![1-mangaluru](https://www.udayavani.com/wp-content/uploads/2024/07/1-mangaluru-415x268.jpg)
ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ
Team Udayavani, Apr 24, 2024, 11:10 AM IST
![ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ](https://www.udayavani.com/wp-content/uploads/2024/04/Chariti-620x463.jpg)
ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ ಉದಯವಾಣಿ ಸಮಾಚಾರ ತೇರದಾಳ: ಚಿನಗುಂಡಿಯ ಗುಡಿದೇವಿ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಮತ್ತು ಮಾರುತೇಶ್ವರ ಓಕುಳಿ ಕಾರ್ಯಕ್ರಮ ಏ. 24ರಿಂದ 27ರವರೆಗೆ ವಿಜೃಂಭಣೆಯಿಂದ ಜರುಗಲಿವೆ ಎಂದು ಕಮೀಟಿಯವರು ತಿಳಿಸಿದ್ದಾರೆ.
24ರಂದು ಬಸವೇಶ್ವರ ಗದ್ದುಗೆಗೆ, ಗುಡಿದೇವತೆಗೆ ಹಾಗೂ ಮಾರುತೇಶ್ವರ ಮೂರ್ತಿಗಳಿಗೆ ಪಂಚಾಮೃತಾಭಿಷೇಕ, ಅಲಂಕಾರ ಪೂಜೆ, ತುಪ್ಪದಾರುತಿ, ಮಂಗಳಾರುತಿಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು. ಬೆಳಿಗ್ಗೆ 9ಗಂಟೆಗೆ ಸ್ಲೋ ಮೋಟರ್ ಸೈಕಲ್ ಸ್ಪರ್ಧೆ, 10ಗಂಟೆಗೆ ಎರೆಡು ಗಾಲಿ ಡಬ್ಬಿ ಜೊತೆ ಟ್ರಾÂಕ್ಟರ್ ರಿವರ್ಸ್ ಓಡಿಸುವ ಸ್ಪರ್ಧೆ, ಅದರಂತೆ 10.30ಕ್ಕೆ ತೆರಬಂಡಿ ಸ್ಪರ್ಧೆಗಳು ಜರುಗುತ್ತವೆ.
ಗುರುವಾರ ಬೆಳಗ್ಗೆ 9ಕ್ಕೆ ಕಬಡ್ಡಿ ಪಂದ್ಯಾವಳಿಗಳು, ಮಧ್ಯಾಹ್ನ 2ಗಂಟೆಗೆ ಸಂಗ್ರಾಮ ಕಲ್ಲು ಎತ್ತುವ ಸ್ಪರ್ಧೆ ಹಾಗೂ ಮಧ್ಯಾಹ್ನ 3ಗಂಟೆಗೆ ಗುಂಡು ಎತ್ತುವ ಸ್ಪರ್ಧೆ ಹಾಗೂ ಸಂಜೆ 5ಗಂಟೆಗೆ ಮೊಸರು ಗಡಿಗೆ ಒಡೆಯುವ ಸ್ಪರ್ಧೆ ಜರುಗಲಿವೆ. 26ರಂದು ಬೆಳಗ್ಗೆ 8ಗಂಟೆಗೆ ಕೃಷ್ಣಾ ನದಿಯಿಂದ ಕುಂಭ, ಆರುತಿ ಹಾಗೂ ಡೊಳ್ಳಿನ ವಾಲಗ ಸೇರಿದಂತೆ ಸಕಲ ಮಂಗಳವಾಧ್ಯಗಳೊಂದಿಗೆ ಶ್ರೀ
ಗುಡಿದೇವಿ ದೇವಸ್ಥಾನದ ವರೆಗೆ ಆಗಮನವಾಗುತ್ತದೆ. ಪ್ರಾತಃಕಾಲದಿಂದಲೆ ಭಕ್ತರ ಹರಕೆಗಳ ಅರ್ಪಣೆ ನಡೆಯಲಿದೆ. 12ಗಂಟೆಗೆ
ವಿಶೇಷ ಅಭಿಷೇಕ, ದೇವಿಯ ಪೂಜಾ ಸಮಾರಂಭ,
ಸೀಮಿಲಕ್ಕವ್ವನ ಅಭಿಷೇಕ, ಗ್ರಾಮದ ದೇವತೆಗಳಿಗೆ ಭಕ್ತರು ಉಡಿ ತುಂಬುವ ಕಾರ್ಯಕ್ರಮ, ಶುಕ್ರವಾರ ಸಂಜೆ 5ಕ್ಕೆ ಭವ್ಯ ರಥೋತ್ಸವ ಜರುಗಲಿದೆ. ತ್ರಿ 10.30ಕ್ಕೆ ವಿವಿಧ ಖ್ಯಾತ ಕಲಾವಿದರಿಂದ ಪ್ರಸಿದ್ಧ ಡೊಳ್ಳಿನ ಪದಗಳ ಕಾರ್ಯಕ್ರಮವಿದೆ. ಶುಕ್ರವಾರ
ಬೆಳಗ್ಗೆ 9ಕ್ಕೆ ಮಹಿಳಾ ಸೈಕಲ್ ಸ್ಪರ್ಧೆ ಜರುಗುತ್ತದೆ. ರಥೋತ್ಸವದ ಬಳಿಕ ಸಂಜೆ 7ಕ್ಕೆ ಪರಸು ಕೋಲೂರ ಮತ್ತು ಮಾಳು ನಿಪನಾಳ ಅವರಿಂದ ರಸಮಂಜರಿ ಜರುಗುತ್ತದೆ.
