Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

ಡಾ| ಟಿಎಂಎ ಪೈ 126ನೇ ಜನ್ಮದಿನೋತ್ಸವ

Team Udayavani, May 1, 2024, 12:54 AM IST

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

ಮಣಿಪಾಲ: ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಎಂಟು ವರ್ಷಗಳಲ್ಲಿ ದ್ವಿಗುಣಗೊಳ್ಳಲಿದ್ದು ಮಾಹೆಯಂತಹ ಶಿಕ್ಷಣ ಸಂಸ್ಥೆಗಳೂ ಪದವೀಧರರ ಸಂಖ್ಯೆಯನ್ನೂ ದ್ವಿಗುಣಗೊಳಿಸಿ ದೇಶಾಭಿವೃದ್ಧಿಗೆ ಯುವಕರನ್ನು ಸನ್ನದ್ಧಗೊಳಿಸಬೇಕು ಎಂದು ನೇಶನಲ್‌ ಬ್ಯಾಂಕ್‌ ಫಾರ್‌ ಫೈನಾನ್ಸಿಂಗ್‌ ಇನ್ಫ್ರಾಸ್ಟ್ರಕ್ಚರ್ ಆ್ಯಂಡ್‌ ಡೆವಲಪ್‌ಮೆಂಟ್‌ ಮತ್ತು ಜಿಯೋ ಫೈನಾನ್ಶಿಯಲ್‌ ಸರ್ವಿಸಸ್‌ ಲಿ. ಅಧ್ಯಕ್ಷ ಕೆ.ವಿ. ಕಾಮತ್‌ ಹೇಳಿದರು.

ಮಣಿಪಾಲದ ಮಾಹೆ, ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌, ಎಂಇಎಂಜಿ, ಮಣಿಪಾಲ್‌ ಮೀಡಿಯ ನೆಟ್‌ವರ್ಕ್‌ ಲಿ., ಡಾ| ಟಿಎಂಎ ಪೈ ಪ್ರತಿಷ್ಠಾನದ ಆಶ್ರಯದಲ್ಲಿ ಮಂಗಳವಾರ ಹೊಟೇಲ್‌ ವ್ಯಾಲಿವ್ಯೂ ಸಭಾಂಗಣದಲ್ಲಿ ನಡೆದ ಸ್ಥಾಪಕರ ದಿನಾಚರಣೆಯಲ್ಲಿ (ಡಾ| ಟಿಎಂಎ ಪೈಯವರ 126ನೇ ಜನ್ಮದಿನ) ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕಾಮತ್‌ ಅವರು ಮಾತನಾಡಿದರು.

ಭಾರತದ ಜಿಡಿಪಿ 4 ಟ್ರಿಲಿಯನ್‌ ಡಾಲರ್‌ ಅಂದಾಜಿನಲ್ಲಿದ್ದು ಇದು ಎಂಟು ವರ್ಷಗಳಲ್ಲಿ ಎರಡು ಪಟ್ಟು ಆಗಿ ಸಾರ್ವಕಾಲಿಕ ದಾಖಲೆ ಆಗಲಿದೆ ಎಂಬ ವಿಶ್ವಾಸವಿದೆ. ಇದೇ ವೇಳೆ ದೇಶದಲ್ಲಿ ಪದವೀಧರರಾಗುವವರ ಸಂಖ್ಯೆಯನ್ನೂ ದ್ವಿಗುಣಗೊಳಿಸಬೇಕು. ಈ ಮೂಲಕ ಯುವ ವೃಂದದ ಕಾರ್ಯಸಾಮರ್ಥ್ಯವನ್ನು ಹೆಚ್ಚಿಸಬೇಕು. ಇದನ್ನು ಮಾಹೆಯಂತಹ ಹಿರಿಯ ಶಿಕ್ಷಣ ಸಂಸ್ಥೆಗಳು ಆಗಗೊಳಿಸಬಹುದು. ಭಾರತದ ಹೊಸ ಚಾಲಕ ದೇಶವನ್ನು ಆ ದಿಕ್ಕಿನಲ್ಲಿ ಮುನ್ನಡೆಸಬೇಕು ಎಂದು ಆಶಿಸಿದರು.

1942ರಲ್ಲಿಯೇ ಎಸೆಸೆಲ್ಸಿಯಲ್ಲಿ ಫೇಲ್‌ ಆದವರಿಗೆ ಕೌಶಲ ಕಲೆ ಕಲಿಸಲು ಡಾ| ಪೈಯವರು ಮುಂದಾದುದು ಅವರಿಗೆ ದುರ್ಬಲರ ಕುರಿತು ಇದ್ದ ಅನುಕಂಪನಶೀಲತೆಯನ್ನು ತೋರಿಸುತ್ತದೆ. ಅವರ ಜನ್ಮದಿನದಂದು ಅವರು ತೋರಿದ ನಡೆಯನ್ನು ಸ್ಮರಿಸಿಕೊಳ್ಳುವುದರ ಜತೆಗೆ ಬಹುದೃಷ್ಟಿಕೋನಗಳಿಂದ ಅವರ ಆಶಯವನ್ನು ದ್ವಿಗುಣಗೊಳಿಸಲು ಯತ್ನಿಸಬೇಕು ಎಂದು ಕಾಮತ್‌ ಕರೆ ನೀಡಿದರು.

