![DK-Shivakumar](https://www.udayavani.com/wp-content/uploads/2024/07/DK-Shivakumar-1-415x249.jpg)
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ
ಮೋದಿ ಆಡಳಿತದಿಂದ ಆರ್ಥಿಕ ವ್ಯವಸ್ಥೆಯಲ್ಲಿ ಭಾರತ 5ನೇ ಸ್ಥಾನಕ್ಕೆ
Team Udayavani, Apr 27, 2024, 12:29 AM IST
![ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ](https://www.udayavani.com/wp-content/uploads/2024/04/jp-8-620x383.jpg)
ಕಲಬುರಗಿ: ಎಐಸಿಸಿ ಅಧ್ಯಕ್ಷ ಡಾ| ಮಲ್ಲಿಕಾರ್ಜುನ ಖರ್ಗೆ ಮತ್ತು ಐಎನ್ಡಿಐಎ ಒಕ್ಕೂಟಕ್ಕೆ ಕೇವಲ ಎರಡೇ ಧ್ಯೇಯಗಳಿದ್ದು, ಒಂದು “ಪರಿವಾರ ಬಚಾವೋ, ಎರಡನೆಯದ್ದು “ಭ್ರಷ್ಟಾಚಾರ ಬಚಾವೋ’. ಇವುಗಳನ್ನು ಬಿಟ್ಟರೆ ಅವರಿಗೆ ಬೇರೆ ಯಾವುದೇ ಕಾರ್ಯಕ್ರಮಗಳಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.
ಶುಕ್ರವಾರ ನಗರದ ಗಣೇಶ ಮಂದಿರದಿಂದ ಭಾರೀ ಜನಸ್ತೋಮದೊಂದಿಗೆ ನಡೆದ ಬೃಹತ್ ರೋಡ್ ಶೋ ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಲಬುರಗಿಯ ಖರ್ಗೆ ಮತ್ತು ಇಂಡಿಯಾ ಒಕ್ಕೂಟ ರಾಷ್ಟ್ರದ ಹಿತಾಸಕ್ತಿ, ಅಭಿವೃದ್ಧಿಗೆ ಗಮನಕೊಡದೇ ಪ್ರಸಕ್ತ ಚುನಾವಣೆಯಲ್ಲಿ ತಮ್ಮ ಪರಿವಾರ ಹಾಗೂ ಭ್ರಷ್ಟಾಚಾರ ರಕ್ಷಿಸುವ ಎರಡೇ ಎರಡು ಅಜೆಂಡಾ ಆಧರಿಸಿ ಚುನಾವಣೆ ಕಣಕ್ಕಿಳಿದಿದೆ. ಆದರೆ ಮೋದಿ ಸರಕಾರ ಬಲಿಷ್ಠ ಮತ್ತು ಅಭಿವೃದ್ಧಿಯ ಕನಸಿನದ್ದಾಗಿದೆ. ಕಾಂಗ್ರೆಸ್ ಹಗರಣಗಳ ಸರಕಾರವಾಗಿದೆ. ನೂರಾರು ಹಗರಣಗಳಲ್ಲಿ ಸಿಲುಕಿದ ಕಾಂಗ್ರೆಸ್ ನಾಯಕರು ಹಾಗೂ ಐಎನ್ಡಿಐಎ ಒಕ್ಕೂಟದ ಮುಖಂಡರು ಒಂದೋ ಜೈಲಿನಲ್ಲಿದ್ದಾರೆ ಇಲ್ಲವೇ ಬೇಲ್ನಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಆಡಳಿತದಲ್ಲಿ ಗಣಿ, ಆಗಸ್ತಾ ವೆಸ್ಟ್ಲ್ಯಾಂಡ್, 2ಜಿ, 3ಜಿ, ಕಾಮನ್ವೆಲ್ತ್, ಬಾಹ್ಯಾಕಾಶ ಹಗರಣ ಹೀಗೆ ನೂರಾರು ಹಗರಣಗಳನ್ನು ಮಾಡಿ ಭಾರತವನ್ನು ಕೊಳ್ಳೆ ಹೊಡೆಯಲಾಗಿತ್ತು. ಕಾಂಗ್ರೆಸ್ ಪಕ್ಷ ಭೂಮಿ, ಆಕಾಶ, ಪಾತಾಳ ಯಾವುದನ್ನು ಬಿಡದೆ ಲೂಟಿ ಮಾಡಿದೆ. ಮಮತಾ ಸರಕಾರವು ಶಿಕ್ಷಕರ ನೇಮಕಾತಿ ಹಗರಣ, ಭೂಮಿ ಹಗರಣ, ಆಪ್ ಸರಕಾರ ಅಬಕಾರಿ ಹಗರಣ ಹೀಗೆ ಐಎನ್ಡಿಐಎ ಒಕ್ಕೂಟದ ಪಕ್ಷಗಳಾದ ಡಿಎಂಕೆ, ಟಿಎಂಸಿ, ಸಮಾಜವಾದಿ ಪಕ್ಷ ಹಗರಣಗಳನ್ನು ನಡೆಸಿ ರಾಷ್ಟ್ರದ ಸಂಪತ್ತು ಕೊಳ್ಳೆ ಹೊಡೆದ ದುಷ್ಟ ಕೂಟವಾಗಿದೆ ಎಂದರು.
