Sandalwood: ಸೋಷಿಯಲ್ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ
Team Udayavani, Apr 28, 2024, 4:05 PM IST
ಸೋಷಿಯಲ್ ಮೀಡಿಯಾ ಕುರಿತು ಹಲವು ನಟ-ನಟಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಮಾತುಗಳನ್ನು ತಿರುಚುವ, ಥಂಬ್ನೈಲ್ ಮೂಲಕ ಅವಹೇಳನ ಮಾಡುವುದನ್ನು ವಿರೋಧಿಸಿದ್ದಾರೆ. ಈಗ ನಟ ಶಿವರಾಜಕುಮಾರ್ ಸಹ ಸೋಷಿಯಲ್ ಮೀಡಿಯಾ ವಿರುದ್ಧ ಕಿಡಿಕಾರಿದ್ದಾರೆ.
ಶನಿವಾರ ಬೆಳಿಗ್ಗೆ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನಡೆದ “ಫಾದರ್’ ಚಿತ್ರದ ಮುಹೂರ್ತದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಎನ್ನುವುದು ಆಟ ಸಾಮಾನು ಆಗಿಬಿಟ್ಟಿದೆ. ನಾವಿದ್ದ ಕಾಲ ಬಹಳ ಚೆನ್ನಾಗಿತ್ತು. ನಾವು ನಿಜಕ್ಕೂ ಪುಣ್ಯ ಮಾಡಿದ್ದೆವು. ಸೋಷಿಯಲ್ ಮೀಡಿಯಾದವರು ದಯವಿಟ್ಟು ಒಳ್ಳೆಯದು ಮಾಡೋಕೆ ನೋಡಿ. ಕೆಟ್ಟದ್ದು ಮಾಡಬೇಡಿ’ ಎಂದು ಕಿವಿಮಾತು ಹೇಳಿದರು.
ಸೋಷಿಯಲ್ ಮೀಡಿಯಾದಿಂದ ತಮ್ಮ ಹಾಗೂ ನಿರ್ಮಾಪಕ- ನಿರ್ದೇಶಕ ಆರ್. ಚಂದ್ರು ಅವರ ಸಂಬಂಧ ಹಾಳಾಗುವುದಿಲ್ಲ ಎಂದ ಅವರು, “ನೀವೇನೇ ಮಾಡಿದರೂ, ನಮ್ಮ ಸಂಬಂಧ ಹಾಳಾಗಲ್ಲ. ನನ್ನ ಮತ್ತು ಚಂದ್ರು ಅವರ ಬಾಂಧವ್ಯ ಯಾವಾಗಲೂ ಚೆನ್ನಾಗಿರುತ್ತದೆ. ನಾನೇನೇ ಇದ್ದರೂ ನೇರವಾಗಿ ಚಂದ್ರು ಅವರನ್ನು ಕೇಳುತ್ತೇನೆ. ಪತ್ರಿಕೋದ್ಯೋಮದ ನೈತಿಕತೆಯನ್ನು ಕೆಡಿಸುವ ಕೆಲಸ ಸೋಷಿಯಲ್ ಮೀಡಿಯಾ ಮಾಡುತ್ತಿದೆ. ಇಷ್ಟ ಬಂದ ಹಾಗೆ ಏನು ಬೇಕಾದರೂ ಹಾಕಿಕೊಳ್ಳಬಹುದು ಎನ್ನುವುದು ತಪ್ಪು. ನಿಮಗೆ ತಮಾಷೆ ಎನಿಸಬಹುದು. ನಿಮ್ಮನೆ ಒಲೆ ಉರಿಯೋಕೆ ಇನ್ನೊಬ್ಬರ ಮನೆಯ ಒಲೆ ಆರಿಸುವ ಕೆಲಸ ಮಾಡಬೇಡಿ. ಅದು ನಿಮಗೈ ಅಪಾಯ ಆಗುತ್ತದೆ’ ಎಂದು ಶಿವರಾಜಕುಮಾರ್ ಈ ಸಂದರ್ಭದಲ್ಲಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Martin: ಇಂದು ಧ್ರುವ ಸರ್ಜಾ ಬರ್ತ್ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್ ಇವೆಂಟ್
Renukaswamy Case: ದರ್ಶನ್ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ
Royal; ಟಾಂಗ್ ಕೊಡಲು ವಿರಾಟ್ ರೆಡಿ: ದಿನಕರ್ ನಿರ್ದೇಶನದ ಸಿನಿಮಾ
Billa Ranga Baashaa: ಬಿಆರ್ಬಿಗೆ ಕಿಚ್ಚ ರೆಡಿ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ…
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.