ಮಾಹೆ ಟ್ರಸ್ಟ್‌ ಅಧ್ಯಕ್ಷ ಡಾ|ರಂಜನ್‌ ಆರ್‌. ಪೈ, ಟ್ರಸ್ಟಿ ವಸಂತಿ ಆರ್‌. ಪೈ, ಮಣಿಪಾಲ್‌ ಮೀಡಿಯ ನೆಟ್‌ವರ್ಕ್‌ ಲಿ., ಕಾರ್ಯನಿರ್ವಾಹಕ ಅಧ್ಯಕ್ಷ ಟಿ.ಸತೀಶ್‌ ಯು. ಪೈ, ಡಾ|ಟಿಎಂಎ ಪೈ ಪ್ರತಿಷ್ಠಾನದ ಅಧ್ಯಕ್ಷ ಟಿ.ಅಶೋಕ್‌ ಪೈ, ಸಹಕುಲಾಧಿಪತಿ ಡಾ| ಎಚ್‌.ಎಸ್‌.ಬಲ್ಲಾಳ್‌, ಕುಲಪತಿ ಲೆ|ಜ|ಡಾ|ಎಂ.ಡಿ.ವೆಂಕಟೇಶ್‌ ಅವರು ಪ್ರತಿಭಾನ್ವಿತರು, ಅತ್ಯುತ್ತಮ ಸೇವಾಕರ್ತರಿಗೆ ವಿದ್ಯಾರ್ಥಿವೇತನ, ಪ್ರಶಸ್ತಿ ಪ್ರಮಾಣಪತ್ರಗಳನ್ನು ಪ್ರದಾನ ಮಾಡಿದರು.

ಡಾ| ಎಚ್‌.ಎಸ್‌. ಬಲ್ಲಾಳ್‌ ಸ್ವಾಗತಿಸಿದರು. ಮಾಹೆ ಕುಲಸಚಿವ ಡಾ| ಪಿ. ಗಿರಿಧರ ಕಿಣಿ ಅತಿಥಿಗಳನ್ನು ಪರಿಚಯಿಸಿದರು. ಸಹಕುಲಪತಿ ಡಾ| ಎನ್‌.ಎನ್‌. ಶರ್ಮ ವಂದಿಸಿದರು. ಎಂಐಟಿ ಸಹಾಯಕ ಪ್ರಾಧ್ಯಾಪಕ ಡಾ| ಪ್ರವೀಣ್‌ ಕೆ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಪಿಗ್ಮಿ, ಮ್ಯೂಚುವಲ್‌ ಫ‌ಂಡ್‌ ಸಾರ್ವಕಾಲಿಕ ಸಾಮರ್ಥ್ಯ
ಡಾ| ಟಿಎಂಎ ಪೈಯವರು ಸಿಂಡಿಕೇಟ್‌ ಬ್ಯಾಂಕ್‌ ಮೂಲಕ ಜಾರಿಗೊಳಿಸಿದ ಪಿಗ್ಮಿ ಉಳಿತಾಯ ಖಾತೆ ಯೋಜನೆ ನನ್ನ ವೃತ್ತಿ ಜೀವನದ ಮೇಲೂ ಪರಿಣಾಮ ಬೀರಿದೆ ಎಂದು ಕೆ.ವಿ. ಕಾಮತ್‌ ಹೇಳಿದರು.

ನಾನು ಐಸಿಐಸಿಐ ಬ್ಯಾಂಕ್‌ ಮುಖ್ಯಸ್ಥನಾದಾಗ 1990ರ ದಶಕದಲ್ಲಿ 100 ಶಾಖೆಗಳಿದ್ದವು. ಅನಂತರ ಇತರ ಬ್ಯಾಂಕ್‌ಗಳು ಐಸಿಐಸಿಐ ಬ್ಯಾಂಕ್‌ನೊಂದಿಗೆ ವಿಲೀನಗೊಂಡು ವ್ಯವಹಾರ ವಿಸ್ತರಣೆಯಾಯಿತು. ನಾನು ಎಲ್ಲ ಸಿಬಂದಿಗಳ ಸಭೆ ಕರೆದು ಏಜೆಂಟರ ಮೂಲಕ ಸಣ್ಣ ಸಣ್ಣ ಮೊತ್ತವನ್ನು ಸಂಗ್ರಹಿಸಲು ಹೇಳಿದೆ. ಇದೇ ಮೊತ್ತವನ್ನು ದ್ವಿಚಕ್ರ ವಾಹನ, ಕಾರು, ಮನೆ ನಿರ್ಮಾಣಕ್ಕೆ ಸಾಲ ಕೊಡುತ್ತಿದ್ದೆವು. ನನಗೆ ಈ ಧೈರ್ಯ ಬಂದುದು ಡಾ| ಟಿಎಂಎ ಪೈಯವರು ಆರಂಭಿಸಿದ ಪಿಗ್ಮಿ ಯೋಜನೆಯಿಂದ. ಬ್ಯಾಂಕ್‌ನ ನೇರ ಉದ್ಯೋಗ ಸೃಷ್ಟಿಗಿಂತ ಪಿಗ್ಮಿ ಯೋಜನೆಯಿಂದ ಆದ ಪರೋಕ್ಷ ಉದ್ಯೋಗ ಸೃಷ್ಟಿ ಅಪಾರ. ಇವರು ಒಂದು ರೀತಿಯಲ್ಲಿ ಸೈನಿಕರಿದ್ದಂತೆ. ಎಸ್‌ಐಪಿ ಮ್ಯೂಚುವಲ್‌ ಫ‌ಂಡ್‌ ಯೋಜನೆಯೂ ಇದೇ ರೀತಿ. ಈ ವ್ಯವಸ್ಥಿತ ಹೂಡಿಕೆ ಯೋಜನೆಯನ್ನು ದಶಕಗಳ ಹಿಂದೆಯೇ ಕಾರ್ಯಗತಗೊಳಿಸಿದವರು ಡಾ| ಪೈಯವರು ಎಂದು ಕಾಮತ್‌ ಬೆಟ್ಟು ಮಾಡಿದರು.

