Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ


Team Udayavani, May 1, 2024, 3:03 PM IST

Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ

ಬಿಸಿಲಿನ ಶಾಖಾ ಜೋರಾಗಿದೆ. ಇವತ್ತು ಮಳೆ ಬರುತ್ತೆ, ನಾಳೆ ಬರುತ್ತೆ, ಭೂಮಿ ತಂಪಾಗುತ್ತೆ… ಎಂದು ಆಶಾಭಾವನೆಯಿಂದ ಇದ್ದ ಜನ ದಿನದಿಂದ ದಿನಕ್ಕೆ ಧಗೆಗೆ ಸುಸ್ತಾಗಿದ್ದಾರೆ. ಇದರಿಂದ ಸಿನಿಮಾ ಮಂದಿ ಕೂಡಾ ಹೊರತಾಗಿಲ್ಲ. ಬಿಸಿಲಿನ ಧಗೆ ತಡೆಯಲಾರದೇ ಬಹುತೇಕ ಸಿನಿಮಾ ತಂಡಗಳು ಔಟ್‌ ಡೋರ್‌ ಶೂಟಿಂಗ್‌ನಿಂದ ದೂರವೇ ಉಳಿದಿದೆ. ಈ ಮೂಲಕ ಅಂದುಕೊಂಡ ಶೆಡ್ಯೂಲ್‌ನಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿಲ್ಲ.

ಸದ್ಯದ ಬಿಸಿಲಿನ ಧಗೆಯಲ್ಲಿ ಶೂಟಿಂಗ್‌ ಮಾಡೋದು ಕಷ್ಟ ಸಾಧ್ಯ. ಕಲಾವಿದರಿಂದ ಹಿಡಿದು ಇಡೀ ಶೂಟಿಂಗ್‌ ತಂಡ ಬೇಗನೇ ಸುಸ್ತಾಗಿಬಿಡುತ್ತದೆ. ಅಂದುಕೊಂಡ ಮಟ್ಟಕ್ಕೆ ಕೆಲಸವಾಗುತ್ತಿಲ್ಲ. ದಿನಕ್ಕೆ ಮೂರ್‍ನಾಲ್ಕು ದೃಶ್ಯಗಳನ್ನಾದರೂ ಔಟ್‌ ಡೋರ್‌ನಲ್ಲಿ ಸೆರೆಹಿಡಿಯಬೇಕೆಂದುಕೊಂಡ ನಿರ್ದೇಶಕನಿಗೆ ಈ ಬಿಸಿಲಿನ ಧಗೆಗೆ ಅದು ಸಾಧ್ಯವಾಗುತ್ತಿಲ್ಲ. ಇದರಿಂದ ನಿರ್ಮಾಪಕನಿಗೂ ನಷ್ಟ.

ಫ್ರೆಶ್‌ನೆಸ್‌ ಇರಲ್ಲ: ಸದ್ಯದ ಬಿಸಿಲಿನ ಧಗೆ ಮುಖ್ಯವಾಗಿ ಸಿನಿಮಾದ ಹಾಡು ಹಾಗೂ ಫೈಟಿಂಗ್‌ ಸೀನ್‌ಗಳ ಮೇಲೆ ಪರಿಣಾಮ ಬೀರಿದೆ. ಔಟ್‌ಡೋರ್‌ನ ಸುಂದರ ಲೊಕೇಶನ್‌ ನಲ್ಲಿ ಹಾಡನ್ನು ಚಿತ್ರೀಕರಿಸಬೇಕೆಂದುಕೊಂಡ ಸಿನಿಮಾ ತಂಡಗಳು ಈಗ ಅದನ್ನು ಮುಂದೂಡಿವೆ. ಅದಕ್ಕೆ ಕಾರಣ ಕಲಾವಿದರ ಮುಖದಲ್ಲಿ ಫ್ರೆಶ್‌ನೆಸ್‌ ಇರಲ್ಲ.

