Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!


Team Udayavani, Apr 28, 2024, 9:17 PM IST

1-qeeqwewqwqe

ಶಿರಸಿ: ಲೋಕಸಭಾ ಚುನಾವಣ ಪ್ರಚಾರದ ಹಿನ್ನಲೆಯಲ್ಲಿ ಶಿರಸಿಗೆ ಭಾನುವಾರ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಲೆನಾಡು, ಕರಾವಳಿ ವಿಶೇಷತೆಯ ಸೊಬಗಿನಲ್ಲಿ ಗೌರವಿಸಲಾಯಿತು.

ರಾಜ್ಯದಲ್ಲೇ ಎಲ್ಲೂ ನಡೆಯದ ಶಿರಸಿ ವಿಶೇಷತೆಯ, ಪ್ರತೀ ಎರಡು ವರ್ಷಕ್ಕೊಮ್ಮೆ ನಡೆಯುವ ಬೇಡರ ವೇಷ ಎಂಬ ಜಾನಪದ ಕಲೆಯಲ್ಲಿ ಬಳಸಲಾಗುವ ಆಕರ್ಷಕ ಕಿರೀಟವನ್ನು ಪ್ರಧಾನಿ ಮೋದಿ ಅವರ ಶಿರದ ಮೇಲೆ ಮಾಜಿ ಸ್ಪೀಕರ್, ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತೊಡಿಸಿದಾಗ ಹರ್ಷೋದ್ಘಾರ ಮೊಳಗಿತು. ನವಿಲುಗರಿ ಒಳಗೊಂಡ ಈ ಜಾನಪದೀಯ ಕಿರೀಟವನ್ನು ಶಿರಸಿ ಮರಾಠಿಕೊಪ್ಪದ ಕೇಶವ ನಾಯ್ಕ ಸಿದ್ಧಗೊಳಿಸಿದ್ದರು.

ಪ್ರಧಾನಿಗಳ ಕೊರಳು ಅಲಂಕರಿಸಿದ್ದ ಅಡಿಕೆ, ಕಾಳು ಮೆಣಸು, ಏಲಕ್ಕಿ ಒಳಗೊಂಡ ವಿಶಿಷ್ಟ ಹಾರವನ್ನು ಕದಂಬ ಮಾರ್ಕೇಟಿಂಗ್ ಮೂಲಕ ಚೌವತ್ತಿ ಶ್ರೀಧರ ಭಟ್ಟ ಸಹಕಾರದಲ್ಲಿ ಶ್ವೇತಾ ಕುಲಕರ್ಣಿ ಬಾಳಹಳ್ಳಿ ಸಿದ್ಧಗೊಳಿಸಿದ್ದರು. ಇನ್ನು ಕರ್ನಾಟಕದ ಶಕ್ತಿ ದೇವತೆ ಮಾರಿಕಾಂಬಾ ದೇವಿಯ ಮೂರ್ತಿಯನ್ನು ಕೂಡ ಮೋದಿ ಅವರಿಗೆ ನೀಡಿ ಗೌರವಿಸಲಾಯಿತು.

ರಾಜ್ಯ ಪ್ರಶಸ್ತಿ ಪುರಸ್ಕೃತ ಸೂರ್ಯಕಾಂತ ಗುಡಿಗಾರ ಕುಟುಂಬ ನೇತೃತ್ವದ ಶ್ರೀಕೃಷ್ಣ ಫೈನ್ ಆರ್ಟನಲ್ಲಿ ಸಿದ್ಧಗೊಳಿಸಲಾಗಿತ್ತು. ಶಿವಣೆಯ ಮರದಿಂದ ಮಾಡಲಾದ ಈ ಮೂರ್ತಿ ಮೂವತ್ತಾಲ್ಕು ಇಂಚು ಎತ್ತರ, 29 ಇಂಚು ಅಗಲದ ಜತೆ ಸುಮಾರು 8 ಕೆಜಿ ತೂಕದ್ದಾಗಿತ್ತು.

ಶಿರಸಿಯ ಯುವ ಕಲಾವಿದ ಕೌಶಿಕ್ ಹೆಗಡೆ ಕೇವಲ ನಾಲ್ಕು ತಾಸಿನಲ್ಲಿ ಬಿಡಿಸಿದ ಮೋದಿ ಅವರ ವರ್ಣಮಯ ಚಿತ್ರವನ್ನೂ ನೀಡಿ ಗೌರವಿಸಲಾಯಿತು.

ಪ್ರಧಾನಿಗಳು ತಮ್ಮ ಮಾತಿನಲ್ಲಿ ಶಿರಸಿ ಅಡಿಕೆಗೆ ಜಿಐ ಟ್ಯಾಗ್ ಮಾಡಿದ್ದನ್ನೂ, ಬಿಜೆಪಿ ಸರಕಾರ ಬಂದ ಬಳಿಕ ಅಡಿಕೆಗೆ ದರ ಬಂದಿದ್ದನ್ನೂ ತಮ್ಮ ಮಾತಿನಲ್ಲಿ ಪ್ರಸ್ತಾಪಿಸಿದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಪ್ರಮುಖರಾದ ವಿ.ಸುನೀಲ್ ಕುಮಾರ್ , ಕೋಟ ಶ್ರೀನಿವಾಸ ಪೂಜಾರಿ, ಹರಿಪ್ರಕಾಶ್ ಕೋಣೆಮನೆ, ದಿನಕರ ಶೆಟ್ಟಿ, ಶಾಂತಾರಾಮ ಸಿದ್ಧಿ, ಸುನೀಲ ನಾಯ್ಕ, ಸುನೀಲ್ ಹೆಗಡೆ, ಎನ್.ಎಸ್.ಹೆಗಡೆ ಕರ್ಕಿ ಇತರರು ಇದ್ದರು. ಜತೆಗೆ ಶಿರಸಿಯ ಕೇಸರಿಬಾತ್, ಕಬ್ಬಿನ ಹಾಲಿನ ತೊಡದೇವನ್ನೂ ಪ್ರಧಾನಿಗಳಿಗೆ ನೀಡಲಾಯಿತು.