ಟಾಪ್ ನ್ಯೂಸ್
![DK-Shivakumar](https://www.udayavani.com/wp-content/uploads/2024/07/DK-Shivakumar-1-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Flashing lights of vehicles; ಮೂರು ದಿನದಲ್ಲಿ 3700 ಪ್ರಕರಣ: ಅಲೋಕ್ ಕುಮಾರ್](https://www.udayavani.com/wp-content/uploads/2024/07/alok-1-150x83.jpg)
Flashing lights of vehicles; ಮೂರು ದಿನದಲ್ಲಿ 3700 ಪ್ರಕರಣ: ಅಲೋಕ್ ಕುಮಾರ್
![Kalaburagi; ರಾಮಮಂದಿರ ಹಾಡಿಗೆ ಡಾನ್ಸ್ ಮಾಡಿದ್ದಕ್ಕೆ ಯುವಕನ ಮೇಲೆ ಅನ್ಯಕೋಮಿನವರಿಂದ ಹಲ್ಲೆ](https://www.udayavani.com/wp-content/uploads/2024/07/unnamed-file-150x83.jpg)
Kalaburagi; ರಾಮಮಂದಿರ ಹಾಡಿಗೆ ಡಾನ್ಸ್ ಮಾಡಿದ್ದಕ್ಕೆ ಯುವಕನ ಮೇಲೆ ಅನ್ಯಕೋಮಿನವರಿಂದ ಹಲ್ಲೆ
![Wadi ಬಿಸಿಯೂಟ ಸೇವಿಸಿ 33 ವಿದ್ಯಾರ್ಥಿಗಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು](https://www.udayavani.com/wp-content/uploads/2024/07/WADI-150x75.jpg)
Wadi ಬಿಸಿಯೂಟ ಸೇವಿಸಿ 33 ವಿದ್ಯಾರ್ಥಿಗಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು
![KKRDB Meeting: ಕಲ್ಯಾಣ ಕರ್ನಾಟಕ ಭಾಗದ ಸಚಿವರು- ಶಾಸಕರು ಭಾಗಿ](https://www.udayavani.com/wp-content/uploads/2024/07/KKRDB-150x83.jpg)
KKRDB Meeting: ಕಲ್ಯಾಣ ಕರ್ನಾಟಕ ಭಾಗದ ಸಚಿವರು- ಶಾಸಕರು ಭಾಗಿ
![basavaraj rayareddy](https://www.udayavani.com/wp-content/uploads/2024/07/rayareddy-150x83.jpg)
Kalaburagi; ಸಿಎಂ ಸ್ಥಾನದಿಂದ ಸಿದ್ದರಾಮಯ್ಯರನ್ನ ಇಳಿಸಲು ಆಗುವುದಿಲ್ಲ: ರಾಯರೆಡ್ಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.