ಡಾ| ಪೈಯವರನ್ನು ಆಮಂತ್ರಿಸಿದ್ದ
ಕೆ.ವಿ. ಕಾಮತ್‌
ನಾನು ಸುರತ್ಕಲ್‌ ಎನ್‌ಐಟಿಕೆ ಯಲ್ಲಿ ಎಂಜಿನಿಯರಿಂಗ್‌ ಶಿಕ್ಷಣ ಪಡೆ ಯುವಾಗ ವಾರ್ಷಿಕೋತ್ಸವಕ್ಕೆ ಡಾ| ಟಿಎಂಎ ಪೈಯವರನ್ನು ಕರೆಯಲು ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ ಮಣಿಪಾಲಕ್ಕೆ ಬೈಕ್‌ನಲ್ಲಿ ಬಂದಿದ್ದೆ. ಆಗ ಡಾ| ಪೈಯವರು ಆಮಂತ್ರಣವನ್ನು ಒಪ್ಪಿ ನನ್ನ ಹಿನ್ನೆಲೆಯನ್ನು ಕೇಳಿ ಊಟ
ಮಾಡಿಕೊಂಡು ಹೋಗಲು ಹೇಳಿದರು. ಕಾರ್ಯಕ್ರಮಕ್ಕೂ ಬಂದು ಶುಭಕೋರಿದ್ದರು ಎಂದು ಕಾಮತ್‌ ನೆನಪಿಸಿಕೊಂಡರು.

 

 

ಟಾಪ್ ನ್ಯೂಸ್

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

MRPL: ಕರಾವಳಿಗೆ ಮೊದಲ “ಗ್ರೀನ್‌ ಹೈಡ್ರೋಜನ್‌’ ಘಟಕ

MRPL: ಕರಾವಳಿಗೆ ಮೊದಲ “ಗ್ರೀನ್‌ ಹೈಡ್ರೋಜನ್‌’ ಘಟಕ

AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್:‌ ದ.ಆಫ್ರಿಕಾಗೆ 177 ರನ್‌ ಅಂತರದ ಸೋಲು

AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್:‌ ದ.ಆಫ್ರಿಕಾಗೆ 177 ರನ್‌ ಅಂತರದ ಸೋಲು

Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮುಲ್ ಸ್ಪಷ್ಟನೆ

Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮೂಲ್ ಸ್ಪಷ್ಟನೆ

Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ

Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ

atishi

Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

Udupi: ಮದ್ಯ ಸೇವಿಸಿ ಬಸ್‌ ಚಾಲನೆ: ಪ್ರಕರಣ ದಾಖಲು

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

13

Udupi: ಅಪಾಯಕಾರಿಯಾಗಿ ಬಸ್‌ ಚಾಲನೆ: ಪ್ರಕರಣ ದಾಖಲು

Udupi: ರೈಲು ಹತ್ತುತ್ತಿದ್ದಾಗ ಬಿದ್ದ ಮಹಿಳೆಯ ರಕ್ಷಣೆ

Udupi: ರೈಲು ಹತ್ತುತ್ತಿದ್ದಾಗ ಬಿದ್ದ ಮಹಿಳೆಯ ರಕ್ಷಣೆ

sand

Malpe: ಮರಳು ಅಕ್ರಮ ಸಂಗ್ರಹ, ಕೇಸು ದಾಖಲು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್‌ ಗಾಂಧಿ

Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್‌ ಗಾಂಧಿ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ

Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

ಕುಶಾಲನಗರ ಪ.ಪಂ ಚುನಾವಣೆ ಗೊಂದಲ: ವಿಪಕ್ಷ ನಾಯಕ ಅಶೋಕ್‌ ಅಸಮಾಧಾನ

ಕುಶಾಲನಗರ ಪ.ಪಂ ಚುನಾವಣೆ ಗೊಂದಲ: ವಿಪಕ್ಷ ನಾಯಕ ಅಶೋಕ್‌ ಅಸಮಾಧಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.