ಒಂದು ಕಡೆ ಮೇಕಪ್‌, ಮತ್ತೂಂದು ಕಡೆ ಸ್ಟೈಲಿಶ್‌ ಕಾಸ್ಟ್ಯೂಮ್‌ ಇವೆಲ್ಲವನ್ನು ಹಾಕಿಕೊಂಡ ಈ ಬಿಸಿಲಿನ ಧಗೆಗೆ ಐದು ನಿಮಿಷ ಶೂಟಿಂಗ್‌ ಮಾಡಿದರೂ ಕಲಾವಿದರು ಸುಸ್ತಾಗಿಬಿಡುತ್ತಾರೆ. ಇದರ ನೇರಪರಿಣಾಮ ಸ್ಕ್ರೀನ್‌ಮೇಲೆ ಆಗುತ್ತದೆ. ಬಿಸಿಲಿನ ಧಗೆಗೆ ಕಲಾವಿದರ ಮುಖದಲ್ಲಿ ಫ್ರೆಶ್‌ನೆಸ್‌ ಹೊರಟು ಹೋಗಿರುತ್ತದೆ.

ಇದು ಹಾಡಿನ ವಿಚಾರವಾದರೆ ಔಟ್‌ಡೋರ್‌ ಫೈಟಿಂಗ್‌ನದ್ದು ಮತ್ತೂಂದು ಕಥೆ. ಫೈಟಿಂಗ್‌ ಎಂದರೆ ಹೀರೋ, ವಿಲನ್‌, ಫೈಟರ್ … ಹೀಗೆ ಸಾಕಷ್ಟು ಮಂದಿ ಇರುತ್ತಾರೆ. ಇದರ ಜೊತೆಗೆ ರೋಪ್‌, ಕ್ರೇನ್‌, ಲೈಟ್‌… ಇವೆಲ್ಲವನ್ನು ಈ ಬಿಸಿಲಿನಲ್ಲಿ ಸಹಿಸಿಕೊಳ್ಳುವುದು ಸುಲಭದ ಮಾತಲ್ಲ. ಇದೇ ಕಾರಣದಿಂದ ಕೆಲವು ಸಿನಿಮಾ ತಂಡಗಳು ಹಾಡು, ಫೈಟ್‌ ದೃಶ್ಯಗಳಿಂದ ದೂರವೇ ಉಳಿದಿವೆ.

ಚಿತ್ರೀಕರಣ ಜೋರು: ಮೊದಲೇ ಹೇಳಿದಂತೆ ಔಟ್‌ ಡೋರ್‌ ಶೂಟಿಂಗ್‌ ಬಿಸಿಲನ ಧಗೆಗೆ ಕಷ್ಟವಾದ ಕಾರಣಕ್ಕೆ ಸಿನಿಮಾ ತಂಡಗಳು ಇನ್‌ಡೋರ್‌ ಶೂಟಿಂಗ್‌ನತ್ತ ಮುಖ ಮಾಡಿವೆ. ಮನೆಯೊಳಗಿನ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳುತ್ತಿವೆ. ಇದರ ಜೊತೆಗೆ ಈಗಾಗಲೇ ಶೂಟಿಂಗ್‌ ಮುಗಿಸಿ, ಹಾಡು, ಫೈಟ್‌ ಅಥವಾ ಔಟ್‌ಡೋರ್‌ ದೃಶ್ಯಗಳನ್ನಷ್ಟೇ ಬಾಕಿ ಉಳಿಸಿಕೊಂಡಿರುವ ಚಿತ್ರತಂಡಗಳು ಎಡಿಟಿಂಗ್‌, ಡಬ್ಬಿಂಗ್‌, ರೀರೆಕಾರ್ಡಿಂಗ್‌ ಸೇರಿದಂತೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ಬಿಝಿಯಾಗಿವೆ.

ತಾಂತ್ರಿಕವಾಗಿಯೂ ಅತಿ ಬಿಸಿಲು ಕಷ್ಟ : ಒಂದು ಕಡೆ ಬಿಸಿಲಿನ ಧಗೆ ತಡೆದುಕೊಳ್ಳಲಾರದೇ ಔಟ್‌ಡೋರ್‌ ಶೂಟಿಂಗ್‌ ಮುಂದೆ ಹೋದರೆ, ಸದ್ಯದ ಅತಿಯಾದ ಬಿಸಿಲು ತಾಂತ್ರಿಕವಾಗಿಯೂ ಚಿತ್ರೀಕರಣಕ್ಕೆ ಅಡ್ಡಬರುತ್ತಿದೆ. ಸಾಮಾನ್ಯವಾಗಿ ಔಟ್‌ಡೋರ್‌ ಶೂಟಿಂಗ್‌ನಲ್ಲಿ ಬೆಳಕು ಕಡಿಮೆ ಇದ್ದಾಗ, ಅದಕ್ಕಾಗಿ ಬೇರೆ ಲೈಟ್‌ ಬಳಸುತ್ತಾರೆ. ಆದರೆ, ಈಗ ಪ್ರಖರವಾದ ಬೆಳಕು ಇರುವುದರಿಂದ ತಾಂತ್ರಿಕವಾಗಿ ಅಂದುಕೊಂಡಂತೆ ಚಿತ್ರೀಕರಣ ಮಾಡುವುದು ಕಷ್ಟ. ಮಾಡಲೇಬೇಕಾದ ಅನಿವಾರ್ಯತೆ ಬಂದರೆ ಅದಕ್ಕೊಂದು ಬೇರೆ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಇಂತಹ “ಎರಡೆರಡು’ ಕೆಲಸ ಬೇಡವೆಂಬ ಕಾರಣಕ್ಕೆ ಔಟ್‌ಡೋರ್‌ ಶೂಟಿಂಗ್‌ ಕಡಿಮೆಯಾಗಿರುವುದಂತೂ ನಿಜ.

