UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು


Team Udayavani, Apr 25, 2024, 11:36 AM IST

7-uv-fusion

ನಗು ಮಾನವನ ಸಹಜ ಪ್ರಕ್ರಿಯೆ.ನಗುವುದರಿಂದ ಆರೋಗ್ಯವು ವೃದ್ಧಿಸುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.ಇತ್ತೀಚಿನ ದಿನಗಳಲ್ಲಿ ಮನಸ್ಸು ಬಿಚ್ಚಿ ನಗುವವರನ್ನು ಕಾಣುವುದೇ ಅಪರೂಪವಾಗಿದೆ. ಯಾಕೆಂದರೆ ಜೀವನವೆಂಬ ಸಾಗರದಲ್ಲಿ ಮುಳುಗಿ ಏಳುವಷ್ಟರಲ್ಲಿ ನಗುವೆಂಬುದೇ ಮಾಸಿ ಹೋಗಿರುತ್ತದೆ. ನಗುವನ್ನು ಕಲಿಸಿದ ಜೀವನ ಅಳುವುದನ್ನು ಕಲಿಸುತ್ತದೆ. ಈಗಿನ ಸಮಾಜದಲ್ಲಿ ಧನ ಸಂಪಾದಿಸುದಕ್ಕಿಂತ ಸಂತೋಷವನ್ನು ಹುಡುಕುವುದರಲ್ಲೇ ತಮ್ಮ ಅರ್ಧ ಜೀವನವನ್ನು ಕಳೆದಿರುತ್ತಾರೆ.

ಒಂದಷ್ಟು ಜನರೊಂದಿಗೆ ಬೆರೆಯಲು ಸಹಕಾರಿಯಾಗುವ ಸಾಧನವೆಂದರೆ ಅದು ನಗು. ಒಮ್ಮೊಮ್ಮೆ ಅನಿಸುವುದು ಬಾಲ್ಯದ ಜೀವನವೇ ಚಂದವೆಂದು ಅಲ್ಲಿ ಯಾವುದೇ ರೀತಿಯ ಮನಸ್ತಾಪಗಳು,ಚಿಂತೆಗಳು ಇರುತ್ತಿರಲಿಲ್ಲ ಹಸನ್ಮುಖದಿಂದ ಎಲ್ಲವನ್ನೂ ನಿಭಾಯಿಸುತ್ತಿದ್ದೆವು ಆದರೆ ಈಗ ಆ ರೀತಿ ಇರಲು ಸಾಧ್ಯವಿಲ್ಲ.ಜೀವನ ಎಂಬ ಸಂತೆಯಲ್ಲಿ ನೋವು ನಲಿವು ಸಹಜ ಅದನ್ನಾವುದನ್ನು ತಲೆಗೆ ಹಚ್ಚಿಕೊಳ್ಳದೆ ಯಾವಾಗಲೂ ನಗುತ್ತಲೇ ಇರಬೇಕು ಯಾಕೆಂದರೆ ನಮ್ಮ ಖುಷಿ ನೋಡಿ ಸಂತೋಷ ಪಡುವ ಮನಸ್ಸುಗಳು ಇದ್ದೆ ಇರುತ್ತದೆ.ಹಾಗೆಂದ ಮಾತ್ರಕ್ಕೆ ನಮ್ಮ ನಗು ಇನ್ನೊಬ್ಬರ ದುಃಖವನ್ನು ಕಡಿಮೆ ಮಾಡುವಂತಿರಬೇಕೆ ಹೊರತು ಜಾಸ್ತಿ ಮಾಡುವಂತಿರಬಾರದು.

ಒಬ್ಬ ವ್ಯಕ್ತಿ ಯಾವಾಗಲೂ ನಗುತ್ತಲೇ ಇರುತ್ತಾನೆ ಎಂದ ಮಾತ್ರಕ್ಕೆ ಅವನಿಗೆ ಯಾವುದೇ ನೋವು ಇಲ್ಲ ಎಂದರ್ಥವಲ್ಲ ತನ್ನ ಬೇಸರವನ್ನು ಯಾರೊಂದಿಗೂ ತೋರಿಸಬಾರದು ಹಾಗೇ ದುಃಖವನ್ನು ಮರೆ ಮಾಚುವು ದಕ್ಕೊಸ್ಕರ ಎಂದಿಗೂ ನಗೆಬೀರುತ್ತಾನೆ.ನಗುವೆಂಬ ಆಭರಣವು ಜೊತೆ ಇದ್ದಾಗ ಬೇರೆಯಾವುದೇ ಆಡಂಬರದ ಒಡವೆಗಳ ಅವಶ್ಯಕತೆ ಇರುವುದಿಲ್ಲ,ನಗು ನಮ್ಮ ಮುಖದ ಕಾಂತಿಯನ್ನು ಹೆಚ್ಚಿಸುವಂತೆ ಮಾಡುತ್ತದೆ.

