UV Fusion: ನಿನ್ನೊಳಗೆ ನೀ ಇರುವಾಗ…
Team Udayavani, Apr 24, 2024, 5:06 PM IST
ಜೀವನ ಎಂಬುದು ನೀರಿನ ಮೇಲಿನ ಗುಳ್ಳೆ. ಯಾವಾಗ ಒಡೆದು ಹೋಗುವುದೋ ತಿಳಿಯದು.
ಜೀವನವೆಂಬ ಈ ಮೂರು ದಿನದ ಸಂತೆಯನ್ನು ಸಂತೋಷದಿಂದ ಕಳೆಯಬೇಕಾದರೆ ಮೂರು ಸರಳ ಮಾರ್ಗಗಳಿವೆ. ಮೊದಲನೆಯ ಮಾರ್ಗ “ನಗು’. ಖುಷಿ ಇರಲಿ, ದುಃಖವಿರಲಿ ನಿನ್ನ ಮುಖದಲ್ಲಿ ಒಂದು ನಗುವಿರಲಿ. ನೀನು ನಿನ್ನ ನಗುವನ್ನು ಇತರರಿಗೆ ಹಂಚಿದರೆ, ಆ ನಗು ನಿನಗೆ ಹಿಂತಿರುಗಿ ಸಿಗುತ್ತದೆ ಎಂಬ ನಂಬಿಕೆ ಇರಲಿ. ನಾವು ಇತರರಿಗೆ ನೀಡುವ ಖುಷಿಯಾಗಲಿ, ದುಃಖವಾಗಲಿ ಅದು ಹಿಂತಿರುಗಿ ಮತ್ತೆ ನಮಗೇ ಯಾವತ್ತಾದರು ಒಂದು ದಿನ ಸಿಗುತ್ತದೆ. ಆದ್ದರಿಂದ ದುಃಖಕ್ಕಿಂತ ಹೆಚ್ಚು ಖುಷಿಯನ್ನೇ ಇತರರಿಗೆ ಹಂಚೋಣ.
ಎರಡನೇ ಮಾರ್ಗ “ಸ್ವ ಪ್ರೀತಿ;. ಇಡೀ ಪ್ರಪಂಚ ನಿನ್ನ ಶತ್ರುವಾದರೂ ಪರವಾಗಿಲ್ಲ, ನೀನಗೆ ನೀನೇ ಶತ್ರುವಾಗಬಾರದು. ಇಡೀ ಪ್ರಪಂಚ ನಿನ್ನ ಶತ್ರುವಾದರೂ ಬದುಕಬಹುದು ಆದರೆ ನಿನಗೆ ನೀನೇ ಶತ್ರುವಾದರೆ ಬದುಕಿದ್ದೂ ಸತ್ತಂತೆ.
ಮೂರನೇ ಮಾರ್ಗ “ಆಗುವುದೆಲ್ಲ ಒಳ್ಳೆಯದಕ್ಕೆ’. ಖುಷಿಯ ಸಂದರ್ಭವಿರಲಿ, ದುಃಖದ ಸನ್ನಿವೇಶವಿರಲಿ ಎಲ್ಲ ಕಷ್ಟಗಳು ನನಗೇ ಏಕೆ ಬರುತ್ತಿದೆ? ಎಂದು ಅಂದುಕೊಳ್ಳದೆ ಆಗುವುದೆಲ್ಲ ಒಳ್ಳೆಯದಕ್ಕೆ ಎಂಬ ಮಾತನ್ನು ನೆನಪಿಸಿಕೊಳ್ಳೋಣ. ಆಗ ಮಾತ್ರ ನಮ್ಮ ಬದುಕು ಸುಂದರವಾಗಿರಲು ಸಾಧ್ಯ. ಕಷ್ಟ, ಸುಖ ಒಂದು ನಾಣ್ಯದ ಎರಡು ಮುಖವಿದ್ದಂತೆ. ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ ಜೀವಿಸುವುದೇ ಸರಳ ಸುಂದರ ಬದುಕಿನ ಗುಟ್ಟು.
-ನಿಖೀತಾ ಕಡೇಶಿವಾಲಯ
ಸರಕಾರಿ ಮಹಿಳಾ ಕಾಲೇಜು, ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
ತಿಮ್ಮಾಪುರ ಮಾತಿಗೆ ಯತ್ನಾಳ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ
Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ
Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ
Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ
Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.