ಅತಿಯಾದ ಲೈಟಿಂಗ್‌ನಲ್ಲಿ ಶೂಟಿಂಗ್‌ ಕಷ್ಟ: ಬಿಸಿಲ ಧಗೆಯಲ್ಲಿ ಔಟ್‌ ಡೋರ್‌ ಶೂಟಿಂಗ್‌ ಮಾಡೋದು ಖಂಡಿತಾ ಕಷ್ಟವಿದೆ. ಅದೇ ಕಾರಣದಿಂದ ಸಿನಿಮಾ ತಂಡಗಳು ಇನ್‌ ಡೋರ್‌ನತ್ತ ಮುಖ ಮಾಡಿವೆ. ಅತಿಯಾದ ಲೈಟ್‌ನಲ್ಲಿ ದೃಶ್ಯಗಳನ್ನು ಸೆರೆಹಿಡಿಯೋದು ಕೂಡಾ ಕಷ್ಟ. ಜತೆಗೆ ಕಲಾವಿದರು, ತಂತ್ರಜ್ಞರು ಕೂಡ ಬೇಗ ಸುಸ್ತಾಗುತ್ತಾರೆ. -ಚೇತನ್‌ (ಬಹದ್ದೂರ್‌) ನಿರ್ದೇಶಕ

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Shiruru; Missing Kerala Arjuna’s lorry found; Operation of Ishwar Malpe Team

Shiruru; ನಾಪತ್ತೆಯಾಗಿದ್ದ ಕೇರಳದ ಅರ್ಜುನನ ಲಾರಿ ಪತ್ತೆ; ಈಶ್ವರ್‌ ಮಲ್ಪೆ ತಂಡದ ಕಾರ್ಯಾಚರಣೆ

World Rivers Day: ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’

World Rivers Day: ಸೆ.22 ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’

PMABHIM ಯೋಜನೆಯಡಿ ದಕ್ಷಿಣ ಕನ್ನಡಕ್ಕೆ 25.11 ಕೋಟಿ ಅನುದಾನ: ಸಂಸದ ಕ್ಯಾ. ಬ್ರಿಜೇಶ್‌ ಚೌಟ

PMABHIM ಯೋಜನೆಯಡಿ ದಕ್ಷಿಣ ಕನ್ನಡಕ್ಕೆ 25.11 ಕೋಟಿ ಅನುದಾನ: ಸಂಸದ ಕ್ಯಾ. ಬ್ರಿಜೇಶ್‌ ಚೌಟ

BellaryBellary; ಕಳ್ಳರೊಂದಿಗೆ ಸೇರಿದ ಪೊಲೀಸನ ಕತೆ; ದರೋಡೆ ಪ್ರಕರಣದಲ್ಲಿ ಪೇದೆ ಸೇರಿ 6 ಮಂದಿ ಬಂಧನ

Bellary; ಕಳ್ಳರೊಂದಿಗೆ ಸೇರಿದ ಪೊಲೀಸನ ಕತೆ; ದರೋಡೆ ಪ್ರಕರಣದಲ್ಲಿ ಪೇದೆ ಸೇರಿ 6 ಮಂದಿ ಬಂಧನ

ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್‌

Firing; ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್‌

‌INDvsBAN; ಬಸವಳಿದ ಬಾಂಗ್ಲಾ ಎದುರು ಪಂತ್-ಗಿಲ್‌ ಸೂಪರ್‌ ಶತಕ; ಡಿಕ್ಲೇರ್ ಘೋಷಿಸಿದ ಭಾರತ

‌INDvsBAN; ಬಸವಳಿದ ಬಾಂಗ್ಲಾ ಎದುರು ಪಂತ್-ಗಿಲ್‌ ಸೂಪರ್‌ ಶತಕ; ಡಿಕ್ಲೇರ್ ಘೋಷಿಸಿದ ಭಾರತ

Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು

Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Upendra: ‘ಭಗವಂತನೇ ಈ ಸಿನಿಮಾ ಮಾಡ್ಸಿದಾನೆ..’: ‘ಉಪೇಂದ್ರ’ ನೋಡಿ ಉಪೇಂದ್ರ ಭಾವುಕ

