UV Fusion: ತೇರು ಬೀದಿಗೆ ಬಂದಿದೆ


Team Udayavani, Apr 27, 2024, 3:41 PM IST

18-

ಚಕ್ರದ ಅನ್ವೇಷಣೆಯನ್ನು ಮಾಡಿದ ಆದಿಮಾನವ ಅನುಕೂಲಕ್ಕೆ ಬಂಡಿಗಳನ್ನು ಬಳಸತೊಡಗಿದ. ಅನಂತರ ಬಳಕೆಗೆ ಬಂದದ್ದು ರಥ. ಪರಿಕಲ್ಪನೆ ನಾಗರಿಕತೆಯಷ್ಟೇ ಪುರಾತನ. ಯುದ್ಧ‌, ಕ್ರೀಡೆ, ಯಾತ್ರೆ, ಪ್ರವಾಸಕ್ಕೆ, ಮೆರವಣಿಗೆಗೆ ರಥದ ಬಳಕೆಯಾಗತೊಡಗಿತು. ಸದ್ಯಕ್ಕೆ ಉತ್ಸವಾದಿಗಳ ಆಚರಣೆಯಲ್ಲಿ ರಥವು ಬಳಕೆಯಲ್ಲಿದೆ. ರಥಬೀದಿಯಲ್ಲಿ ಸಿಂಗಾರಗೊಂಡ ತೇರು ಉತ್ಸವಮೂರ್ತಿಯನ್ನು ಹೊತ್ತು ಸಾಗುವಾಗ ಹೊಮ್ಮುವ ಭಗವನ್ನಾಮದ ವಿದ್ಯುತ್‌ ಸಂಚಾರ ಜಾತ್ರೆಯ ಅಮೋಘ ಕ್ಷಣಗಳಲ್ಲೊಂದು.

ದೇವಾಲಯಗಳ ಉತ್ಸವ ಬೇಸಗೆಗೆ ಸಾಲುಸಾಲಾಗಿ ಬರುತ್ತಿವೆ. ರಥಗುಡ್ಡೆಗಳು ತೇರಮನೆಯಿಂದ ನೇರವಾಗಿ ರಥಬೀದಿಯ ಮೂಲೆ ಯಲ್ಲಿ ನಿಂತು ಸಿಂಗರಿಸಲು ಅಣಿಯಾಗಿವೆ. ರಥ ನಿರ್ಮಾಣ ವೈಶಿಷ್ಟ್ಯವನ್ನು ಹೊಂದಿರುವ ಗಾಂಭೀರ್ಯದ ಶಾಸ್ತ್ರ. ತೇರಿಗೆ ಗಾಲಿಗಳು, ಗಾಲಿಗಳು ರಥಗಡ್ಡೆಗೆ ಅಂಟಿಕೊಂಡರೆ, ಗಡ್ಡೆಯಮೇಲೆ ಅಟ್ಟೆಯ ಮಂಟಪ, ಮಂಟಪದ ಮೇಲೆ ಪತಾಕೆಯ ಗುಂಡನೆಯ ಗೋಪುರ, ಅದರ ಮೇಲೆ ಮುಕುಟ. ಇವಿಷ್ಟು ರಥವನ್ನು ಕಲ್ಪಿಸಿಕೊಂಡರೆ ಕಣ್ಣಿಗೆ ಕಟ್ಟುವ ಆಕೃತಿಗಳು.

ರಥಶಾಲೆಯಿಂದ ಹೊರಬಂದ ರಥಕಟ್ಟೆ-ಗುಡ್ಡೆಗೆ ಉದ್ದನೆಯ ಕಂಬಗಳನ್ನು ಹುಗಿದು ಬಿದಿರಿನ ಸಹಾಯದಿಂದ ಗೂಡನ್ನು ನಿರ್ಮಿಸುತ್ತಾರೆ. ದಿನ ಸಾಗುತ್ತಿದ್ದಂತೆ ಗೋಲಾಕಾರದ ಗೂಡು ಸಿದ್ಧವಾಗುತ್ತದೆ. ಇದಕ್ಕೆ ಅಡ್ಡಡ್ಡವಾಗಿ ಜಂತಿಗಳನ್ನು ಕಟ್ಟಿ ದರೆ ಪಂಜರದಂತಹ ಅಟ್ಟೆ ಸಿದ್ಧ. ಬಿದಿರಿನ ಕೋಲಿಗೆ ಸಿಕ್ಕಿಸಿದ ಪತಾಕೆಗಳನ್ನು ಈ ವರ್ತುಲದ ಪಂಜರಕ್ಕೆ ಕ್ರಮವಾಗಿ ಜೋಡಿಸಿ ಗೋಪುರವನ್ನು ಸಿಂಗರಿಸುತ್ತಾರೆ. ಇಂತಹ ಸಾವಿರಾರು ಪತಾಕೆ ಗಳನ್ನು ಜತನ-ಜಾಗರೂಕತೆಯಿಂದ ಕಟ್ಟುವುದು ಬಹಳ ನಾಜೂಕಿನ ಕೆಲಸ. ಪತಾಕೆಗಳು ಕೆಂಪು, ಬಿಳಿಯ ವಸ್ತ್ರದವುಗಳು.

