Archery World Cup: ಭಾರತದ ರಿಕರ್ವ್ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ
Team Udayavani, Apr 29, 2024, 12:20 AM IST
ಶಾಂಘೈ: ಒಲಿಂಪಿಕ್ ಚಾಂಪಿಯನ್ ದಕ್ಷಿಣ ಕೊರಿಯಾವನ್ನು ಮಣಿಸಿದ ಭಾರತದ ಪುರುಷರ ರಿಕರ್ವ್ ತಂಡ ಐತಿಹಾಸಿಕ ಸಾಧನೆಗೈದಿದೆ. 14 ವರ್ಷಗಳ ಬಳಿಕ ಆರ್ಚರಿ ವಿಶ್ವಕಪ್ ಸ್ಟೇಜ್ ಒಂದರ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದೆ.
ರವಿವಾರದ ಫೈನಲ್ನಲ್ಲಿ ಧೀರಜ್ ಬೊಮ್ಮದೇವರ, ತರುಣ್ದೀಪ್ ರಾಯ್ ಮತ್ತು ಪ್ರವೀಣ್ ಜಾಧವ್ ಆವರನ್ನೊಳಗೊಂಡ ಭಾರತ ತಂಡ ದಕ್ಷಿಣ ಕೊರಿಯಾ ವಿರುದ್ಧ 5-1 ಅಂತರದ ಗೆಲುವು ಸಾಧಿಸಿತು.
ಭಾರತದ ಪುರುಷರ ರಿಕರ್ವ್ ತಂಡ ಕೊನೆಯ ಸಲ ಸ್ವರ್ಣ ಸಾಧನೆಗೈದದ್ದು 2010ರಲ್ಲಿ. ಅಂದಿನ ವಿಶ್ವಕಪ್ ಸ್ಟೇಜ್ 4 ಹಂತದ ಫೈನಲ್ನಲ್ಲಿ ಜಪಾನ್ ವಿರುದ್ಧ ಜಯ ಸಾಧಿಸಿತ್ತು. ವಿಶೇಷವೆಂದರೆ, 40 ವರ್ಷದ ಆರ್ಮಿಮ್ಯಾನ್ ತರುಣ್ದೀಪ್ ರಾಯ್ ಅಂದಿನ ವಿಜೇತ ತಂಡದಲ್ಲೂ ಇದ್ದರು! ಭಾರತದ 2010ರ ಸ್ವರ್ಣವಿಜೇತ ತಂಡದ ಇತರ ಸದಸ್ಯರೆಂದರೆ ರಾಹುಲ್ ಬ್ಯಾನರ್ಜಿ ಮತ್ತ ಜಯಂತ್.
ರಿಕರ್ವ್ ಮಿಶ್ರ ತಂಡ ವಿಭಾಗದಲ್ಲೂ ಭಾರತಕ್ಕೆ ಯಶಸ್ಸು ಒಲಿಯಿತು. ಅಂಕಿತಾ ಭಕತ್-ಧೀರಜ್ ಸೇರಿಕೊಂಡು ಮೆಕ್ಸಿಕೋದ ಅಲೆಕ್ಸಾಂಡ್ರಾ ವಲೆನ್ಸಿಯಾ-ಮಥಿಯಾಸ್ ಗ್ರಾಂಡೆ ಜೋಡಿಗೆ 6-0 ಅಂತರದ ಸೋಲುಣಿಸಿದರು.
ದೀಪಿಕಾಗೆ ಬೆಳ್ಳಿ
ವನಿತೆಯರ ವೈಯಕ್ತಿಕ ರಿಕರ್ವ್ ವಿಭಾಗದಲ್ಲಿ ದೀಪಿಕಾ ಕುಮಾರಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. 2022ರ ಡಿಸೆಂಬರ್ನಲ್ಲಿ ತಾಯಿಯಾದ ದೀಪಿಕಾ ಕುಮಾರಿ 2023ರಲ್ಲಿ ಸಂಪೂರ್ಣ ವಿಶ್ರಾಂತಿಯಲ್ಲಿದ್ದರು. ಇದೀಗ ಪದಕ ಬೇಟೆಯನ್ನು ಪುನರಾರಂಭಿಸಿದ್ದಾರೆ. ಫೈನಲ್ನಲ್ಲಿ ದೀಪಿಕಾ ಹ್ಯಾಂಗ್ಝೂ ಏಷ್ಯಾಡ್ ಚಾಂಪಿಯನ್ ಲಿಮ್ ಸಿಯೋನ್ ವಿರುದ್ಧ ಪರಾಭವಗೊಂಡರು.
ಈ ಸಾಧನೆಯೊಂದಿಗೆ ಭಾರತ ಒಟ್ಟು 8 ಪದಕಗಳನ್ನು ಗೆದ್ದಂತಾಯಿತು. ಇದರಲ್ಲಿ 5 ಚಿನ್ನ, 2 ಬೆಳ್ಳಿ ಹಾಗೂ ಒಂದು ಕಂಚು ಸೇರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್: ದ.ಆಫ್ರಿಕಾಗೆ 177 ರನ್ ಅಂತರದ ಸೋಲು
147-year ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸದೊಂದು ದಾಖಲೆ ಬರೆದ ಆರ್.ಅಶ್ವಿನ್
IPL 2025: ಮತ್ತೆ ರಾಹುಲ್ ದ್ರಾವಿಡ್ ಜತೆ ಸೇರಿದ ವಿಕ್ರಮ್ ರಾಥೋರ್
INDvsBAN: ಭಾರತದ ಬಿಗು ದಾಳಿಗೆ ಬೆದರಿದ ಬಾಂಗ್ಲಾ: 149 ರನ್ ಗೆ ಆಲೌಟ್
INDvsBAN: ಟೆಸ್ಟ್ ಮೊದಲ ದಿನವೇ ಪ್ರಮಾದ; ಐಸಿಸಿ ಶಿಕ್ಷೆಯ ಭಯದಲ್ಲಿ ಬಾಂಗ್ಲಾದೇಶ ತಂಡ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Langoti Man Movie Review: ಸಂಪ್ರದಾಯದ ಕೊಂಡಿಯಲ್ಲಿ ಲಂಗೋಟಿ!
Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್ ಗಾಂಧಿ
Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ
Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ
Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್ ಗೆ ಹೊಡೆದ ಯುವಕ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.