ಹಾಸ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿ ತಮ್ಮ ಜೀವನವನ್ನು ಕಟ್ಟಿಕೊಂಡ ಹಾಸ್ಯ ಕಲಾವಿದರು, ತಮ್ಮೆಲ್ಲ ನೋವನ್ನು ಬದಿಗಿಟ್ಟು ಲೋಕದ ಜನರನ್ನು ನಗಿಸುವುದಕ್ಕಾಗಿ ಈಗಲೂ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದಾರೆ. ಮನಸ್ಸು ಬಿಚ್ಚಿ ನಕ್ಕಾಗ ನಮ್ಮ ನೋವು ಮರೆ ಯಾಗುವುದರೊಂದಿಗೆ,ಇಡೀ ಜಗತ್ತು ನಮ್ಮ ಕಣ್ಣಿಗೆ ಸುಂದರವಾಗಿ ಕಾಣಿಸಲು ಪ್ರಾರಂಭವಾಗುತ್ತದೆ. ಓ ಮನವೇ ಒಮ್ಮೆಯಾದರೂ ನಕ್ಕು ಬಿಡು ತನಗಾಗಿ ಅಲ್ಲದಿದ್ದರೂ ತನ್ನವರಿಗಾಗಿ.

-ಲಾವಣ್ಯ ನಾಗತೀರ್ಥ

 ವಿವೇಕಾನಂದ ಮಹಾವಿದ್ಯಾಲಯ, ಪುತ್ತೂರು

ಟಾಪ್ ನ್ಯೂಸ್

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ

Katapadi

Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ

1-megha

Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ

1-weqwe

Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು

JK-Congress

J-K Election: ಚುನಾವಣೆ ಫ‌ಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್‌ ಆಕ್ಷೇಪ

1-frr

Risk; ಚಾರ್ ಮಿನಾರ್ ಕಿಟಕಿಗಳಲ್ಲಿ ನಡೆದು ಅಪಾಯಕಾರಿ ಸಾಹಸ: ವೈರಲ್ ವಿಡಿಯೋ

1-vij

Vijayapura;ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ: 184 ಗ್ರಾಂ ಚಿನ್ನ, 80 ಗ್ರಾಂ ಬೆಳ್ಳಿ ಜಪ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

UV Fusion: ಮೃಗಗಳ ಜಗತ್ತು

14-uv-fusion

Women: ಕ್ಷಮಯಾ ಧರಿತ್ರಿ

13-constitution

Constitution: ವಿಶ್ವಕ್ಕೆ ಮಾದರಿ ನಮ್ಮ ಸಂವಿಧಾನ

9-uv-fusion

UV Fusion: ಸ್ವಕಲಿಕೆ ಮತ್ತು ಆತ್ಮಸ್ತೈರ್ಯ

8-uv-fusion-1

UV Fusion: ಭೂತ ಭವಿಷ್ಯ ಬಿಟ್ಟು ಈ ಕ್ಷಣ ಜೀವಿಸಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

police

Uppinangady: ವರದಕ್ಷಿಣೆಗಾಗಿ ನಿತ್ಯ ಮಾನಸಿಕ, ದೈಹಿಕ ಹಿಂಸೆ: ದೂರು ದಾಖಲು

Exam

PG NEET-2024: ನೋಂದಣಿ ವಿಸ್ತರಣೆ

KSRTC VOLVO

Dasara: ಎರಡು ಸಾವಿರ ಹೆಚ್ಚುವರಿ ಬಸ್‌

school

ರಾಜ್ಯ ಪಠ್ಯಕ್ರಮ ಬೋಧನೆ ಕಡ್ಡಾಯ : ಶಾಲೆಗಳಿಗೆ ಶಿಕ್ಷಣ ಇಲಾಖೆ ಸೂಚನೆ

Vaishnodevi-Temple

Famous Goddess Temple: ಗುಹಾಲಯ ಶ್ರೀಮಾತಾ ವೈಷ್ಣೋದೇವಿ ದೇಗುಲ, ಜಮ್ಮು-ಕಾಶ್ಮೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.