ಶನಿವಾರ ಏ. 27ರಂದು ಚಿನಗುಂಡಿ ಚಿನ್ಮಯ ಮೂರ್ತಿ ಆದಿಶಕ್ತಿ ಆದಿಮಾಯೆ ಮಲ್ಲಾಡದಿಂದ ಕೃಷ್ಣೆಯ ಮೂಲಕ ಬಂದು ಗ್ರಾಮಕ್ಕೆ ಸೌಭಾಗ್ಯ ತಂದ ಮಹಾಲಕ್ಷ್ಮೀ ಶ್ರೀ ಗುಡಿದೇವಿ ದೇವಸ್ಥಾನದಲ್ಲಿ ವಿಶೇಷ ಪೂಜಾಭಿಷೇಕಗಳು ಜರುಗುತ್ತವೆ. ಮಧ್ಯಾಹ್ನ ದೇವಿಗೆ, ಮುತೈದೆಯರಿಗೆ ಉಡಿ ತುಂಬುವ ಮತ್ತು ಡೊಳ್ಳಿನ ವಾಲಗ ಮೇಳದೊಂದಿಗೆ ಸಿಡಿ ಆಡುವ, ಶಸ್ತ್ರ ಆಡುವ ಭಕ್ತಿಯ ಕಾರ್ಯಕ್ರಮ, ಸಂಜೆ ಮಾರುತೇಶ್ವರ ಓಕುಳಿ, ರಾತ್ರಿ ಮಾಳಿಂಗೇಶ್ವರ ಯುವಕ ಸಂಘದವರಿಂದ ಧರ್ಮದ ನುಡಿ ಬೆಂಕಿಯ ಕಿಡಿ ಎಂಬ ನಾಟಕ ಪ್ರದರ್ಶನವಿದೆ.
ಕಾರ್ಯಕ್ರಮಗಳ ನೇತೃತ್ವವನ್ನು ಬಬಲಾದಿಯ ಶ್ರೀ ಸಿದ್ಧರಾಮಯ್ಯ ಅಜ್ಜ, ವೇದಮೂರ್ತಿ ಓಂಕಾರಯ್ಯ ಶ್ರೀ, ಕಕಮರಿಯ ಸದ್ಗುರು ಅಭಿನವ ಗುರುಲಿಂಗಜಂಗಮ ಶ್ರೀ, ಮರೆಗುದ್ದಿಯ ಪ್ರಭು ತೋಂಟದಾರ್ಯ ಶ್ರೀ, ಲಿಂಗನೂರಿನ ಶಿವಪುತ್ರಾವಧೂತ ಶ್ರೀ, ಜಕನೂರಿನ ಶಿವಯ್ಯ ಅಜ್ಜ, ಚಿಕ್ಕಪಡಸಲಗಿಯ ಅಕ್ಕಮಹಾದೇವಿ, ಗ್ರಾಮದ ರುಕ್ಮಮ್ಮಾತಾಯಿಯವರು ವಹಿಸುವರು. ಸ್ಪರ್ಧೆ ಹಾಗೂ ಇತರೆ ಮಾಹಿತಿಗಾಗಿ 8861988971, 9980451781 ಇಲ್ಲಿಗೆ ಸಂಪರ್ಕಿಸಬಹುದೆಂದು ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
![1-mangaluru](https://www.udayavani.com/wp-content/uploads/2024/07/1-mangaluru-415x268.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Rabakavi](https://www.udayavani.com/wp-content/uploads/2024/07/Rabakavi-150x90.jpg)
Irrigation: ರೈತರ ವಿಚಾರದಲ್ಲಿ ರಾಜಕಾರಣ ಮಾಡದಿರಿ: ಸಚಿವ ತಿಮ್ಮಾಪುರ
![ಬಹುಮುಖ ಪ್ರತಿಭೆ: ಕಾಲಪೆಟ್ಟಿಗೆಯ ಹಾರ್ಮೋನಿಯಂ ಕಲಾವಿದ ಸದಾಶಿವ ತೇಲಿ](https://www.udayavani.com/wp-content/uploads/2024/07/harmonium-150x98.jpg)
ಬಹುಮುಖ ಪ್ರತಿಭೆ: ಕಾಲಪೆಟ್ಟಿಗೆಯ ಹಾರ್ಮೋನಿಯಂ ಕಲಾವಿದ ಸದಾಶಿವ ತೇಲಿ
![Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ](https://www.udayavani.com/wp-content/uploads/2024/06/Young-Farmer-1-150x86.jpg)
Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ
![Agriculture ಹಿರೇಕಾಯಿ ಬೆಳೆಯಿಂದ ಉತ್ತಮ ಆದಾಯ; ಕೃಷಿಕ ಧನಪಾಲ ಯಲ್ಲಟ್ಟಿ ಸಾಧನೆ](https://www.udayavani.com/wp-content/uploads/2024/06/ag-1-150x93.jpg)
Agriculture ಹೀರೆಕಾಯಿ ಬೆಳೆಯಿಂದ ಉತ್ತಮ ಆದಾಯ; ಕೃಷಿಕ ಧನಪಾಲ ಯಲ್ಲಟ್ಟಿ ಸಾಧನೆ
![Mudhol ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಒತ್ತಾಯಿಸಿ ಪ್ರತಿಭಟನೆ](https://www.udayavani.com/wp-content/uploads/2024/06/sugar-factory-mudhol-150x95.jpg)
Mudhol ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಒತ್ತಾಯಿಸಿ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
![1-mangaluru](https://www.udayavani.com/wp-content/uploads/2024/07/1-mangaluru-150x97.jpg)
Mangaluru; ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ: ಸಿಲುಕಿದ ಕಾರ್ಮಿಕರು
![10](https://www.udayavani.com/wp-content/uploads/2024/07/10-2-150x90.jpg)
ದೇವಮಾನವರ ದರ್ಶನ..ಧಾರ್ಮಿಕ ಕಾರ್ಯಕ್ರಮದ ವೇಳೆ ನಡೆದ ದೇಶದ ಪ್ರಮುಖ ಕಾಲ್ತುಳಿತ ಘಟನೆಗಳಿವು
![Rajya Sabha: ಪ್ರಧಾನಿ ರಿಮೋಟ್ ಹೇಳಿಕೆಗೆ ರೊಚ್ಚಿಗೆದ್ದ ವಿಪಕ್ಷಗಳು!…ಕಲಾಪಕ್ಕೆ ಬಹಿಷ್ಕಾರ](https://www.udayavani.com/wp-content/uploads/2024/07/Modi-4-150x92.jpg)
Rajya Sabha: ಪ್ರಧಾನಿ ರಿಮೋಟ್ ಹೇಳಿಕೆಗೆ ರೊಚ್ಚಿಗೆದ್ದ ವಿಪಕ್ಷಗಳು!…ಕಲಾಪಕ್ಕೆ ಬಹಿಷ್ಕಾರ
![1-honnavara](https://www.udayavani.com/wp-content/uploads/2024/07/1-honnavara-150x90.jpg)
Honnavara: ಪಟ್ಟಣ ಪಂಚಾಯತ್ ನಲ್ಲಿ ಲೋಕಾಯುಕ್ತ ದಾಳಿ
![1-vijayendra](https://www.udayavani.com/wp-content/uploads/2024/07/1-vijayendra-150x100.jpg)
CM ಸಿದ್ದರಾಮಯ್ಯ ಮನೆ ಮುತ್ತಿಗೆಗೆ ಯತ್ನ; ಬಿಜೆಪಿ ಪ್ರಮುಖ ನಾಯಕರು ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.