ್ಶನ್‌ ಅಳಲು

director suri

Cini Talk: ಸಿನಿಮಾ ನಿರ್ದೇಶಕ ಬಿಝಿನೆಸ್‌ ಮ್ಯಾನ್‌ ಅಲ್ಲ!: ನಿರ್ದೇಶಕ ಸೂರಿ ಮಾತು

Victory is possible if CP Yogeshwar becomes candidate for Channapatna: Arvind Bellad

BJP: ಚನ್ನಪಟ್ಟಣಕ್ಕೆ ಸಿಪಿ ಯೋಗೇಶ್ವರ್ ಅಭ್ಯರ್ಥಿಯಾದರೆ ಗೆಲುವು ಸಾಧ್ಯ: ಅರವಿಂದ ಬೆಲ್ಲದ್

ESI Hospital : ಕೋಲ್ಕತ್ತಾದ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ಓರ್ವ ರೋಗಿ ಮೃತ್ಯು

ESI Hospital: ಬೆಳ್ಳಂಬೆಳಗ್ಗೆ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ರೋಗಿ ಮೃತ್ಯು

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-uv-fusion

Life: ಬಯಸಿದಂತೆಲ್ಲಾ ಇರುವುದಿಲ್ಲ ಬದುಕು

7-uv-fusion

UV Fusion: ಋಣವನ್ನು ಎಂದಿಗೂ ಮರೆಯದಿರೋಣ

6-uv-fusion

UV Fusion: ಸಹವಾಸ ದೋಷ

5-uv-fusion

UV Fusion: ಬೆಳವಣಿಗೆ ಯಾವುದು?

4-uv-fusion

Women: ಹೆಣ್ಣು ಹೊರೆಯಲ್ಲ ಶಕ್ತಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

4

Mangaluru: ಸೇತುವೆ ಮೇಲೆ ಸಂಚಾರ ನಿರ್ಬಂಧದಿಂದ ಕಂಗೆಟ್ಟ ನಾಗರಿಕರು

9-maski

ಆಟೋ, ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು ಸಾರ್ವಜನಿಕರ ಒತ್ತಾಯ

darshan

Bellary Jail: ಬೆನ್ನು ನೋವು ತಡೆಯಲಾಗದು..: ಪತ್ನಿ, ಸೋದರನ ಎದುರು ದರ್ಶನ್‌ ಅಳಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.