ಟಾಪ್ ನ್ಯೂಸ್

Jaladurga-Puuturu

Putturu: ಭಾರೀ ಮಳೆಗೆ ಪೆರುವಾಜೆ ದೇವಾಲಯ ಜಲಾವೃತ

Shettar (3)

R. Ashoka ಪ್ರಕರಣವನ್ನು ಮುಡಾಕ್ಕೆ ಹೋಲಿಸಿದ್ದು ಸರಿಯಲ್ಲ:ಜಗದೀಶ ಶೆಟ್ಟರ್

1-rain-hebri

Heavy Rain: ಹೆಬ್ರಿಯಲ್ಲಿ ಮೇಘಸ್ಫೋಟ: ನೀರಲ್ಲಿ ಕೊಚ್ಚಿ ಹೋದ ಕಾರು!

1-deee

Bidar; ತೊಗರಿ ಹೊಲದಲ್ಲಿ 700ಕ್ಕೂ ಹೆಚ್ಚು ಗಾಂಜಾ ಗಿಡಗಳು!; ಪೊಲೀಸ್ ದಾಳಿ

1-ind-a

ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

15

Kamanur village: ದಾರಿ ತೋರುವ ಮಾದರಿ ಗ್ರಾಮ 


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11(1)

Ambewadi ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೀಟೆ ಮರ ಕಡಿಯುತ್ತಿದ್ದ ಓರ್ವನ ಬಂಧನ

Heavy Rain: ದಾಂಡೇಲಿಯಲ್ಲಿ ವ್ಯಾಪಕ ಮಳೆ… ಅಂಗಡಿ, ಮನೆಗಳಿಗೆ ನುಗ್ಗಿದ ಕೊಳಚೆ ನೀರು

Heavy Rain: ದಾಂಡೇಲಿಯಲ್ಲಿ ವ್ಯಾಪಕ ಮಳೆ… ಅಂಗಡಿ, ಮನೆಗಳಿಗೆ ನುಗ್ಗಿದ ಕೊಳಚೆ ನೀರು

ಅಂತ್ಯಾರಂಭ ಕೊಂಕಣಿ ಚಲನಚಿತ್ರ ಶೀಘ್ರ ಬಿಡುಗಡೆ: ಡಾ| ಕೆ. ರಮೇಶ್‌ ಕಾಮತ್‌ ನಿರ್ದೇಶನ

ಅಂತ್ಯಾರಂಭ ಕೊಂಕಣಿ ಚಲನಚಿತ್ರ ಶೀಘ್ರ ಬಿಡುಗಡೆ: ಡಾ| ಕೆ. ರಮೇಶ್‌ ಕಾಮತ್‌ ನಿರ್ದೇಶನ

ಶಿರಸಿಗೆ ಶೀಘ್ರ ಬರಲಿದೆ ಸಂಚಾರ ಪೊಲೀಸ್‌ ಠಾಣೆ!

ಶಿರಸಿಗೆ ಶೀಘ್ರ ಬರಲಿದೆ ಸಂಚಾರ ಪೊಲೀಸ್‌ ಠಾಣೆ!

ಕಾರವಾರ: ರಾಷ್ಟ್ರೀಯ-ರಾಜ್ಯ ಹೆದ್ದಾರಿಗಳ ಹೊಂಡ ಮುಚ್ಚಲು ಒತ್ತಾಯ

ಕಾರವಾರ: ರಾಷ್ಟ್ರೀಯ-ರಾಜ್ಯ ಹೆದ್ದಾರಿಗಳ ಹೊಂಡ ಮುಚ್ಚಲು ಒತ್ತಾಯ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

13

Malpe: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Jaladurga-Puuturu

Putturu: ಭಾರೀ ಮಳೆಗೆ ಪೆರುವಾಜೆ ದೇವಾಲಯ ಜಲಾವೃತ

Shettar (3)

R. Ashoka ಪ್ರಕರಣವನ್ನು ಮುಡಾಕ್ಕೆ ಹೋಲಿಸಿದ್ದು ಸರಿಯಲ್ಲ:ಜಗದೀಶ ಶೆಟ್ಟರ್

POlice

Kundapura: ಅಕ್ರಮ ಮದ್ಯ ಸಾಗಾಟ; ವಶ

courts-s

POCSO ಪ್ರಕರಣದ ಆರೋಪಿ ನಟಿ ಸಲ್ಲಿಸಿದ ನಿರೀಕ್ಷಣ ಜಾಮೀನು ಅರ್ಜಿ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.