ತೇರಿನ ಗೋಪುರವು ಕೆಂಪು-ಬಿಳಿಯ ಕ್ರಮಬದ್ಧ ವರ್ಣದಿಂದ ನೋಡುಗರನ್ನು ಸೆಳೆಯುತ್ತದೆ. ಕೆಲಕಡೆಗಳಲ್ಲಿ ಗೋಪುರದ ಪಂಜರಕ್ಕೆ ಬಟ್ಟೆಯನ್ನು ಹೊಡೆಸುವ ವಿಧಾನವೂ ಬಳಕೆಯಲ್ಲಿದೆ. ದಿನಕಳೆದಂತೆ ಕಾಷ್ಠ ಗುಡ್ಡೆಯು ಬ್ರಹ್ಮರಥವಾಗಿ ಮೈದಳೆಯುವ ವಿಧಾನ ಬಹು ರೋಮಾಂಚಕ.

ತೇರಿನ ಗಡ್ಡೆ ಸಾಮಾನ್ಯವಾಗಿ ಚೌಕ,  ನಕ್ಷತ್ರ, ಕಮಲ, ದ್ವಾದಶ, ವರ್ತುಲಾಕೃತಿಯಲ್ಲಿರುತ್ತವೆ.  ಗಡ್ಡೆಯ ಹೊರಮೈಸುತ್ತಲೂ ನವಗ್ರಹ, ದಶಾವತಾರ, ಕಿನ್ನರ, ದ್ವಾರಪಾಲಕ, ಗಂಧರ್ವ, ದೇವತೆ, ಗಜಸಿಂಹ, ಕುಂಜರ, ಮಕರ, ನಾಗ, ಹನುಮಂತ, ಗರುಡ, ಪ್ರಾಣಿಪಕ್ಷಿ, ಹೀಗೆ ಹಲವಾರು ಬಗೆಯ ಕುಸುರಿ ಕೆತ್ತನೆ ಕಂಡು ಬರುತ್ತದೆ. ತೇರಿಗೆ ನಾಲ್ಕು, ಆರು ಚಕ್ರಗಳ ಬಳಕೆಯಿದೆ. ಪುರಿಯ ಜಗನ್ನಾಥನ ರಥಕ್ಕೆ ಹದಿನಾರು ಚಕ್ರಗಳು.

ರಥಕಟ್ಟುವ ಕೆಲಸ ಬಹಳ ನಾಜೂಕಿನ ಕೆಲಸ. ಕೌಶಲಯುಕ್ತ ಕಾರ್ಯವೂ ಹೌದು. ಕೆಲವು ಕಡೆ ಕೇವಲ ಹಗ್ಗದಿಂದ, ಬೆತ್ತದಿಂದ ರಥಕಟ್ಟುವ ಕಾಯಕ ಚಾಲ್ತಿಯಲ್ಲಿದೆ.  ಕಾರ್ಮಿಕರ ಅಭಾವದಿಂದ ಬಹಳ ಕಡೆಗಳಲ್ಲಿ ಕಬ್ಬಿಣದ ಗ್ರಿಲ್ಸ್‌ಗಳು ಶಿಖರದ ಬಿದಿರನ್ನು ಆಕ್ರಮಿಸಿಕೊಂಡಿವೆ. ಬೋಲ್ಟಾಗಳ ಜೋಡಣೆಯಲ್ಲಿ ಅರ್ಧದಿನಕ್ಕೇ ರಥ ಶಿಖರದ ಮೆರುಗನ್ನು ಹೊಂದುತ್ತದೆ. ರಜತ-ಸ್ವರ್ಣ ರಥಗಳ ನಡುವೆಯೂ ಮರದ ಗಡ್ಡೆಯ ರಥಗಳು ಜಾತ್ರೆಯ ಸೊಬಗನ್ನು, ವಿಜೃಂಭಣೆಯ ಮೆರುಗನ್ನು, ಆರಾಧನೆಯ ಉತ್ಸಾಹವನ್ನು ಹೆಚ್ಚಿಸಿವೆ.

- ವಿಶ್ವನಾಥ ಭಟ್‌

ಧಾರವಾಡ

ಟಾಪ್ ನ್ಯೂಸ್

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

Education System: ಶಿಕ್ಷಕರು, ಶಿಕ್ಷಣ ಹೇಗಿದ್ದರೆ ಚೆನ್ನ..?

19-uv-fusion

UV Fusion: ಶಿಕ್ಷಕರೊಂದಿಗಿನ ನೆನಪುಗಳು

18-uv-fusion

UV Fusion: ಬಯಕೆಯ ಬೆನ್ನೇರಿದಷ್ಟು ನೆಮ್ಮದಿ ಮರೀಚಿಕೆಯಷ್ಟೇ?

17-uv-fusion

Kasaragod Inscriptions: ಇತಿಹಾಸದ ಕಥೆ ಹೇಳುವ ಕಾಸರಗೋಡಿನ ಶಾಸನಗಳು

16-uv-fusion

UV Fusion: ಮಾತು ಅತಿಯಾಗದಿರಲಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.