Upendra: ‘ಭಗವಂತನೇ ಈ ಸಿನಿಮಾ ಮಾಡ್ಸಿದಾನೆ..’: ‘ಉಪೇಂದ್ರ’ ನೋಡಿ ಉಪೇಂದ್ರ ಭಾವುಕ

Priya Shatamarshan spoke about her fame after Bheema movie

Priya Shatamarshan: ಇನ್ಸ್ ಪೆಕ್ಟರ್‌ ಗಿರಿಜಾ ರಿಪೋರ್ಟಿಂಗ್‌ ಸಾರ್‌..

Vijaya Bhaskar: ಹೊಸತನಕ್ಕೆ ಹಂಬಲಿಸಿದ ಸ್ವರ ಸಾಮ್ರಾಟ

Vijaya Bhaskar: ಹೊಸತನಕ್ಕೆ ಹಂಬಲಿಸಿದ ಸ್ವರ ಸಾಮ್ರಾಟ

Karki kananda movie

Karki Movie: ಹಳ್ಳಿ ಹುಡುಗನ ಹೋರಾಟದ ಹಾದಿ

Family drama ‘Langoti Man’ hits screens today

Langoti Man: ಫ್ಯಾಮಿಲಿ ಡ್ರಾಮಾ ʼಲಂಗೋಟಿ ಮ್ಯಾನ್‌ʼ ಇಂದು ತೆರೆಗೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Desi Swara: ಅಮೆರಿಕ ಕನ್ನಡತಿ ಕಲಾಶ್ರೀ, ನೃತ್ಯಗುರು ಸುಪ್ರಿಯಾ ದೇಸಾಯಿಗೆ ಸಮ್ಮಾನ

Desi Swara: ಅಮೆರಿಕ ಕನ್ನಡತಿ ಕಲಾಶ್ರೀ, ನೃತ್ಯಗುರು ಸುಪ್ರಿಯಾ ದೇಸಾಯಿಗೆ ಸಮ್ಮಾನ

Shiruru; Missing Kerala Arjuna’s lorry found; Operation of Ishwar Malpe Team

Shiruru; ನಾಪತ್ತೆಯಾಗಿದ್ದ ಕೇರಳದ ಅರ್ಜುನನ ಲಾರಿ ಪತ್ತೆ; ಈಶ್ವರ್‌ ಮಲ್ಪೆ ತಂಡದ ಕಾರ್ಯಾಚರಣೆ

World Rivers Day: ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’

World Rivers Day: ಸೆ.22 ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’

PMABHIM ಯೋಜನೆಯಡಿ ದಕ್ಷಿಣ ಕನ್ನಡಕ್ಕೆ 25.11 ಕೋಟಿ ಅನುದಾನ: ಸಂಸದ ಕ್ಯಾ. ಬ್ರಿಜೇಶ್‌ ಚೌಟ

PMABHIM ಯೋಜನೆಯಡಿ ದಕ್ಷಿಣ ಕನ್ನಡಕ್ಕೆ 25.11 ಕೋಟಿ ಅನುದಾನ: ಸಂಸದ ಕ್ಯಾ. ಬ್ರಿಜೇಶ್‌ ಚೌಟ

BellaryBellary; ಕಳ್ಳರೊಂದಿಗೆ ಸೇರಿದ ಪೊಲೀಸನ ಕತೆ; ದರೋಡೆ ಪ್ರಕರಣದಲ್ಲಿ ಪೇದೆ ಸೇರಿ 6 ಮಂದಿ ಬಂಧನ

Bellary; ಕಳ್ಳರೊಂದಿಗೆ ಸೇರಿದ ಪೊಲೀಸನ ಕತೆ; ದರೋಡೆ ಪ್ರಕರಣದಲ್ಲಿ ಪೇದೆ ಸೇರಿ 6 ಮಂದಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.